AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Share Market: ಸತತ ಮೂರನೇ ದಿನ ಕುಸಿತದೊಂದಿಗೆ ವಹಿವಾಟು ಆರಂಭಿಸಿದ ಷೇರುಪೇಟೆ, ಚೀನಾದ್ದೇ ಆತಂಕ

BSE NSE: ಆರಂಭಿಕ ವಹಿವಾಟಿನಲ್ಲಿ ಬಿಎಸ್​ಐ ಸೆನ್ಸೆಕ್ಸ್ 361.86 ಅಂಶಗಳ ಕುಸಿತ ಕಂಡರೆ, ಎನ್​ಎಸ್​ಇ 114.70 ಅಂಶಗಳ ಕುಸಿತ ದಾಖಲಿಸಿತ್ತು.

Share Market: ಸತತ ಮೂರನೇ ದಿನ ಕುಸಿತದೊಂದಿಗೆ ವಹಿವಾಟು ಆರಂಭಿಸಿದ ಷೇರುಪೇಟೆ, ಚೀನಾದ್ದೇ ಆತಂಕ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 23, 2022 | 10:19 AM

ಮುಂಬೈ: ಉಕ್ರೇನ್​ ಮೇಲೆ ರಷ್ಯಾದ ದಾಳಿ ಮತ್ತಷ್ಟು ತೀವ್ರಗೊಳ್ಳುವ ಭೀತಿ, ತೈವಾನ್ ವಿವಾದ ಪಡೆದುಕೊಳ್ಳಬಹುದಾದ ತಿರುವಿನ ಬಗ್ಗೆ ಅಸ್ಪಷ್ಟತೆ, ಯೂರೋಪ್​ನಲ್ಲಿನ ಇಂಧನ ಬಿಕ್ಕಟ್ಟು, ತೈಲೋತ್ಪಾದನೆ ಕಡಿಮೆ ಮಾಡುವುದಾಗಿ ಒಪೆಕ್ ದೇಶಗಳ ಘೋಷಣೆ ಸೇರಿದಂತೆ ಹಲವು ಕಾರಣಗಳಿಂದ ಭಾರತದ ಷೇರುಪೇಟೆಯಲ್ಲಿ (Indian Share Market) ನಿರುತ್ಸಾಹ ಮೂಡಿತ್ತು. ಮಂಗಳವಾರ (ಆಗಸ್ಟ್​ 23) ಷೇರುಪೇಟೆಯು ಕುಸಿತದೊಂದಿಗೆ ವಹಿವಾಟು ಅರಂಭಿಸಿತು. ಇದು ಬಿಎಸ್​ಇ (BSE) ಮತ್ತು ಎನ್​ಎಸ್​ಇಗಳ (NSE) ಸತತ 3ನೇ ದಿನದ ಕುಸಿತವಾಗಿದೆ. ಚೀನಾದಲ್ಲಿ ಆರ್ಥಿಕ ಹಿಂಜರಿತದ ಭೀತಿ ಎದುರಾಗಿದ್ದರೆ, ಏಷ್ಯಾದ ಆರು ಪ್ರಮುಖ ಷೇರುಪೇಟೆಗಳಲ್ಲಿ ಸತತ ಆರನೇ ದಿನ ಕುಸಿತ ಮುಂದುವರಿದಿದೆ. ಭಾರತದಲ್ಲಿ ಕುಸಿತದೊಂದಿಗೆ ವಹಿವಾಟು ಆರಂಭವಾದರೂ, ಸ್ವಲ್ಪ ಕಾಲದಲ್ಲಿಯೇ ಎರಡೂ ಸೂಚ್ಯಂಕಗಳು ಚೇತರಿಸಿಕೊಂಡವು.

ಆರಂಭಿಕ ವಹಿವಾಟಿನಲ್ಲಿ ಬಿಎಸ್​ಐ ಸೆನ್ಸೆಕ್ಸ್ 361.86 ಅಂಶಗಳ ಕುಸಿತ ಕಂಡರೆ, ಎನ್​ಎಸ್​ಇ 114.70 ಅಂಶಗಳ ಕುಸಿತ ದಾಖಲಿಸಿತ್ತು. ಬೆಳಿಗ್ಗೆ 9:16ರ ಅವಧಿಯಲ್ಲಿ ಬಿಎಸ್​ಇ ಸೆನ್ಸೆಕ್ಸ್ 58,449.02 ಮತ್ತು ನಿಫ್ಟಿ 17,375 ಅಂಶಗಳಲ್ಲಿ ವಹಿವಾಟು ನಡೆಸುತ್ತಿತ್ತು. 10 ಗಂಟೆಯ ವೇಳೆಗೆ ಪರಿಸ್ಥಿತಿ ಬದಲಾಯಿತು. ನಿನ್ನೆ ವಹಿವಾಟು ಕೊನೆಗೊಂಡಿದ್ದಕ್ಕೆ ಹೋಲಿಸಿದರೆ ಬಿಎಸ್​ಇ 248.24 ಹಾಗೂ ನಿಫ್ಟಿ 85.60 ಅಂಶಗಳ ಮುನ್ನಡೆ ದಾಖಲಿಸಿದವು. ಸೆನ್ಸೆಕ್ಸ್ ಮತ್ತೆ 60,000 ಅಂಶಗಳ ಸಮೀಪಕ್ಕೆ ಮುನ್ನುಗ್ಗುತ್ತಿದೆ.

ನಿನ್ನೆ (ಆಗಸ್ಟ್ 22) ದಿನ ವಹಿವಾಟು ಮುಗಿಯುವಾಗ ಎರಡೂ ಸೂಚ್ಯಂಕಗಳು ಶೇ 1.5ರಷ್ಟು ಕುಸಿತ ಕಂಡಿದ್ದವು. ವಿಶ್ವದ ಹಲವೆಡೆ ಕೇಂದ್ರೀಯ ಬ್ಯಾಂಕ್​ಗಳು ಬಡ್ಡಿದರ ಹೆಚ್ಚಳಕ್ಕೆ ಮುಂದಾಗಿರುವುದು ಹೂಡಿಕೆದಾರರ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಿತ್ತು. ಇದರ ಜೊತೆಗೆ ಚೀನಾದ ರಿಯಲ್​ ಎಸ್ಟೇಟ್ ಕಂಪನಿಗಳ ಸಂಕಷ್ಟ ಸಹ ಇದೇ ಹೊತ್ತಿಗೆ ಬೆಳಕಿಗೆ ಬಂದಿದ್ದು ಹೂಡಿಕೆದಾರರ ನಿರ್ಧಾರದ ಮೇಲೆ ಪರಿಣಾಮ ಬೀರಿತು. ಚೀನಾದ ರಿಯಲ್​ ಎಸ್ಟೇಟ್ ಕಂಪನಿಗಳಿಗೆ ಕಡಿಮೆ ಬಡ್ಡಿಯ ಸಾಲ ಒದಗಿಸುವುದು ಮತ್ತು ಮನೆಗಳನ್ನು ಕೊಳ್ಳುವ ಗ್ರಾಹಕರು ಪಡೆಯುವ ಸಾಲದ ಮೇಲೆ ಹಲವು ರಿಯಾಯ್ತಿಗಳನ್ನು ಘೋಷಿಸಲು ಚೀನಾ ಸರ್ಕಾರ ಮುಂದಾಗಿದೆ. ಈವರೆಗೆ ಗಾಳಿಮಾತಿನಂತಿದ್ದ ಚೀನಾ ಆರ್ಥಿಕ ಹಿಂಜರಿತದ ಭೀತಿಗೆ ಈ ಬೆಳವಣಿಗೆ ನೀರೆರೆದಿದೆ.

Published On - 10:19 am, Tue, 23 August 22

ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ