AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Laser weapon: ಕ್ಷಣಮಾತ್ರದಲ್ಲಿ ಹಲವು ಡ್ರೋನ್ ಹೊಡೆದುರುಳಿಸಬಲ್ಲ ಲೇಸರ್ ವೆಪನ್ ಸಿಸ್ಟಂ ಭಾರತದ ಬತ್ತಳಿಕೆಯಲ್ಲಿ

India join elite group of US, Russia, China that have star war capacity: ಭಾರತದ ಡಿಆರ್​​ಡಿಒ ಸಂಸ್ಥೆ ಲೇಸರ್ ಆಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇದು ಕ್ಷಣ ಮಾತ್ರದಲ್ಲಿ ಡ್ರೋನ್, ಕ್ಷಿಪಣಿಗಳನ್ನು ನಿಷ್ಕ್ರಿಯಗೊಳಿಸಬಲ್ಲುದು. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಈ ಲೇಸರ್ ವೆಪನ್​​ಗಳನ್ನು ಹೊಂದಿವೆ. ಈ ಪ್ರತಿಷ್ಠಿತರ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ.

Laser weapon: ಕ್ಷಣಮಾತ್ರದಲ್ಲಿ ಹಲವು ಡ್ರೋನ್ ಹೊಡೆದುರುಳಿಸಬಲ್ಲ ಲೇಸರ್ ವೆಪನ್ ಸಿಸ್ಟಂ ಭಾರತದ ಬತ್ತಳಿಕೆಯಲ್ಲಿ
ಲೇಸರ್ ವೆಪನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 14, 2025 | 11:43 AM

Share

ನವದೆಹಲಿ, ಏಪ್ರಿಲ್ 14: ಹಾಲಿವುಡ್​​ನ ಸ್ಟಾರ್ ವಾರ್ ಸರಣಿಯ ಸಿನಿಮಾಗಳನ್ನು (Star War movies) ನೀವು ನೋಡಿರಬಹುದು. ಅದರಲ್ಲಿ ಲೇಸರ್ ಬಳಸಿ ಪ್ರಹಾರ ಮಾಡುವ ದೃಶ್ಯಗಳು ಸರ್ವೇಸಾಮಾನ್ಯ. ಭವಿಷ್ಯದಲ್ಲಿ ಮನುಷ್ಯನ ಯುದ್ಧಾಸ್ತ್ರಗಳು ಹೇಗಿರುತ್ತವೆ ಎಂಬ ಕಲ್ಪನೆಗಳನ್ನು ಸ್ಟಾರ್ ವಾರ್ ಸಿನಿಮಾಗಳಲ್ಲಿ ಕಾಣುತ್ತೇವೆ. ಈಗ ಮನುಷ್ಯರು ಆ ಕಲ್ಪನೆಯನ್ನು ನಿಜಗೊಳಿಸುತ್ತಿದ್ದಾರೆ. ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳ ಸೇನೆಗಳ ಬಳಿ ಲೇಸರ್ ವೆಪನ್​​ಗಳಿವೆ. ಇವು ಮೇಲೆ ಹಾರಾಡುವ ಡ್ರೋನ್​​ಗಳನ್ನು ಕ್ಷಣ ಮಾತ್ರದಲ್ಲಿ ನಿಷ್ಕ್ರಿಯಗೊಳಿಸಬಲ್ಲುವು. ಈ ಲೇಸರ್ ಶಕ್ತ ಮಿಲಿಟರಿಗಳ ಸಾಲಿಗೆ ಭಾರತವೂ ಸೇರ್ಪಡೆಯಾಗುತ್ತಿದೆ. ನಿನ್ನೆ ಭಾನುವಾರ ಭಾರತವು ಲೇಸರ್ ಶಕ್ತ ವೆಪನ್ ಸಿಸ್​ಟಂ (Laser based weapon system) ಅನ್ನು ಯಶಸ್ವಿಯಾಗಿ ಪ್ರಯೋಗ ಮಾಡಿದೆ. ಇದು ವೇಗವಾಗಿ ದಾಳಿ ಮಾಡಬಲ್ಲ ಸ್ವಾರ್ಮ್ ಡ್ರೋನ್​ಗಳನ್ನು ನಿಷ್ಕ್ರಿಯಗೊಳಿಸಬಲ್ಲುದು ಎಂದು ಹೇಳಲಾಗುತ್ತಿದೆ.

ಹೈದರಾಬಾದ್​​ನಲ್ಲಿರುವ ಡಿಆರ್​ಡಿಒನ ಹೈ ಎನರ್ಜಿ ಸಿಸ್ಟಮ್ಸ್ ಅಂಡ್ ಸೈನ್ಸಸ್ (ಚೆಸ್) ಈ ಲೇಸರ್ ಆಧಾರಿತ ಶಸ್ತ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ಕಾರ್ಯದಲ್ಲಿ ಭಾರತದ ಹಲವು ಶಿಕ್ಷಣ ಸಂಸ್ಥೆಗಳು ಹಾಗು ಉದ್ದಿಮೆಗಳು ನೆರವಾಗಿವೆ. ಇದು Mk-II(A) ಲೇಸರ್- ಡೈರೆಕ್ಟೆಡ್ ಎನರ್ಜಿ ವೆಪನ್ (DEW) ಸಿಸ್ಟಂ. ಆಂಧ್ರದ ಕರ್ನೂಲ್​​ನಲ್ಲಿರುವ ನ್ಯಾಷನಲ್ ಓಪನ್ ಏರ್ ರೇಂಜ್​​ನಲ್ಲಿ ಭಾನುವಾರ ಸಂಜೆ ಮೊದಲ ಪ್ರಯೋಗ ಮಾಡಿದ್ದು, ಅದು ಯಶಸ್ವಿಯಾಗಿದೆ.

ಇದನ್ನೂ ಓದಿ
Image
ದೊಡ್ಡ ಅಮೆರಿಕನ್ ಕಂಪನಿಗಳು ದಿವಾಳಿ?
Image
ಭಾರತದಲ್ಲಿ ಸ್ವಂತವಾಗಿ 25 ಚಿಪ್​ಸೆಟ್​ಗಳ ಅಭಿವೃದ್ಧಿ
Image
ಶೇ. 15ರ ವೇಗದಲ್ಲಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಮಾರುಕಟ್ಟೆ
Image
ಭಾರತೀಯರು ತಂತ್ರಜ್ಞಾನ ಕೀಳರಿಮೆ ಬಿಡಬೇಕು: ವಾಧವಾ

ಇದನ್ನೂ ಓದಿ: ಭಾರತದಲ್ಲಿ ಸ್ವಂತವಾಗಿ 25 ಚಿಪ್​​ಸೆಟ್​​ಗಳ ತಯಾರಿಕೆ; ಸರ್ವಿಸ್​​ನಿಂದ ಪ್ರಾಡಕ್ಟ್ ದೇಶವಾಗಿ ಬದಲಾಗುತ್ತಿರುವ ಭಾರತ

ಈ ಲೇಸರ್ ವೆಪನ್ ಸಿಸ್ಟಂ ಕೇವಲ ಡ್ರೋನ್ ಅಲ್ಲ, ಕ್ಷಿಪಣಿ, ಫಿಕ್ಸೆಡ್ ವಿಂಗ್ ಏರ್​​ಕ್ರಾಫ್ಟ್ ಇತ್ಯಾದಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುತ್ತದೆ. ಡಿಆರ್​ಡಿಒ ಛೇರ್ಮನ್ ಸಮೀರ್ ವಿ ಕಾಮತ್ ಪ್ರಕಾರ, ಈ ರೀತಿಯ ಲೇಸರ್ ವೆಪನ್ ಸಿಸ್ಟಂ ಹೊಂದಿರುವುದು ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರವಂತೆ. ಇಸ್ರೇಲ್ ಕೂಡ ಇಂಥದ್ದನ್ನು ಅಭಿವೃದ್ಧಿಪಡಿಸುತ್ತಿದೆ. ಇಡೀ ವಿಶ್ವದಲ್ಲಿ ಭಾರತವೂ ಸೇರಿದಂತೆ ಈ ವೆಪನ್ ಸಿಸ್ಟಂ ಹೊಂದಿರುವುದು ನಾಲ್ಕೈದು ದೇಶಗಳು ಮಾತ್ರವೇ.

ಸ್ಟಾರ್ ವಾರ್ಸ್ ತಂತ್ರಜ್ಞಾನದಲ್ಲಿ ಇದು ಆರಂಭ ಮಾತ್ರ

ಲೇಸರ್ ಆಧಾರಿತ ಅಸ್ತ್ರ ವ್ಯವಸ್ಥೆಯು ಹೊಸ ಹೈ ಎನರ್ಜಿ ಸಿಸ್ಟಂಗಳಲ್ಲಿ ಮೊದಲ ಹಂತ ಮಾತ್ರವೇ. ಡಿಆರ್​​ಡಿಒ ಇನ್ನೂ ಬೇರೆ ಬೇರೆ ವಿಧದ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದೆ. ಹೈ ಎನರ್ಜಿ ಮೈಕ್ರೋವೇವ್, ಎಲೆಕ್ಟ್ರೋ ಮ್ಯಾಗ್ನೆಟಿಕ್ ಪಲ್ಸ್ ಇತ್ಯಾದಿ ಶಸ್ತ್ರಾಸ್ತ್ರಗಳನ್ನು ಡಿಆರ್​​ಡಿಒ ತಯಾರಿಸುತ್ತಿದೆ. ಡಿಆರ್​​ಡಿಒ ಛೇರ್ಮನ್ ಪ್ರಕಾರ, ಹಲವು ತಂತ್ರಜ್ಞಾನಗಳನ್ನು ಭಾರತದಲ್ಲಿ ಸಂಶೋಧಿಸಲಾಗುತ್ತಿದ್ದು, ಇವುಗಳಿಂದ ಭಾರತಕ್ಕೆ ಸ್ಟಾರ್ ವಾರ್ಸ್ ಸಾಮರ್ಥ್ಯ ಸಿಗುತ್ತದಂತೆ.

ಇದನ್ನೂ ಓದಿ: ಬೆಲ್ಜಿಯಂನಲ್ಲಿ ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬಂಧನ

ಲೇಸರ್ ಅಸ್ತ್ರಗಳು ಡ್ರೋನ್ ಅನ್ನು ಹೇಗೆ ನಿಷ್ಕ್ರಿಯಗೊಳಿಸುತ್ತವೆ?

ಡಿಆರ್​​ಡಿಒ ಅಭಿವೃದ್ಧಿಪಡಿಸಿದ ಲೇಸರ್ ಡಿವ್ ಸಿಸ್ಟಂನಲ್ಲಿ ರಾಡಾರ್ ಅಥವಾ ಅಂತರ್ಗವಾದ ಎಲೆಕ್ಟ್ರೋ ಆಪ್ಟಿಕ್ ಸಿಸ್ಟಂ ಇತುತ್ತದೆ. ಇದು ಡ್ರೋನ್ ಮೇಲೆ ಪ್ರಬಲವಾದ ಲೇಸರ್ ಕಿರಣಗಳನ್ನು ಹಾಯಿಸುತ್ತದೆ. ಡ್ರೋನ್​ಗಳ ಸೆನ್ಸಾರ್ ಮತ್ತು ಆಂಟೆನಾಗಳನ್ನು ಈ ಲೇಸರ್ ಬೀಮ್ ನಿಷ್ಕ್ರಿಯಗೊಳಿಸುತ್ತದೆ. ಈ ಮೂಲಕ ಡ್ರೋನ್ ತನ್ನ ಗುರಿ ಕಳೆದುಕೊಳ್ಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:43 am, Mon, 14 April 25

ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಸ್ವದೇಶಿ ಉತ್ಪನ್ನ ಬಳಸಿ; ಭಾರತೀಯರಿಗೆ ಕರೆ ನೀಡಿದ ಸಚಿವ ಅಶ್ವಿನಿ ವೈಷ್ಣವ್
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
ಮುಕಳಪ್ಪ ಹಿಂದೂ ಹುಡ್ಗಿಯನ್ನು ಕರೆದೊಯ್ದು ಮದ್ವೆಯಾಗಿದ್ದೆಲ್ಲಿ?
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ನಾನು ಹೋಗಿಯೇ ಬಿಡುತ್ತಿದ್ದೆ, ದೈವದಿಂದ ಬದುಕಿದ್ದೇನೆ’: ರಿಷಬ್ ಶೆಟ್ಟಿ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
‘ಕಾಂತಾರ’ ಸಿನಿಮಾಗೆ ಅಂಚೆ ಇಲಾಖೆ ಗೌರವ: ವಿಶೇಷ ಅಂಚೆ ಲಕೋಟೆ ಬಿಡುಗಡೆ
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಮೈಸೂರು ಬಿಜೆಪಿ ಟಿಕೆಟ್ ಸಿಕ್ಕಿದ್ಹೇಗೆ? ಗುಟ್ಟು ಬಿಚ್ಚಿಟ್ಟ ಯದುವೀರ್​​
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಅರಮನೆ ದರ್ಬಾರ್‌ ಹಾಲ್‌ನಲ್ಲಿ ಮೇಳೈಸಿದ ರಾಜ ಪರಂಪರೆಯ ಭವ್ಯ ದೃಶ್ಯ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ
ಭರ್ಜರಿ ಮೆಚ್ಚುಗೆ ಪಡೆದ ಕಾಂತಾರ ಟ್ರೇಲರ್​: ರಿಷಬ್ ಶೆಟ್ಟಿ ಸುದ್ದಿಗೋಷ್ಠಿ
ಹುಬ್ಬಳ್ಳಿಯಲ್ಲಿ ಬೈಕ್‌ ಖರೀದಿಗೆ ಮುಗಿಬಿದ್ದ ಗ್ರಾಹಕರು
ಹುಬ್ಬಳ್ಳಿಯಲ್ಲಿ ಬೈಕ್‌ ಖರೀದಿಗೆ ಮುಗಿಬಿದ್ದ ಗ್ರಾಹಕರು
ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ್ರಾ? ಅಂತೆ ಕಂತೆಗಳಿಗೆ ಡಿಕೆ ಶಿವಕುಮಾರ್ ಗರಂ
ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ್ರಾ? ಅಂತೆ ಕಂತೆಗಳಿಗೆ ಡಿಕೆ ಶಿವಕುಮಾರ್ ಗರಂ
ಮಾತಾ ತ್ರಿಪುರ ಸುಂದರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಾತಾ ತ್ರಿಪುರ ಸುಂದರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ