AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Unilever: ಯುನಿಲಿವರ್​ನಿಂದ ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕ; 7,500 ಮಂದಿ ಲೇ ಆಫ್ ಸಾಧ್ಯತೆ

ಲಂಡನ್ ಮೂಲದ ಯೂನಿಲಿವರ್ ಸಂಸ್ಥೆ ತನ್ನ ಐಸ್​ಕ್ರೀಮ್ ಬಿಸಿನೆಸ್ ಅನ್ನು ಪ್ರತ್ಯೇಕಗೊಳಿಸುತ್ತಿದೆ. ಬೆನ್ ಅಂಡ್ ಜೆರ್ರಿ ಮತ್ತು ಮ್ಯಾಗ್ನಂ ಬ್ರ್ಯಾಂಡ್ ಸೇರಿದಂತೆ ಐಸ್ ಕ್ರೀಮ್ ವ್ಯವಹಾರವೆಲ್ಲವೂ ಹೊಸ ಸಂಸ್ಥೆಯಡಿ ಬರಲಿವೆ. ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್​ನ ಮಾತೃ ಸಂಸ್ಥೆಯಾಗಿರುವ ಯುನಿಲಿವರ್ ತನ್ನ ಬಿಸಿನೆಸ್ ಮರುರಚನೆ ಮಾಡುತ್ತಿದ್ದು, ಆ ನಿಟ್ಟಿನಲ್ಲಿ ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕವಾಗುತ್ತಿದೆ. ವೆಚ್ಚ ಉಳಿತಾಯಕ್ಕಾಗಿ 7,500 ಮಂದಿಯನ್ನು ಲೇ ಆಫ್ ಮಾಡುವ ಪ್ಲಾನ್ ಕೂಡ ಇದೆ.

Unilever: ಯುನಿಲಿವರ್​ನಿಂದ ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕ; 7,500 ಮಂದಿ ಲೇ ಆಫ್ ಸಾಧ್ಯತೆ
ಯುನಿಲಿವರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 19, 2024 | 6:29 PM

Share

ನವದೆಹಲಿ, ಮಾರ್ಚ್ 19: ಹಿಂದೂಸ್ತಾನ್ ಯೂನಿಲಿವರ್​ನ (HUL) ಮಾತೃಸಂಸ್ಥೆಯಾದ ಯುನಿಲಿವರ್ (Unilever) ತನ್ನ ಬಿಸಿನೆಸ್ ಮರು ರಚಿಸುತ್ತಿದೆ. ತನ್ನ ಐಸ್ ಕ್ರೀಮ್ ವಿಭಾಗವನ್ನೇ ಪ್ರತ್ಯೇಕ ಸಂಸ್ಥೆಯಾಗಿ ಮಾಡಲು ಯೋಜಿಸಿದೆ. ವೆಚ್ಚ ಉಳಿಸುವ ಅಮೂಲಾಗ್ರ ಯೋಜನೆಯ ಭಾಗವಾಗಿ ಈ ಪ್ಲಾನ್ ಮಾಡಲಾಗಿದೆ. ಅದರಂತೆ 7,500 ಮಂದಿ ಕೆಲಸ ಕಳೆದುಕೊಳ್ಳುವ (job cuts) ಸಾಧ್ಯತೆಯೂ ಇದೆ. ವರದಿಗಳ ಪ್ರಕಾರ ಐಸ್​ಕ್ರೀಮ್ ಬಿಸಿನೆಸ್ ಪ್ರತ್ಯೇಕಗೊಳ್ಳುವ ಪ್ರಕ್ರಿಯೆ ತತ್​ಕ್ಷಣದಿಂದಲೇ ಆರಂಭವಾಗಲಿದ್ದು, 2025ರ ವರ್ಷಾಂತ್ಯದೊಳಗೆ ಪೂರ್ಣಗೊಳ್ಳಬಹುದು. ಯೂನಿಲಿವರ್​ನಲ್ಲಿ ಬೆನ್ ಅಂಡ್ ಜೆರ್ರೀಸ್, ಮ್ಯಾಗ್ನಸ್ ಮೊದಲಾದ ಬ್ರ್ಯಾಂಡ್​ನ ಐಸ್​ಕ್ರೀಮ್ ಬಿಸಿನೆಸ್​ಗಳಿವೆ. ಅವೆಲ್ಲವೂ ಸೇರಿ ಪ್ರತ್ಯೇಕ ಸಂಸ್ಥೆಯಾಗಿ ಹೊರಬರಬಹುದು.

ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕಗೊಳ್ಳುವುದರಿಂದ ಯೂನಿಲಿವರ್​ಗೆ ಹೆಚ್ಚು ಅನುಕೂಲವಾಗಬಹುದು. ಸಂಸ್ಥೆಯ ಗಮನ ನಿರ್ದಿಷ್ಟಗೊಳಿಸಲು ಮತ್ತು ವ್ಯವಹಾರ ಸರಳಗೊಳಿಸಲು ಸಹಾಯವಾಗಲಿದೆ. ಹಾಗೆಯೇ, ವಿಶ್ವದಲ್ಲಿ ಅತಿದೊಡ್ಡ ಐಸ್ ಕ್ರೀಮ್ ಬಿಸಿನೆಸ್ ಸೃಷ್ಟಿ ಕೂಡ ಸಾಧ್ಯವಾಗುತ್ತದೆ. ಇದರಿಂದ ಐಸ್ ಕ್ರೀಮ್ ಬಿಸಿನೆಸ್ ಕೂಡ ಉತ್ತಮವಾಗಿ ಬೆಳೆಯಬಹುದು ಎಂದು ಯೂನಿಲಿವರ್​ನ ಮುಖ್ಯಸ್ಥರಾದ ಇಯಾನ್ ಮೀಕಿನ್ಸ್ ಹೇಳಿದ್ದಾರೆ.

ಇದನ್ನೂ ಓದಿ: ಚಿನ್ನದ ಬೆಲೆ ಈ ಸೆಪ್ಟಂಬರ್​ನೊಳಗೆ 70,000 ರೂ ಆಗುತ್ತಾ? ಈ ಏರಿಕೆಗೆ ಸಂಭಾವ್ಯ ಕಾರಣಗಳಿವು

2023ರಲ್ಲಿ ಯುನಿಲಿವರ್​ನ ಐಸ್ ಕ್ರೀಮ್ ವಿಭಾಗ ಜಾಗತಿಕವಾಗಿ 8.6 ಬಿಲಿಯನ್ ಡಾಲರ್ ಮೊತ್ತದಷ್ಟು ಮಾರಾಟ ಕಂಡಿತ್ತು. ಈಗ ಪ್ರತ್ಯೇಕ ಸಂಸ್ಥೆಯಾಗುವುದರಿಂದ ಆ ವ್ಯವಹಾರದ ಮೇಲೆ ಪ್ರತ್ಯೇಕವಾಗಿ ಪೂರ್ಣ ಗಮನ ಕೊಡಲು ಸಾಧ್ಯವಾಗುತ್ತದೆ.

ವಿವಾದಗಳಿಂದಲೂ ಮುಕ್ತ

ಯುನಿಲಿವರ್​ನ ಐಸ್ ಕ್ರೀಮ್ ವಿಭಾಗದಲ್ಲಿರುವ ಬೆನ್ ಅಂಡ್ ಜೆರ್ರೀಸ್ ಇತ್ತೀಚೆಗೆ ಒಂದಷ್ಟು ವಿವಾದ ಹುಟ್ಟುಹಾಕಿತ್ತು. ಯುನಿಲಿವರ್ ಮತ್ತು ಬೆನ್ ಅಂಡ್ ಜೆರ್ರೀಸ್​ನ ರಾಜಕೀಯ ನಿಲುವು ವ್ಯತಿರಿಕ್ತ ಎನಿಸಿವೆ. ತನ್ನ ಬ್ರ್ಯಾಂಡ್​ನ ಐಸ್ ಕ್ರೀಮ್​ಗಳನ್ನು ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್ ಭಾಗದಲ್ಲಿ ಮಾರಲಾಗುತ್ತಿದೆ ಎಂದು ಬೆನ್ ಅಂಡ್ ಜೆರೀಸ್ ತಗಾದೆ ತೆಗೆದಿತ್ತು. ಇದು ಎರಡು ಅಂಗಸಂಸ್ಥೆಗಳನ್ನು ಕೋರ್ಟ್ ಮೆಟ್ಟಿಲೇರುವಂತೆ ಮಾಡಿತ್ತು.

ಉಕ್ರೇನ್ ಅನ್ನು ರಷ್ಯಾ ಆಕ್ರಮಿಸುವ ಮುನ್ನ ಯೂರೋಪ್​ಗೆ ಅಮೆರಿಕದ ಸೇನಾ ಪಡೆಗಳನ್ನು ಕಳುಹಿಸುವ ಮೂಲಕ ಅಧ್ಯಕ್ಷ ಜೋ ಬೈಡನ್ ಯುದ್ಧದ ಕಿಡಿ ಹತ್ತಿಸುತ್ತಿದ್ದಾರೆ ಎಂದು ಬೆನ್ ಅಂಡ್ ಜೆರ್ರೀಸ್ ಸೋಷಿಯಲ್ ಮೀಡಿಯಾದಲ್ಲಿ ಆರ್ಭಟಿಸಿತ್ತು. ಇದಕ್ಕೆ ಯುನಿಲಿವರ್ ವಿರೋಧ ವ್ಯಕ್ತಪಡಿಸಿತ್ತು. ಈ ಕಾರಣಕ್ಕೆ ಯುನಿಲಿವರ್​ಗೆ ಐಸ್ ಕ್ರೀಮ್ ಬಿಸಿನೆಸ್ ಪ್ರತ್ಯೇಕಗೊಂಡರೆ ವಿವಾದದಿಂದಲೂ ಮುಕ್ತಿ ಸಿಕ್ಕಂತಾಗಬಹುದು.

ಇದನ್ನೂ ಓದಿ: ಭಾರತದಲ್ಲಿ ಮೊದಲ ಬುಲೆಟ್ ಟ್ರೈನ್ ಸಂಚಾರ 2026ರಲ್ಲಿ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಲಂಡನ್​ನಲ್ಲಿ ಮುಖ್ಯ ಕಚೇರಿ ಹೊಂದಿರುವ ಯುನಿಲಿವರ್ 190 ದೆಶಗಳಲ್ಲಿ ಮಾರುಕಟ್ಟೆ ಹೊಂದಿದೆ. ಅದು ವಿಶವದ ಅತಿದೊಡ್ಡ ಸೋಪು ತಯಾರಕ ಕಂಪನಿ. ನೀರು, ಆಹಾರ, ಸೌಂದರ್ಯ ವರ್ಧಕ, ಐಸ್​ಕ್ರೀಮ್, ಔಷಧ, ಡ್ರಿಂಕ್ಸ್, ಚಹಾ ಇತ್ಯಾದಿ ಬಹಳಷ್ಟು ಉತ್ಪನ್ನಗಳನ್ನು ಅದು ತಯಾರಿಸುತ್ತದೆ. ರೆಕ್ಸೋನಾ, ಲಕ್ಸ್, ಲೈಫ್​ಬಾಯ್, ಸನ್​ಸಿಲ್ಕ್, ಡೋವ್ ಇತ್ಯಾದಿ ಅದರ ಪ್ರಸಿದ್ಧ ಬ್ರ್ಯಾಂಡ್​ಗಳು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!