AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7th Pay Commission: ಕೇಂದ್ರ ಸರ್ಕಾರಿ ನೌಕರರ ಎಕ್ಸ್​ಗ್ರೇಷಿಯಾ ಇಡಿಗಂಟು ಪಾವತಿಯಲ್ಲಿ ಭಾರೀ ಬದಲಾವಣೆ

ಸಿಬ್ಬಂದಿಗೆ ಎಕ್ಸ್​-ಗ್ರೇಷಿಯಾ ಇಡಿಗಂಟನ್ನು ಪಾವತಿ ಮಾಡುವ ವಿಚಾರದಲ್ಲಿ ಇಲ್ಲಿಯವರೆಗೆ ಇದ್ದ ನಿಯಮಾವಳಿಗಳಲ್ಲಿ ಬದಲಾವಣೆಯನ್ನು ಮಾಡಿ, ಕೇಂದ್ರ ಸರ್ಕಾರವು ಕಚೇರಿ ಸುತ್ತೋಲೆಯನ್ನು ಹೊರಡಿಸಿದೆ. ಏನೇನು ಬದಲಾವಣೆಗಳು ಎಂಬ ವಿವರ ಇಲ್ಲಿದೆ.

7th Pay Commission: ಕೇಂದ್ರ ಸರ್ಕಾರಿ ನೌಕರರ ಎಕ್ಸ್​ಗ್ರೇಷಿಯಾ ಇಡಿಗಂಟು ಪಾವತಿಯಲ್ಲಿ ಭಾರೀ ಬದಲಾವಣೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Oct 04, 2021 | 11:32 AM

Share

ಅಧಿಕೃತ ಕಾರ್ಯ ನಿರ್ವಹಿಸುವ ವೇಳೆ ಒಂದು ವೇಳೆ ಸಿಬ್ಬಂದಿ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ನೀಡುವ ಎಕ್ಸ್​-ಗ್ರೇಷಿಯಾ ಇಡಿಗಂಟಿನ ಪಾವತಿ ನಿಯಮಾವಳಿಯಲ್ಲಿ ಕೇಂದ್ರ ಸರ್ಕಾರವು ಮಾರ್ಪಾಟು ಮಾಡಲಾಗಿದೆ ಕೇಂದ್ರ ಸರ್ಕಾರಿ ಸಿಬ್ಬಂದಿ ನಿವೃತ್ತಿಗೂ ಮುಂಚೆ ಇನ್ನೂ ಸೇವೆಯಲ್ಲಿ ಇರುವಾಗಲೇ ಅಧಿಕೃತ ಕಾರ್ಯ ನಿರ್ವಹಣೆ ವೇಳೆಯಲ್ಲಿ ಮೃತಪಟ್ಟಲ್ಲಿ ಅಂಥವರ ಕುಟುಂಬಕ್ಕೆ ಎಕ್ಸ್​-ಗ್ರೇಷಿಯಾ ಇಡಿಗಂಟನ್ನು ಪಾವತಿಸಲಾಗುತ್ತದೆ. ಈ ಮೊತ್ತವನ್ನು ಕಾಲಾನುಕಾಲಕ್ಕೆ ಬದಲಾವಣೆ ಮಾಡುತ್ತಾ ಬರಲಾಗುತ್ತಿದೆ. ಇದೀಗ ಹಣಕಾಸು ಸಚಿವಾಲಯದಿಂದ ನಿರ್ಧಾರ ಕೈಗೊಂಡಿದ್ದು, ಕುಟುಂಬ ಸದಸ್ಯರೊಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಯಾರನ್ನು ನಾಮಿನಿ ಎಂದು ಮಾಡಿರುತ್ತಾರೋ ಅಂಥವರಿಗೆ ಪಾವತಿಸಲಾಗುತ್ತದೆ. “ಸರ್ಕಾರಿ ನೌಕರ ಮೃತಪಟ್ಟಲ್ಲಿ ಡೆತ್ ಗ್ರಾಚ್ಯುಟಿ, ಜಿಪಿಎಫ್​ ಬಾಕಿ ಮತ್ತು ಸಿಜಿಇಜಿಐಎಸ್ ಮೊತ್ತವು ಆತ ಅಥವಾ ಆಕೆ ಮಾಡಿದ ನಾಮಿನೇಷನ್​ ಪ್ರಕಾರ ವಿತರಣೆ ಆಗುತ್ತದೆ. ಅದೇ ರೀತಿ, ಅಧಿಕೃತವಾದ ಕಾರ್ಯ ನಿರ್ವಹಣೆ ವೇಳೆ ಮೃತಪಟ್ಟಲ್ಲಿ ನಾಮಿನಿಯಾಗಿ ಯಾರು ಇರುತ್ತಾರೋ ಅವರಿಗೆ ಎಕ್ಸ್​-ಗ್ರೇಷಿಯಾ ಇಡಿಗಂಟು ಪಾವತಿಸಲಾಗುತ್ತದೆ,” ಎಂದು ಪಿಂಚಣಿ ಮತ್ತು ಪಿಂಚಣಿದಾರರ ಕ್ಷೇಮಾಭಿವೃದ್ಧಿ ಇಲಾಖೆ (DoPPW) ಇಲಾಖೆಯು ಸೆಪ್ಟೆಂಬರ್ 30, 2021ರ ಕಚೇರಿ ಸುತ್ತೋಕೆಯಲ್ಲಿ ತಿಳಿಸಿದೆ.

ಸರ್ಕಾರದಿಂದ ಸಿಸಿಎಸ್​ (ಪಿಂಚಣಿ) ನಿಯಮಾವಳಿ, 1972ರ ಸಾಮಾನ್ಯ ನಾಮಿನೇಷನ್​ ಅರ್ಜಿಯಾದ ಫಾರ್ಮ್​ 1ಕ್ಕೆ ತಿದ್ದುಪಡಿ ತರಲಾಗಿದೆ. ಇದು ಎಕ್ಸ್​-ಗ್ರೇಷಿಯಾ ಇಡಿಗಂಟು ಪಾವತಿಗೆ ಸಂಬಂಧಿಸಿದ ನಾಮಿನೇಷನ್​ ಸಹ ಒಳಗೊಂಡಿದೆ.

ನಾಮಿನೇಷನ್ ಮಾಡದಿದ್ದಲ್ಲಿ ಹೇಗೆ? DoPPW ಹೇಳಿರುವಂತೆ, ಯಾವುದೇ ನಾಮಿನೇಷನ್ ಮಾಡದಿದ್ದಲ್ಲಿ ಅಥವಾ ಸರ್ಕಾರಿ ನೌಕರರು ಮಾಡಿದ ನಾಮಿನೇಷನ್ ಇಲ್ಲದಿದ್ದಲ್ಲಿ ಎಕ್ಸ್​-ಗ್ರೇಷಿಯಾದ ಇಡಿಗಂಟು ಕುಟುಂಬದ ಎಲ್ಲ ಅರ್ಹ ಸದಸ್ಯರಿಗೂ ಸಮಾನವಾಗಿ ಹಂಚಿಕೆ ಆಗುತ್ತದೆ. ಸಿಸಿಎಸ್​ (ಪಿಂಚಣಿ) ನಿಯಮಾವಳಿ 51ರ ಪ್ರಕಾರವಾಗಿ, ಗ್ರಾಚ್ಯುಟಿಯಲ್ಲಿ ಹೇಗಾಗುತ್ತದೋ ಹಾಗೆ ಆಗುತ್ತದೆ.

ಕುಟುಂಬದ ಹೊರಗಿನ ನಾಮಿನೇಷನ್​ಗೆ ಅವಕಾಶ ಇಲ್ಲ DoPPW ಕೂಡ ಹೇಳಿರುವಂತೆ, ಕುಟುಂಬ ಸದಸ್ಯರಲ್ಲದವರನ್ನು ನಾಮಿನೇಷನ್ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಆ ಸರ್ಕಾರಿ ನೌಕರರಿಗೆ ಕುಟುಂಬ ಅಂತ ಇಲ್ಲದಿದ್ದರೂ ಇದೇ ನಿಯಮಾವಳಿ ಅನ್ವಯ ಆಗುತ್ತದೆ. ಸಿಸಿಎಸ್​ (ಪಿಂಚಣಿ) ನಿಯಮಾವಳಿ, 1972ರ ಅಡಿಯಲ್ಲಿ ಬರುವ ಗ್ರಾಚ್ಯುಟಿಗೆ ಬರುವಂಥದ್ದೇ ಎಕ್ಸ್​-ಗ್ರೇಷಿಯಾ ಇಡಿಗಂಟು ಪಾವತಿಯ ನಾಮಿನೇಷನ್​ಗೂ ಬರುತ್ತದೆ. ಆದರೆ ಎಕ್ಸ್​ಗ್ರೇಷಿಯಾವನ್ನು ಸರ್ಕಾರಿ ನೌಕರರ ಕುಟುಂಬದ ಸದಸ್ಯರಿಗೆ ಮಾತ್ರ ಪಾವತಿಸಲಾಗುತ್ತದೆ. ಆ ನೌಕರರಿಗೆ ಕುಟುಂಬವೇ ಇಲ್ಲದಿದ್ದರೂ ಇದೇ ನಿಯಮಾವಳಿ ಬರುತ್ತದೆ ಎಂದು ಕಚೇರಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಹೊಸ ನಿಯಮ ಏಕೆ? ಸರ್ಕಾರಿ ನೌಕರ ಮೃತರಾದಲ್ಲಿ ಡೆತ್ ಗ್ರಾಚ್ಯುಟಿ, ಜಿಪಿಎಫ್ ಬಾಕಿ, ಸಿಜಿಇಜಿಐಎಸ್ ಮೊತ್ತ ಇತ್ಯಾದಿ ಇಡಿಗಂಟನ್ನು ನಾಮಿನೇಷನ್​ ಮಾಡಿರುವ ಪ್ರಕಾರ ವಿತರಿಸಲಾಗುತ್ತದೆ. ಆದರೆ ಈಗಾಗಲೇ ಇರುವ ನಿಯಮವು ಇಂಥ ಎಕ್ಸ್​ಗ್ರೇಷಿಯಾವನ್ನು ಕುಟುಂಬ ಸದಸ್ಯರ ಪೈಕಿ ಯಾರಿಗೆ ಪಾವತಿಸಬೇಕು ಎಂಬುದನ್ನು ಈಗಿರುವ ನಿಯಮಾವಳಿಯಲ್ಲಿ ನಿರ್ದಿಷ್ಟವಾಗಿ ತಿಳಿಸಿಲ್ಲ. ಆದ್ದರಿಂದ ಇಲ್ಲಿಯ ತನಕ ಏನು ಮಾಡಲಾಗುತ್ತಿತ್ತು ಅಂದರೆ, ಸಿಸಿಎಸ್​ (ಎಕ್ಸ್​ಟ್ರಾರ್ಡನರಿ ಪೆನ್ಷನ್) ನಿಯಮಾವಳಿ, 1939ರ ಅಡಿಯಲ್ಲಿ ಯಾವ ಕುಟುಂಬ ಸದಸ್ಯರು ಎಕ್ಸ್​ಟ್ರಾರ್ಡನರಿ ಪಿಂಚಣಿಗೆ ಅರ್ಹರಾಗಿರುತ್ತಿದ್ದರೋ ಅವರಿಗೆ ಪಾವತಿಸಲಾಗುತ್ತಿತ್ತು.

ಕೇಂದ್ರ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸಿನ ಅನ್ವಯ ಸಂಬಳ ಪಾವತಿಸಲಾಗುತ್ತಿದೆ.

ಇದನ್ನೂ ಓದಿ: Salary Hike: ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಜಾಸ್ತಿ ಆಗುತ್ತಿದೆ ಗೊತ್ತೆ? ಇಲ್ಲಿದೆ ಲೆಕ್ಕಾಚಾರ

Published On - 11:31 am, Mon, 4 October 21

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ