CBI
ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (CBI) ಭಾರತದ ಪ್ರಮುಖ ಅಪರಾಧ ತನಿಖಾ ಸಂಸ್ಥೆಯಾಗಿದ್ದು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮೂಲತಃ ಭ್ರಷ್ಟಾಚಾರ ಪ್ರಕರಣಗಳ ಮೇಲೆ ಕೇಂದ್ರೀಕರಿಸಿದ ಇದು 1965 ರಲ್ಲಿ ವಿವಿಧ ಕೇಂದ್ರ ಕಾನೂನು ಉಲ್ಲಂಘನೆಗಳು, ಬಹು-ರಾಜ್ಯ ಅಪರಾಧಗಳು ಮತ್ತು ಅಂತರರಾಷ್ಟ್ರೀಯ ಪ್ರಕರಣಗಳನ್ನು ಒಳಗೊಳ್ಳಲು ತನ್ನ ಪಾತ್ರವನ್ನು ವಿಸ್ತರಿಸಿತು. ಇಂಟರ್ಪೋಲ್ನೊಂದಿಗೆ ಭಾರತದ ಸಂಪರ್ಕದ ಕೇಂದ್ರವಾಗಿದ್ದರೂ, ಸಿಬಿಐ ಅಕ್ರಮಗಳು, ರಾಜಕೀಯ ಪ್ರಭಾವ ಮತ್ತು ಕಡಿಮೆ ಶಿಕ್ಷೆಯ ಪ್ರಮಾಣಕ್ಕಾಗಿ ಟೀಕೆಗಳನ್ನು ಎದುರಿಸಿದೆ. ಗಮನಾರ್ಹವಾಗಿ, ಇದು ಮಾಹಿತಿ ಹಕ್ಕು ಕಾಯ್ದೆಯಿಂದ ವಿನಾಯಿತಿ ಪಡೆದಿದೆ.
ಇನ್ನೂ ಹೆಚ್ಚು ಓದಿಜಾರ್ಖಂಡ್ನಲ್ಲಿ 17ನೇ ದಿನಕ್ಕೆ ಕಾಲಿಟ್ಟ ವಿದ್ಯಾರ್ಥಿಗಳ ಪ್ರತಿಭಟನೆ; ವಿಧಾನಸೌಧ ಮುತ್ತಿಗೆಗೆ ಯತ್ನ; ಜಲಫಿರಂಗಿಗೂ ಬೆದರದ ಯುವಜನರು
Jharkhand students protest enter 17th day: ಜಾರ್ಖಂಡ್ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ನಡೆದಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿಭಟನೆಯ 17ನೇ ದಿನ ಉಗ್ರ ರೂಪ ಪಡೆದಿದ್ದು, ವಿದ್ಯಾರ್ಥಿಗಳು ವಿಧಾನಸೌಧ ಮುತ್ತಿಗೆಗೆ ಪ್ರಯತ್ನಿಸಿದ್ದಾರೆ. ಜಾರ್ಖಂಡ್ ಪೊಲೀಸರು ಜಲಫಿರಂಗಿ ಬಳಸಿ ವಿದ್ಯಾರ್ಥಿಗಳನ್ನು ತಡೆಯಲು ಯತ್ನಿಸುತ್ತಿದ್ದಾರೆ.
- Vijaya Sarathy SN
- Updated on: Aug 10, 2026
- 1:48 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; ತನಿಖೆ ಮುಕ್ತಾಯಗೊಳಿಸಿ ಚಾರ್ಜ್ಶೀಟ್ ಸಲ್ಲಿಸಿದ ಸಿಬಿಐ
ಸಿಬಿಐ ತನಿಖೆಯಲ್ಲಿ ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಎನ್ಟಿಎ ವಿಷಯ ತಜ್ಞರು, ಸಂಘಟಿತರಾಗಿ ಕ್ರಿಮಿನಲ್ ಸಂಚು ಮಾಡಿದ್ದರು ಎಂಬುದು ಪತ್ತೆಯಾಗಿದೆ. ಈ ಪ್ರಕರಣದಲ್ಲಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ (NTA) ವಿಷಯ ತಜ್ಞರು ಪರೀಕ್ಷಾ ಪ್ರಶ್ನೆಗಳನ್ನು ಸೋರಿಕೆ ಮಾಡಿ, ಹೆಚ್ಚಿನ ಹಣಕ್ಕೆ ಮಧ್ಯವರ್ತಿಗಳ ಜಾಲದ ಮೂಲಕ ಅಭ್ಯರ್ಥಿಗಳಿಗೆ ತಲುಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ತನಿಖಾ ಸಂಸ್ಥೆಯು ಚಾರ್ಜ್ಶೀಟ್ ಸಲ್ಲಿಸಿದ್ದು, ಎನ್ಟಿಎಯ ಮೂವರು ವಿಷಯ ತಜ್ಞರು, ಕೋಚಿಂಗ್ ಸೆಂಟರ್ ನಿರ್ವಾಹಕರು, ಮಧ್ಯವರ್ತಿಗಳು ಮತ್ತು ಅಭ್ಯರ್ಥಿಗಳು ಸೇರಿದಂತೆ ಒಟ್ಟು 13 ಜನರನ್ನು ಆರೋಪಿಗಳಾಗಿ ಹೆಸರಿಸಿದೆ. ಈ ಕುರಿತು ಪೂರ್ತಿ ವಿವರ ಇಲ್ಲಿದೆ.
- Sushma Chakre
- Updated on: Aug 7, 2026
- 6:59 pm
Anil Ambani vs EPFO: ಇಪಿಎಫ್ಒಗೆ ಅಂಬಾನಿಯಿಂದ 1,816 ಕೋಟಿ ರೂ ನಷ್ಟ; ಸಿಬಿಐನಿಂದ ಪ್ರಕರಣ ದಾಖಲು
CBI books case against Anil Ambani for allegedly causing loss to EPFO: ಇಪಿಎಫ್ಒ ಸಂಸ್ಥೆಗೆ 1,816 ಕೋಟಿ ರೂ ನಷ್ಟ ತಂದ ಆರೋಪ ಅನಿಲ್ ಅಂಬಾನಿ ಹಾಗೂ ರಿಲಯನ್ಸ್ ಕ್ಯಾಪಿಟಲ್ ಸಂಸ್ಥೆ ಮೇಲಿದೆ. ಇಪಿಎಫ್ಒ ನೀಡಿದ ದೂರಿನ ಮೇರೆಗೆ ಸಿಬಿಐ ಎಫ್ಐಆರ್ ದಾಖಲಿಸಿದೆ. ರಿಲಯನ್ಸ್ ಕ್ಯಾಪಿಟಲ್ ಹೊರಡಿಸಿದ ಡಿಬಂಚರ್ಗಳ (ಎನ್ಸಿಡಿ) ಮೇಲೆ ಇಪಿಎಫ್ಒ ಹೂಡಿಕೆ ಮಾಡಿ ಈ ನಷ್ಟ ಕಂಡಿದ್ದು ತಿಳಿದುಬಂದಿದೆ.
- Vijaya Sarathy SN
- Updated on: Aug 2, 2026
- 3:11 pm
ವಾಲ್ಮೀಕಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಅಕ್ರಮಗಳ ಬಗ್ಗೆ ಚಾರ್ಜ್ಶೀಟ್ ಸಲ್ಲಿಸಿದ ಸಿಬಿಐ
ವಾಲ್ಮೀಕಿ ಅಭಿವೃದ್ಧಿ ನಿಗಮದ 89.63 ಕೋಟಿ ರೂ. ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಸೇರಿದಂತೆ 30 ಜನರ ವಿರುದ್ಧ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದೆ. ಸಚಿವರ ಕುಟುಂಬಸ್ಥರ ಖಾತೆಗಳಿಗೆ 1.20 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿರುವುದು ಹಾಗೂ ಬೆನಾಮಿ ಕಾರು ಖರೀದಿಯ ಬಗ್ಗೆ ಚಾರ್ಜ್ಶೀಟ್ನಲ್ಲಿ ತನಿಖಾ ಸಂಸ್ಥೆ ಉಲ್ಲೇಖಿಸಿದೆ.
- Ganapathi Sharma
- Updated on: Jun 3, 2026
- 12:39 pm
ತ್ವಿಶಾ ಶರ್ಮಾ ಪ್ರಕರಣ: ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಸಿಬಿಐನಿಂದ ಗಿರಿಬಾಲಾ ಸಿಂಗ್ ಬಂಧನ
CBI Nabs Ex-Judge Giribala Singh in Twisha Sharma Case: ಮಾಜಿ ಮಾಡೆಲ್ ತ್ವಿಶಾ ಶರ್ಮಾ ಶಂಕಾಸ್ಪದ ಸಾವು ಪ್ರಕರಣದಲ್ಲಿ ಸಿಬಿಐ ಮಹತ್ವದ ಕಾರ್ಯಾಚರಣೆ ನಡೆಸಿ, ಅತ್ತೆ ಗಿರಿಬಾಲಾ ಸಿಂಗ್ ಅವರನ್ನು ಬಂಧಿಸಿದೆ. ಮಧ್ಯಪ್ರದೇಶ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಕೆಲವೇ ಗಂಟೆಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ, ಗರ್ಭಪಾತದ ಒತ್ತಡದ ವಾಟ್ಸಾಪ್ ಚಾಟ್ಗಳು ಹಾಗೂ ವರದಕ್ಷಿಣೆ ಕಿರುಕುಳದ ಆರೋಪಗಳು ಜಾಮೀನು ರದ್ದತಿಗೆ ಪ್ರಮುಖ ಕಾರಣಗಳಾಗಿವೆ.
- Vijaya Sarathy SN
- Updated on: May 28, 2026
- 5:49 pm
ಕರೂರು ಕಾಲ್ತುಳಿತ ಪ್ರಕರಣ: ನಟ ವಿಜಯ್ ಮತ್ತು ಸೆಂಥಿಲ್ ಬಾಲಾಜಿಗೆ ಸಿಬಿಐ ಸಮನ್ಸ್
ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಕೆ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಅವರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ. ಮಾರ್ಚ್ 15ರಂದು ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ವಿಜಯ್ ಮಾತ್ರವಲ್ಲದೇ ಸೆಂಥಿಲ್ ಬಾಲಾಜಿ ಕೂಡ ಮಾರ್ಚ್ 17ರಂದು ಸಿಬಿಐ ವಿಚಾರಣೆ ಎದುರಿಸಬೇಕಿದೆ.
- Madan Kumar
- Updated on: Mar 10, 2026
- 6:28 pm
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಬಳ್ಳಾರಿಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಆಪ್ತ ವಿಶ್ವನಾಥ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಶ್ವನಾಥ್ ಸಹೋದರನನ್ನು ಬ್ರೂಸ್ಪೇಟೆ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಈ ದಾಳಿ ನಡೆದಿದೆ ಎನ್ನಲಾಗಿದೆ.
- Vinayak Badiger
- Updated on: Dec 31, 2025
- 12:35 pm
5 ಕೋಟಿ ರೂ ನಗದು, ಮರ್ಸಿಡಿಸ್, ಆಡಿ ಕಾರುಗಳು, ಕೆಜಿಗಟ್ಟಲೆ ಚಿನ್ನ ಸಹಿತ ಭ್ರಷ್ಟ ಐಪಿಎಸ್ ಅಧಿಕಾರಿ ಸೆರೆ!
ಪಂಜಾಬ್ ಡಿಐಜಿ ಹರ್ಚರಣ್ ಸಿಂಗ್ ಬುಲ್ಲಾರ್ ಲಂಚ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದಾರೆ. 8 ಲಕ್ಷ ರೂ. ಲಂಚ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಡಿಐಜಿ ಮನೆಯಲ್ಲಿ 5 ಕೋಟಿ ರೂ. ನಗದು, 1.5 ಕೆಜಿ ಚಿನ್ನ ಸೇರಿ ಅಪಾರ ಅಕ್ರಮ ಸಂಪತ್ತು ಪತ್ತೆಯಾಗಿದೆ.
- Ganapathi Sharma
- Updated on: Oct 17, 2025
- 7:26 am
ಕರೂರು ಕಾಲ್ತುಳಿತ ಘಟನೆ: ಸಿಬಿಐಗೆ ತನಿಖೆ ಹೊಣೆ ವಹಿಸಿದ ಸುಪ್ರೀಂಕೋರ್ಟ್
SC Hands Over Karur Stampede Investigation To CBI: ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರಿನಲ್ಲಿ ನಡೆದ ನಟ ವಿಜಯ್ ರಾಜಕೀಯ ಕಾರ್ಯಕ್ರಮದಲ್ಲಿ ಕಾಲ್ತುಳಿತವಾಗಿ ಹಲವರು ಬಲಿಯಾಗಿದ್ದರು. ಆ ಘಟನೆಯ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಿ ಸರ್ವೋಚ್ಚ ನ್ಯಾಯಾಲಯ ಇಂದು (ಅ. 13) ಆದೇಶ ಹೊರಡಿಸಿದೆ. ನಟ ವಿಜಯ್ ಕೂಡ ಆ ಘಟನೆಯನ್ನು ಸಿಬಿಐ ತನಿಖೆಗೆ ಕೊಡಬೇಕೆಂದು ಒತ್ತಾಯಿಸಿದ್ದರು.
- Vijaya Sarathy SN
- Updated on: Oct 13, 2025
- 1:07 pm
ಸಿಬಿಐ ದಾಳಿ: ಕರ್ನಾಟಕ ವಾಲ್ಮೀಕಿ ನಿಗಮ ಹಗರಣದಲ್ಲಿ ಬಿಜೆಪಿಗೂ ನಂಟು?
ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ Valmiki Scam) ವರ್ಗಾವಣೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ಬಳಿಕ ಇದೀಗ ಸಿಬಿಐ ದಾಳಿ ಮಾಡಿದೆ. ಹೌದು..ಬಳ್ಳಾರಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಗೋವಿಂದರಾಜಲು ಅವರ ಮನೆ ಮೇಲೆ ಸಿಬಿಐ ದಾಳಿ ಮಾಡಿದೆ. ಇಂದು ಬೆಳಗ್ಗೆ 3 ಕಾರುಗಳಲ್ಲಿ ಆಗಮಿಸಿ ದಾಳಿ ನಡೆಸಿದ್ದ CBI ಅಧಿಕಾರಿಗಳು, ಗೋವಿಂದರಾಜಲು ಮನೆಯಿಂದ ಕೆಲ ಮಹತ್ವದ ದಾಖಲೆಗಳನ್ನು ಮೂಟೆಯಲ್ಲಿ ಕೊಂಡೊಯ್ದಿದ್ದಾರೆ. ಹಾಗಾದ್ರೆ, ವಾಲ್ಮೀಕಿ ನಿಗಮದ ಹಗರಣದಲ್ಲಿ ಬಿಜೆಪಿಗೂ ನಂಟು ಇದೆಯಾ ಎನ್ನು ಪ್ರಶ್ನೆಗಳು ಉದ್ಭವಿಸಿವೆ.
- Ramesh B Jawalagera
- Updated on: Sep 15, 2025
- 6:03 pm
ಬೆಂಗಳೂರಿನಲ್ಲಿ ಲಕ್ಷಾಂತರ ರೂ. ವಂಚನೆ: ಇಮೇಜ್ ಸರ್ಚ್ ಟೂಲ್ಗಳನ್ನು ಬಳಸಿ 20 ವರ್ಷಗಳ ನಂತರ ಆರೋಪಿಯ ಬಂಧಿಸಿದ ಸಿಬಿಐ!
20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬ್ಯಾಂಕ್ ವಂಚನೆ ಆರೋಪಿ ಮಣಿ ಎಂ ಶೇಖರ್ ಎಂಬಾಕೆಯನ್ನು ಇಮೇಜ್ ಸರ್ಚ್ ಟೂಲ್ಗಳ ನೆರವಿನಿಂದ ಪತ್ತೆ ಮಾಡಿ ಸಿಬಿಐ ಬಂಧಿಸಿದೆ. ಆರೋಪಿಯು ಮಧ್ಯಪ್ರದೇಶದ ಇಂದೋರ್ನಲ್ಲಿ ವಾಸಿಸುತ್ತಿದ್ದರು. ಎಸ್ಬಿಐ ಬ್ಯಾಂಕ್ನ ಬೆಂಗಳೂರಿನ ಶಾಖೆಗೆ 8 ಲಕ್ಷ ರೂಪಾಯಿಗಳ ವಂಚನೆ ಪ್ರಕರಣ ಇದಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಣಿ ಎಂ ಶೇಖರ್ ಪತಿ ರಾಮಲಿಂಗಂ ಶೇಖರ್ ಈಗಾಗಲೇ ಮೃತಪಟ್ಟಿರುವುದು ಗೊತ್ತಾಗಿದೆ.
- Web contact
- Updated on: Jul 18, 2025
- 10:01 am
Forgery: 6,200 ಕೋಟಿ ರೂ ಸಾಲ ಅಕ್ರಮ ಪ್ರಕರಣ, ಯುಕೋ ಬ್ಯಾಂಕ್ ಮಾಜಿ ಮುಖ್ಯಸ್ಥರ ಬಂಧನ; ಮೇ 21ರವರೆಗೆ ಇಡಿ ಕಸ್ಟಡಿಗೆ
Former UCO bank chairman Subodh Kumar Goel arrested by ED: ಕಾನ್ಕ್ಯಾಸ್ಟ್ ಸ್ಟೀಲ್ ಕಂಪನಿಯ 6,200 ಕೋಟಿ ರೂ ಅಕ್ರಮ ಸಾಲ ಆರೋಪದ ಪ್ರಕರಣದಲ್ಲಿ ಯುಕೋ ಬ್ಯಾಂಕ್ ಮಾಜಿ ಛೇರ್ಮನ್ ಸುಬೋಧ್ ಕುಮಾರ್ ಗೋಯಲ್ ಅವರನ್ನು ಬಂಧಿಸಲಾಗಿದೆ. ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಇಡಿ ಅಧಿಕಾರಿಗಳು ಮೇ 16ರಂದು ಬಂಧಿಸಿದ್ದಾರೆ. ನ್ಯಾಯಾಲಯವು ಅವರನ್ನು ಮೇ 21ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿದೆ. ಈ ಪ್ರಕರಣ ಹಾಗೂ ಯುಕೋ ಬ್ಯಾಂಕ್ನ ಪಾತ್ರ ಇತ್ಯಾದಿ ವಿವರ ಇಲ್ಲಿದೆ...
- Vijaya Sarathy SN
- Updated on: May 19, 2025
- 12:41 pm