AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಕುರಿತು ಮಾಹಿತಿ ಇಲ್ಲಿದೆ

ಇದು ಒಂದು ಅಪಘಾತ ವಿಮೆ ಆಗಿದ್ದು, ಭಾರತ ಸರ್ಕಾರದಿಂದ ಪ್ರಾರಂಭಿಸಲಾದ ಯೋಜನೆ. ಅಪಘಾತದಿಂದ ಮರಣ ಹಾಗೂ ಅಪಘಾತದಿಂದ ಅಂಗವೈಕಲ್ಯಗಳಿಗೂ ವಿಮಾ ಸುರಕ್ಷೆ ನೀಡುತ್ತಿದೆ.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಕುರಿತು ಮಾಹಿತಿ ಇಲ್ಲಿದೆ
ಅಕ್ಷತಾ ವರ್ಕಾಡಿ
|

Updated on: May 25, 2023 | 6:22 PM

Share

ಇದು ಒಂದು ಅಪಘಾತ ವಿಮೆ ಆಗಿದ್ದು, ಭಾರತ ಸರ್ಕಾರದಿಂದ ಪ್ರಾರಂಭಿಸಲಾದ  ಯೋಜನೆ. ಅಪಘಾತದಿಂದ ಮರಣ ಹಾಗೂ ಅಪಘಾತದಿಂದ ಅಂಗವೈಕಲ್ಯ ಗಳಿಗೂ ವಿಮಾ ಸುರಕ್ಷೆ ನೀಡುತ್ತಿದೆ. ಜಗತ್ತಿನ ಅತಿ ಕಡಿಮೆ ವೆಚ್ಚದ ಅಪಘಾತ ವಿಮೆ ಇದಾಗಿರುತ್ತದೆ. 18ನೇ ವರ್ಷ ತಲುಪಿದ ಪ್ರತಿಯೊಬ್ಬನು ವಿಮೆಯನ್ನು ಹೊಂದುವುದು ಅತಿ ಅವಶ್ಯ, ಕಾರಣ ಅಂಚೆ ಕಚೇರಿ ಅಥವಾ ಬ್ಯಾಂಕ್ ನ್ನು ಸಂಪರ್ಕಿಸಿ. ದಯಮಾಡಿ ತಮಗೆ ಭೇಟಿಯಾದ ಪ್ರತಿಯೊಬ್ಬ ನಿಗೂ PMSBY ಪಡೆದುಕೂಂಡಿದ್ದೀಯಾ ವಿಚಾರಿಸಿ.ಈ  ಕಷ್ಟಕಾಲದಲ್ಲಿ ಆ ಕುಟುಂಬಕ್ಕೆ  ಆಧಾರವಾರಗಿಬಹುದು, ಈ ರೀತಿಯ ಅಪಘಾತ  ವಿಮೆ ಕ್ರಾಂತಿ ಅವಶ್ಯಕ. ಇದು 2015 -16 ನೇ ಇಸ್ವಿಯ ಭಾರತ ಸರಕಾರದ ಆಯವ್ಯಯದಲ್ಲಿ ಘೋಷಿಸಿದಂತಹ ಒಂದು ಮಹತ್ವದ ಯೋಜನೆ.

ಇದು  ಭಾರತದ ಎಲ್ಲಾ ನಾಗರಿಕರಿಗೂ ಅಪಘಾತ ವಿಮೆ ಒದಗಿಸುವ ಯೋಜನೆಯಾಗಿದ್ದು ಅದರಲ್ಲೂ ಮುಖ್ಯವಾಗಿ ಅಸಂಘಟಿತ ಕಾರ್ಮಿಕರ ವರ್ಗಕ್ಕೆ  ವಿಮಾ ಸುರಕ್ಷೆಗಾಗಿ ಮಾಡಿದ ಯೋಜನೆಯಾಗಿದೆ. ಇದನ್ನು ಅಂಚೆ ಕಚೇರಿ ಅಥವಾ ಬ್ಯಾಂಕುಗಳ ಉಳಿತಾಯ ಖಾತೆಯ ಮೂಲಕ ಪಡೆಯಬಹುದಾಗಿದೆ. ಇದು ಎರಡು ಲಕ್ಷ ರೂಪಾಯಿ ಮೊತ್ತದ ಅಪಘಾತ ವಿಮಾ ಯೋಜನೆಯಾಗಿದ್ದು ಇದಕ್ಕೆ ಪ್ರೀಮಿಯಂ ರೂಪದಲ್ಲಿ ರೂಪಾಯಿ 20 ವರ್ಷಕ್ಕೊಮ್ಮೆ ನೀಡಬೇಕಾಗುತ್ತದೆ. ಇದು ಒಂದು ವರ್ಷದ ಯೋಜನೆಯಾಗಿತ್ತು ಪ್ರತಿವರ್ಷ ಪುನರ್ನವೀಕರಣ ಕೊಳ್ಳುತ್ತದೆ. ಯೋಜನೆಗೆ 18 ರಿಂದ 70 ವರ್ಷದ ವರೆಗಿನ ಅಂಚೆ ಕಚೇರಿ ಅಥವಾ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹೊಂದಿದ  ಭಾರತೀಯ ನಾಗರಿಕರು ಸೇರಬಹುದಾಗಿದೆ. ಆಧಾರ್ ಸಂಖ್ಯೆ ಅವಶ್ಯವಾಗಿ ನೀಡಬೇಕಾಗುತ್ತದೆ.

ಇದನ್ನೂ ಓದಿ: ಬಡ್ಡಿ ಮೇಲೆ ಟಿಡಿಎಸ್; ನಿಮ್ಮ ಎಫ್​ಡಿ ಹಣಕ್ಕೆ ನೀವಂದುಕೊಂಡಷ್ಟು ಸಿಗಲ್ಲ ರಿಟರ್ನ್ಸ್; ಇಲ್ಲಿದೆ ಡೀಟೇಲ್ಸ್

ಒಬ್ಬ ನಾಗರಿಕನು ಎರಡು ಲಕ್ಷ ರೂಪಾಯಿಯ ಕೇವಲ ಒಂದು ಅಪಘಾತ ವಿಮೆಯನ್ನು ಹೊಂದಬಹುದು. ಒಂದಕ್ಕಿಂತಲೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ ಈ ವಿಮಾ ಪಡೆದಿದ್ದರೆ  ವಿಮಾ ಮೊತ್ತ ಒಂದು ಆಧಾರ್ ಸಂಖ್ಯೆಗೆ ಮಾತ್ರ ಸೀಮಿತವಾಗಿರುತ್ತದೆ. ಇತರ ಅಪಘಾತ ವಿಮೆಯನ್ನ  ಹೊಂದಿದ್ದರೂ ಕೂಡ ಈ ವಿಮೆಯನ್ನು ಖರೀದಿಸಬಹುದಾಗಿದೆ. ಪ್ರಧಾನಮಂತ್ರಿ ಸುರಕ್ಷಾ ವಿಮಾ  ಯೋಜನೆಯು ಜೂನ್ 1ರಿಂದ ಮೇ 31ರವರೆಗೆ ಜಾರಿಯಲ್ಲಿರುತ್ತದೆ. ಈ ವಿಮಾ ಯೋಜನೆಯಲ್ಲಿ ಕಾಯುವ ವೇಳೆ ಇಲ್ಲ,ವಿಮಾ ಯೋಜನೆಗೆ ಒಳಪಟ್ಟ ನಂತರ ಎರಡನೇ ದಿನ ಅಪಘಾತದಿಂದ ಸಾವು ಸಂಭವಿಸಿದರೂ ನಾಮನಿರ್ದೇಶಿತರಿಗೆ ವಿಮಾ ಮೊತ್ತ ನೀಡಲಾಗುತ್ತದೆ. ಯೋಜನೆಯಲ್ಲಿ ಅವಧಿಯ ನಂತರ ಯಾವುದೇ ಹಣವನ್ನು ಹಿಂದಿರುಗಿಸಲಾಗುವುದಿಲ್ಲ.

ಯೋಜನೆ ಯಾವಾಗ ಸಮಾಪ್ತಿಗೊಳ್ಳುತ್ತದೆ ?

  • ನಾಗರೀಕನು 70ನೇ ವರ್ಷಕ್ಕೆ ತಲುಪಿದಾಗ ಅಥವಾ  ಉಳಿತಾಯ ಖಾತೆಯನ್ನು ಮುಚ್ಚಿದಾಗ, ಅಥವಾ ಖಾತೆಯಲ್ಲಿ ಅವಶ್ಯವಿರುವಷ್ಟು ಹಣ ಇಲ್ಲದೇ ಇದ್ದಾಗ.
  •  ಈ ಕೆಳಗಿನ ಕಾರಣಗಳಲ್ಲಿ ಮರಣ ಹೊಂದಿದಲ್ಲಿ ಅಥವಾ ಅಂಗವೈಕಲ್ಯ ಹೊಂದಿದ್ದಲ್ಲಿ ಯೋಜನೆ  ವಿಮಾ ಹಣವನ್ನು ನೀಡುತ್ತದೆ.
  • ವಾಹನ ಅಪಘಾತ, ಕೊಲೆ, ಭೂಕಂಪ ಪ್ರವಾಹದಿಂದ ಮರಣ, ವಿಷ ಪ್ರಾಣಿಯ ಕಾರಣದಿಂದ ಸಾವು, ಮರದಿಂದ ಬೀಳುವುದರಿಂದ ಸಾವು. ಆತ್ಮಹತ್ಯೆಯ ಕಾರಣದಿಂದ ಸಾವುಸಂಭವಿದರೆ ಯೋಜನೆ ಯಾವುದೇ ಪರಿಹಾರವನ್ನು ಒದಗಿಸುವುದಿಲ್ಲ.

ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು