AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ ಗಡಿಯಲ್ಲಿ ಭಾರತದ ಸೂಪರ್ ಗನ್; ಎಕೆ-47ಗಿಂತ 10 ಪಟ್ಟು ದೂರ ಬುಲೆಟ್ ಫೈರ್ ಮಾಡಬಲ್ಲ ಎಕೆ-630 ನಿಯೋಜನೆಗೆ ತಯಾರಿ

Indian army to get AK-630 gun system: ಪಾಕಿಸ್ತಾನದ ಗಡಿಭಾಗದಲ್ಲಿ ಭಾರತವು ಎಕೆ-630 ಎನ್ನುವ ಅತ್ಯಾಧುನಿಕ ಏರ್ ಡಿಫೆನ್ಸ್ ಗನ್ ಸಿಸ್ಟಂ ಅನ್ನು ನಿಯೋಜಿಸಲು ತಯಾರಾಗುತ್ತಿದೆ. ಭಾರತೀಯ ಸೇನೆಯು ಎಕೆ-630 ಅನ್ನು ಖರೀದಿಸಲು ಹೊರಟಿದೆ. ಟ್ರಕ್​ಗಳ ಮೇಲೆ ಹೊತ್ತು ಸಾಗಬಲ್ಲಂತಹ ಈ ಗನ್ ಸಿಸ್ಟಂಗಳ ಬಹಳ ಪರಿಣಾಮಕಾರಿ ಎನಿಸಿವೆ. ಎಕೆ-47ಗಿಂತ ಇವು ಹತ್ತು ಪಟ್ಟು ಹೆಚ್ಚು ಶಕ್ತಿಶಾಲಿ ಎನಿಸಿವೆ.

ಪಾಕಿಸ್ತಾನ ಗಡಿಯಲ್ಲಿ ಭಾರತದ ಸೂಪರ್ ಗನ್; ಎಕೆ-47ಗಿಂತ 10 ಪಟ್ಟು ದೂರ ಬುಲೆಟ್ ಫೈರ್ ಮಾಡಬಲ್ಲ ಎಕೆ-630 ನಿಯೋಜನೆಗೆ ತಯಾರಿ
ಭಾರತದ ಸೂಪರ್ ಗನ್ ಎಕೆ-630
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 06, 2025 | 12:07 PM

Share

ನವದೆಹಲಿ, ಅಕ್ಟೋಬರ್ 6: ಪಾಕಿಸ್ತಾನದ ಗಡಿಭಾಗದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಪಾಕಿಸ್ತಾನ (Pakistan) ಸೈನಿಕರು ಮತ್ತು ಒಳನುಸುಳಿ ಬರಲು ಯತ್ನಿಸುವ ಉಗ್ರರಿಗೆ ಮುಂಬರುವ ದಿನಗಳು ಸಿಂಹಸ್ವಪ್ನ ಎದುರಾಗಬಹುದು. ಪಾಕಿಸ್ತಾನದ ಗಡಿ ಭಾಗದಲ್ಲಿ ಭಾರತವು ಎಕೆ-630 ಏರ್ ಡಿಫೆನ್ಸ್ ಗನ್​ಗಳನ್ನು (Air Defence Guns) ನಿಯೋಜಿಸಲು ತಯಾರಿ ನಡೆಸುತ್ತಿದೆ. ಮಿಷನ್ ಸುದರ್ಶನ್ ಚಕ್ರ (Mission Sudarshan Chakra) ಅಡಿಯಲ್ಲಿ ಈ ಭಯಾನಕ ಏರ್ ಗನ್​ಗಳನ್ನು ಭಾರತೀಯ ಸೇನೆ (Indian Army) ಖರೀದಿಸಲು ನಿರ್ಧರಿಸಿದೆ.

ಸರ್ಕಾರಿ ಸ್ವಾಮ್ಯದ ಅಡ್ವಾನ್ಸ್ಡ್ ವೆಪನ್ ಅಂಡ್ ಎಕ್ವಿಪ್ಮೆಂಟ್ ಇಂಡಿಯಾ (AWEIL) ಸಂಸ್ಥೆಯಿಂದ ಈ ಏರ್ ಡಿಫೆನ್ಸ್ ಗನ್​ಗಳನ್ನು ಪಡೆಯಲು ಸೇನೆ ಮನವಿ (ಆರ್​ಎಫ್​ಪಿ) ಸಲ್ಲಿಸಿದೆ. ಶತ್ರುಗಳ ಡ್ರೋನ್, ರಾಕೆಟ್, ಆರ್ಟಿಲೆರಿ ಇತ್ಯಾದಿಗಳ ದಾಳಿಗಳನ್ನು ಎದುರಿಸಲು ಈ ಎಕೆ-630 ಗನ್​ಗಳು ಉಪಯುಕ್ತವಾಗಲಿವೆ. ಪಾಕಿಸ್ತಾನದ ಗಡಿ ಭಾಗಕ್ಕೆ ಹತ್ತಿರ ಇರುವ ಸೂಕ್ಷ್ಮ ಪ್ರದೇಶಗಳ ರಕ್ಷಣೆಗೆ ಈ ಮಾರಕ ಅಸ್ತ್ರಗಳನ್ನು ಬಳಸುವ ಉದ್ದೇಶ ಇದೆ.

ಇದನ್ನೂ ಓದಿ: ಅಮೆರಿಕದ್ದೂ ಬೇಡ ರಷ್ಯದ್ದೂ ಬೇಡ, ನಮ್ಮದೇ ಯುದ್ಧವಿಮಾನ ತಯಾರಿಸೋಣ: ಕೋಟ ಹರಿನಾರಾಯಣ ಕಿವಿಮಾತು

ಈ ಗನ್​ಗಳ ಟ್ರಯಲ್​ಗಳನ್ನು ಮೇ ತಿಂಗಳಲ್ಲೇ ನಡೆಸಲಾಗಿದೆ. ಇದರ ಕಾರ್ಯನಿರ್ವಹಣೆ ಬಗ್ಗೆ ಸೇನೆ ತೃಪ್ತಿ ವ್ಯಕ್ತಪಡಿಸಿದೆ. ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನವು ಹಲವು ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ಭಾರತದ ಧಾರ್ಮಿಕ ಸ್ಥಳಗಳ ಮೇಲೆ ದಾಳಿಗೆ ಯತ್ನಿಸಿತ್ತು. ಭಾರತದ ಡಿಫೆನ್ಸ್ ಸಿಸ್ಟಂಗಳು ಈ ಹೆಚ್ಚಿನ ದಾಳಿಗಳನ್ನು ಸಮರ್ಥವಾಗಿ ವಿಫಲಗೊಳಿಸಿದ್ದು ಹೌದು. ಇಂಥ ಪರಿಸ್ಥಿತಿಯಲ್ಲಿ ಎಕೆ-630ಯಂತಹ ಏರ್ ಡಿಫೆನ್ಸ್ ಸಿಸ್ಟಂಗಳು ಮತ್ತಷ್ಟು ಉಪಯೋಗಕ್ಕೆ ಬರಬಹುದು.

ಹೇಗಿದೆ ಎಕೆ-630 ಏರ್ ಡಿಫೆನ್ಸ್ ಗನ್?

ಎಕೆ-630 ಎಂಬುದು ಒಂದು ರೀತಿಯ ಗನ್ ಸಿಸ್ಟಂ. ಟ್ರಕ್​ಗಳಲ್ಲಿ ಇವುಗಳನ್ನು ಸಾಗಿಸಬಹುದು. ಒಂದು ದೊಡ್ಡ ಟ್ಯಾಂಕ್ ರೀತಿಯ ರಚನೆಯಲ್ಲಿ ಈ ಗನ್ ಸಿಸ್ಟಂ ಅನ್ನು ಕೂರಿಸಲು ಸಾಧ್ಯ. ಇದರಲ್ಲಿ ಒಂದು ನಿಮಿಷದಲ್ಲಿ 3,000 ಸುತ್ತುಗಳ ಗುಂಡಿನ ದಾಳಿ ನಡೆಸಬಹುದು. ಈ ಗುಂಡಿನ ಶ್ರೇಣಿ 4 ಕಿಮೀವರೆಗೂ ಇದೆ. ಅಂದರೆ, 4 ಕಿಮೀ ದೂರದಿಂದಲೇ ಶತ್ರುಗಳ ಮೇಲೆ ನಿಖರವಾಗಿ ಗುಂಡಿನ ದಾಳಿ ನಡೆಸಬಹುದು.

ಇದನ್ನೂ ಓದಿ: ನೀರಲ್ಲಿ ಹೋಮ ಮಾಡಿದಂತಾಯ್ತು ಅಮೆರಿಕದ 19,000 ಕೋಟಿ ರೂ ಮೆಗಾ ಸೋಲಾರ್ ಪ್ರಾಜೆಕ್ಟ್

ಎಕೆ-630ಗೆ ಹೋಲಿಸಿದರೆ ಎಕೆ-47 ಹೇಗೆ?

ಎಕೆ-630 ಗನ್ ಸಿಸ್ಟಂಗೆ ಹೋಲಿಸಿದರೆ ಎಕೆ-47 ಆಗಲೀ ಎಕೆ-56 ಆಗಲೀ ಪೇಲವ ಎನಿಸುತ್ತವೆ. ಎಕೆ-47 ಗನ್​ನ ಎಫೆಕ್ಟಿವ್ ರೇಂಜ್ 300-400 ಮೀಟರ್ ಮಾತ್ರವೇ. ಇವು ನಿಮಿಷಕ್ಕೆ 600 ರೌಂಡ್​ಗಳನ್ನು ಫೈರ್ ಮಾಡಬಲ್ಲುವು. ಹೀಗಾಗಿ, ಎಕೆ-47ಗಿಂತ ಬಹುತೇಕ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿ ಎನಿಸುತ್ತದೆ ಎಕೆ-630 ಗನ್ ಸಿಸ್ಟಂ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!