AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Electricity cost: ಸರ್ಕಾರದಿಂದ ಎಫ್​​ಜಿಡಿ ನಿಯಮದಲ್ಲಿ ಸಡಿಲಿಕೆ; ವಿದ್ಯುತ್ ದರ ಯುನಿಟ್​​ಗೆ 25 ಪೈಸೆ ಇಳಿಕೆ ಸಾಧ್ಯತೆ

Flue-Gas Desulphurization rule on coal based power plants: ಉಷ್ಣ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಫ್ಲ್ಯೂ ಗ್ಯಾಸ್ ಡೀಸಲ್ಫರೈಸೇಶನ್ ಸಿಸ್ಟಂ ಅಳವಡಿಕೆ ವಿಚಾರದಲ್ಲಿ ಸರ್ಕಾರ ನಿಮಯ ಸಡಿಲಿಕೆ ಮಾಡಿದೆ. 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳಿಂದ 10 ಕಿಮೀ ವ್ಯಾಪ್ತಿಯ ಹೊರಗೆ ಇರುವ ಘಟಕಗಳು ಎಫ್​ಜಿಡಿ ಅಳವಡಿಸುವ ಅಗತ್ಯ ಇಲ್ಲ. ಹೆಚ್ಚಿನ ವಿದ್ಯುತ್ ಘಟಕಗಳಿಗೆ ಇದರಿಂದ ಅನುಕೂಲವಾಗುತ್ತದೆ. ಪರಿಣಾಮವಾಗಿ ವಿದ್ಯುತ್ ಉತ್ಪಾದನಾ ವೆಚ್ಚ ಕಡಿಮೆ ಆಗುತ್ತದೆ.

Electricity cost: ಸರ್ಕಾರದಿಂದ ಎಫ್​​ಜಿಡಿ ನಿಯಮದಲ್ಲಿ ಸಡಿಲಿಕೆ; ವಿದ್ಯುತ್ ದರ ಯುನಿಟ್​​ಗೆ 25 ಪೈಸೆ ಇಳಿಕೆ ಸಾಧ್ಯತೆ
ವಿದ್ಯುತ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 14, 2025 | 12:04 PM

Share

ನವದೆಹಲಿ, ಜುಲೈ 14: ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ (coal based power plants) ಸಲ್ಫರ್ ಹೊರಸೂಸುವಿಕೆಯ (sulphur emission) ನಿಯಮಗಳಲ್ಲಿ ಸರ್ಕಾರ ಸಡಿಲಿಕೆ ಮಾಡಿದೆ. ಈ ಕ್ರಮದಿಂದಾಗಿ ಗ್ರಾಹಕರಿಗೆ ಒಂದು ಯುನಿಟ್ ವಿದ್ಯುತ್ ದರ 25-30 ಪೈಸೆಯಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಐಐಟಿ ದೆಹಲಿ, ಸಿಎಸ್​ಐಆರ್-ಎನ್​ಇಇಆರ್​ಇ, ಎನ್​ಐಎಎಸ್ ಸಂಸ್ಥೆಗಳಿಂದ ನಡೆದ ವಿವಿಧ ಅಧ್ಯಯನಗಳನ್ನು ಗಮನಿಸಿ ಮಾಲಿನ್ಯ ವಿಚಾರವನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಸರ್ಕಾರದ ಸಲ್ಫರ್ ಎಮಿಷನ್ ನಿಯಮದಲ್ಲಿ ಬದಲಾವಣೆ ಏನು?

ಕಲ್ಲಿದ್ದಲು ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಫ್ಲ್ಯೂ ಗ್ಯಾಸ್ ಡೀಸಲ್ಫರೈಸೇಶನ್ (ಎಫ್​ಜಿಡಿ) ವ್ಯವಸ್ಥೆ ಅಳವಡಿಸಬೇಕೆಂದು 2015ರಲ್ಲಿ ಸರ್ಕಾರವು ನಿರ್ಬಂಧ ಹಾಕಿತ್ತು. ಈಗ ಆ ನಿಯಮದಲ್ಲಿ ಒಂದಷ್ಟು ಬದಲಾವಣೆ ಮಾಡಿದೆ. ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಿಂದ 10 ಕಿಮೀ ವ್ಯಾಪ್ತಿಯೊಳಗೆ ಇರುವ ವಿದ್ಯುತ್ ಘಟಕಗಳು ಮಾತ್ರವೇ ಕಡ್ಡಾಯವಾಗಿ ಎಫ್​ಜಿಡಿ ಸಿಸ್ಟಂ ಹಾಕಿರಬೇಕು ಎಂದು ಗೆಜೆಟ್ ನೋಟಿಫಿಕೇಶನ್​​ನಲ್ಲಿ ತಿಳಿಸಲಾಗಿದೆ.

ಏನಿದು ಫ್ಲ್ಯೂ ಗ್ಯಾಸ್ ಡೀಸಲ್ಫರೈಸೇಶನ್?

ಕಲ್ಲಿದ್ದಲನ್ನು ಸುಡುವಾಗ ಫ್ಲ್ಯೂ ಗ್ಯಾಸ್ ಅಥವಾ ಧೂಮನಾಳ ಅನಿಲ ಹೊರಬರುತ್ತದೆ. ಈ ಫ್ಲ್ಯೂ ಗ್ಯಾಸ್​​ನಲ್ಲಿ ಮಾಲಿನ್ಯಕಾರಕ ಸಲ್ಫರ್ ಡೈ ಆಕ್ಸೈಡ್ ಅಥವಾ ಗಂಧಕ ಡೈ ಆಕ್ಸೈಡ್ ಅನಿಲ ಇರುತ್ತದೆ. ಫ್ಲ್ಯೂ ಗ್ಯಾಸ್​ನಿಂದ ಈ ಸಲ್ಫರ್ ಡೈ ಆಕ್ಸೈಡ್ ಅನ್ನು ತೆಗೆಯಲು ಎಫ್​ಜಿಡಿ ಬಳಸಲಾಗುತ್ತದೆ.

ಇದನ್ನೂ ಓದಿ: ಭಾರತದ ಐಫೋನ್ ಫ್ಯಾಕ್ಟರಿಗಳಿಂದ ಚೀನೀಯರ ಗೋಬ್ಯಾಕ್; ಆ್ಯಪಲ್ ಬಳಿ ಪ್ಲಾನ್ ಬಿ?

ಫ್ಲ್ಯೂ ಗ್ಯಾಸ್​ಗೆ ಲೈಮ್​ಸ್ಟೋನ್ ಕೆಸರನ್ನು ಎರಚಿದಾಗ ಅದು ಗ್ಯಾಸ್​ನಲ್ಲಿ ಬೆರೆತಿರುವ ಗಂಧಕ ಡೈ ಆಕ್ಸೈಡ್ ಅನ್ನು ಪ್ರಭಾವಗೊಳಿಸುತ್ತದೆ. ಅದನ್ನು ಜಿಪ್ಸಮ್ ಆಗಿ ಪರಿವರ್ತಿಸುತ್ತದೆ. ಈ ಜಿಪ್ಸಮ್ ಅನ್ನು ಸಿಮೆಂಟ್ ಇತ್ಯಾದಿ ತಯಾರಿಕೆಗೆ ಬಳಸಲಾಗುತ್ತದೆ.

ಎಫ್​ಜಿಡಿ ನಿಯಮ ಸಡಿಲಿಕೆಯಿಂದ ಪರಿಸರಕ್ಕೆ ಮಾರಕವಾಗುವುದಿಲ್ಲವಾ?

ವಿವಿಧ ಅಧ್ಯಯನದ ಪ್ರಕಾರ ಭಾರತದ ಹೆಚ್ಚಿನ ನಗರಗಳಲ್ಲಿ ಸಲ್ಫರ್ ಡೈ ಆಕ್ಸೈಡ್ ಮಟ್ಟವು ನ್ಯಾಕ್ಸ್ (NAAQS- National Ambient Air Quality Standards) ಪ್ರಮಾಣಿತ ಮಟ್ಟಕ್ಕಿಂತ ಕಡಿಮೆ ಇದೆ. ಗಂಧಕ ಡೈ ಆಕ್ಸೈಡ್ ಪ್ರಮಾಣವು ವಾತಾವರಣದಲ್ಲಿ ಪ್ರತಿ ಕ್ಯೂಬಿಕ್ ಮೀಟರ್​ಗೆ 80 ಮೈಕ್ರೋಗ್ರಾಮ್ ಮಟ್ಟ ದಾಟಬಾರದು ಎಂದು NAAQS ಹೇಳುತ್ತದೆ. ಆದರೆ, ವಿವಿಧ ನಗರಗಳಲ್ಲಿ ಇದು 3ರಿಂದ 20 ಮೈಕ್ರೋಗ್ರಾಮ್ ಮಾತ್ರವೇ ಇರುವುದು ಗೊತ್ತಾಗಿದೆ. ಇದರಿಂದಾಗಿ ಎಫ್​ಜಿಡಿ ನಿಯಮವನ್ನು ಸರ್ಕಾರ ಸಡಿಲಿಸಲು ನಿರ್ಧರಿಸಿದೆ.

ಹಾಗೆಯೇ, ಭಾರತದಲ್ಲಿರುವ ಕಲ್ಲಿದ್ದಲಿನಲ್ಲಿ ಗಂಧಕದ ಅಂಶ ಶೇ. 0.5ಕ್ಕಿಂತ ಕಡಿಮೆ ಇದೆ. ಇದರಿಂದಾಗಿ ಕಲ್ಲಿದ್ದಲು ಸುಟ್ಟಾಗ ಹೊರಬರುವ ಸಲ್ಫರ್ ಡೈ ಆಕ್ಸೈಡ್ ಕೂಡ ಕಡಿಮೆ ಇರುತ್ತದೆ.

ಇದನ್ನೂ ಓದಿ: ಎಟಿಎಂಗಳಲ್ಲಿ 500 ರೂ ನೋಟು ವಿತರಿಸದಂತೆ ಆರ್​ಬಿಐ ಸೂಚಿಸಿದೆಯಾ? ವೈರಲ್ ಸುದ್ದಿ ಬಗ್ಗೆ ಸರ್ಕಾರದ ಸ್ಪಷ್ಟನೆ ಇದು

ಎಫ್​ಜಿಡಿ ನಿಯಮ ಸಡಿಲಿಕೆಯಿಂದ ವಿದ್ಯುತ್ ದರ ಹೇಗೆ ಕಡಿಮೆ ಆಗುತ್ತದೆ?

ಸರ್ಕಾರವು 10 ಲಕ್ಷ ಜನಸಂಖ್ಯೆ ಇರುವ ನಗರಗಳಿಂದ 10 ಕಿಮೀ ವ್ಯಾಪ್ತಿಯಲ್ಲಿರುವ ಕಲ್ಲಿದ್ದಲು ಘಟಕಗಳಿಗೆ ಮಾತ್ರವೇ ಎಫ್​ಜಿಡಿ ಸಿಸ್ಟಂ ಕಡ್ಡಾಯಪಡಿಸಿರುವುದು. ದೇಶದ ಶೇ 79ರಷ್ಟು ವಿದ್ಯುತ್ ಉತ್ಪಾದನೆ ಮಾಡುವ ಘಟಕಗಳು ಈ ವ್ಯಾಪ್ತಿಗೆ ಬರುವುದಿಲ್ಲ. ಈ ಘಟಕಗಳು ಎಫ್​ಜಿಡಿ ಸಿಸ್ಟಂ ಅಳವಡಿಸುವುದು ಕಡ್ಡಾಯವೇನಿಲ್ಲ.

ಇದರಿಂದಾಗಿ ಈ ವಿದ್ಯುತ್ ಘಟಕಗಳಿಗೆ ಸಾಕಷ್ಟು ವೆಚ್ಚ ಕಡಿಮೆ ಆಗುತ್ತದೆ. ಇದರಿಂದ ವಿದ್ಯುತ್ ಉತ್ಪಾದನಾ ವೆಚ್ಚವೂ ತಗ್ಗುತ್ತದೆ. ಇದರಿಂದ ಅಂತಿಮ ಗ್ರಾಹಕರಿಗೆ ಲಾಭ ವರ್ಗಾವಣೆ ಆಗುತ್ತದೆ. ಅಂದಾಜು ಲೆಕ್ಕ ಹಾಕಿದಾಗ ಪ್ರತೀ ಯುನಿಟ್​​ಗೆ 25-30 ಪೈಸೆ ತಗ್ಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ