![CBI](https://images.tv9kannada.com/wp-content/uploads/2023/12/cbi.jpg)
CBI
ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (CBI) ಭಾರತದ ಪ್ರಮುಖ ಅಪರಾಧ ತನಿಖಾ ಸಂಸ್ಥೆಯಾಗಿದ್ದು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮೂಲತಃ ಭ್ರಷ್ಟಾಚಾರ ಪ್ರಕರಣಗಳ ಮೇಲೆ ಕೇಂದ್ರೀಕರಿಸಿದ ಇದು 1965 ರಲ್ಲಿ ವಿವಿಧ ಕೇಂದ್ರ ಕಾನೂನು ಉಲ್ಲಂಘನೆಗಳು, ಬಹು-ರಾಜ್ಯ ಅಪರಾಧಗಳು ಮತ್ತು ಅಂತರರಾಷ್ಟ್ರೀಯ ಪ್ರಕರಣಗಳನ್ನು ಒಳಗೊಳ್ಳಲು ತನ್ನ ಪಾತ್ರವನ್ನು ವಿಸ್ತರಿಸಿತು. ಇಂಟರ್ಪೋಲ್ನೊಂದಿಗೆ ಭಾರತದ ಸಂಪರ್ಕದ ಕೇಂದ್ರವಾಗಿದ್ದರೂ, ಸಿಬಿಐ ಅಕ್ರಮಗಳು, ರಾಜಕೀಯ ಪ್ರಭಾವ ಮತ್ತು ಕಡಿಮೆ ಶಿಕ್ಷೆಯ ಪ್ರಮಾಣಕ್ಕಾಗಿ ಟೀಕೆಗಳನ್ನು ಎದುರಿಸಿದೆ. ಗಮನಾರ್ಹವಾಗಿ, ಇದು ಮಾಹಿತಿ ಹಕ್ಕು ಕಾಯ್ದೆಯಿಂದ ವಿನಾಯಿತಿ ಪಡೆದಿದೆ.
ಕೇಂದ್ರೀಯ ತನಿಖಾ ಏಜೆನ್ಸಿಗಳನ್ನು ರಾಜಕೀಯ ಅಸ್ತ್ರಗಳಾಗಿ ಬಳಸಬಾರದು: ಜಿ ಪರಮೇಶ್ವರ್
ವಾಲ್ಮೀಕಿ ನಿಗಮದ ಹಗರಣದಲ್ಲಿ ಮತ್ತೊಬ್ಬ ಆರೋಪಿಯಾಗಿರುವ ಶಾಸಕ ಮತ್ತು ನಿಗಮ ಅಧ್ಯಕ್ಷ ಬಸನಗೌಡ ದದ್ದಲ್ ಅವರು ಎಲ್ಲೂ ಓಡಿಹೋಗಿಲ್ಲ ತಮ್ಮ ಕುಟುಂಬದವರೊಂದಿಗೆ ಓಡಾಡಿಕೊಂಡಿದ್ದಾರೆ ಎಂದು ಹೇಳಿದ ಪರಮೇಶ್ವರ್ ದದ್ದಲ್ ಮತ್ತು ನಾಗೇಂದ್ರ ಇಬ್ಬರನ್ನೂ ಎಸ್ಐಟಿ ತನಿಖೆಗೊಳಪಡಿಸಿದೆ ಎಂದರು.
- Arun Belly
- Updated on: Jul 13, 2024
- 12:30 pm
ಮಾಜಿ ಸಚಿವ ಬಿ ನಾಗೇಂದ್ರ ಮನೆ ಮೇಲೆ ದಾಳಿ ನಡೆಸುವ ಅವಕಾಶ ಈಡಿಗೆ ಇಲ್ಲ: ಡಿಕೆ ಶಿವಕುಮಾರ್
ಬೆಂಗಳೂರು ನಗರದ ಬಿಜೆಪಿ ನಾಯಕ ಎನ್ ಆರ್ ರಮೇಶ್ ಜಾರಿ ನಿರ್ದೇನಾಲಯಕ್ಕೆ ದೂರು ನೀಡಿರುವುದನ್ನು ಶಿವಕುಮಾರ್ ಅವರಿಗೆ ಪತ್ರಕರ್ತರು ತಿಳಿಸಿದಾಗ, ಅವರ ದೂರನ್ನು ಮಾನ್ಯ ಮಾಡಲು ಸ್ವೀಕರಿಸಲು ಬರಲ್ಲ, ದೂರು ಸಲ್ಲಿಕೆಯಾಗಬೇಕಾದರೆ ಅದಕ್ಕೊಂದು ವ್ಯವಸ್ಥೆ ಇದೆ ಎಂದು ಹೇಳಿದರು.
- Arun Belly
- Updated on: Jul 11, 2024
- 12:45 pm
180 ಕೋಟಿ ರೂ ಸಾಲದ ಪ್ರಕರಣ: ವಿಜಯ್ ಮಲ್ಯ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದ ಸಿಬಿಐ ಕೋರ್ಟ್
Non bailable warrant issued against Vijay Mallya: ಎಂಟು ವರ್ಷದ ಹಿಂದೆ ದೇಶ ತೊರೆದು ಹೋದ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ಮತ್ತೊಂದು ಜಾಮೀನುರಹಿತ ವಾರಂಟ್ ಹೊರಡಿಸಲಾಗಿದೆ. ಮುಂಬೈನ ವಿಶೇಷ ಸಿಬಿಐ ಕೋರ್ಟ್ ಕಳೆದ ವಾರ ಓಪನ್ ಎಂಡೆಡ್ ವಾರಂಟ್ ಹೊರಡಿಸಿದೆ. ಇಂಡಿಯನ್ ಓವರ್ಸೀಸ್ ಬ್ಯಾಂಕ್ನಿಂದ ಪಡೆದ ಸಾಲವನ್ನು ಉದ್ದೇಶಿತ ಕಾರ್ಯಗಳಿಗೆ ಬಳಸದೆ ಬೇರೆಡೆಗೆ ವರ್ಗಾಯಿಸಿ, ಸಾಲ ತೀರಿಸದೇ ಡೀಫಾಲ್ಟ್ ಆದ ಆರೋಪ ಮಲ್ಯ ಮೇಲಿದೆ.
- Vijaya Sarathy SN
- Updated on: Jul 2, 2024
- 12:09 pm
Arvind Kejriwal: ಸಿಬಿಐನಿಂದ ಕೇಜ್ರಿವಾಲ್ ಬಂಧನ; ಸಕ್ಕರೆ ಮಟ್ಟ ಕಡಿಮೆಯಾಗಿ ಕೋರ್ಟ್ನಲ್ಲಿ ಸುಸ್ತಾದ ಸಿಎಂ
Delhi Excise Policy Scam: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
- Sushma Chakre
- Updated on: Jun 26, 2024
- 2:44 pm
Arvind Kejriwal: ದೆಹಲಿ ಅಬಕಾರಿ ನೀತಿ ಹಗರಣ; ಜಾಮೀನು ವಿಚಾರಣೆಗೂ ಮೊದಲೇ ಸಿಬಿಐನಿಂದ ಅರವಿಂದ್ ಕೇಜ್ರಿವಾಲ್ ಬಂಧನ
Delhi Excise Policy Scam: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿದ್ದರು. ಸುಪ್ರೀಂ ಕೋರ್ಟ್ನಲ್ಲಿ ಅವರ ಜಾಮೀನು ಅರ್ಜಿ ವಿಚಾರಣೆ ನಾಳೆ (ಬುಧವಾರ) ನಡೆಯಬೇಕಿತ್ತು. ಅದಕ್ಕೂ ಮೊದಲೇ ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿ, ತನ್ನ ವಶಕ್ಕೆ ಪಡೆದಿದೆ.
- Sushma Chakre
- Updated on: Jun 25, 2024
- 10:46 pm
ಲಂಚ ಪಡೆದ ಜಿಎಸ್ಟಿ ಅಧಿಕಾರಿಗೆ 3 ವರ್ಷ ಜೈಲು, 5 ಲಕ್ಷ ರೂ. ದಂಡ: ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು
ತನಿಖೆ ಮತ್ತು ವಿಚಾರಣೆ ನಡೆಸಲು ತೆರಿಗೆದಾರರ ಹಣದಿಂದ ಸಾಕಷ್ಟು ಖರ್ಚು ಮಾಡಲಾಗಿದೆ. ಹೀಗಾಗಿ ಆರೋಪಿಗೆ 5 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ ಎಂದು ಭಾರಿ ಮೊತ್ತದ ದಂಡ ವಿಧಿಸಿದ್ದಕ್ಕೆ ನ್ಯಾಯಾಲಯ ಕಾರಣ ನೀಡಿದೆ. ದೂರುದಾರಿಂದ ಲಂಚ ಪಡೆಯುತ್ತಿದ್ದಾಗ 2021 ರ ಮಾರ್ಚ್ನಲ್ಲಿ ಅಧಿಕಾರಿಯನ್ನು ಸಿಬಿಐ ರೆಡ್ಹ್ಯಾಂಡ್ ಆಗಿ ಹಿಡಿದಿತ್ತು.
- Ganapathi Sharma
- Updated on: May 14, 2024
- 9:04 am
ಹೇಯ್, ಏನು ಯಾವಾಗ್ಲೂ ನೀನೇ ಕೇಳ್ತಿರ್ತೀಯಾ?: ಸುದ್ದಿಗಾರರೊಬ್ಬರನ್ನು ಗದರಿದ ಸಿದ್ದರಾಮಯ್ಯ
Siddaramaiah at Mysore: ಮೈಸೂರಿಗೆ ಹೋಗಿದ್ದ ಸಿದ್ದರಾಮಯ್ಯಗೆ ಅಲ್ಲಿ ಸುದ್ದಿಗಾರರಿಂದ ಪ್ರಶ್ನೆಗಳ ಸುರಿಮಳೆಯೇ ಆಯಿತು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕೇಳಲಾದ ಸಾಲು ಸಾಲು ಪ್ರಶ್ನೆಗಳಿಗೆ ಸಿದ್ದರಾಮಯ್ಯ ಸಂಯಮದಿಂದಲೇ ಉತ್ತರ ನೀಡಿದರು. ಕೆಲವೊಮ್ಮೆ ಮಾಧ್ಯಮದವರ ಪ್ರಶ್ನೆ ಅತಿರೇಕಕ್ಕೆ ಹೋದಾಗ ಗದರಿದ ಘಟನೆಯೂ ಆಯಿತು. ಸಾಲು ಸಾಲಾಗಿ ಪ್ರಶ್ನೆ ಕೇಳಲು ಹೋದ ಮಾಧ್ಯಮದವರೊಬ್ಬರಿಗೆ ಸಿದ್ದರಾಮಯ್ಯ ಗದರಿದರು.
- Vijaya Sarathy SN
- Updated on: May 10, 2024
- 4:13 pm
ಆ್ಯಪ್ಗಳ ಮೂಲಕ ಹೂಡಿಕೆ ಹೆಸರಿನಲ್ಲಿ ವಂಚನೆ ಪ್ರಕರಣ: ಕರ್ನಾಟಕ ಸೇರಿ 30 ಕಡೆಗಳಲ್ಲಿ ಸಿಬಿಐ ದಾಳಿ
ಎಚ್ಪಿಝಡ್ ಟೋಕನ್ ಆ್ಯಪ್ ಹಾಗೂ ಅದೇ ಮಾದರಿಯ ಹೂಡಿಕೆ ವಂಚನೆಯಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪದ ಮೇಲೆ ಎರಡು ಖಾಸಗಿ ಕಂಪನಿಗಳು ಮತ್ತು ಅದರ ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ತನಿಖೆಗ ಭಾಗವಾಗಿ ಇಂದು ದಾಳಿ ನಡೆಸಿದೆ.
- Ganapathi Sharma
- Updated on: May 1, 2024
- 2:23 pm
ಸಂದೇಶಖಾಲಿ ಪ್ರಕರಣ: ಸಿಬಿಐ ತನಿಖೆ ವಿರೋಧಿಸಿ ಸುಪ್ರೀಂಕೋರ್ಟ್ ಮೊರೆಬಿದ್ದ ಟಿಎಂಸಿ ಸರ್ಕಾರ
West Bengal Govt Moves to SC against CBI probe in Sandeshkhali case: ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ ಲೈಂಗಿಕ ಹಲ್ಲೆ, ಭೂ ಅಕ್ರಮ ಆಗಿದೆ ಎನ್ನುವ ಆರೋಪದ ಪ್ರಕರಣದಲ್ಲಿ ಸಿಬಿಐ ತನಿಖೆಗೆ ವಹಿಸಿದ ಕಲ್ಕತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬಂಗಾಳ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಹಾಕಿದೆ. ಸಂದೇಶ್ಖಾಲಿ ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳ ವಾಸ್ತವಾಂಶವನ್ನು ಗ್ರಹಿಸಲು ಹೈಕೋರ್ಟ್ ನ್ಯಾಯಾಧೀಶರು ವಿಫಲರಾಗಿದ್ದಾರೆ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಈ ಅರ್ಜಿಯಲ್ಲಿ ವಾದಿಸಿದೆ. ಏಪ್ರಿಲ್ 29, ಸೋಮವಾರ ಸುಪ್ರೀಂ ನ್ಯಾಯಪೀಠ ಈ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
- Vijaya Sarathy SN
- Updated on: Apr 26, 2024
- 6:17 pm
ಸಂದೇಶಖಾಲಿ ಹಿಂಸಾಚಾರ: ಸಿಬಿಐಗೆ ತನಿಖೆ ವಹಿಸಿದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ
Supreme Court Refuses Request from Bengal Govt: ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಇಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆದ ಘಟನೆಯ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿದ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ಕೊಡಲು ನಿರಾಕರಿಸಿದೆ. ಜನವರಿ 5ರಂದು ಇಡಿ ಅಧಿಕಾರಿಗಳ ಮೇಲೆ ಶೇಖ್ ಶಾಹಜಹಾನ್ ಮತ್ತವರ ಬೆಂಬಲಿಗರು ಹಲ್ಲೆ ಮಾಡಿದ್ದರು. ಘಟನೆಯ ತನಿಖೆಯನ್ನು ಸಿಐಡಿಯಿಂದ ಸಿಬಿಐಗೆ ವರ್ಗಾಯಿಸಿ ಮಾರ್ಚ್ 5ರಂದು ಕಲ್ಕತ್ತಾ ಹೈಕೋರ್ಟ್ ಆದಶ ನೀಡಿತ್ತು.
- Vijaya Sarathy SN
- Updated on: Mar 11, 2024
- 5:17 pm