AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂಗಳಿಗೆ ಮಾತ್ರ ಮನೆ ಕೊಡ್ತೀವಿ, ಮುಸ್ಲಿಂ ಆದ್ರೆ ಬೇಡ: ಸ್ಕ್ರೀನ್​ಶಾಟ್​ ಜೊತೆಗೆ ದುಃಖ ತೋಡಿಕೊಂಡ ಮಹಿಳೆ

‘ಎಲ್ಲರೂ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ, ನನ್ನ ಆಗಸ್ಟ್​ 15 ಹೀಗೆ ಕಳೆಯಿತು’ ಎಂದು ಹೈಫಾ ಒಕ್ಕಣೆ ಬರೆದುಕೊಂಡಿದ್ದಾರೆ.

ಹಿಂದೂಗಳಿಗೆ ಮಾತ್ರ ಮನೆ ಕೊಡ್ತೀವಿ, ಮುಸ್ಲಿಂ ಆದ್ರೆ ಬೇಡ: ಸ್ಕ್ರೀನ್​ಶಾಟ್​ ಜೊತೆಗೆ ದುಃಖ ತೋಡಿಕೊಂಡ ಮಹಿಳೆ
ಮುಸ್ಲಿಂ ಮಹಿಳೆ ಹಂಚಿಕೊಂಡಿರುವ ಸ್ಕ್ರೀನ್​ಶಾಟ್ (ಎಡಚಿತ್ರ). ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ವೈರಲ್ ಆಗಿದ್ದ ಫೋಟೊ
TV9 Web
| Edited By: |

Updated on:Aug 23, 2022 | 7:40 AM

Share

ಬೆಂಗಳೂರು: ನಗರದಲ್ಲಿ ಬಾಡಿಗೆಗೆ ಮನೆ (Rent House) ಹುಡುಕುವುದು ಹುಡುಗಾಟದ ಮಾತಲ್ಲ. ಮೊದಲು ಮನೆ ಹಿಡಿಸಬೇಕು, ಮಾಲೀಕರಿಗೆ ಬಾಡಿಗೆದಾರರು, ಬಾಡಿಗೆದಾರರಿಗೆ ಮಾಲೀಕರು ಇಷ್ಟವಾಗಬೇಕು, ಅಕ್ಕಪಕ್ಕದವರು ಹೊಂದಿಕೊಳ್ಳುವಂಥವರಾಗಿರಬೇಕು ಇಷ್ಟೆಲ್ಲಾ ಆದ ಮೇಲೆ ಅಡ್ವಾನ್ಸ್​, ಬಾಡಿಗೆ, ಮನೆ ಬಿಡುವಾಗ ಪೇಂಟಿಂಗ್ ಇತ್ಯಾದಿ ಖರ್ಚುವೆಚ್ಚದ ನಿಷ್ಕರ್ಶೆಯಾಗಬೇಕು. ಇಷ್ಟೆಲ್ಲ ಆದ ಮೇಲೆ ಬಾಡಿಗೆ ಮನೆಗೆ ಗೃಹಪ್ರವೇಶ. ಪ್ರತಿ ಏರಿಯಾಗಳಲ್ಲಿಯೂ ಮನೆ ಹುಡುಕಿಕೊಡುವ ದಲ್ಲಾಳಿಗಳು ಮೊದಲಿನಿಂದಲೂ ಇದ್ದಾರೆ. ಈಗ ‘ನೊ ಬ್ರೋಕರ್ ಡಾ ಕಾಂ’ ಸೇರಿದಂತೆ ಹಲವು ಆನ್​ಲೈನ್ ಸೇವೆಗಳೂ ಲಭ್ಯವಿದೆ. ಇಷ್ಟೆಲ್ಲದರ ನಡುವೆ ಮನೆಗಾಗಿ ಹುಡುಕಾಡುವವರು ಆಹಾರ ಪದ್ಧತಿಯ ಬಗ್ಗೆಯೂ ಮಾಲೀಕರಿಂದ ಹಲವು ಪ್ರಶ್ನೆಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ.

‘ನೀವು ವೆಜ್ಜಾ? ನಾನ್​ವೆಜ್ಜಾ? (Vegetarian or Non Vegetarian) ಮನೇಲೀ ಮಟನ್ ಮಾಡ್ತೀರಾ? ಹೊರಗೇ ತಿಂದು ಬರ್ತೀರಾ?’ ಇತ್ಯಾದಿ ಪ್ರಶ್ನೆಗಳಿಗೂ ಬಾಡಿಗೆದಾರರು ಉತ್ತರ ಕೊಡಬೇಕಾದ ಪರಿಸ್ಥಿತಿ ಬೆಂಗಳೂರಿನಲ್ಲಿದೆ. ಮುಸ್ಲಿಮರು ಮನೆಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಬಂದಾಗ ‘ಹಿಂದೂಗಳಿಗೆ ಮಾತ್ರ’ ಎಂದು ಕೆಲ ಮನೆಗಳ ಮಾಲೀಕರು ಮುಖಕ್ಕೆ ಹೊಡೆದಂತೆ ಹೇಳುವುದು ಸಾಮಾನ್ಯ ಸಂಗತಿ. ಮನೆ ಬಾಡಿಗೆಗೆ ಕೇಳಿದವರು ಮತ್ತು ಮಾಲೀಕರ ನಡುವೆ ನಡೆದ ಇಂಥದ್ದೇ ಒಂದು ವಾಟ್ಸ್ಯಾಪ್ ಸಂವಾದದ ಸ್ಕ್ರೀನ್​ಶಾಟ್ (Screenshot of WhatsApp Chat) ಇದೀಗ ವೈರಲ್ ಆಗಿದೆ.

ಹೈಫಾ ಹೆಸರಿನ ಮಹಿಳೆಯು ಬೆಂಗಳೂರಿನ ವಿವಿಧೆಡೆ ಬಾಡಿಗೆ ಮನೆಗಾಗಿ ಹುಡುಕಾಡಿದ್ದಾರೆ. ಈ ವೇಳೆ ಮನೆ ಮಾಲೀಕರು ಮತ್ತು ಆಕೆಯ ನಡುವೆ ನಡೆದ ಸಂವಾದವನ್ನು ಹೈಫಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸಾಕಷ್ಟು ಜನರು ಈ ಟ್ವೀಟ್​ಗೆ ತಮ್ಮ ಅನುಭವಗಳನ್ನು, ಸಲಹೆಗಳನ್ನು ಉಲ್ಲೇಖಿಸಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಹಿಂದೂಗಳಿಗೆ ಮಾತ್ರ: ಮುಸ್ಲಿಮರಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ ಫಲಕ ಹಾಕಿದ ಮಾಲೀಕ

ಇಬ್ಬರು ಪ್ರತ್ಯೇಕ ಮನೆ ಮಾಲೀಕರೊಂದಿಗಿನ ಸಂವಾದವನ್ನು ಹೈಫಾ ಹಂಚಿಕೊಂಡಿದ್ದಾರೆ. ಒಂದು ಮಾತುಕತೆಯಲ್ಲಿ ಸಂಬಂಧಿಸಿದ ವ್ಯಕ್ತಿಯು, ‘ಮನೆ ಏನೋ ಲಭ್ಯವಿದೆ. ಆದರೆ ಮಾಲೀಕರು ಕೇವಲ ಹಿಂದೂಗಳಿಗೆ ಮಾತ್ರ ಕೊಡುವುದಾಗಿ ಹೇಳುತ್ತಿದ್ದಾರೆ’ ಎಂದು ಹೇಳಲಾಗಿದೆ. ‘ಎಲ್ಲರೂ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ, ನನ್ನ ಆಗಸ್ಟ್​ 15 ಹೀಗೆ ಕಳೆಯಿತು’ ಎಂದು ಹೈಫಾ ಒಕ್ಕಣೆ ಬರೆದುಕೊಂಡಿದ್ದಾರೆ.

11,000 ಲೈಕ್ ಮತ್ತು ಸಾವಿರಾರು ಮಂದಿಯ ಪ್ರತಿಕ್ರಿಯೆಯೊಂದಿಗೆ ಹೈಫಾ ಅವರ ಪೋಸ್ಟ್ ವೈರಲ್ ಆಗಿದೆ. ಸಮಾಜದ ಒಂದು ವರ್ಗವು ಅವರ ಪರಿಸ್ಥಿತಿಗೆ ವಿಷಾದ ವ್ಯಕ್ತಪಡಿಸಿದ್ದರೆ, ಒಂದಿಷ್ಟು ಜನರು ಮನೆ ಮಾಲೀಕರ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಹಲವರು ತಾವು ಅನುಭವಿಸಿದ ಸಂಕಷ್ಟವನ್ನೂ ವಿವರಿಸಿದ್ದಾರೆ.

ಇದಂತೂ ತೀರಾ ಖೇದಕರವಾದುದು ನಿಮಗೆ ಇಂಥ ಪರಿಸ್ಥಿತಿ ಬರಬಾರದಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ‘ಅದು ಅವರ ಮನೆ. ಅವರಿಗೆ ಒಂದಿಷ್ಟು ನಂಬಿಕೆಗಳು ಇರುತ್ತವೆ. ಅವರಿಗೆ ಇಷ್ಟ ಬಂದವರಿಗೆ ಮನೆ ಕೊಡುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

‘ನನಗೂ ಬೆಂಗಳೂರಿನಲ್ಲಿದ್ದಾಗ ಇಂಥದ್ದೇ ಅನುಭವವಾಗಿತ್ತು. ನಾವು ನಾಲ್ವರು ಗೆಳೆಯರು ಒಂದೆ ಮನೆ ಮಾಡಿಕೊಂಡಿದ್ದೆವು. ಈ ಪೈಕಿ ಇಬ್ಬರು ಹಿಂದೂಗಳು ಮತ್ತು ಇಬ್ಬರು ಮುಸ್ಲಿಮರು. ಮನೆ ಮಾಲೀಕರು ಕೇವಲ ಹಿಂದೂಗಳು ಮಾತ್ರ ಇರಬಹುದು ಎಂದು ತಾಕೀತು ಮಾಡಿದಾಗ ನಾವು ನಾಲ್ವರೂ ಆ ಮನೆಯಿಂದ ಹೊರಗೆ ಬಂದೆವು. ಈ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:40 am, Tue, 23 August 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್