ಕೇಂದ್ರದಿಂದ RDI ಸ್ಕೀಮ್; ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗೆ ಉತ್ತೇಜಿಸಲು ಸರ್ಕಾರದಿಂದ ಭರ್ಜರಿ ಯೋಜನೆ

Cabinet approves RDI scheme with Rs 1 lakh crore outlay: ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗೆ ಉತ್ತೇಜಿಸಲು ಸರ್ಕಾರವು ಆರ್​​ಡಿಐ ಸ್ಕೀಮ್ ತಂದಿದೆ. ಒಂದು ಲಕ್ಷ ಬಜೆಟ್ ಔಟ್​ಲೇ ಇರುವ ಈ ಯೋಜನೆಗೆ ಕೇಂದ್ರ ಸಂಪುಟ ಜುಲೈ 1ರಂದು ಅನುಮೋದನೆ ನೀಡಿದೆ. ಆರ್ ಅಂಡ್ ಡಿಯಲ್ಲಿ ಖಾಸಗಿ ವಲಯದಿಂದ ಹೂಡಿಕೆ ಹೆಚ್ಚಾಗಲು ಈ ಸ್ಕೀಮ್ ಪ್ರೋತ್ಸಾಹಿಸುವ ಗುರಿ ಹೊಂದಿದೆ.

ಕೇಂದ್ರದಿಂದ RDI ಸ್ಕೀಮ್; ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗೆ ಉತ್ತೇಜಿಸಲು ಸರ್ಕಾರದಿಂದ ಭರ್ಜರಿ ಯೋಜನೆ
ಆರ್ ಅಂಡ್ ಡಿ

Updated on: Jul 01, 2025 | 6:13 PM

ನವದೆಹಲಿ, ಜುಲೈ 1: ಆರ್ ಅಂಡ್ ಡಿ ಚಟುವಟಿಕೆಯಲ್ಲಿ ಹಿಂದುಳಿದಿರುವ ದೇಶದಲ್ಲಿ ಅಂಥದ್ದೊಂದು ಪೂರಕ ವಾತಾವರಣ ನಿರ್ಮಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಆರ್​ಡಿಐ ಸ್ಕೀಮ್ (RDI scheme) ಅನ್ನು ಸರ್ಕಾರ ರೂಪಿಸಿದೆ. ಒಂದು ಲಕ್ಷ ಕೋಟಿ ರೂ ಅನುದಾನದೊಂದಿಗೆ ಆರ್​​​ಡಿಐ ಸ್ಕೀಮ್ ತರಲು ಕೇಂದ್ರ ಸಂಪುಟ ಇಂದು ಮಂಗಳವಾರ ಅನುಮೋದನೆ ನೀಡಿದೆ. ಸೋಲಾರ್ ಇತ್ಯಾದಿ ಉದಯೋನ್ಮುಖ ಕ್ಷೇತ್ರಗಳಲ್ಲಿ (sunrise sectors) ತಂತ್ರಜ್ಞಾನ ಅಭಿವೃದ್ಧಿಗೆ ಉತ್ತೇಜಿಸಲು ಈ ಸ್ಕೀಮ್ ನೆರವಾಗುವ ಉದ್ದೇಶ ಹೊಂದಿದೆ.

ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗೆ ಪ್ರೋತ್ಸಾಹ ನೀಡಲು ಆರ್​​ಡಿಐ ಸ್ಕೀಮ್ ತರಲಾಗಿದೆ. ಖಾಸಗಿ ವಲಯದಲ್ಲಿ ಆರ್​​ಡಿಐಗೆ ಹೂಡಿಕೆ ಹೆಚ್ಚಿಸುವ ಗುರಿ ಇದೆ. ಬಡ್ಡಿರಹಿತವಾದ ಅಥವಾ ಅತ್ಯಲ್ಪ ಬಡ್ಡಿದರದಲ್ಲಿ ದೀರ್ಘಾವಧಿ ಸಾಲದ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಇದನ್ನೂ ಓದಿ: ಇಎಲ್​ಐ ಸ್ಕೀಮ್​​ಗೆ ಲಕ್ಷ ಕೋಟಿ ರೂ ಅನುದಾನ; ಕೇಂದ್ರ ಸಂಪುಟ ಅನುಮೋದನೆ; ಏನಿದು ಯೋಜನೆ?

ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಶನ್ ಅಡಿಯಲ್ಲಿ ಆರ್​ಡಿಐ ಸ್ಕೀಮ್​​ಗಾಗಿ ಆಡಳಿತ ಮಂಡಳಿ ರಚಿಸಲಾಗುತ್ತದೆ. ಒಂದು ವಿಶೇಷವಾದ ಸ್ಪೆಷಲ್ ಪರ್ಪೋಸ್ ಫಂಡ್ ಅನ್ನು ಸ್ಥಾಪಿಸಲಾಗುತ್ತದೆ. ಈ ಎಸ್​​ಪಿಎಫ್ ಮೂಲಕ ಆರ್​​ಡಿಐ ಸ್ಕೀಮ್ ಅನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ಈ ಎಸ್​​ಪಿಎಫ್ ಮೊದಲ ಮಟ್ಟದ ಫಂಡ್ ಮ್ಯಾನೇಜರ್ ಆಗಲಿದ್ದು, ಸರ್ಕಾರದಿಂದ ಇದಕ್ಕೆ 50 ವರ್ಷದವರೆಗೆ ಬಡ್ಡಿರಹಿತವಾದ ಸಾಲವನ್ನು ನೀಡಲಾಗುತ್ತದೆ.

ಆರ್​​ಡಿಐ ಸ್ಕೀಮ್​​ನ ಗುರಿ

ಭವಿಷ್ಯದಲ್ಲಿ ಬಹಳ ಅಗತ್ಯ ಇರುವ ಉದಯೋನ್ಮುಖ ಕ್ಷೇತ್ರಗಳು ಅಥವಾ ಸನ್​​ರೈಸರ್ ಸೆಕ್ಟರ್​​ಗಳಲ್ಲಿ ಆರ್ ಅಂಡ್ ಡಿ ಹೂಡಿಕೆಯನ್ನು ಉತ್ತೇಜಿಸುವುದು ಈ ಸ್ಕೀಮ್​​ನ ಪ್ರಮುಖ ಗುರಿಯಾಗಿದೆ.

ಇದನ್ನೂ ಓದಿ: AI in Banking: ಊಹೆಗೂ ನಿಲುಕದ ರೀತಿಯಲ್ಲಿ ಬದಲಾದ ಬ್ಯಾಂಕಿಂಗ್ ಸಿಸ್ಟಂ; ಎಐ ತಂದ ಬದಲಾವಣೆಗಳಿವು

ಬಹಳ ಅಗತ್ಯವಾಗಿರುವ ತಂತ್ರಜ್ಞಾನಗಳನ್ನು ಖರೀದಿಸಲು ಈ ಸ್ಕೀಮ್ ನೆರವು ನೀಡುತ್ತದೆ. ಡೀಪ್ ಟೆಕ್ ಫಂಡ್ ಸ್ಥಾಪಿಸಿ, ತಂತ್ರಜ್ಞಾನ ಅಭಿವೃದ್ಧಿಗೆ ಸಹಕಾರಿಯಾಗುವ ಗುರಿ ಈ ಸ್ಕೀಮ್​​ನದ್ದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:12 pm, Tue, 1 July 25

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us