AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

HDFC Bank: ಸಾಲದ ಮೇಲಿನ ಎಂಸಿಎಲ್​ಆರ್ ಏರಿಸಿದ ಎಚ್​ಡಿಎಫ್​ಸಿ ಬ್ಯಾಂಕ್; ಎಷ್ಟು ಹೆಚ್ಚಾಗಲಿದೆ ಇಎಂಐ?

ಎಚ್​ಡಿಎಫ್​ಸಿ ಬ್ಯಾಂಕ್​​ನಿಂದ ಚಿಚಿಧ ಸಾಲದ ಮೇಲೆ ಎಂಸಿಎಲ್​ಆರ್​ ಅನ್ನು ಜೂನ್ 7ರಿಂದ ಅನ್ವಯ ಆಗುವಂತೆ ಹೆಚ್ಚಿಸಲಾಗಿದೆ. ಇದರಿಂದ ಇಎಂಐ ಹೆಚ್ಚಾಗಲಿದೆ.

HDFC Bank: ಸಾಲದ ಮೇಲಿನ ಎಂಸಿಎಲ್​ಆರ್ ಏರಿಸಿದ ಎಚ್​ಡಿಎಫ್​ಸಿ ಬ್ಯಾಂಕ್; ಎಷ್ಟು ಹೆಚ್ಚಾಗಲಿದೆ ಇಎಂಐ?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 07, 2022 | 10:21 AM

Share

ಇದೇ ಜೂನ್ 7ನೇ ತಾರೀಕಿನಿಂದ ಅನ್ವಯ ಆಗುವಂತೆ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ (HDFC Bank) ಎಲ್ಲ ಅವಧಿಯ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (MCLR) 35 ಬೇಸಿಸ್ ಪಾಯಿಂಟ್ಸ್ (100 ಬೇಸಿಸ್​ ಪಾಯಿಂಟ್ಸ್ ಅಂದರೆ ಶೇ 1) ಹೆಚ್ಚಿಸಲಾಗಿದೆ. ಈ ಹಿಂದೆ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಮೇ 7ನೇ ತಾರೀಕಿನಂದು 25 ಬೇಸಿಸ್​ ಪಾಯಿಂಟ್ಸ್ ಹೆಚ್ಚಿಸಲಾಗಿತ್ತು. ಗೃಹ, ವಾಹನ, ವೈಯಕ್ತಿಕ ಸಾಲ ಸೇರಿದಂತೆ ಇತರ ಸಾಲಗಳು ಈ ಏರಿಕೆ ಮೂಲಕವಾಗಿ ಹೆಚ್ಚಳ ಆಗಲಿದೆ. ವಿವಿಧ ಸಾಲಗಳಿಗೆ ಬ್ಯಾಂಕ್ ಗ್ರಾಹಕರು ಹೆಚ್ಚಿನ ಇಎಂಐ ಪಾವತಿಸಬೇಕಾಗುತ್ತದೆ. ಎಚ್​ಡಿಎಫ್​ಸಿ ಬ್ಯಾಂಕ್​ನ ವೆಬ್​ಸೈಟ್​ ಪ್ರಕಾರ, ಈ ಹಿಂದೆ 7.15 ಇದ್ದ ಓವರ್​ನೈಟ್ ಎಂಸಿಎಲ್​ಆರ್ ಈಗ 7.50 ಆಗಿದೆ. ಒಂದು ತಿಂಗಳ ಅವಧಿಗೆ ಎಂಸಿಎಲ್​ಆರ್​ ಶೇ 7.55 ಆಗಿದೆ. ಮೂರು ತಿಂಗಳಿಗೆ ಮತ್ತು ಆರು ತಿಂಗಳಿಗೆ ಶೇ 7.60 ಹಾಗೂ ಶೇ 7.70 ಆಗಿದೆ.

ಒಂದು ವರ್ಷದ ಎಂಸಿಎಲ್​ಆರ್​ ಹಲವು ಗ್ರಾಹಕ ಸಾಲಗಳಿಗೆ ಜೋಡಣೆ ಆಗಿದೆ. ಅದೀಗ ಶೇ 7.85 ಆಗಿದ್ದು, ಎರಡು ವರ್ಷದ ಎಂಸಿಎಲ್​ಆರ್ ಶೇ 7.95 ಮತ್ತು ಮೂರು ವರ್ಷದ ಎಂಸಿಎಲ್​ಆರ್ ಶೇ 8.05 ಆಗಲಿದೆ. ಗೃಹ ಸಾಲ ಪಡೆದವರಿಗೆ ಇದು ಬಹಳ ಮುಖ್ಯವಾದ ವಿಷಯ. ಸಾಲದ ರೀಸೆಟ್ ದಿನಾಂಕ ಬಂದಾಗ ಮಾತ್ರ ಇದರ ಪರಿಣಾಮ ಆಗುತ್ತದೆ. ಆ ರೀಸೆಟ್ ದಿನಾಂಕದಂದು ಬ್ಯಾಂಕ್​ನಿಂದ ಮೇಲ್ಕಂಡ ಎಂಸಿಎಲ್​ಆರ್ ಪ್ರಕಾರ ಬಡ್ಡಿ ದರ ವಿಧಿಸಲಾಗುತ್ತದೆ. ಸಾಮಾನ್ಯವಾಗಿ ಎಂಸಿಎಲ್​ಆರ್ ಆಧಾರಿತ ಗೃಹ ಸಾಲವು ಒಂದು ವರ್ಷದ ಎಂಸಿಎಲ್​ಆರ್​ ದರವನ್ನು ಅವಲಂಬಿಸಿರುತ್ತದೆ.

ಆದ್ದರಿಂದ ಒಂದು ಉದಾಹರಣೆಗೆ ಹೇಳುವುದಾದರೆ, ನಿಮ್ಮ ಎಂಸಿಎಲ್​ಆರ್​ಗೆ ಜೋಡಣೆಯಾದ ಗೃಹ ಸಾಲದ ದಿನಾಂಕ ಆಗಸ್ಟ್​ನಲ್ಲಿ ಇದ್ದರೆ ಬಡ್ಡಿ ದರ ಏರಿಕೆ ಆಗಸ್ಟ್​ನಲ್ಲಿ ಆಗುತ್ತದೆ. ಅಲ್ಲಿಯ ತನಕ ಈಗಿನ ಇಎಂಐ ಅನ್ವಯ ಆಗುತ್ತದೆ. ಇದು ಎಕ್ಸ್​ಟರ್ನಲ್ ಬೆಂಚ್​ಮಾರ್ಕ್​ ಲಿಂಕ್ಡ್ ರೇಟ್​ನಂತೆ (EBLR) ಅಲ್ಲ. ಇದರಲ್ಲಿ ಕನಿಷ್ಠ ಪ್ರತಿ ಮೂರು ತಿಂಗಳಿಗೆ ಒಮ್ಮೆ ಬಡ್ಡಿ ಪರಿಶೀಲನೆ ಮಾಡಿ, ಪರಿಷ್ಕರಿಸಲಾಗುತ್ತದೆ. ಆದ್ದರಿಂದ ಇಬಿಎಲ್​ಆರ್​ (ರೆಪೋ ದರ ಮುಂತಾದವು) ಬದಲಾವಣೆಯು ನಿಮ್ಮ ಇಎಂಐ ಪಾವತಿಯಲ್ಲೂ ಬದಲಾವಣೆ ತರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:HDFC Bank: ನಿಮ್ಮ ಖಾತೆಗೆ 13 ಕೋಟಿ ಜಮೆ ಆಗಿದೆ; ಎಚ್​ಡಿಎಫ್​ಸಿ ಬ್ಯಾಂಕ್​​ನಿಂದ 100 ಖಾತೆಗೆ ತಪ್ಪಾಗಿ ಹೋಗಿದ್ದು 1300 ಕೋಟಿ ರೂ.

Follow Us
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’