AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅದಾನಿ-ಅಂಬಾನಿ ಡೀಲ್; ಗ್ಯಾಸ್ ಸ್ಟೇಷನ್​​ನಲ್ಲಿ ಪೆಟ್ರೋಲ್ ಸಿಗುತ್ತೆ, ಪೆಟ್ರೋಲ್ ಸ್ಟೇಷನ್​ನಲ್ಲಿ ಗ್ಯಾಸ್ ಸಿಗುತ್ತೆ

Adani Total Gas and Jio BP partnership: ಅಂಬಾನಿ ಕಂಪನಿಯ ಜಿಯೋ ಬಿಪಿ ಮತ್ತು ಅದಾನಿ ಗ್ರೂಪ್​​ನ ಅದಾನಿ ಟೋಟಲ್ ಗ್ಯಾಸ್ ಸಂಸ್ಥೆಗಳ ಮಧ್ಯೆ ಸಹಭಾಗಿತ್ವ ಒಪ್ಪಂದ ಏರ್ಪಟ್ಟಿದೆ. ಒಪ್ಪಂದದ ಪ್ರಕಾರ ಕೆಲ ಆಯ್ದ ಜಿಯೋ ಬಿಪಿ ಔಟ್​ಲೆಟ್​​ಗಳಲ್ಲಿ ಅದಾನಿಯ ಸಿಎನ್​​ಜಿ ಲಭ್ಯ ಇರಲಿದೆ. ಹಾಗೆಯೇ, ಆಯ್ದ ಟೋಟಲ್ ಗ್ಯಾಸ್ ಔಟ್​​ಲೆಟ್​​ಗಳಲ್ಲಿ ಜಿಯೋ ಬಿಪಿಯ ಪೆಟ್ರೋಲ್, ಡೀಸಲ್ ಸಿಗಲಿದೆ.

ಅದಾನಿ-ಅಂಬಾನಿ ಡೀಲ್; ಗ್ಯಾಸ್ ಸ್ಟೇಷನ್​​ನಲ್ಲಿ ಪೆಟ್ರೋಲ್ ಸಿಗುತ್ತೆ, ಪೆಟ್ರೋಲ್ ಸ್ಟೇಷನ್​ನಲ್ಲಿ ಗ್ಯಾಸ್ ಸಿಗುತ್ತೆ
ಅದಾನಿ ಅಂಬಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 27, 2025 | 12:42 PM

Share

ಮುಂಬೈ, ಜೂನ್ 27: ಭಾರತದ ಇಬ್ಬರು ಅತಿದೊಡ್ಡ ಉದ್ಯಮಿಗಳೆನಿಸಿದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಒಬ್ಬರಿಗೊಬ್ಬರು ನೆರವಾಗುವ ರೀತಿಯ ಡೀಲ್​ವೊಂದನ್ನು ಕುದುರಿಸಿದ್ದಾರೆ. ರಿಲಾಯನ್ಸ್ ಇಂಡಸ್ಟ್ರೀಸ್​​ಗೆ ಸೇರಿದ ಜಿಯೋ ಬಿಪಿ (Jio BP) ಹಾಗೂ ಅದಾನಿ ಟೋಟಲ್ ಗ್ಯಾಸ್ (ATGL- Adani Total Gas Ltd) ನಡುವೆ ಸಹಭಾಗಿತ್ವ ಸಾಧಿಸುವ ಒಪ್ಪಂದ ಏರ್ಪಟ್ಟಿದೆ. ಎರಡೂ ಕಂಪನಿಗಳು ಪರಸ್ಪರ ಘರ್ಷಣೆಯಾಗದ ರೀತಿಯಲ್ಲಿ ಸೇವೆ ವಿಸ್ತರಣೆ ಮಾಡಿವೆ.

ಒಪ್ಪಂದದ ಪ್ರಕಾರ, ಅದಾನಿ ಕಂಪನಿಯ ಸಿಎನ್​​ಜಿ ಬಂಕ್​​ಗಳಲ್ಲಿ ಜಿಯೋ ಬಿಪಿಯಿಂದ ಪೆಟ್ರೋಲ್ ಹಾಗೂ ಡೀಸಲ್ ಮಾರಾಟ ಆಗಲಿದೆ. ಅದೇ ರೀತಿ, ಜಿಯೋ ಬಿಪಿಯ ಬಂಕ್​​ಗಳಲ್ಲಿ ಎಟಿಜಿಎಲ್​​ನ ಸಿಎನ್​​ಜಿ ಮಾರಾಟ ನಡೆಯಲಿದೆ.

ದೇಶದ ಕೆಲ ಆಯ್ದ ಎಟಿಜಿಎಲ್ ಮತ್ತು ಜಿಯೊ ಬಿಪಿ ಯೂನಿಟ್​​ಗಳಲ್ಲಿ ಈ ಸಹಭಾಗಿತ್ವ ಇರಲಿದೆ. ಈ ಆಯ್ದ ಬಂಕ್​ಗಳಲ್ಲಿ ಪೆಟ್ರೋಲ್, ಡೀಸಲ್, ಸಿಎನ್​​ಜಿ ಗ್ಯಾಸ್ ಈ ಮೂರೂ ಕೂಡ ಸಿಗುತ್ತದೆ.

ಇದನ್ನೂ ಓದಿ: ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಅದಾನಿ ಗ್ರೂಪ್​​ನಿಂದ 40 ಲಕ್ಷ ಮಂದಿಗೆ ಅನ್ನದಾನ ಸೇರಿ ವಿವಿಧ ಸೇವೆ

ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಹತ್ತಾರು ಬ್ಯುಸಿನೆಸ್​​ಗಳನ್ನು ಹೊಂದಿದೆ. ಹೆಚ್ಚಿನವು ರೀಟೇಲ್, ಟೆಲಿಕಾಂನಂತಹ ಗ್ರಾಹಕ ಕೇಂದ್ರಿತ ಸೆಕ್ಟರ್​​ಗಳಲ್ಲಿವೆ.

ಇನ್ನು, ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ಕೂಡ ಬಹಳ ದೊಡ್ಡ ಉದ್ದಿಮೆಗಳನ್ನು ನಿಭಾಯಿಸುತ್ತದೆ. ಅದರ ಪ್ರಮುಖ ಬ್ಯುಸಿನೆಸ್ ಇನ್​ಫ್ರಾಸ್ಟ್ರಕ್ಚರ್​​ನದ್ದು. ಸಮುದ್ರದ ಬಂದರು, ವಿಮಾನ ನಿಲ್ದಾಣ, ಮೈನಿಂಗ್ ಇತ್ಯಾದಿ ಬ್ಯುಸಿನೆಸ್ ನಡೆಸುತ್ತದೆ.

ಇದನ್ನೂ ಓದಿ: Adani Foundation: ಶ್ರೇಷ್ಠ ಹಾಗೂ ಅಗ್ಗದ ವೈದ್ಯಕೀಯ ಶಿಕ್ಷಣದ ಗುರಿಯೊಂದಿಗೆ DMIHER ಜೊತೆ ಕೈಜೋಡಿಸಿದ ಅದಾನಿ

ಸೋಲಾರ್ ಇತ್ಯಾದಿ ನವೀಕರಣ ಇಂಧನ ಉತ್ಪಾದನಾ ಕ್ಷೇತ್ರದಲ್ಲಿ ಮಾತ್ರ ಎರಡೂ ಕಂಪನಿಗಳು ಪೈಪೋಟಿಯಲ್ಲಿವೆ. ಆದರೆ, ಈ ಕ್ಷೇತ್ರ ಇನ್ನೂ ಆರಂಭಿಕ ಹಂತದಲ್ಲಿದ್ದು, ಪರಸ್ಪರ ಪೈಪೋಟಿ ಏರ್ಪಡದ ರೀತಿಯಲ್ಲಿ ಬೇರೆ ಬೇರೆ ಕಡೆ ಪ್ರಾಜೆಕ್ಟ್​​ಗಳನ್ನು ನಡೆಸಲಾಗುತ್ತಿರುವುದು ವಿಶೇಷ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಟೈಟಲ್ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್
ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಟೈಟಲ್ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ
ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ
ತಂಡಕ್ಕೆ ಚಿಯರ್ ಅಪ್ ಮಾಡಲು ಹುಬ್ಬಳ್ಳಿಗೆ ಬಂದ ಜಮ್ಮು-ಕಾಶ್ಮೀರ ಸಿಎಂ
ತಂಡಕ್ಕೆ ಚಿಯರ್ ಅಪ್ ಮಾಡಲು ಹುಬ್ಬಳ್ಳಿಗೆ ಬಂದ ಜಮ್ಮು-ಕಾಶ್ಮೀರ ಸಿಎಂ
ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ
ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ
ವಿರೋಶ್ ಮದುವೆ: ರಾಯಲ್ ಉಡುಗೆಯ ಹಿಂದಿನ ಅಚ್ಚರಿಯ ವಿಷಯ ಕೇಳಿ..
ವಿರೋಶ್ ಮದುವೆ: ರಾಯಲ್ ಉಡುಗೆಯ ಹಿಂದಿನ ಅಚ್ಚರಿಯ ವಿಷಯ ಕೇಳಿ..
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!
ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?
ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?