AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Semiconductor: ಬೆಂಗಳೂರಲ್ಲಿ 3nm ಚಿಪ್ ಡಿಸೈನ್ ಸೆಂಟರ್ ಆಯ್ತು, ಈಗ 6ನೇ ಸೆಮಿಕಂಡಕ್ಟರ್ ಘಟಕಕ್ಕೆ ಸಂಪುಟ ಒಪ್ಪಿಗೆ

India's sixth semiconductor unit to come at Jewar, UP: ಭಾರತದಲ್ಲಿ ಆರನೇ ಸೆಮಿಕಂಡಕ್ಟರ್ ಸ್ಥಾಪನೆಗೆ ಕೇಂದ್ರ ಸಂಪುಟ ಇಂದು ಮೇ 14, ಒಪ್ಪಿಗೆ ನೀಡಿದೆ. ಎಚ್​​ಸಿಎಲ್ ಟೆಕ್ನಾಲಜೀಸ್ ಮತ್ತು ಫಾಕ್ಸ್​​ಕಾನ್ ಸಂಸ್ಥೆಗಳು ಜಂಟಿಯಾಗಿ ಉತ್ತರಪ್ರದೇಶದ ಜೇವರ್​​​ನಲ್ಲಿ ಈ ಘಟಕ ಸ್ಥಾಪಿಸಲಿವೆ. ಬೆಂಗಳೂರು ಮತ್ತು ನೋಯ್ಡಾದಲ್ಲಿ ಜಪಾನ್​​ನ ರಿನಿಸಾಸ್ ಸಂಸ್ಥೆಯಿಂದ 3 ಎನ್​​ಎಂ ಚಿಪ್ ಡಿಸೈನ್ ಸೆಂಟರ್​​ಗಳ ಉದ್ಘಾಟನೆ ಆಗಿತ್ತು.

Semiconductor: ಬೆಂಗಳೂರಲ್ಲಿ 3nm ಚಿಪ್ ಡಿಸೈನ್ ಸೆಂಟರ್ ಆಯ್ತು, ಈಗ 6ನೇ ಸೆಮಿಕಂಡಕ್ಟರ್ ಘಟಕಕ್ಕೆ ಸಂಪುಟ ಒಪ್ಪಿಗೆ
ಸೆಮಿಕಂಡಕ್ಟರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 14, 2025 | 4:15 PM

ನವದೆಹಲಿ, ಮೇ 14: ಎಚ್​​ಸಿಎಲ್ ಟೆಕ್ನಾಲಜೀಸ್ ಮತ್ತು ಫಾಕ್ಸ್​​ಕಾನ್ ಸಂಸ್ಥೆಗಳು ಜಂಟಿಯಾಗಿ ಸ್ಥಾಪಿಸಬೇಕೆಂದಿರುವ ಸೆಮಿಕಂಡಕ್ಟರ್ ಘಟಕಕ್ಕೆ (semiconductor unit) ಕೇಂದ್ರ ಸಂಪುಟ ಇಂದು ಬುಧವಾರ ಅನುಮೋದನೆ ನೀಡಿದೆ. ಈ ವಿಷಯವನ್ನು ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಉತ್ತರಪ್ರದೇಶ ಜೇವರ್​​​ನಲ್ಲಿ (Jewar, UP) 3,076 ರೂ ಹೂಡಿಕೆಯಲ್ಲಿ ಸೆಮಿಕಂಡಕ್ಟರ್ ಘಟಕ ನಿರ್ಮಾಣವಾಗಲಿದೆ. ಕೇಂದ್ರ ಅನುಮತಿಸಿರುವ ಆರನೇ ಸೆಮಿಕಂಡಕ್ಟರ್ ಘಟಕ ಇದಾಗಿದೆ. ಈ ಹಿಂದೆ ಅನುಮೋದನೆ ನೀಡಿರುವ ಐದು ಘಟಕಗಳು ಅಂತಿಮ ನಿರ್ಮಾಣ ಹಂತದಲ್ಲಿವೆ ಎನ್ನುವ ಮಾಹಿತಿಯನ್ನು ಎ ವೈಷ್ಣವ್ ನೀಡಿದ್ದಾರೆ.

2027ಕ್ಕೆ ಕಾರ್ಯಾರಂಭಿಸುವ ಉದ್ದೇಶ ಇರುವ ಎಚ್​​ಸಿಎಲ್ ಮತ್ತು ಫಾಕ್ಸ್​​ಕಾನ್​​ನ ಈ ಘಟಕದಲ್ಲಿ ಡಿಸ್​​ಪ್ಲೇ ಇರುವಂತಹ ಮೊಬೈಲ್ ಫೋನ್, ಲ್ಯಾಪ್​ಟಾಪ್, ಆಟೊಮೊಬೈಲ್, ಕಂಪ್ಯೂಟರ್ ಹಾಗೂ ಇತರ ಸಾಧನಗಳಿಗೆ ಡಿಸ್​​ಪ್ಲೇ ಡ್ರೈವರ್ ಚಿಪ್​​ಗಳನ್ನು ತಯಾರಿಸಲಾಗುತ್ತದೆ. ಒಂದು ತಿಂಗಳಲ್ಲಿ 20,000 ವೇಫರ್​​ಗಳು ಹಾಗೂ 3.6 ಕೋಟಿ ಚಿಪ್​​ಗಳನ್ನು ತಯಾರಿಸುವ ಸಾಮರ್ಥ್ಯ ಈ ಘಟಕಕ್ಕೆ ಇರಲಿದೆ. ಉತ್ತರಪ್ರದೇಶದ ಜೇವರ್ ವಿಮಾನ ನಿಲ್ದಾಣ ಸಮೀಪವೇ ಇರುವ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಲಿರುವ ಈ ಘಟಕದಲ್ಲಿ 2,000 ಉದ್ಯೋಗಸೃಷ್ಟಿಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಡ್ರೋನ್ ಜೊತೆಗೆ ಜನರನ್ನೂ ಕಳುಹಿಸಿದ್ದ ಟರ್ಕಿ; ಈ ದೇಶದ ಜೊತೆ ಭಾರತದ ವ್ಯಾಪಾರ ಸಂಬಂಧ ಎಷ್ಟಿದೆ?

ಅನುಮೋದನೆಗೊಂಡಿರುವ ಇತರ ಐದು ಸೆಮಿಕಂಡ್ಟರ್ ಘಟಕಗಳು

  1. ಮೈಕ್ರಾನ್ ಟೆಕ್ನಾಲಜಿ, (ಸಾನಂದ್, ಗುಜರಾತ್)
  2. ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಪವರ್​​ಚಿಪ್ ಸೆಮಿಕಂಡಕ್ಟರ್, (ಧೊಲೇರಾ ಗುಜರಾತ್)
  3. ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಅಂಡ್ ಟೆಸ್ಟ್, (ಅಸ್ಸಾಮ್)
  4. ಸಿಜಿ ಪವರ್, ರಿನಿಸಾಸ್ ಎಲೆಕ್ಟ್ರಾನಿಕ್ಸ್ ಮತ್ತು ಸ್ಟಾರ್ಸ್ ಮೈಕ್ರೋ ಎಲೆಕ್ಟ್ರಾನಿಕ್ಸ್ (ಸಾನಂದ್, ಗುಜರಾತ್)
  5. ಕೇನೆಸ್ ಸೆಮಿಕಾನ್ (ಸಾನಂದ್, ಗುಜರಾತ್)

ಭಾರತದಲ್ಲಿ ಅನುಮೋದನೆಗೊಂಡಿರುವ ಆರು ಸೆಮಿಕಂಡಕ್ಟರ್ ಘಟಕಗಳಲ್ಲಿ ನಾಲ್ಕು ಗುಜರಾತ್​​​ನಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷ.

ಬೆಂಗಳೂರು ಮತ್ತು ನೋಯ್ಡಾದಲ್ಲಿ ಭಾರತದ ಮೊದಲ 3 ಎನ್​​ಎಂ ಚಿಪ್ ಡಿಸೈನ್ ಸೆಂಟರ್

ಬಹಳ ಮುಖ್ಯವಾದ ಮತ್ತು ಕ್ಲಿಷ್ಟಕರಾದ 3 ನ್ಯಾನೋಮೀಟರ್ ಚಿಪ್ ಡಿಸೈನ್ ಸೌಲಭ್ಯ ಭಾರತದಲ್ಲಿ ಲಭ್ಯ ಇರಲಿದೆ. ನಿನ್ನೆ ಮಂಗಳವಾರ ಸಚಿವ ಎ ವೈಷ್ಣವ್ ಅವರು ಬೆಂಗಳೂರು ಮತ್ತು ನೋಯ್ಡಾದಲ್ಲಿ ಈ ಚಿಪ್ ಡಿಸೈನ್ ಸೆಂಟರ್​​​ಗಳನ್ನು ಉದ್ಘಾಟನೆ ಮಾಡಿದ್ದಾರೆ.

ಜಪಾನ್ ಮೂಲದ ರೆನಿಸಾಸ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಈ ಎರಡು ಕಡೆ 3 ಎನ್​ಎಂ ಚಿಪ್ ಸಿಸೈನ್ ಸೆಂಟರ್ ಸ್ಥಾಪಿಸುತ್ತಿದೆ. ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್, ಲ್ಯಾಮ್ ರಿಸರ್ಚ್ ಸಂಸ್ಥೆಗಳೂ ಕೂಡ ಈ ಭಾರತದ ಸೆಮಿಕಂಡಕ್ಟರ್ ಉದ್ಯಮ ಬೆಳವಣಿಗೆಗೆ ಸಹಾಯಕವಾಗಿವೆ.

ಇದನ್ನೂ ಓದಿ: ಅಮೆರಿಕ, ಚೀನಾ ನೆರಳಲ್ಲಿರುವ ದೇಶಗಳಿಂದ ಭಾರತದ ಬ್ರಹ್ಮೋಸ್ ಕ್ಷಿಪಣಿ ಪಡೆಯಲು ಆಸಕ್ತಿ

ಭಾರತದಲ್ಲಿ 5 ನ್ಯಾನೋಮೀಟರ್ ಮತ್ತು 7 ನ್ಯಾನೋಮೀಟರ್ ಚಿಪ್ ಡಿಸೈನ್ ಸೆಂಟರ್​​ಗಳಿವೆ. ಈಗ ಮೊದಲ ಬಾರಿಗೆ 3 ಎನ್​​ಎಂಗೆ ಅಪ್​​ಗ್ರೇಡ್ ಆಗಲಾಗುತ್ತಿದೆ. ಇಲ್ಲಿ ನ್ಯಾನೋಮೀಟರ್ ಅಂಕಿಯು ಚಿಪ್​​ನಲ್ಲಿರುವ ಟ್ರಾನ್ಸಿಸ್ಟರ್ ಗಾತ್ರವನ್ನು ಸೂಚಿಸುತ್ತದೆ. 5 ಎನ್​​ಎಂ ಚಿಪ್​​ಗಿಂತ 3 ಎನ್​​ಎಂ ಚಿಪ್ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ, ಹೆಚ್ಚು ಟ್ರಾನ್ಸಿಸ್ಟರ್​​ಗಳನ್ನು ಹೊಂದಿರುತ್ತದೆ.

ಸದ್ಯ, ಉದ್ಯಮ ವಲಯದಲ್ಲಿ 3 ಎನ್​​ಎಂ ಚಿಪ್​​ಗಳು ಸ್ಟ್ಯಾಂಡರ್ಡ್ ಎನಿಸಿವೆ. 2 ಎನ್​ಎಂ ಮತ್ತು 1 ಎನ್​​ಎಂ ಚಿಪ್​​​ಗಳು ಇನ್ನೂ ಪ್ರಯೋಗ ಹಂತದಲ್ಲಿದ್ದು, ಕಮರ್ಷಿಯಲ್ ಬಿಡುಗಡೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ 3 ಎನ್​​ಎಂ ಚಿಪ್ ಡಿಸೈನ್ ಸೆಂಟರ್ ಆರಂಭವಾಗಿರುವುದು ಸ್ವಾಗತಾರ್ಹದ ಸಂಗತಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ