AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲಿಬಾಬ ಸೇರಿ ವಿವಿಧ ಕಂಪೆನಿಗಳಿಗೆ ಚೀನಾದಲ್ಲಿ ವಿಶ್ವಾಸ ಧಕ್ಕೆ ಪ್ರಕರಣದಲ್ಲಿ ಹೊಸದಾಗಿ ಭಾರೀ ದಂಡ

ಚೀನಾದಲ್ಲಿ ತಂತ್ರಜ್ಞಾನ ಕಂಪೆನಿಗಳಾದ ಅಲಿಬಾಬ, ಟೆನ್ಸೆಂಟ್ ಮತ್ತಿತರ ಕಂಪೆನಿಗಳ ಮೇಲೆ ಹೊಸದಾಗಿ ದಂಡವನ್ನು ವಿಧಿಸಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

ಅಲಿಬಾಬ ಸೇರಿ ವಿವಿಧ ಕಂಪೆನಿಗಳಿಗೆ ಚೀನಾದಲ್ಲಿ ವಿಶ್ವಾಸ ಧಕ್ಕೆ ಪ್ರಕರಣದಲ್ಲಿ ಹೊಸದಾಗಿ ಭಾರೀ ದಂಡ
ಚೀನಾದ ಅಧ್ಯಕ್ಷ ಷಿ ಜಿನ್ ಪಿಂಗ್ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: Nov 20, 2021 | 6:34 PM

Share

ಅಲಿಬಾಬ ಸಮೂಹದ ಹೋಲ್ಡಿಂಗ್ ಲಿಮಿಟೆಡ್., ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ಬೈದು ಇಂಕ್., ಕಂಪೆನಿಗಳೂ ಸೇರಿದಂತೆ ಇತರ ಕಂಪೆನಿಗಳಿಗೆ ಚೀನಾದ ಸ್ಪರ್ಧೆಯ ನಿಗಾ ಸಂಸ್ಥೆಯಿಂದ ಒಟ್ಟು 21.5 ಮಿಲಿಯನ್ ಯುವಾನ್ (3.4 ಮಿಲಿಯನ್ ಅಮೆರಿಕನ್ ಡಾಲರ್) ದಂಡವನ್ನು ಪಾವತಿಸಲು ಆದೇಶಿಸಲಾಗಿದೆ. ಇದು ಚೀನಾದಲ್ಲಿ ಕಂಪೆನಿಗಳ ಏಕಸ್ವಾಮ್ಯದ ಮೇಲೆ ನಡೆಯುತ್ತಿರುವ ದಮನದಲ್ಲಿ ಇತ್ತೀಚಿನ ಸುತ್ತಿನ ದಂಡವಾಗಿದೆ. ಒಟ್ಟು 43 ವಿಶ್ವಾಸ ಧಕ್ಕೆ ಉಲ್ಲಂಘನೆಗಳಿಗೆ ಕಂಪೆನಿಗಳು ತಲಾ 5,00,000 ಯುವಾನ್ ಪಾವತಿಸಬೇಕು ಎಂದು ಮಾರುಕಟ್ಟೆ ನಿಯಂತ್ರಣಕ್ಕಾಗಿ ಇರುವ ರಾಜ್ಯ ಆಡಳಿತವು ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ. ಒಂದು ಪ್ರಕರಣಕ್ಕೆ 5,00,000 ಯುವಾನ್​ ಅಂದರೆ, ಭಾರತದ ರೂಪಾಯಿ ಲೆಕ್ಕದಲ್ಲಿ 58,17,169.26 ಆಗುತ್ತದೆ. ಒಟ್ಟು 47 ಪ್ರಕರಣಕ್ಕೆ 25,01,38,278.18 (25.01 ಕೋಟಿ ) ರೂಪಾಯಿ ಆಗುತ್ತದೆ.

ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಏಕಸ್ವಾಮ್ಯಕ್ಕಾಗಿ ಡೇಟಾವನ್ನು ಸಂಗ್ರಹಿಸುವ “ಪ್ಲಾಟ್‌ಫಾರ್ಮ್” ಕಂಪೆನಿಗಳ ಮೇಲೆ ಕಣ್ಣಿಡುವ ಉದ್ದೇಶವನ್ನು ಮಾರ್ಚ್‌ನಲ್ಲಿ ಘೋಷಿಸಿದರು. ಮತ್ತು ಬೀಜಿಂಗ್ ಚೀನಾದ ವಿಸ್ತಾರವಾದ ಖಾಸಗಿ ವಲಯದ ಮೇಲೆ, ವಿಶೇಷವಾಗಿ ಡಿಜಿಟಲ್ ಕ್ಷೇತ್ರದಲ್ಲಿ ವಿಶ್ವಾಸ ಧಕ್ಕೆ ಮೇಲ್ವಿಚಾರಣೆಯನ್ನು ಹೆಚ್ಚಿಸುತ್ತಿದೆ.

ಅಲಿಬಾಬ ತನ್ನ ಮಾರುಕಟ್ಟೆ ಪ್ರಾಬಲ್ಯವನ್ನು ದುರುಪಯೋಗ ಮಾಡಿಸಿಕೊಂಡಿದ್ದಕ್ಕಾಗಿ ಈ ವರ್ಷದ ಆರಂಭದಲ್ಲಿ 2.8 ಶತಕೋಟಿ ಡಾಲರ್ ತೆರಿಗೆಯನ್ನು ವಿಧಿಸಲಾಯಿತು. ಆದರೆ ಏಕಸ್ವಾಮ್ಯ-ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಹಾರ-ವಿತರಣೆ ಮುಂಚೂಣಿಯಲ್ಲಿ ಇರುವ ಮೀಟುವಾನ್‌ಗೆ ಕಳೆದ ತಿಂಗಳು 533 ಮಿಲಿಯನ್ ಡಾಲರ್​ಗೆ ದಂಡ ವಿಧಿಸಲಾಯಿತು.

ಇದನ್ನೂ ಓದಿ: ಪಾಕಿಸ್ತಾನದಿಂದ ಚೀನಾಗೆ ಸಾಗಿಸುತ್ತಿದ್ದ ರೇಡಿಯೋಆ್ಯಕ್ಟಿವ್ ಕಂಟೇನರ್​ಗಳು ಗುಜರಾತ್​ನಲ್ಲಿ ವಶಕ್ಕೆ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ