AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yes Bank Scam: ರಾಣಾ ಕಪೂರ್, ಡಿಎಚ್​ಎಫ್​ಎಲ್ ಪ್ರವರ್ತಕರ ವಿರುದ್ಧ 5050 ಕೋಟಿ ವಂಚನೆಯ ಆರೋಪ ಪಟ್ಟಿ

5050 ಕೋಟಿ ರುಪಾಯಿ ವಂಚನೆ ಮಾಡಿರುವುದಾಗಿ ಯೆಸ್​ ಬ್ಯಾಂಕ್​ನ ರಾಣಾ ಕಪೂರ್ ಮತ್ತು ಡಿಎಚ್​ಎಫ್​ಎಲ್ ಪ್ರವರ್ತಕರ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪ ಪಟ್ಟಿ ಸಲ್ಲಿಸಿದೆ.

Yes Bank Scam: ರಾಣಾ ಕಪೂರ್, ಡಿಎಚ್​ಎಫ್​ಎಲ್ ಪ್ರವರ್ತಕರ ವಿರುದ್ಧ 5050 ಕೋಟಿ ವಂಚನೆಯ ಆರೋಪ ಪಟ್ಟಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Apr 23, 2022 | 5:30 PM

Share

ಯೆಸ್ ಬ್ಯಾಂಕ್ (Yes Bank) ಸಹ ಸಂಸ್ಥಾಪಕ ರಾಣಾ ಕಪೂರ್ ಮತ್ತು ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (DHFL) ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧ್ವಾನ್ ಅನುಮಾನಾಸ್ಪದ ವಹಿವಾಟುಗಳ ಮೂಲಕ ರೂ. 5,050 ಕೋಟಿ ಮೌಲ್ಯದ ಹಣವನ್ನು ವಂಚಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ED) ವಿಶೇಷ ನ್ಯಾಯಾಲಯದಲ್ಲಿ ಎರಡನೇ ಪೂರಕ (ಒಟ್ಟಾರೆ ಮೂರನೇ) ಆರೋಪ ಪಟ್ಟಿ ದಾಖಲಿಸಿದೆ. ತನಿಖೆ ಸಮಯದಲ್ಲಿ ತಿಳಿದುಬಂದಿರುವಂತೆ, ಈ ಪ್ರಕರಣದಲ್ಲಿ ಅಪರಾಧದಿಂದ ಬಂದ ಹಣದ(ಪಿಒಸಿ) ಹೆಚ್ಚಿನ ಭಾಗವನ್ನು ರಾಣಾ ಕಪೂರ್ ವಿದೇಶಕ್ಕೆ ಸಾಗಿಸಿದ್ದಾರೆ ಮತ್ತು ಆದ್ದರಿಂದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ನಿಬಂಧನೆಗಳ ಅಡಿಯಲ್ಲಿ ನೇರವಾಗಿ ಜೋಡಿಸಲು ಲಭ್ಯವಿಲ್ಲ ಎಂದು ತಿಳಿದುಬಂದಿದೆ, ಎಂಬುದಾಗಿ ಹೇಳಿಕೆಯಲ್ಲಿ ಸೇರಿಸಲಾಗಿದೆ.

ಕಪೂರ್, ಡಿಎಚ್‌ಎಫ್‌ಎಲ್ ಪ್ರವರ್ತಕರು ಮತ್ತು ಇತರರು ಅಕ್ರಮ ಹಣ ವರ್ಗಾವಣೆ ಮತ್ತು ಅನುಮಾನಾಸ್ಪದ ವಹಿವಾಟುಗಳ ಮೂಲಕ ಹಣ ಲೂಟಿ ಮಾಡುವ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ. ಡಿಎಚ್‌ಎಫ್‌ಎಲ್‌ನಿಂದ ಏಪ್ರಿಲ್ 2018 ಮತ್ತು ಜೂನ್ 2018ರ ನಡುವೆ 3,700 ಕೋಟಿ ರೂ. ಮೌಲ್ಯದ ಡಿಬೆಂಚರ್‌ಗಳನ್ನು ಯೆಸ್ ಬ್ಯಾಂಕ್ ಖರೀದಿಸಿದೆ, ಆದ್ದರಿಂದ ಮೊತ್ತವನ್ನು ಡಿಎಚ್‌ಎಫ್‌ಎಲ್‌ಗೆ ವರ್ಗಾಯಿಸಲಾಗಿದೆ. ಆ ನಂತರ ಡಿಎಚ್​ಎಫ್​ಎಲ್​ನಿಂದ DOIT ಅರ್ಬನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ರೂ. 600 ಕೋಟಿ ಸಾಲವನ್ನು ನೀಡಿದೆ (ಒಂದು ಸಂಸ್ಥೆಯು ರಾಣಾ ಕಪೂರ್ ಮತ್ತು ಅವರ ಕುಟುಂಬದ ಲಾಭದಾಯಕವಾದ ಒಡೆತನದಲ್ಲಿದೆ). ಡಿಎಚ್​ಎಫ್​ಎಲ್​ನ ಮೇಲೆ ಹೇಳಲಾದ ಅಲ್ಪಾವಧಿಯ ಡಿಬೆಂಚರ್‌ಗಳ ಖರೀದಿಗೆ ಯೆಸ್ ಬ್ಯಾಂಕ್ ಸಾರ್ವಜನಿಕ ಹಣವನ್ನು ಬಳಸಿದೆ ಎಂದು ಇಡಿ ಸೂಚಿಸಿದೆ, ಅದನ್ನು ಡಿಎಚ್​ಎಫ್​ಎಲ್​ನಿಂದ ಇನ್ನೂ ರಿಡೀಮ್ ಮಾಡಲಾಗಿಲ್ಲ.

ಮತ್ತೊಂದೆಡೆ, ರಾಣಾ ಕಪೂರ್ ಅವರ ಲಾಭದಾಯಕ ಒಡೆತನದ ಕಂಪೆನಿಯಾದ ಡಿಯುವಿಪಿಎಲ್‌ಗೆ ಸಾಕಷ್ಟು ಆಧಾರವಿಲ್ಲದೆ ಡಿಎಚ್‌ಎಫ್‌ಎಲ್ 600 ಕೋಟಿ ಸಾಲವನ್ನು ನೀಡಿದೆ ಎಂದು ಸಂಸ್ಥೆ ತಿಳಿಸಿದೆ. ಕಪೂರ್ ಕುಟುಂಬ ಒಡೆತನದ ಸಂಸ್ಥೆಗೆ ನೀಡಿದ ಸಾಲಗಳು ಸಂಪೂರ್ಣ ಕೃತ್ಯವನ್ನು ಮರೆಮಾಚುವ ಸಲುವಾಗಿಯೇ ಎಂದು ಅದು ಹೇಳಿಕೊಂಡಿದೆ. ರೂ. 39.68 ಕೋಟಿಯ ಅತ್ಯಲ್ಪ ಮೌಲ್ಯದ ಕಡಿಮೆ ಗುಣಮಟ್ಟದ ಆಸ್ತಿಗಳ ವಿರುದ್ಧ ರೂ. 600 ಕೋಟಿ ಸಾಲವನ್ನು ನೀಡಲಾಗಿದೆ ಮತ್ತು ಕೃಷಿ ಭೂಮಿಯಿಂದ ವಸತಿ ಭೂಮಿಗೆ ಮತ್ತಷ್ಟು ಪರಿವರ್ತನೆಯನ್ನು ಪರಿಗಣಿಸಿ ರೂ. 735 ಕೋಟಿಗೆ ಮೌಲ್ಯವನ್ನು ಹೆಚ್ಚಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಈ ಸಾಲಗಳ ಮಂಜೂರಾತಿಗೆ ಸ್ವಲ್ಪ ಮೊದಲಿಗೆ ಯೆಸ್ ಬ್ಯಾಂಕ್​ನಿಂದ ಡಿಎಚ್​ಎಫ್​ಎಲ್​ನಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಇಡಿ ಹೇಳಿದೆ. ಇದು ರಾಣಾ ಕಪೂರ್ ಮತ್ತು ಕಪಿಲ್ ಹಾಗೂ ಧೀರಜ್ ವಾಧ್ವಾನ್ ನಡುವೆ ಅತಿ ಹೆಚ್ಚು ಮೌಲ್ಯದ ಆಸ್ತಿಯನ್ನು ಒತ್ತೆ ಇಟ್ಟು, ಸಾಲ ಪಡೆಯುವ ಕ್ರಿಮಿನಲ್ ಪಿತೂರಿಯನ್ನು ಸೂಚಿಸುತ್ತದೆ ಎಂದು ಆರೋಪ ಪಟ್ಟಿ ಹೇಳಿದೆ.

ಇದನ್ನೂ ಓದಿ: Insurance On Deposits: ಬ್ಯಾಂಕ್​ಗಳ ಹಣಕಾಸು ನಿರ್ಬಂಧ, ವಂಚನೆಯಾದಲ್ಲಿ 90 ದಿನದೊಳಗೆ 5 ಲಕ್ಷ ರೂ. ಇನ್ಷೂರೆನ್ಸ್

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ