AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Forgery: 6,200 ಕೋಟಿ ರೂ ಸಾಲ ಅಕ್ರಮ ಪ್ರಕರಣ, ಯುಕೋ ಬ್ಯಾಂಕ್ ಮಾಜಿ ಮುಖ್ಯಸ್ಥರ ಬಂಧನ; ಮೇ 21ರವರೆಗೆ ಇಡಿ ಕಸ್ಟಡಿಗೆ

Former UCO bank chairman Subodh Kumar Goel arrested by ED: ಕಾನ್​ಕ್ಯಾಸ್ಟ್ ಸ್ಟೀಲ್ ಕಂಪನಿಯ 6,200 ಕೋಟಿ ರೂ ಅಕ್ರಮ ಸಾಲ ಆರೋಪದ ಪ್ರಕರಣದಲ್ಲಿ ಯುಕೋ ಬ್ಯಾಂಕ್ ಮಾಜಿ ಛೇರ್ಮನ್ ಸುಬೋಧ್ ಕುಮಾರ್ ಗೋಯಲ್ ಅವರನ್ನು ಬಂಧಿಸಲಾಗಿದೆ. ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಇಡಿ ಅಧಿಕಾರಿಗಳು ಮೇ 16ರಂದು ಬಂಧಿಸಿದ್ದಾರೆ. ನ್ಯಾಯಾಲಯವು ಅವರನ್ನು ಮೇ 21ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿದೆ. ಈ ಪ್ರಕರಣ ಹಾಗೂ ಯುಕೋ ಬ್ಯಾಂಕ್​​ನ ಪಾತ್ರ ಇತ್ಯಾದಿ ವಿವರ ಇಲ್ಲಿದೆ...

Forgery: 6,200 ಕೋಟಿ ರೂ ಸಾಲ ಅಕ್ರಮ ಪ್ರಕರಣ, ಯುಕೋ ಬ್ಯಾಂಕ್ ಮಾಜಿ ಮುಖ್ಯಸ್ಥರ ಬಂಧನ; ಮೇ 21ರವರೆಗೆ ಇಡಿ ಕಸ್ಟಡಿಗೆ
ಬಂಧನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 19, 2025 | 12:41 PM

Share

ನವದೆಹಲಿ, ಮೇ 19: ಯುಕೋ ಬ್ಯಾಂಕ್​​ನ ಮಾಜಿ ಛೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸುಬೋಧ್ ಕುಮಾರ್ ಗೋಯಲ್ ಅವರನ್ನು ಬಂಧಿಸಲಾಗಿದೆ. ಕಾನ್​​ಕ್ಯಾಸ್ಟ್ ಸ್ಟೀಲ್ ಕಂಪನಿಯ (CSPL- Concast Steel and Power Ltd) 6,200 ಕೋಟಿ ರೂ ಬ್ಯಾಂಕ್ ಸಾಲ ವಂಚನೆ (Bank loan fraud) ಪ್ರಕರಣದಲ್ಲಿ ಸುಬೋಧ್ ವಿರುದ್ಧ ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ಆರೋಪ ಇದೆ. ಜಾರಿ ನಿರ್ದೇಶನಾಲಯ (ED- Enforcement Directorate) ಕಳೆದ ಶುಕ್ರವಾರ (ಮೇ 16) ಸುಬೋಧ್ ಅವರನ್ನು ಅವರ ದೆಹಲಿ ನಿವಾಸದಲ್ಲಿ ಬಂಧಿಸಿದೆ.

ಸುಬೋಧ್ ಕುಮಾರ್ ಗೋಯಲ್ ಅವರನ್ನು ಮೇ 17, ಶನಿವಾರದಂದು ವಿಶೇಷ ಪಿಎಂಎಲ್​​ಎ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ಮೇ 21, ಬುಧವಾರದವರೆಗೂ ಅವರನ್ನು ಇಡಿ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶಿಸಿತು.

ಇದನ್ನೂ ಓದಿ: ಪಾಶ್ಚಿಮಾತ್ಯ ದೇಶಗಳನ್ನು ರಿಮೋಟ್ ಕಂಟ್ರೋಲ್​​ನಿಂದ ಅಲುಗಾಡಿಸಲಿದೆಯಾ ಚೀನಾ? ಇಲ್ಲಿದೆ ಸೋಲಾರ್ ಕಿಲ್ ಸ್ವಿಚ್ ತಂತ್ರ

ಇದನ್ನೂ ಓದಿ
Image
ಬಾಂಗ್ಲಾ ಗಾರ್ಮೆಂಟ್ಸ್ ಸರಕುಗಳಿಗೆ ಭಾರತದ ನಿರ್ಬಂಧ
Image
ಭಾರತದ ಔಷಧ ಕ್ಷೇತ್ರದ ಬೆಳವಣಿಗೆ ಸೂಪರ್: ಫಿಚ್ ಗ್ರೂಪ್
Image
ಅಮೆರಿಕದಲ್ಲಿರುವ ಚೀನೀ ಉತ್ಪನ್ನಗಳಲ್ಲಿ ರಹಸ್ಯ ಸಾಧನಗಳು?
Image
ಅಮೆರಿಕದ ಕೋರ್ಟ್​​ಗಳಲ್ಲಿ ಕೇಸ್ ನಡೆಸಲೂ ದುಡ್ಡಿಲ್ಲದ ಬೈಜುಸ್

ಏನಿದು 6,200 ಕೋಟಿ ರೂ ಬ್ಯಾಂಕ್ ಲೋನ್ ಹಗರಣ?

ಕೋಲ್ಕತಾ ಮೂಲದ ಕಾನ್​​ಕ್ಯಾಸ್ಟ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ (ಸಿಎಸ್​​​ಪಿಎಲ್) ಸಂಸ್ಥೆ ಈ ಹಗರಣದ ಮೂಲವಾಗಿದೆ. ಎಸ್​​ಬಿಐ ಸೇರಿದಂತೆ 11 ಸರ್ಕಾರಿ ಬ್ಯಾಂಕುಗಳಿಂದ ಅಕ್ರಮವಾಗಿ ಸಾಲ ಪಡೆದು ವಂಚಿಸಿದೆ. ಸುಳ್ಳು ಸ್ಟಾಕ್ ಸ್ಟೇಟ್ಮೆಂಟ್, ಬ್ಯಾಲೆನ್ಸ್ ಶೀಟ್​​ಗಳನ್ನು ತೋರಿಸಿ ಬ್ಯಾಂಕುಗಳಿಂದ ಲೆಟರ್ ಆಫ್ ಕ್ರೆಡಿಟ್ ಸೌಲಭ್ಯಗಳನ್ನು ಪಡೆದಿತ್ತು. ಇದರ ಮಾಲೀಕ ಸಂಜಯ್ ಕುಮಾರ್ ಸುರೇಕಾ ಅವರು ತಮ್ಮ ಸಂಬಂಧಿಕರು, ಉದ್ಯೋಗಿಗಳು, ಆಪ್ತರ ಹೆಸರಿನ ಮೇಲೆ ಶೆಲ್ ಕಂಪನಿಗಳನ್ನು ಸೃಷ್ಟಿಸಿ, ಬ್ಯಾಂಕ್ ಸಾಲಗಳನ್ನು ಅಕ್ರಮವಾಗಿ ಹೊರಗೆ ಸಾಗಿಸಿದ್ದರು.

ಸಿಎಸ್​​ಪಿಎಲ್ ಒಟ್ಟಾರೆ 6,200 ಕೋಟಿ ರೂ ಮೊತ್ತದ ಸಾಲವನ್ನು ಬ್ಯಾಂಕುಗಳಿಗೆ ಮರುಪಾವತಿಸಲು ವಿಫಲವಾಗಿತ್ತು. 2016ರಲ್ಲಿ ಆ ಸಾಲವನ್ನು ಬ್ಯಾಂಕುಗಳು ಎನ್​ಪಿಎ ಎಂದು ಘೋಷಿಸಿದವು. ನಂತರ ನಡೆದ ಸಿಬಿಐ ಮತ್ತು ಇಡಿ ತನಿಖೆಯಲ್ಲಿ ಸಿಎಸ್​​ಪಿಎಲ್​​ನ ಮಾಲೀಕರ ಅಕ್ರಮ ಚಟುವಟಿಕೆ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಕೋರ್ಟ್​​ನಲ್ಲಿ ಕೇಸ್ ನಡೆಸಲೂ ದುಡ್ಡಿಲ್ಲ: ಬೈಜೂಸ್ ಸಂಸ್ಥಾಪಕರ ಅಳಲು; ದೇಶಕ್ಕಾಗಿ ಮತ್ತೆ ಕಂಪನಿ ಕಟ್ಟುವ ಛಲ

ಯುಕೋ ಬ್ಯಾಂಕ್​​ನ ಮಾಜಿ ಛೇರ್ಮನ್ ವಿರುದ್ಧ ಇರುವ ಆರೋಪವೇನು?

ಕಾನ್​ಕ್ಯಾಸ್ಟ್ ಸ್ಟೀಲ್ ಕಂಪನಿಗೆ ಯುಕೋ ಬ್ಯಾಂಕ್ 1,400 ಕೋಟಿ ರೂ ಸಾಲ ನೀಡಿತ್ತು. ಸಿಎಸ್​​ಪಿಎಲ್​​​ನ ಅಕ್ರಮ ಲೆಟರ್ ಆಫ್ ಕ್ರೆಡಿಟ್ ವಿಚಾರ ಅಂದಿನ ಯುಕೋ ಬ್ಯಾಂಕ್ ಛೇರ್ಮನ್ ಆಗಿದ್ದ ಸುಬೋಧ್ ಕುಮಾರ್ ಗೋಯಲ್​​ಗೆ ತಿಳಿದಿತ್ತು. ಆದರೂ ಕೂಡ ಕೋಲ್ಕತಾ ಮೂಲದ ಕಂಪನಿಗೆ ಸಾಲ ಕೊಡಲಾಗಿತ್ತು. ಈ ಅಕ್ರಮ ವ್ಯವಹಾರದಲ್ಲಿ ಸುಬೋಧ್ ಗೋಯಲ್​​ಗೆ ವೈಯಕ್ತಿಕವಾಗಿ ಹಣ ಸಂದಾಯವಾಗಿದೆ ಎಂಬುದು ಆರೋಪ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:31 pm, Mon, 19 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ