AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶತ್ರು ಆಸ್ತಿ, 2.91 ಲಕ್ಷ ಷೇರುಗಳನ್ನು ಮಾರಲು ಮುಂದಾದ ಭಾರತ ಸರ್ಕಾರ; ಎನಿಮಿ ಪ್ರಾಪರ್ಟಿಗಳೆಂದರೆ ಯಾವುವು?

Enemy Property Shares: ಭಾರತದಲ್ಲಿರುವ ಶತ್ರು ಆಸ್ತಿ ಷೇರುಗಳನ್ನು ಸರ್ಕಾರ ಮಾರಲು ಹೊರಟಿದೆ. ಒಟ್ಟು 2.91 ಲಕ್ಷ ಎನಿಮಿ ಪ್ರಾಪರ್ಟಿ ಷೇರುಗಳು ಮಾರಾಟಕ್ಕಿವೆ. ಮೊದಲ ಹಂತದಲ್ಲಿ ಸರ್ಕಾರ 1.88 ಲಕ್ಷ ಎನಿಮಿ ಷೇರುಗಳನ್ನು ಮಾರಲು ಬಿಡ್ ಕರೆದಿದೆ. 1947ರಿಂದ 1962ರ ಅವಧಿಯಲ್ಲಿ ಭಾರತದಿಂದ ಪಾಕಿಸ್ತಾನ ಮತ್ತು ಚೀನಾಗೆ ವಲಸೆ ಹೋಗಿ ಅಲ್ಲಿನ ಪೌರತ್ವ ಪಡೆದವರ ಆಸ್ತಿ ಮಾರಲಾಗುತ್ತಿದೆ.

ಶತ್ರು ಆಸ್ತಿ, 2.91 ಲಕ್ಷ ಷೇರುಗಳನ್ನು ಮಾರಲು ಮುಂದಾದ ಭಾರತ ಸರ್ಕಾರ; ಎನಿಮಿ ಪ್ರಾಪರ್ಟಿಗಳೆಂದರೆ ಯಾವುವು?
ಷೇರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 12, 2024 | 5:10 PM

Share

ನವದೆಹಲಿ, ಜನವರಿ 12: ಶತ್ರುವೆಂದು ಪರಿಗಣಿಸಲಾದ ದೇಶಕ್ಕೆ ಹೋಗಿ ನೆಲಸಿರುವ ವ್ಯಕ್ತಿ ಅಥವಾ ಸಂಸ್ಥೆಗಳ ಆಸ್ತಿ ಪಾಲನ್ನು (Enemy property shares) ಸರ್ಕಾರ ಮಾರುತ್ತಿದೆ. ಮೊದಲ ಹಂತದಲ್ಲಿ 84 ಕಂಪನಿಗಳಲ್ಲಿರುವ 2.91 ಲಕ್ಷ ಶತ್ರು ಷೇರುಗಳನ್ನು ಹರಾಜಿಗಿಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ 20 ಕಂಪನಿಗಳ 1.88 ಲಕ್ಷ ಷೇರುಗಳನ್ನು ಗುರುತಿಸಿ ಮಾರಲು ಮುಂದಾಗಿದೆ. ಸರ್ಕಾರ ಈಗಾಗಲೇ ಬಿಡ್​ಗೆ ಆಹ್ವಾನಿಸಿ ಪಬ್ಲಿಕ್ ನೋಟೀಸ್ ಪ್ರಕಟಿಸಿದೆ.

ಏನಿದು ಶತ್ರು ಆಸ್ತಿ?

ಭಾರತದ ನಾಗರಿಕರು ತಮ್ಮ ಆಸ್ತಿಪಾಸ್ತಿಗಳನ್ನು ಬಿಟ್ಟು ಪಾಕಿಸ್ತಾನ ಮತ್ತು ಚೀನಾಗೆ ವಲಸೆ ಹೋಗಿ ಅಲ್ಲಿ ಪೌರತ್ವ ಪಡೆದಿದ್ದರೆ, ಅಂಥವರ ಆಸ್ತಿಯನ್ನು ಎನಿಮಿ ಪ್ರಾಪರ್ಟಿ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ 1947ರಿಂದ 1962ರ ಅವಧಿಯಲ್ಲಿ ವಲಸೆ ಹೋದವರು ವಿವಿಧ ಕಂಪನಿಗಳಲ್ಲಿ ಹೊಂದಿದ್ದ ಷೇರುಪಾಲು ಇದಾಗಿದೆ. ಇಂಥ 2,91,536 ಷೇರುಗಳು ಸದ್ಯಕ್ಕೆ ಕಸ್ಟಡಿಯನ್ ಆಫ್ ಎನಿಮಿ ಪ್ರಾಪರ್ಟೀಸ್ ಆಫ್ ಇಂಡಿಯಾ (ಸಿಇಪಿಐ) ಸಂಸ್ಥೆಯ ಸುಪರ್ದಿಯಲ್ಲಿದೆ. ಇದರಲ್ಲಿ ಮೊದಲ ಹಂತದಲ್ಲಿ 1.88 ಲಕ್ಷ ಷೇರುಗಳನ್ನು ಮಾರಲಾಗುತ್ತಿದೆ. ಇಲ್ಲಿ ಕಂಪನಿಗಳ ಷೇರುಗಳು ಮಾತ್ರವಲ್ಲ ಜಮೀನು, ಕಟ್ಟಡ, ಒಡವೆ ಇತ್ಯಾದಿ ಆಸ್ತಿಯೂ ಸೇರಿರಬಹುದು.

ಇದನ್ನೂ ಓದಿ: ಚೀನಾಗೆ ಈ ಅನುಕೂಲ ಸಿಗಲು ಬಹಳ ವರ್ಷ ಬೇಕಾಯಿತು; ಭಾರತಕ್ಕೆ ಈಗಲೇ ಸಿಕ್ಕಿದೆ: ಆರ್ಥಿಕತೆಯ ಒಳನೋಟ ಬಿಚ್ಚಿಟ್ಟ ಫೇರ್​ಫ್ಯಾಕ್ಸ್ ಮುಖ್ಯಸ್ಥ ಪ್ರೇಮ್ ವತ್ಸ

ಸರ್ಕಾರ ಕರೆದಿರುವ ಬಿಡ್​ನಲ್ಲಿ ರಿಸರ್ವ್ ಪ್ರೈಸ್ ನಿಗದಿ ಮಾಡಿದೆ. ಇದಕ್ಕಿಂತ ಕಡಿಮೆ ದರ ಕೋಟ್ ಮಾಡುವ ಬಿಡ್​ಗಳನ್ನು ತಿರಸ್ಕರಿಸಲಾಗುತ್ತದೆ. ಅತಿ ಹೆಚ್ಚು ಬೆಲೆ ಕೋಟ್ ಮಾಡುವ ಬಿಡ್ಡರ್​ಗಳಿಗೆ ಷೇರುಗಳನ್ನು ಕೊಡಲಾಗುತ್ತದೆ.

ಮಾರುತ್ತಿರುವುದು ಯಾಕೆ?

ನಿರ್ಗತಿಕವಾಗಿ ಬಿದ್ದಿದ್ದ ಈ ಆಸ್ತಿಗಳಿಂದ ಯಾವ ಅನುಕೂಲಗಳು ಆಗುತ್ತಿಲ್ಲ. ಚರಾಸ್ತಿಗಳನ್ನು ಮಾರಿದರೆ ಸರ್ಕಾರಕ್ಕೂ ಆದಾಯ ಬಂದಂತಾಗುತ್ತದೆ. ಈ ಹಿಂದೆ ಕೆಲ ಬಾರಿ ಶತ್ರು ಆಸ್ತಿಗಳನ್ನು ಸರ್ಕಾರ ಮಾರಿ ನೂರಾರು ಕೋಟಿ ರೂ ಹಣ ಆದಾಯ ಪಡೆದಿದೆ. ಇದನ್ನು ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
600ಕ್ಕೆ 597 ಅಂಕ ಗಳಿಸಿದ ವಿದ್ಯಾರ್ಥಿನಿಯರು: ಪೋಷಕರ ಭಾವುಕ ಮಾತು
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಎಲ್​ಪಿಜಿ ಕೊರತೆ: ಆಟೋ ಚಾಲಕರಿಗೆ ದಿನಸಿ ಕಿಟ್ ನೀಡಿದ ನಟ ವಿನೋದ್ ರಾಜ್
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಧಾರ್ಮಿಕ ಆಚರಣೆಗಾಗಿ ನರ್ಮದಾ ನದಿಗೆ 11 ಸಾವಿರ ಲೀಟರ್ ಹಾಲು ಸುರಿದ ಭಕ್ತರು!
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಬೆಂಗಳೂರು ಓಟ: 10 ಕಿಮೀ ರಸ್ತೆ ದುರಸ್ತಿಗೆ ತೇಜಸ್ವಿ ಸೂರ್ಯ ಆಗ್ರಹ
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡಿಲ್ಲ; ವಿಜಯ್ ಹೇಳಿಕೆಗೆ ಡಿಕೆಶಿ ತಿರುಗೇಟು
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಪಿಯುಸಿ ಫಲಿತಾಂಶ 2026: ಸಚಿವ ಮಧುಬಂಗಾರಪ್ಪ ಸುದ್ದಿಗೋಷ್ಠಿ ನೇರಪ್ರಸಾರ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ಯಾರು‌ ಮತದಾನ ಮಾಡಿಲ್ಲ ಹೋಗಿ ಓಟ್ ಮಾಡಿ: ಮಸೀದಿಯಿಂದ ಸಂದೇಶ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ತರಾಟೆ
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​
ದ್ವಿತೀಯ ಪಿಯು ರಿಸಲ್ಟ್: ಕಾಮರ್ಸ್​​ನಲ್ಲಿ ಮಂಗಳೂರಿನ ದಿಶಾ ಟಾಪರ್​​