AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪರೇಷನ್ ಸಿಂದೂರ, ಹೀರೋ ಆದ ಆಕಾಶತೀರ; ಬೆಂಗಳೂರಿನ ಕಂಪನಿ ನಿರ್ಮಿಸಿದ ಅಭೇದ್ಯ ರಕ್ಷಣಾ ಕೋಟೆ ಅಂತಿಂಥದ್ದಲ್ಲ…

Akashteer, a great product of Atmanirbhar Bharath: ಬೆಂಗಳೂರು ಮೂಲದ, ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಕಂಪನಿ ತಯಾರಿಸಿದ ಆಕಾಶತೀರ್ ಎನ್ನುವ ಏರ್ ಡಿಫೆನ್ಸ್ ಸಿಸ್ಟಂ ಎಲ್ಲರ ಗಮನ ಸೆಳೆದಿದೆ. ಆಪರೇಷನ್ ಸಿಂದೂರದಲ್ಲಿ ಭಾರತದ ಪ್ರಬಲ ರಕ್ಷಣಾ ಕೋಟೆ ಭೇದಿಸಲು ಪಾಕಿಸ್ತಾನ ಹೆಣಗಾಡಿತ್ತು. ಆ ರಕ್ಷಣಾ ಕೋಟೆಯ ಪ್ರಮುಖ ಭಾಗವಾಗಿದ್ದುದೇ ಆಕಾಶತೀರ.

ಆಪರೇಷನ್ ಸಿಂದೂರ, ಹೀರೋ ಆದ ಆಕಾಶತೀರ; ಬೆಂಗಳೂರಿನ ಕಂಪನಿ ನಿರ್ಮಿಸಿದ ಅಭೇದ್ಯ ರಕ್ಷಣಾ ಕೋಟೆ ಅಂತಿಂಥದ್ದಲ್ಲ...
ಆಕಾಶತೀರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 14, 2025 | 6:23 PM

ಬೆಂಗಳೂರು, ಮೇ 14: ಆಪರೇಷನ್ ಸಿಂದೂರದಲ್ಲಿ (Operation Sindoor) ಭಾರತದ ದೈತ್ಯ ಮಿಲಿಟರಿ ಶಕ್ತಿ ಎಲ್ಲರ ಕಣ್ಕುಕ್ಕಿದೆ. ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ಡಿಫೆನ್ಸ್ ಸಿಸ್ಟಂ, ಫೈಟರ್ ಜೆಟ್​​ಗಳಿಂದ ಹಿಡಿದು ದೇಶೀಯವಾಗಿ ಅಭಿವೃದ್ಧಿಯಾದ ಡ್ರೋನ್, ಮಿಸೈಲ್ ಇತ್ಯಾದಿವರೆಗೂ ಭಾರತ ಬಳಸಿದ ಶಸ್ತ್ರಾಸ್ತ್ರಗಳ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಮೇ 7ರಿಂದ 10ರವರೆಗೆ ನಡೆದ ನಾಲ್ಕು ದಿನ ಸಂಘರ್ಷದಲ್ಲಿ ಹೈಲೈಟ್ ಆಗಿದ್ದು ಭಾರತದ ಅಭೇದ್ಯ ರಕ್ಷಣಾ ಕೋಟೆ. ಈ ಕೋಟೆಯ ಒಂದು ಪ್ರಮುಖ ಭಾಗವಾದ ಆಕಾಶತೀರ (Akashteer) ಬಗ್ಗೆ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.

ಆಕಾಶತೀರ್ ಎಂಬುದು ಬೆಂಗಳೂರಿನ ಬಿಇಎಲ್ ಸಂಸ್ಥೆ ನಿರ್ಮಿಸಿದ ಏರ್ ಡಿಫೆನ್ಸ್ ಸಿಸ್ಟಂ. ಪಾಕಿಸ್ತಾನ ಹಾರಿಬಿಟ್ಟ ನೂರಾರು ಡ್ರೋನ್, ಮಿಸೈಲ್, ಸಣ್ಣ ಯುಎವಿ, ಲಾಯ್ಟರಿಂಗ್ ಮ್ಯುನಿಶನ್ ಇತ್ಯಾದಿ ಅಸ್ತ್ರಗಳನ್ನು ಸಮರ್ಥವಾಗಿ ಗುರುತಿಸಿ ಹೊಡೆದುರಳಿಸಲು ಯಶಸ್ವಿಯಾಗಿತ್ತು ಭಾರತದ ವಿವಿಧ ಎಳೆಗಳ ರಕ್ಷಣಾ ವ್ಯವಸ್ಥೆ. ಬೇರೆ ಬೇರೆ ಡಿಫೆನ್ಸ್ ಸಿಸ್ಟಂಗಳನ್ನು ಸರಿಯಾಗಿ ಸಂಯೋಜಿಸಿದ್ದು ಆಕಾಶ್​​ತೀರ್.

ಇದನ್ನೂ ಓದಿ: ಇದು ಟಾಪ್ ಸೀಕ್ರೆಟ್… ಆಪರೇಷನ್ ಸಿಂದೂರದಿಂದ ಹಲವರ ಬಣ್ಣ ಬಯಲು; ಅಮೆರಿಕ ನಡುಗಲು ನಿಜ ಕಾರಣ ಏನು ಗೊತ್ತಾ?

ಏರ್​​ಡಿಫೆನ್ಸ್ ಸಿಸ್ಟಂನಲ್ಲಿ ಕ್ಷಿಪಣಿ, ರಾಡಾರ್ ಇತ್ಯಾದಿಗಳನ್ನು ನೀವು ಹಾರ್ಡ್​​ವೇರ್ ಎನ್ನುವುದಾದರೆ, ಆಕಾಶತೀರವನ್ನು ಸಾಫ್ಟ್​ವೇರ್​​ಗೆ ಹೋಲಿಸಬಹುದು. ಎದುರಾಳಿಗಳಿಂದ ಬಂದ ವಸ್ತುಗಳನ್ನು ಗುರುತಿಸಿ, ಅದು ಯಾವ್ಯಾವುವು, ಎಲ್ಲಿಂದ ಬಂದಿದೆ, ಎಲ್ಲಿಗೆ ಹೋಗುತ್ತಿವೆ, ಅವುಗಳನ್ನು ಯಾವುದರಿಂದ ಹೊಡೆಯಬೇಕು ಇತ್ಯಾದಿ ಎಲ್ಲವನ್ನೂ ರಿಯಲ್ ಟೈಮ್​​​ನಲ್ಲಿ ತೋರಿಸಬಲ್ಲಂತಹ ಒಂದು ಸಿಸ್ಟಂ ಆಕಾಶತೀರ. ಸರ್ವೇಲೆನ್ಸ್ ಸೆಟಿಲೈಟ್, ರಾಡಾರ್, ಕಮಾಂಡ್ ಯೂನಿಟ್​​ಗಳ ಒಂದು ಸಂಯೋಜಿತ ನೆಟ್ವರ್ಕ್ ಅನ್ನು ಹೊಂದಿರುವ ಆಕಾಶತೀರವು, ಭಾರತದ ಡಿಫೆನ್ಸ್ ಆಪರೇಷನ್ಸ್​​ಗೆ ದಾರಿದೀಪದಂತೆ ಕೆಲಸ ಮಾಡುತ್ತದೆ.

ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಯು ಆಕಾಶತೀರವನ್ನು ತಯಾರಿಸಿರುವುದು ಬೆಂಗಳೂರಿಗೆ ಹೆಮ್ಮೆ ತರುವ ಸಂಸಗತಿ. ಸಂಪೂರ್ಣ ಸ್ವಂತವಾಗಿ ಇದನ್ನು ತಯಾರಿಸಿರುವುದು ಇನ್ನೂ ಖುಷಿಯ ಸಂಗತಿ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಡ್ರೋನ್ ಜೊತೆಗೆ ಜನರನ್ನೂ ಕಳುಹಿಸಿದ್ದ ಟರ್ಕಿ; ಈ ದೇಶದ ಜೊತೆ ಭಾರತದ ವ್ಯಾಪಾರ ಸಂಬಂಧ ಎಷ್ಟಿದೆ?

2023ರಲ್ಲಿ ಡಿಫೆನ್ಸ್ ಸಚಿವಾಲಯವು 455 ಆಕಾಶತೀರ ಯುನಿಟ್​​​ಗಳ ತಯಾರಿಕೆಗೆ ಬಿಇಎಲ್​ಗೆ ಗುತ್ತಿಗೆ ನೀಡಿತ್ತು. 2024ರ ನವೆಂಬರ್​​​​ವರೆಗೆ 107 ಯುನಿಟ್​​ಗಳನ್ನು ಸೇನೆಗೆ ಕೊಡಲಾಗಿದೆ. ಇನ್ನೆರಡು ವರ್ಷದಲ್ಲಿ ಎಲ್ಲಾ 455 ಯುನಿಟ್​​ಗಳನ್ನು ಕೊಡಬಹುದು. ಈಗ ತುರ್ತು ಸಂದರ್ಭವಾದ್ದರಿಂದ ಇನ್ನೂ ಬೇಗ ಹೆಚ್ಚೆಚ್ಚು ಆಕಾಶತೀರ್ ಘಟಕಗಳನ್ನು ತಯಾರಿಸಿಕೊಡಲು ಬಿಇಎಲ್ ಮುಂದಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?