AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದಾನಿ-ಅಂಬಾನಿ ಡೀಲ್; ಗ್ಯಾಸ್ ಸ್ಟೇಷನ್​​ನಲ್ಲಿ ಪೆಟ್ರೋಲ್ ಸಿಗುತ್ತೆ, ಪೆಟ್ರೋಲ್ ಸ್ಟೇಷನ್​ನಲ್ಲಿ ಗ್ಯಾಸ್ ಸಿಗುತ್ತೆ

Adani Total Gas and Jio BP partnership: ಅಂಬಾನಿ ಕಂಪನಿಯ ಜಿಯೋ ಬಿಪಿ ಮತ್ತು ಅದಾನಿ ಗ್ರೂಪ್​​ನ ಅದಾನಿ ಟೋಟಲ್ ಗ್ಯಾಸ್ ಸಂಸ್ಥೆಗಳ ಮಧ್ಯೆ ಸಹಭಾಗಿತ್ವ ಒಪ್ಪಂದ ಏರ್ಪಟ್ಟಿದೆ. ಒಪ್ಪಂದದ ಪ್ರಕಾರ ಕೆಲ ಆಯ್ದ ಜಿಯೋ ಬಿಪಿ ಔಟ್​ಲೆಟ್​​ಗಳಲ್ಲಿ ಅದಾನಿಯ ಸಿಎನ್​​ಜಿ ಲಭ್ಯ ಇರಲಿದೆ. ಹಾಗೆಯೇ, ಆಯ್ದ ಟೋಟಲ್ ಗ್ಯಾಸ್ ಔಟ್​​ಲೆಟ್​​ಗಳಲ್ಲಿ ಜಿಯೋ ಬಿಪಿಯ ಪೆಟ್ರೋಲ್, ಡೀಸಲ್ ಸಿಗಲಿದೆ.

ಅದಾನಿ-ಅಂಬಾನಿ ಡೀಲ್; ಗ್ಯಾಸ್ ಸ್ಟೇಷನ್​​ನಲ್ಲಿ ಪೆಟ್ರೋಲ್ ಸಿಗುತ್ತೆ, ಪೆಟ್ರೋಲ್ ಸ್ಟೇಷನ್​ನಲ್ಲಿ ಗ್ಯಾಸ್ ಸಿಗುತ್ತೆ
ಅದಾನಿ ಅಂಬಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 27, 2025 | 12:42 PM

Share

ಮುಂಬೈ, ಜೂನ್ 27: ಭಾರತದ ಇಬ್ಬರು ಅತಿದೊಡ್ಡ ಉದ್ಯಮಿಗಳೆನಿಸಿದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಒಬ್ಬರಿಗೊಬ್ಬರು ನೆರವಾಗುವ ರೀತಿಯ ಡೀಲ್​ವೊಂದನ್ನು ಕುದುರಿಸಿದ್ದಾರೆ. ರಿಲಾಯನ್ಸ್ ಇಂಡಸ್ಟ್ರೀಸ್​​ಗೆ ಸೇರಿದ ಜಿಯೋ ಬಿಪಿ (Jio BP) ಹಾಗೂ ಅದಾನಿ ಟೋಟಲ್ ಗ್ಯಾಸ್ (ATGL- Adani Total Gas Ltd) ನಡುವೆ ಸಹಭಾಗಿತ್ವ ಸಾಧಿಸುವ ಒಪ್ಪಂದ ಏರ್ಪಟ್ಟಿದೆ. ಎರಡೂ ಕಂಪನಿಗಳು ಪರಸ್ಪರ ಘರ್ಷಣೆಯಾಗದ ರೀತಿಯಲ್ಲಿ ಸೇವೆ ವಿಸ್ತರಣೆ ಮಾಡಿವೆ.

ಒಪ್ಪಂದದ ಪ್ರಕಾರ, ಅದಾನಿ ಕಂಪನಿಯ ಸಿಎನ್​​ಜಿ ಬಂಕ್​​ಗಳಲ್ಲಿ ಜಿಯೋ ಬಿಪಿಯಿಂದ ಪೆಟ್ರೋಲ್ ಹಾಗೂ ಡೀಸಲ್ ಮಾರಾಟ ಆಗಲಿದೆ. ಅದೇ ರೀತಿ, ಜಿಯೋ ಬಿಪಿಯ ಬಂಕ್​​ಗಳಲ್ಲಿ ಎಟಿಜಿಎಲ್​​ನ ಸಿಎನ್​​ಜಿ ಮಾರಾಟ ನಡೆಯಲಿದೆ.

ದೇಶದ ಕೆಲ ಆಯ್ದ ಎಟಿಜಿಎಲ್ ಮತ್ತು ಜಿಯೊ ಬಿಪಿ ಯೂನಿಟ್​​ಗಳಲ್ಲಿ ಈ ಸಹಭಾಗಿತ್ವ ಇರಲಿದೆ. ಈ ಆಯ್ದ ಬಂಕ್​ಗಳಲ್ಲಿ ಪೆಟ್ರೋಲ್, ಡೀಸಲ್, ಸಿಎನ್​​ಜಿ ಗ್ಯಾಸ್ ಈ ಮೂರೂ ಕೂಡ ಸಿಗುತ್ತದೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಅದಾನಿ ಗ್ರೂಪ್​​ನಿಂದ 40 ಲಕ್ಷ ಮಂದಿಗೆ ಅನ್ನದಾನ ಸೇರಿ ವಿವಿಧ ಸೇವೆ

ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಹತ್ತಾರು ಬ್ಯುಸಿನೆಸ್​​ಗಳನ್ನು ಹೊಂದಿದೆ. ಹೆಚ್ಚಿನವು ರೀಟೇಲ್, ಟೆಲಿಕಾಂನಂತಹ ಗ್ರಾಹಕ ಕೇಂದ್ರಿತ ಸೆಕ್ಟರ್​​ಗಳಲ್ಲಿವೆ.

ಇನ್ನು, ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ಕೂಡ ಬಹಳ ದೊಡ್ಡ ಉದ್ದಿಮೆಗಳನ್ನು ನಿಭಾಯಿಸುತ್ತದೆ. ಅದರ ಪ್ರಮುಖ ಬ್ಯುಸಿನೆಸ್ ಇನ್​ಫ್ರಾಸ್ಟ್ರಕ್ಚರ್​​ನದ್ದು. ಸಮುದ್ರದ ಬಂದರು, ವಿಮಾನ ನಿಲ್ದಾಣ, ಮೈನಿಂಗ್ ಇತ್ಯಾದಿ ಬ್ಯುಸಿನೆಸ್ ನಡೆಸುತ್ತದೆ.

ಇದನ್ನೂ ಓದಿ: Adani Foundation: ಶ್ರೇಷ್ಠ ಹಾಗೂ ಅಗ್ಗದ ವೈದ್ಯಕೀಯ ಶಿಕ್ಷಣದ ಗುರಿಯೊಂದಿಗೆ DMIHER ಜೊತೆ ಕೈಜೋಡಿಸಿದ ಅದಾನಿ

ಸೋಲಾರ್ ಇತ್ಯಾದಿ ನವೀಕರಣ ಇಂಧನ ಉತ್ಪಾದನಾ ಕ್ಷೇತ್ರದಲ್ಲಿ ಮಾತ್ರ ಎರಡೂ ಕಂಪನಿಗಳು ಪೈಪೋಟಿಯಲ್ಲಿವೆ. ಆದರೆ, ಈ ಕ್ಷೇತ್ರ ಇನ್ನೂ ಆರಂಭಿಕ ಹಂತದಲ್ಲಿದ್ದು, ಪರಸ್ಪರ ಪೈಪೋಟಿ ಏರ್ಪಡದ ರೀತಿಯಲ್ಲಿ ಬೇರೆ ಬೇರೆ ಕಡೆ ಪ್ರಾಜೆಕ್ಟ್​​ಗಳನ್ನು ನಡೆಸಲಾಗುತ್ತಿರುವುದು ವಿಶೇಷ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ