Enforcement Directorate: ಜಾರಿ ನಿರ್ದೇಶನಾಲಯದಿಂದ ಶಿಯೋಮಿ ಇಂಡಿಯಾದ 5,551 ಕೋಟಿ ರೂಪಾಯಿ ವಶಕ್ಕೆ

ಫೆಮಾ ನಿಯಮಗಳ ಉಲ್ಲಂಘನೆ ಆರೋಪದಲ್ಲಿ ಶಿಯೋಮಿಯಿಂದ ಜಾರಿ ನಿರ್ದೇಶನಾಲಯವು 5551 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ.

Enforcement Directorate: ಜಾರಿ ನಿರ್ದೇಶನಾಲಯದಿಂದ ಶಿಯೋಮಿ ಇಂಡಿಯಾದ 5,551 ಕೋಟಿ ರೂಪಾಯಿ ವಶಕ್ಕೆ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: Apr 30, 2022 | 8:02 PM

ಜಾರಿ ನಿರ್ದೇಶನಾಲಯವು (Enforcement Directorate) ಏಪ್ರಿಲ್ 30ರ ಶನಿವಾರದಂದು ಚೀನಾದ ಗ್ಯಾಜೆಟ್ ದೈತ್ಯ ಕಂಪೆನಿಯ ಸ್ಥಳೀಯ ಅಂಗ ಸಂಸ್ಥೆಯಾದ ಶಿಯೋಮಿ (Xiaomi) ಇಂಡಿಯಾದಿಂದ 5,551.27 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿದ್ದು, “ಕಂಪೆನಿಯಿಂದ ಕಾನೂನುಬಾಹಿರವಾಗಿ ಮಾಡಿದ ಬಾಹ್ಯ ಹಣ ರವಾನೆ”ಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಫೆಮಾ (FEMA) ನಿಬಂಧನೆಗಳ ಅಡಿಯಲ್ಲಿ ಕಂಪೆನಿ ಬ್ಯಾಂಕ್ ಖಾತೆಗಳಿಂದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ. ಆರೋಪಿಸಲಾದ ಅಕ್ರಮ ಹಣ ರವಾನೆಯ ತನಿಖೆಯನ್ನು ಈ ವರ್ಷದ ಫೆಬ್ರವರಿಯಲ್ಲಿ ಪ್ರಾರಂಭಿಸಲಾಯಿತು, “ಕಂಪೆನಿಯು 5551.27 ಕೋಟಿ ರೂಪಾಯಿಗಳಿಗೆ ಸಮಾನವಾದ ವಿದೇಶಿ ಕರೆನ್ಸಿಯನ್ನು ಮೂರು ವಿದೇಶಿ ಮೂಲದ ಸಂಸ್ಥೆಗಳಿಗೆ ರವಾನೆ ಮಾಡಿದೆ, ಇದರಲ್ಲಿ ಒಂದು ಶಿಯೋಮಿ ಸಮೂಹದ ರಾಯಲ್ಟಿಯ ಸೋಗಿನಲ್ಲಿದೆ.”

“ರಾಯಲ್ಟಿ ಹೆಸರಿನಲ್ಲಿ ಅಂತಹ ದೊಡ್ಡ ಮೊತ್ತವನ್ನು ಅದರ ಚೀನೀ ಮಾತೃಸಂಸ್ಥೆಯ ಗುಂಪು ಘಟಕಗಳ ಸೂಚನೆ ಮೇರೆಗೆ ರವಾನೆ ಮಾಡಲಾಗಿದೆ,” ಎಂದು ಅದು ಹೇಳಿದೆ. “ಅಮೆರಿಕ ಮೂಲದ ಸಂಬಂಧ ಇರದ ಇತರ ಎರಡು ಘಟಕಗಳಿಗೆ” ರವಾನೆಯಾದ ಮೊತ್ತವು “ಶಿಯೋಮಿ ಗುಂಪಿನ ಘಟಕಗಳ ಅಂತಿಮ ಅನುಕೂಲಕ್ಕಾಗಿ” ಎಂದು ಇಡಿ ಗಮನಿಸಿದೆ. ಎಂಐ (MI) ಬ್ರ್ಯಾಂಡ್‌ನ ಅಡಿಯಲ್ಲಿ ಭಾರತದಲ್ಲಿ ಮೊಬೈಲ್ ಫೋನ್‌ಗಳ ವಿತರಕರಾಗಿರುವ ಶಿಯೋಮಿ ಇಂಡಿಯಾ 2014ರಲ್ಲಿ ದೇಶದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು 2015ರಿಂದ ಬಾಹ್ಯ ಹಣ ರವಾನೆ ಮಾಡುತ್ತಿದೆ ಎಂದು ಇಡಿ ಹೇಳಿದೆ.

“ಶಿಯೋಮಿ ಇಂಡಿಯಾ ಅಂತಹ ಮೊತ್ತವನ್ನು ವರ್ಗಾಯಿಸಿದ ಮೂರು ವಿದೇಶಿ ಮೂಲದ ಘಟಕಗಳಿಂದ ಯಾವುದೇ ಸೇವೆಯನ್ನು ಪಡೆದಿಲ್ಲ,” ಇದು “ಗುಂಪು ಘಟಕಗಳ ನಡುವೆ ರಚಿಸಲಾದ ವಿವಿಧ ಸಂಬಂಧವಿಲ್ಲದ ದಾಖಲಾತಿಗಳ ಅಡಿಯಲ್ಲಿ”, ಕಂಪೆನಿಯು ಸೋಗಿನಲ್ಲಿ ಈ ಮೊತ್ತವನ್ನು ರವಾನಿಸಿದೆ ಎಂದು ಹೇಳಿದೆ. ವಿದೇಶಕ್ಕೆ ರಾಯಲ್ಟಿ ರೂಪದಲ್ಲಿ ಹಣ ಕಳುಹಿಸಿರುವುದು ಫೆಮಾದ ಸೆಕ್ಷನ್ 4ರ ಉಲ್ಲಂಘನೆಯಾಗುತ್ತದೆ. ವಿದೇಶಕ್ಕೆ ಹಣವನ್ನು ರವಾನೆ ಮಾಡುವಾಗ ಕಂಪೆನಿಯು ಬ್ಯಾಂಕ್‌ಗಳಿಗೆ ದಾರಿ ತಪ್ಪಿಸುವ ಮಾಹಿತಿಯನ್ನು ಸಹ ನೀಡಿದೆ ಎಂದು ಇಡಿ ಸೇರಿಸಿದೆ.

ಈ ವರದಿಯನ್ನು ಸಿದ್ಧಪಡಿಸುವ ಸಮಯದಲ್ಲಿ ಇಡಿ ಕ್ರಮದ ಕುರಿತು ಶಿಯೋಮಿ ಇಂಡಿಯಾ ಇನ್ನೂ ಹೇಳಿಕೆಯನ್ನು ನೀಡಿರಲಿಲ್ಲ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Tax evasion: ತೆರಿಗೆ ಕಳವಿನ ಆರೋಪದಲ್ಲಿ ಶಿಯೋಮಿ, ಒನ್​ಪ್ಲಸ್, ಒಪ್ಪೋ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

ತಾಜಾ ಸುದ್ದಿ
Mohammed Siraj: ಮೊಹಮ್ಮದ್ ಸಿರಾಜ್​ಗೆ ಅದ್ಧೂರಿ ಸ್ವಾಗತ
Mohammed Siraj: ಮೊಹಮ್ಮದ್ ಸಿರಾಜ್​ಗೆ ಅದ್ಧೂರಿ ಸ್ವಾಗತ
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್
ದರ್ಶನ್​ಗೆ ಲಕ್ಷ ಲಕ್ಷ ಹಣ ಕೊಟ್ಟಿದ್ದಕ್ಕೆ ಕಾರಣ ನೀಡಿದ ಮಾಜಿ ಮೇಯರ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
ಕ್ಲಿಕ್ ಮಾಡುತ್ತಿದ್ದಂತೆ ಇನ್​ಸ್ಟಂಟ್ ಫೋಟೊ ಪ್ರಿಂಟ್
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Nithya Bhavishya: ಈ ರಾಶಿಯವರು ಹಣ ಕಳೆದುಕೊಂಡು ಚಿಂತಿತರಾಗುವ ಸಾಧ್ಯತೆ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
Daily Devotional: ಸಾವಿನ ಮನೆಯಲ್ಲಿ ಈ ಕೆಲಸ ಯಾವತ್ತೂ ಮಾಡಬೇಡಿ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ