AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲಿಬಾಬ ಸೇರಿ ವಿವಿಧ ಕಂಪೆನಿಗಳಿಗೆ ಚೀನಾದಲ್ಲಿ ವಿಶ್ವಾಸ ಧಕ್ಕೆ ಪ್ರಕರಣದಲ್ಲಿ ಹೊಸದಾಗಿ ಭಾರೀ ದಂಡ

ಚೀನಾದಲ್ಲಿ ತಂತ್ರಜ್ಞಾನ ಕಂಪೆನಿಗಳಾದ ಅಲಿಬಾಬ, ಟೆನ್ಸೆಂಟ್ ಮತ್ತಿತರ ಕಂಪೆನಿಗಳ ಮೇಲೆ ಹೊಸದಾಗಿ ದಂಡವನ್ನು ವಿಧಿಸಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

ಅಲಿಬಾಬ ಸೇರಿ ವಿವಿಧ ಕಂಪೆನಿಗಳಿಗೆ ಚೀನಾದಲ್ಲಿ ವಿಶ್ವಾಸ ಧಕ್ಕೆ ಪ್ರಕರಣದಲ್ಲಿ ಹೊಸದಾಗಿ ಭಾರೀ ದಂಡ
ಚೀನಾದ ಅಧ್ಯಕ್ಷ ಷಿ ಜಿನ್ ಪಿಂಗ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Nov 20, 2021 | 6:34 PM

ಅಲಿಬಾಬ ಸಮೂಹದ ಹೋಲ್ಡಿಂಗ್ ಲಿಮಿಟೆಡ್., ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ಬೈದು ಇಂಕ್., ಕಂಪೆನಿಗಳೂ ಸೇರಿದಂತೆ ಇತರ ಕಂಪೆನಿಗಳಿಗೆ ಚೀನಾದ ಸ್ಪರ್ಧೆಯ ನಿಗಾ ಸಂಸ್ಥೆಯಿಂದ ಒಟ್ಟು 21.5 ಮಿಲಿಯನ್ ಯುವಾನ್ (3.4 ಮಿಲಿಯನ್ ಅಮೆರಿಕನ್ ಡಾಲರ್) ದಂಡವನ್ನು ಪಾವತಿಸಲು ಆದೇಶಿಸಲಾಗಿದೆ. ಇದು ಚೀನಾದಲ್ಲಿ ಕಂಪೆನಿಗಳ ಏಕಸ್ವಾಮ್ಯದ ಮೇಲೆ ನಡೆಯುತ್ತಿರುವ ದಮನದಲ್ಲಿ ಇತ್ತೀಚಿನ ಸುತ್ತಿನ ದಂಡವಾಗಿದೆ. ಒಟ್ಟು 43 ವಿಶ್ವಾಸ ಧಕ್ಕೆ ಉಲ್ಲಂಘನೆಗಳಿಗೆ ಕಂಪೆನಿಗಳು ತಲಾ 5,00,000 ಯುವಾನ್ ಪಾವತಿಸಬೇಕು ಎಂದು ಮಾರುಕಟ್ಟೆ ನಿಯಂತ್ರಣಕ್ಕಾಗಿ ಇರುವ ರಾಜ್ಯ ಆಡಳಿತವು ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ. ಒಂದು ಪ್ರಕರಣಕ್ಕೆ 5,00,000 ಯುವಾನ್​ ಅಂದರೆ, ಭಾರತದ ರೂಪಾಯಿ ಲೆಕ್ಕದಲ್ಲಿ 58,17,169.26 ಆಗುತ್ತದೆ. ಒಟ್ಟು 47 ಪ್ರಕರಣಕ್ಕೆ 25,01,38,278.18 (25.01 ಕೋಟಿ ) ರೂಪಾಯಿ ಆಗುತ್ತದೆ.

ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಏಕಸ್ವಾಮ್ಯಕ್ಕಾಗಿ ಡೇಟಾವನ್ನು ಸಂಗ್ರಹಿಸುವ “ಪ್ಲಾಟ್‌ಫಾರ್ಮ್” ಕಂಪೆನಿಗಳ ಮೇಲೆ ಕಣ್ಣಿಡುವ ಉದ್ದೇಶವನ್ನು ಮಾರ್ಚ್‌ನಲ್ಲಿ ಘೋಷಿಸಿದರು. ಮತ್ತು ಬೀಜಿಂಗ್ ಚೀನಾದ ವಿಸ್ತಾರವಾದ ಖಾಸಗಿ ವಲಯದ ಮೇಲೆ, ವಿಶೇಷವಾಗಿ ಡಿಜಿಟಲ್ ಕ್ಷೇತ್ರದಲ್ಲಿ ವಿಶ್ವಾಸ ಧಕ್ಕೆ ಮೇಲ್ವಿಚಾರಣೆಯನ್ನು ಹೆಚ್ಚಿಸುತ್ತಿದೆ.

ಅಲಿಬಾಬ ತನ್ನ ಮಾರುಕಟ್ಟೆ ಪ್ರಾಬಲ್ಯವನ್ನು ದುರುಪಯೋಗ ಮಾಡಿಸಿಕೊಂಡಿದ್ದಕ್ಕಾಗಿ ಈ ವರ್ಷದ ಆರಂಭದಲ್ಲಿ 2.8 ಶತಕೋಟಿ ಡಾಲರ್ ತೆರಿಗೆಯನ್ನು ವಿಧಿಸಲಾಯಿತು. ಆದರೆ ಏಕಸ್ವಾಮ್ಯ-ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಹಾರ-ವಿತರಣೆ ಮುಂಚೂಣಿಯಲ್ಲಿ ಇರುವ ಮೀಟುವಾನ್‌ಗೆ ಕಳೆದ ತಿಂಗಳು 533 ಮಿಲಿಯನ್ ಡಾಲರ್​ಗೆ ದಂಡ ವಿಧಿಸಲಾಯಿತು.

ಇದನ್ನೂ ಓದಿ: ಪಾಕಿಸ್ತಾನದಿಂದ ಚೀನಾಗೆ ಸಾಗಿಸುತ್ತಿದ್ದ ರೇಡಿಯೋಆ್ಯಕ್ಟಿವ್ ಕಂಟೇನರ್​ಗಳು ಗುಜರಾತ್​ನಲ್ಲಿ ವಶಕ್ಕೆ

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ