Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಿಮೆಯಾಯ್ತು ಭಾರತಕ್ಕೆ ಬರುವ ರಷ್ಯಾ ತೈಲ; ಹೆಚ್ಚಾಯ್ತು ಸೌದಿ ತೈಲ; ಏನು ಕಾರಣ?

Indian Oil Imports: ಒಂದೆಡೆ ರಷ್ಯಾದಿಂದ ಭಾರತ ತೈಲ ಆಮದನ್ನು ಕಡಿಮೆ ಮಾಡಿದರೆ, ಸೌದಿ ಅರೇಬಿಯಾದಿಂದ ಪೂರೈಕೆ ಹೆಚ್ಚಿಸಿದೆ. ಭಾರತಕ್ಕೆ ಅತಿಹೆಚ್ಚು ತೈಲ ಪೂರೈಸುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಯುಎಇಯನ್ನು ಸೌದಿ ಅರೇಬಿಯ ಹಿಂದಿಕ್ಕಿದೆ. ಸೌದಿ ಅರೇಬಿಯಾ ಮತ್ತು ಇರಾಕ್ ಎರಡೂ ದೇಶಗಳಿಂದ ಭಾರತಕ್ಕೆ ಪೂರೈಕೆಯಾಗುವ ಒಟ್ಟು ತೈಲ ಆಮದು ರಷ್ಯಾದ್ದನ್ನು ಮೀರಿಸುತ್ತದೆ.

ಕಡಿಮೆಯಾಯ್ತು ಭಾರತಕ್ಕೆ ಬರುವ ರಷ್ಯಾ ತೈಲ; ಹೆಚ್ಚಾಯ್ತು ಸೌದಿ ತೈಲ; ಏನು ಕಾರಣ?
ಕಚ್ಛಾ ತೈಲ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 01, 2023 | 11:48 AM

ನವದೆಹಲಿ, ನವೆಂಬರ್ 1: ರಷ್ಯಾದಿಂದ ತೈಲ ಆಮದನ್ನು ಭಾರತ ಕಡಿಮೆ ಮಾಡಿದೆ. ರಷ್ಯಾದಿಂದ ಶೇ. 43ರಷ್ಟು ಇದ್ದ ಕಚ್ಚಾ ತೈಲ ಆಮದು (crude oil imports) ಈಗ ಶೇ. 35ಕ್ಕೆ ಬಂದಿದೆ. ಇನ್ನೊಂದೆಡೆ ಸೌದಿ ಅರೇಬಿಯಾ ಮತ್ತು ಇರಾಕ್ ದೇಶಗಳಿಂದ ತೈಲ ಪೂರೈಕೆಯನ್ನು ಭಾರತ ಹೆಚ್ಚಿಸಿದೆ. ರಷ್ಯಾದಿಂದ ತೈಲ ಪಡೆಯುವುದನ್ನು ಭಾರತ ಕಡಿಮೆ ಮಾಡಲು ಪ್ರಮುಖ ಕಾರಣವೆಂದರೆ, ಬೆಲೆ ಹೆಚ್ಚಳ. ರಷ್ಯಾ ಈಗ ಮೊದಲಿನಂತೆ ದೊಡ್ಡ ಮಟ್ಟದ ಡಿಸ್ಕೌಂಟ್ ಕೊಡುತ್ತಿಲ್ಲ. ರಿಯಾಯಿತಿ ಬಹಳಷ್ಟು ಕಡಿಮೆ ಮಾಡಿದೆ. ಇದರಿಂದ ಭಾರತದ ತೈಲ ಕಂಪನಿಗಳಿಗೆ ಹೆಚ್ಚಿನ ಅನುಕೂಲ ತರುತ್ತಿಲ್ಲ. ಈ ಕಾರಣಕ್ಕೆ ಪೆಟ್ರೋಲಿಯಂ ಕಂಪನಿಗಳು ರಷ್ಯಾದ ಉರಲ್ (ತೈಲ) ಆಮದು ಕಡಿಮೆ ಮಾಡಿವೆ.

ರಷ್ಯಾದ ತೈಲ ಆಮದನ್ನು ಭಾರತೀಯ ಕಂಪನಿಗಳು ಕಡಿಮೆ ಮಾಡಲು ಇನ್ನೊಂದು ಅಸ್ಪಷ್ಟ ಕಾರಣ ಇದೆ. ರಷ್ಯಾದ ತೈಲ ಆಮದಿಗೆ ಅಮೆರಿಕ ಒಂದು ಬ್ಯಾರಲ್​ಗೆ 60 ಡಾಲರ್ ದರದ ಮಿತಿ ಹಾಕಿದೆ. ಈ ನಿಯಮ ಮೀರಿ ರಷ್ಯಾ ತೈಲ ಸಾಗಿಸುತ್ತಿದ್ದ ಎರಡು ಟ್ಯಾಂಕರುಗಳನ್ನು ಅಮೆರಿಕ ತನಿಖೆಗೊಳಪಡಿಸಿದೆ. ಈ ಮೂಲಕ ಅಮೆರಿಕ ಬಹಿಷ್ಕಾರ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವ ಸೂಚನೆ ಇದೆ. ಹೀಗಾಗಿ, ಭಾರತೀಯ ಕಂಪನಿಗಳು ರಷ್ಯಾದಿಂದ ತೈಲ ಪೂರೈಕೆಯನ್ನು ಕಡಿಮೆ ಮಾಡುತ್ತಿರಬಹುದು ಎನ್ನಲಾಗಿದೆ.

ಇದನ್ನೂ ಓದಿ: LPG Cylinder Price: ದೀಪಾವಳಿ ಹೊಸ್ತಿಲಲ್ಲಿ ಗ್ರಾಹಕರಿಗೆ ಶಾಕ್, ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

ಯುಎಇ ಮೀರಿಸಿದ ಸೌದಿ

ಒಂದೆಡೆ ರಷ್ಯಾದಿಂದ ಭಾರತ ತೈಲ ಆಮದನ್ನು ಕಡಿಮೆ ಮಾಡಿದರೆ, ಸೌದಿ ಅರೇಬಿಯಾದಿಂದ ಪೂರೈಕೆ ಹೆಚ್ಚಿಸಿದೆ. ಭಾರತಕ್ಕೆ ಅತಿಹೆಚ್ಚು ತೈಲ ಪೂರೈಸುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಯುಎಇಯನ್ನು ಸೌದಿ ಅರೇಬಿಯ ಹಿಂದಿಕ್ಕಿದೆ. ಸೌದಿ ಅರೇಬಿಯಾ ಮತ್ತು ಇರಾಕ್ ಎರಡೂ ದೇಶಗಳಿಂದ ಭಾರತಕ್ಕೆ ಪೂರೈಕೆಯಾಗುವ ಒಟ್ಟು ತೈಲ ಆಮದು ರಷ್ಯಾದ್ದನ್ನು ಮೀರಿಸುತ್ತದೆ.

ಅಕ್ಟೋಬರ್ ತಿಂಗಳಲ್ಲಿ ರಷ್ಯಾದಿಂದ ಭಾರತ ದಿನಕ್ಕೆ 15 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ. ಅದೇ ವೇಳೆ, ಸೌದಿ ಅರೇಬಿಯಾದಿಂದ ದಿನಕ್ಕೆ ಮಾಡಿಕೊಳ್ಳುವ ತೈಲ ಆಮದು 8.71 ಲಕ್ಷದಷ್ಟಿದೆ. ಹಿಂದಿನ ತಿಂಗಳು, ಅಂದರೆ ಸೆಪ್ಟೆಂಬರ್​ನಲ್ಲಿ ಇದೇ ಸೌದಿ ಅರೇಬಿಯಾದಿಂದ ಭಾರತೀಯ ಕಂಪನಿಗಳು ಸರಾಸರಿಯಾಗಿ ದಿನವೊಂದಕ್ಕೆ 4.84 ಲಕ್ಷ ಬ್ಯಾರಲ್ ತೈಲಗಳನ್ನು ಆಮದು ಮಾಡಿಕೊಳ್ಳುತ್ತಿದ್ದವು. ಅಕ್ಟೋಬರ್​ನಲ್ಲಿ ಈ ಪ್ರಮಾಣ ಬಹುತೇಕ ಡಬಲ್ ಆಗಿದೆ. ಇನ್ನೊಂದೆಡೆ, ಸೆಪ್ಟೆಂಬರ್​ಗೆ ಹೋಲಿಸಿದರೆ ಅಕ್ಟೋಬರ್​ನಲ್ಲಿ ರಷ್ಯಾದಿಂದ ಆದ ತೈಲ ಅಮದು ಶೇ. 15ರಷ್ಟು ಕಡಿಮೆ ಆಗಿದೆ.

ಇದನ್ನೂ ಓದಿ: ಗಂಡಸರಿಗಿಂತ ಹೆಂಗಸರು ಒಳ್ಳೆಯ ಇನ್ವೆಸ್ಟರ್​ಗಳಾಗ್ತಾರಂತೆ; ಸೆಬಿ ಸದಸ್ಯ ಅನಂತನಾರಾಯಣ್ ಕೊಟ್ಟ ಕಾರಣ ಬಹಳ ಇಂಟರೆಸ್ಟಿಂಗ್

ರಷ್ಯಾ ದೇಶ ಜನವರಿಯಲ್ಲಿ ತನ್ನ ಕಚ್ಛಾ ತೈಲವನ್ನು ಬ್ಯಾರಲ್​ಗೆ ಸರಾಸರಿಯಾಗಿ 60 ಡಾಲರ್​ನಂತೆ ಮಾರುತ್ತಿತ್ತು. ಮಾರುಕಟ್ಟೆ ದರಕ್ಕಿಂತ 22 ಡಾಲರ್​ನಷ್ಟು ಕಡಿಮೆ ಬೆಲೆಗೆ ಅದು ನೀಡುತ್ತಿತ್ತು. ಈಗ ಅದು ಬ್ಯಾರಲ್​ಎ 86 ಡಾಲರ್​ನಂತೆ ಮಾರುತ್ತಿದೆ. ಡಿಸ್ಕೌಂಟ್ ಪ್ರಮಾಣ 22 ಡಾಲರ್ ಇದ್ದದ್ದು 7 ಡಾಲರ್​ಗೆ ಇಳಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ