Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಷೇರು ಮಾರುಕಟ್ಟೆ ಕುಸಿತಕ್ಕೆ ಏನು ಕಾರಣ? ಜೆಫರೀಸ್​ನ ಕ್ರಿಸ್ ವುಡ್ ಹೇಳುವುದಿದು…

Chris Wood of Jefferies speaks on Indian stock market: ಜೆಫೆರೀಸ್ ಸಂಸ್ಥೆ ಭಾರತದ ಮಾರುಕಟ್ಟೆ ಬಗ್ಗೆ ತನ್ನ ಗ್ರೇಡಿಂಗ್ ಅನ್ನು ಓವರ್​ವೇಟ್​ನಿಂದ ನ್ಯೂಟ್ರಲ್​ಗೆ ಇಳಿಸಿದೆ. ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥ ಕ್ರಿಸ್ಟೋಫರ್ ವುಡ್ ಸ್ಪಷ್ಟನೆ ನೀಡಿದ್ದು, ತನಗೆ ಭಾರತದ ಮಾರುಕಟ್ಟೆ ಬಗ್ಗೆ ಈಗಲೂ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಅಮೆರಿಕದ ಮಾರುಕಟ್ಟೆ ಮಂದಗೊಳ್ಳಲಿದ್ದು, ಭಾರತ ಮತ್ತು ಚೀನಾ ಹೆಚ್ಚು ಆಶಾದಾಯಕವಾಗಿದೆ ಎಂಬುದು ಅವರ ಅನಿಸಿಕೆ. ಹಾಗೆಯೇ, ಭಾರತದ ಮಾರ್ಕೆಟ್ ಕರೆಕ್ಷನ್ ಆಗಲು ಕೆಲ ಕಾರಣಗಳನ್ನೂ ಅವರು ವಿವರಿಸಿದ್ದಾರೆ.

ಭಾರತದಲ್ಲಿ ಷೇರು ಮಾರುಕಟ್ಟೆ ಕುಸಿತಕ್ಕೆ ಏನು ಕಾರಣ? ಜೆಫರೀಸ್​ನ ಕ್ರಿಸ್ ವುಡ್ ಹೇಳುವುದಿದು...
ಕ್ರಿಸ್ಟೋಫರ್ ವುಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 04, 2025 | 12:33 PM

ನವದೆಹಲಿ, ಮಾರ್ಚ್ 4: ಭಾರತದ ಮಾರುಕಟ್ಟೆಗೆ ತನ್ನ ರೇಟಿಂಗ್ ಅನ್ನು ಇಳಿಸಿದ್ದ ಜೆಫೆರೀಸ್ ಸಂಸ್ಥೆಯ ಗ್ಲೋಬಲ್ ಈಕ್ವಿಟಿ ಮುಖ್ಯಸ್ಥ ಕ್ರಿಸ್ಟೋಫರ್ ವುಡ್, ಭಾರತದ ಬಗ್ಗೆ ಈಗಲೂ ಆಶಾದಾಯಕವಾಗಿದೆ. ಭಾರತದ ಮಾರುಕಟ್ಟೆಗೆ ಜೆಫೆರೀಸ್ ಓವರ್​ವೇಟ್ ರೇಟಿಂಗ್ ನೀಡಿತ್ತು. ಅದನ್ನು ತುಸು ಇಳಿಸಿದೆ. ಭಾರತ ಈಗಲೂ ಕೂಡ ಏಷ್ಯಾ ಮಾತ್ರವಲ್ಲ, ಜಾಗತಿಕವಾಗಿ ಉತ್ತಮ ಬೆಳವಣಿಗೆ ಹೊಂದುತ್ತಿರುವುದರಿಂದ ರೇಟಿಂಗ್ ಅನ್ನು ತೀರಾ ಅಲ್ಪ ಮಾತ್ರ ಇಳಿಕೆ ಮಾಡಿದ್ದೇವೆ ಎಂದು ಕ್ರಿಸ್ಟೋಫರ್ ವುಡ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಭಾರತದ ಷೇರು ಮಾರುಕಟ್ಟೆಯಲ್ಲಿ ಈಗ ನಡೆಯುತ್ತಿರುವ ದೀರ್ಘಾವಧಿಯ ಕುಸಿತದ ಕಾರಣಕ್ಕೆ ಅವರು ಓವರ್​ವೇಟ್​ನಿಂದ ನ್ಯೂಟ್ರಲ್​ಗೆ ಗ್ರೇಡಿಂಗ್ ಅನ್ನು ಇಳಿಸಲು ಕಾರಣ. ಈ ಗ್ರೇಡಿಂಗ್ ಎಂಬುದು ಜಾಗತಿಕ ಹೂಡಿಕೆದಾರರಿಗೆ ಭಾರತದ ಮಾರುಕಟ್ಟೆ ಬಗ್ಗೆ ಜೆಫರೀಸ್ ನೀಡುವ ಅಭಿಪ್ರಾಯ ಅಥವಾ ಸಲಹೆ ಎಂದು ಪರಿಗಣಿಸಬಹುದು.

ಇದನ್ನೂ ಓದಿ: ಆ ದೇವತೆ ಕಟ್ಟುತ್ತಾಳಾ? ಟ್ರಂಪ್ ಟ್ಯಾಕ್ಸ್ ಬಗ್ಗೆ ಪ್ರತಿಕ್ರಿಯಿಸಿದ ವಾರನ್ ಬಫೆಟ್; ಇದು ಯುದ್ಧ ಕಾಲದ ಕ್ರಮವಾ?

ಕುತೂಹಲ ಎಂದರೆ, ಕ್ರಿಸ್ಟೋಫರ್ ವುಡ್ ಅವರು ತಮ್ಮ ಗ್ರೀಡ್ ಅಂಡ್ ಫಿಯರ್ ಪೋರ್ಟ್​ಫೋಲಿಯೋಗಳಲ್ಲಿ ಭಾರತದ ಸ್ಟಾಕುಗಳ ಸಂಗ್ರಹವನ್ನು ಸ್ವಲ್ಪ ಮಾತ್ರವೇ ಕಡಿಮೆ ಮಾಡಿದ್ದಾರೆ. ಇದರೊಂದಿಗೆ ಅವರು ಭಾರತದ ರಚನಾತ್ಮಕ ಬಲದ ಬಗ್ಗೆ ಇನ್ನೂ ವಿಶ್ವಾಸ ಇರಿಸಿಕೊಂಡಿರುವುದನ್ನು ತೋರಿಸಿದ್ದಾರೆ.

ಭಾರತದ ಮಾರುಕಟ್ಟೆ ಕುಸಿತ ಯಾಕಾಗಿ?

ಇದೇ ವೇಳೆ, ಭಾರತದ ಷೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ಕುಸಿತದ ಬಗ್ಗೆ ಕ್ರಿಸ್ ವುಡ್​ಗೆ ಅಚ್ಚರಿ ಎನಿಸಿಲ್ಲ. ಈ ಹಿಂದೆ ಪ್ರಮುಖ ಘಟನೆಗಳು ನಡೆದಾಗ ಮಾರುಕಟ್ಟೆ ಹೆಚ್ಚು ಅಲುಗಾಡದೇ ನಿಶ್ಚಲವಾಗಿತ್ತು. ಆದರೆ, ಈಕ್ವಿಟಿಗಳ ಬೇಡಿಕೆ ಮತ್ತು ಪೂರೈಕೆ ಪರಿಣಾಮವಾಗಿ ಮಾರ್ಕೆಟ್ ಕರೆಕ್ಷನ್ ಆಗುತ್ತಿದೆ ಎಂಬುದು ಅವರ ಅನಿಸಿಕೆ.

ಇದನ್ನೂ ಓದಿ: ಒಮ್ಮೆ ಹೊಸ ಟ್ಯಾಕ್ಸ್ ರಿಜೈಮ್ ಬಳಸಿದರೆ ಮತ್ತೆ ಹಳೆಯದನ್ನು ಬಳಸಬಾರದಾ? ಇಲ್ಲಿದೆ ಸತ್ಯಾಂಶ

ಸರ್ಕಾರದ ಹಣಕಾಸು ನೀತಿ ಬಿಗಿಗೊಳಿಸಿದ್ದು ಆರ್ಥಿಕತೆ ಹಾಗೂ ಮಾರುಕಟ್ಟೆ ಕುಸಿತಕ್ಕೆ ಎಡೆ ಮಾಡಿಕೊಟ್ಟಿರಬಹುದು. ಹಣಕಾಸು ಸಂಸ್ಥೆಗಳ ಸಾಲ ಮತ್ತು ಠೇವಣಿ ಅನುಪಾತ, ಅಸುರಕ್ಷಿತ ಸಾಲ ಹಾಗೂ ಕಿರು ಸಾಲ ವಿಚಾರದಲ್ಲಿ ನಿಯಮಗಳನ್ನು ಬಿಗಿಗೊಳಿಸಿದ ಕ್ರಮವೂ ಈ ವಿದ್ಯಮಾನಕ್ಕೆ ಕಾರಣವಾಗಿರಬಹುದು ಎಂದು ಜೆಫೆರೀಸ್​ನ ಗ್ಲೋಬಲ್ ಈಕ್ವಿಟಿ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ