AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Job Loss: ಟೆಕ್, ಸ್ಟಾರ್ಟ್ ಅಪ್ ವಲಯದಲ್ಲಿ 22 ಸಾವಿರ ಉದ್ಯೋಗಗಳಿಗೆ ಕತ್ತರಿ; ಎರಡು ವರ್ಷದ ನೀರ ಮೇಲಣ ಗುಳ್ಳೆ ಫಳ್

ಭಾರತದ ಟೆಕ್ ಮತ್ತು ಸ್ಟಾರ್ಟ್​​ಅಪ್​ಗಳ 12,000 ಉದ್ಯೋಗಗಳು ಸೇರಿದಂತೆ 22,000 ಉದ್ಯೋಗಿಗಳು 2022ನೇ ಇಸವಿಯಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ.

Job Loss: ಟೆಕ್, ಸ್ಟಾರ್ಟ್ ಅಪ್ ವಲಯದಲ್ಲಿ 22 ಸಾವಿರ ಉದ್ಯೋಗಗಳಿಗೆ ಕತ್ತರಿ; ಎರಡು ವರ್ಷದ ನೀರ ಮೇಲಣ ಗುಳ್ಳೆ ಫಳ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 04, 2022 | 2:58 PM

Share

ಕ್ರಂಚ್‌ಬೇಸ್ ಪ್ರಕಾರ, ಕೊರೊನಾ ಸಾಂಕ್ರಾಮಿಕ ಸನ್ನಿವೇಶದಲ್ಲಿ ಅದ್ಭುತ ಲಾಭ ಪಡೆದ ಕಂಪೆನಿಗಳು ಆರ್ಥಿಕ ಕುಸಿತದ ಮಧ್ಯೆ ಒತ್ತಡವನ್ನು ಅನುಭವಿಸುತ್ತಿರುವುದರಿಂದ 2022ರಲ್ಲಿ ಭಾರತೀಯ ಸ್ಟಾರ್ಟಪ್ ಎಕೋ ಸಿಸ್ಟಮ್​ನಲ್ಲಿ 12,000ಕ್ಕೂ ಹೆಚ್ಚು ಉದ್ಯೋಗಿಗಳು ಸೇರಿದಂತೆ ಟೆಕ್ ಮತ್ತು ಸ್ಟಾರ್ಟ್‌ಅಪ್ ವಲಯದಲ್ಲಿ ಸುಮಾರು 22,000 ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ (Job Loss). ಸ್ಟಾರ್ಟ್​ಅಪ್​ಗಳಿಗೆ ನಿಧಿ ಸಂಗ್ರಹ ಬಹಳ ಕಷ್ಟವಾಗಿದ್ದು, ಅವುಗಳ ಮೌಲ್ಯಮಾಪನ ಇಳಿಯುವುದಕ್ಕೆ ಶುರುವಾಗಿದೆ ಎಂದು ವರದಿ ಆಗಿದೆ. ಓಲಾ, ಅನ್​ಅಕಾಡೆಮಿ, ವೇದಾಂಟು, ಕಾರ್ಸ್ 24 ಮತ್ತು ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್) ನಂತಹ ಹಲವಾರು ಯುನಿಕಾರ್ನ್‌ಗಳು “ಪುನರ್​ರಚನೆ ಮತ್ತು ವೆಚ್ಚ ಕಡಿತ”ದ ಹೆಸರಿನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿವೆ. ಬ್ಲಿಂಕ್​ಇಟ್ (Blinkit), ಬೈಜು (White Hat Jr, Toppr), FarEye, Trellನಂತಹ ಕಂಪೆನಿಗಳು ಈ ವರ್ಷ ಅನೇಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿರುವ ಸ್ಟಾರ್ಟ್​ಅಪ್​ಗಳ ಸಾಲಿಗೆ ಸೇರಿವೆ.

ವರದಿಯ ಪ್ರಕಾರ, ಭಾರತೀಯ ಸ್ಟಾರ್ಟ್ಅಪ್ ವಲಯವು “ನಿಧಿ ಸಂಗ್ರಹ ಸಮಸ್ಯೆ” ಸರಿದೂಗಿಸಲು 60,000ಕ್ಕೂ ಹೆಚ್ಚು ಉದ್ಯೋಗ ನಷ್ಟಗಳಿಗೆ ಸಾಕ್ಷಿ ಆಗಬಹುದು. ಉದ್ಯಮದ ತಜ್ಞರನ್ನು ಉಲ್ಲೇಖಿಸಿದ ವರದಿಯು ತಿಳಿಸುವಂತೆ, 2022ರಲ್ಲಿ “ಪುನರ್​ರಚನೆ ಮತ್ತು ವೆಚ್ಚ ಕಡಿತ” ಹೆಸರಿನಲ್ಲಿ ಕನಿಷ್ಠ 50,000 ಸ್ಟಾರ್ಟ್​ಅಪ್ ಉದ್ಯೋಗಿಗಳನ್ನು ವಜಾ ಮಾಡುವ ಸಾಧ್ಯತೆಯಿದೆ ಎಂದು ಸೂಚಿಸುತ್ತದೆ. ಆದರೆ ಕೆಲವು ಸ್ಟಾರ್ಟ್‌ಅಪ್‌ಗಳು ಕೋಟ್ಯಂತರ ರೂಪಾಯಿ ನಿಧಿಯನ್ನು ಪಡೆಯುತ್ತಲೇ ಇವೆ.

ನೆಟ್‌ಫ್ಲಿಕ್ಸ್‌ನಂತಹ ಜಾಗತಿಕ ಕಂಪೆನಿಗಳು, ಹಣಕಾಸು ಸೇವೆಗಳ ಕಂಪೆನಿ ರಾಬಿನ್‌ಹುಡ್ ಮತ್ತು ಹಲವಾರು ಕ್ರಿಪ್ಟೋ ಪ್ಲಾಟ್‌ಫಾರ್ಮ್‌ಗಳು – ಆರ್ಥಿಕ ಹೊಡೆತಕ್ಕೆ ಜರ್ಝರಿತವಾಗಿವೆ- ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡಿವೆ. ಹೂಡಿಕೆದಾರರು ಮುಂದಿನ ಕೆಲವು ತ್ರೈಮಾಸಿಕಗಳಲ್ಲಿ ಸ್ಟಾರ್ಟ್‌ಅಪ್‌ಗಳ ಮೂಲಕ ಫಿಲ್ಟರಿಂಗ್ ಪ್ರಾರಂಭಿಸಲು ಸ್ಟಾಕ್ ಮಾರುಕಟ್ಟೆಯಲ್ಲಿ ಐತಿಹಾಸಿಕ ಕುಸಿತಕ್ಕೆ ತಡೆ ಮಾಡಬೇಕು ಎಂದು ಯುಎಸ್ ಮೂಲದ ಸಫೈರ್ ವೆಂಚರ್ಸ್‌ನ ಪಾಲುದಾರ ಸಂಸ್ಥೆ ಹೇಳಿರುವುದಾಗಿ ಬ್ಲೂಮ್‌ಬರ್ಗ್ ವರದಿ ಮಾಡಿದೆ.

“ನಾವು ಮುಂದೆ ಕೆಲವು ಕಷ್ಟದ ಸಮಯಗಳನ್ನು ಎದುರಿಸಲಿದ್ದೇವೆ – ಇದು ಒಂದು ತ್ರೈಮಾಸಿಕಕ್ಕೋ, ಎರಡು ತ್ರೈಮಾಸಿಕವೋ, ಮೂರು ಅಥವಾ ಅದಕ್ಕಿಂತ ಹೆಚ್ಚೋ ಎಂದು ನನಗೆ ಗೊತ್ತಿಲ್ಲ,” ಎಂಬುದಾಗಿ ಬ್ಲೂಮ್‌ಬರ್ಗ್ ಟೆಲಿವಿಷನ್‌ಗೆ ನೀಡಿದ ಸಂದರ್ಶನದಲ್ಲಿ ಕ್ಯಾಥಿ ಗಾವೊ ಹೇಳಿದ್ದಾರೆ. “ಎಲ್ಲರಿಗೂ ನನ್ನ ಸಂದೇಶವೆಂದರೆ, ಇದು ನಿಮ್ಮೊಳಗೆ ನೋಡಿಕೊಳ್ಳಲು ಸಮಯ. ನಿಮ್ಮ ವ್ಯಾಪ್ತಿಯಲ್ಲಿ ಬರುವುದನ್ನು ಸರಿಯಾಗಿಟ್ಟುಕೊಳ್ಳಲು ಮತ್ತು ಭವಿಷ್ಯಕ್ಕಾಗಿ ಸಿದ್ಧವಾಗಿರಲು ಒಂದು ಅವಕಾಶವಾಗಿದೆ,” ಎಂದಿದ್ದಾರೆ.

“ನನ್ನ ಹಂತವು ಇದೀಗ ಸ್ವಲ್ಪ ಮಟ್ಟಿಗೆ ಸ್ಥಗಿತ ಆಗಿದೆ ಏಕೆಂದರೆ, ಒಂದು ಕಡೆ 2021ರಲ್ಲಿ ಬಹಳಷ್ಟು ಕಂಪೆನಿಗಳು ಬಹಳ ಹಣವನ್ನು ಸಂಗ್ರಹಿಸಿವೆ – ಅವರು 30 ತಿಂಗಳ ನಡೆಸುವ ಅವಕಾಶ ಹೊಂದಿರಬಹುದು,” ಎಂದು ಗಾವೊ ಹೇಳಿದ್ದಾರೆ. “ಮತ್ತೊಂದೆಡೆ, ಹೂಡಿಕೆದಾರರಿಗೆ ಮೌಲ್ಯಮಾಪನವು ಇನ್ನೂ ಎಲ್ಲಿ ನಿಲ್ಲಲಿದೆ ಎಂದು ತಿಳಿದಿಲ್ಲ,” ಎಂದು ಸಹ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Netflix: ವೆಚ್ಚ ತಗ್ಗಿಸುವ ಉದ್ದೇಶಕ್ಕೆ ನೆಟ್​ಫ್ಲಿಕ್ಸ್​ನಿಂದ 300 ಉದ್ಯೋಗಿಗಳ ವಜಾ

Published On - 2:58 pm, Mon, 4 July 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ