AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ವರ್ಷ ಕೆಲಸ ಮಾಡಿ 45 ಲಕ್ಷ ರೂ ಸಂಬಳದ ಕೆಲಸ ಗಿಟ್ಟಿಸಿದ ಭಾರತೀಯ ಯುವಕ; ಈತ ಕೊಟ್ಟ ಟಿಪ್ಸ್ ಇದು

Jumping from 5.5 LPA to 45 LPA job in 1 year: ಸೋಷಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಜನರು ತಮ್ಮ ಅನುಭವ, ಯಶಸ್ಸು ಮತ್ತು ವೈಫಲ್ಯಗಳ ಕಥೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ದೇವೇಶ್ ಎನ್ನುವ ವ್ಯಕ್ತಿ ಎಕ್ಸ್​​​ನಲ್ಲಿ ಹಾಕಿದ ಒಂದು ಪೋಸ್ಟ್ ವೈರಲ್ ಆಗುತ್ತಿದೆ. ವರ್ಷದ ಹಿಂದೆ 5.5 ಲಕ್ಷ ರೂ ಸಂಬಳದ ಕೆಲಸಕ್ಕೆ ಸೇರಿದ ಈತನಿಗೆ ಈಗ 54 ಲಕ್ಷ ರೂ ಸಂಬಳದ ಕೆಲಸಕ್ಕೆ ಆಫರ್ ಸಿಕ್ಕಿದೆಯಂತೆ.

ಒಂದೇ ವರ್ಷ ಕೆಲಸ ಮಾಡಿ 45 ಲಕ್ಷ ರೂ ಸಂಬಳದ ಕೆಲಸ ಗಿಟ್ಟಿಸಿದ ಭಾರತೀಯ ಯುವಕ; ಈತ ಕೊಟ್ಟ ಟಿಪ್ಸ್ ಇದು
ದೇವೇಶ್ ಅವರ ಎಕ್ಸ್ ಪ್ರೊಫೈಲ್​​ನಲ್ಲಿರುವ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 28, 2025 | 4:56 PM

Share

ನವದೆಹಲಿ, ಮೇ 28: ಸಾಮಾನ್ಯವಾಗಿ ಉದ್ಯೋಗಿಗಳಿಗೆ ಸಂಬಳ ಡಬಲ್ ಆಗಲು ಏಳೆಂಟು ವರ್ಷಗಳೇ ಆಗಬಹುದು. ಆದರೆ, ದೆಹಲಿಯ ಸಾಫ್ಟ್​​ವೇರ್ ಎಂಜಿನಿಯರ್​​ವೊಬ್ಬರು ಒಂದೇ ವರ್ಷದಲ್ಲಿ ಬಹುತೇಕ ಎಂಟತ್ತು ಪಟ್ಟು ಹೆಚ್ಚು ಸಂಬಳದ ಕೆಲಸ ಗಿಟ್ಟಿಸಿದ್ದಾನೆ. ಈ ಕುರಿತು ಆತ ಎಕ್ಸ್​​ನಲ್ಲಿ ಒಂದು ಪೋಸ್ಟ್ ಹಾಕಿದ್ದು, ಅದು ಈಗ ವೈರಲ್ ಆಗುತ್ತಿದೆ. ಆ ಪೋಸ್ಟ್​​​ನಲ್ಲಿ ಬರೆದಿರುವ ಪ್ರಕಾರ, ಈತ ಸದ್ಯ ವರ್ಷಕ್ಕೆ 5.5 ಲಕ್ಷ ರೂ ಸಂಬಳದಲ್ಲಿದ್ದಾನೆ. ಆಗಲೇ 45 ಲಕ್ಷ ರೂ ಸಂಬಳದ ಕೆಲಸದ ಆಫರ್ ಪಡೆದಿದ್ದಾನಂತೆ. ಹಾಗಂತ, ದೇವೇಶ್ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವ ಈತ, ಮಹತ್ವ ಕೊಡಬೇಕಿರುವುದು ಕೆಲಸಕ್ಕೆ ಹೊರತು ಸಂಬಳಕ್ಕಲ್ಲ ಎನ್ನುವ ಸಲಹೆಯನ್ನೂ ನೀಡಿದ್ದಾನೆ.

‘ನಾನು ಐಬಿಎಂನಲ್ಲಿ 5.5 ಲಕ್ಷ ರೂ ಸಿಟಿಸಿಯೊಂದಿಗೆ ಒಂದು ವರ್ಷದ ಹಿಂದೆ ಪೂರ್ಣಾವಧಿ ವೃತ್ತಿ ಆರಂಭಿಸಿದೆ. ಈಗ ಒಂದು ವರ್ಷದೊಳಗೆ ನನಗೆ 45 ಲಕ್ಷ ರೂ ಸಿಟಿಸಿಯ ಕೆಲಸದ ಆಫರ್ ಬಂದಿದೆ. ನನ್ನಂಥ ಮಧ್ಯವರ್ಗದ ವ್ಯಕ್ತಿಗೆ ಇದು ಇನ್ನೂ ಕನಸಿನಂತೆಯೇ ಇದೆ’ ಎಂದು ದೇವೇಶ್ ತನ್ನ ಪೋಸ್ಟ್​​ನಲ್ಲಿ ಬರೆದಿದ್ದಾನೆ.

ಇದನ್ನೂ ಓದಿ: ಭಾರತಕ್ಕೆ ಎಷ್ಟು ಮಹತ್ವದ್ದು ಕಾವೇರಿ ಜೆಟ್ ಎಂಜಿನ್? ಚೀನಾಗೂ ಕಷ್ಟವಾಗಿರುವ ಈ ಸಿದ್ಧಿ ಪಡೆಯಲು ಸಫಲವಾಗುತ್ತಾ ಭಾರತ?

ದೇವೇಶ್ ಅವರ ಈ ಪೋಸ್ಟ್​​ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಇದೆಲ್ಲವೂ ವಾಸ್ತವದಲ್ಲಿ ಸಾಧ್ಯವಿಲ್ಲದ ಸಂಗತಿ. ಈತ ಹೇಳುತ್ತಿರುವುದು ಕಟ್ಟುಕಥೆ ಎಂಬಿತ್ಯಾದಿ ಕಾಮೆಂಟ್​​​ಗಳು ಬಂದಿವೆ. ಇದಾದ ಬಳಿಕ ದೇವೇಶ್ ಅವರು ಸರಣಿ ಪೋಸ್ಟ್ ಹಾಕಿ, ಯುವ ಉದ್ಯೋಗಾಂಕ್ಷಿಗಳಿಗೆ ಕೆಲ ಸಲಹೆಗಳನ್ನೂ ನೀಡಿದ್ದಾರೆ.

‘ಸಲಹೆ ನೀಡುವಷ್ಟು ಅನುಭವಿ ನಾನಲ್ಲವಾದರೂ ಒಂದು ಮಾತು ಹೇಳಲು ಬಯಸುತ್ತೇನೆ. ನಿಮ್ಮ ವೃತ್ತಿಯ ಆರಂಭದಲ್ಲಿ ಹಣದ ಬದಲು ಕೆಲಸಕ್ಕೆ ಆದ್ಯತೆ ಕೊಡಿ. ನಿಮಗೆ ಒಳ್ಳೆಯ ಪ್ಯಾಕೇಜ್ ಕೆಲಸದ ಆಫರ್ ಸಿಗಲಿಲ್ಲವೆಂದರೂ ಕಡಿಮೆ ಸಂಬಳದ ಕೆಲಸಕ್ಕೆ ಸೇರಿಕೊಂಡು, ಚೆನ್ನಾಗಿ ಕೆಲಸ ಮಾಡಿ ಬಳಿಕ ದೊಡ್ಡ ಜಂಪ್ ಪಡೆಯಿರಿ. ನೀವು ವೃತ್ತಿಜಗತ್ತಿಗೆ ಪ್ರವೇಶ ಪಡೆಯುವುದು ಮುಖ್ಯ’ ಎಂದು ದೇವೇಶ್ ಹೇಳಿದ್ದಾರೆ.

ಇದನ್ನೂ ಓದಿ: ವಯಸ್ಸಾದವರು ನಿರುಪಯುಕ್ತರಲ್ಲ; ದೇಶದ ಸಂಪತ್ತಿಗೆ ಕೊಡುಗೆ ನೀಡಬಲ್ಲರು: ರೋಹಿಣಿ ನಿಲೇಕಣಿ ಫಿಲಾಂಟ್ರೋಪೀಸ್

‘ಐದಾರು ಲಕ್ಷ ರೂ ಪ್ಯಾಕೇಜ್ ಪಡೆಯುತ್ತಿದ್ದವ ಹೇಗೆ 45 ಲಕ್ಷ ರೂ ಪ್ಯಾಕೇಜ್​ನ ಸಂಬಳಕ್ಕೆ ಜಂಪ್ ಮಾಡಲು ಸಾಧ್ಯವಾಯಿತು ಎಂದು ಹಲವು ಅನುಮಾನಿಸುತ್ತಿದ್ದಾರೆ. ಆದರೆ, MAANG ಅಥವಾ FAANG ಎಂದು ನಾವು ಏನು ಹೇಳುತ್ತೇವೋ, ಆ ಕಂಪನಿಗಳಲ್ಲಿ ಬೇಸಿಕ್ ಪೇ ಮತ್ತು ಸಿಟಿಸಿ ಮುಂಚಿತವಾಗಿ ನಿಗದಿಯಾಗಿರುತ್ತದೆ. ನಿಮ್ಮ ಹಿಂದಿನ ಸಂಬಳದ ಮೂಲಕ ನಿಮ್ಮನ್ನು ಆ ಕಂಪನಿಗಳು ಅಳೆಯುವುದಿಲ್ಲ. ಎಲ್ಲರಿಗೂ ಅದೇ ಸಂಬಳ ಇರುತ್ತದೆ,’ ಎಂದು ದೇವೇಶ್ ವಿವರಿಸಿದ್ದಾರೆ.

ದೇವೇಶ್ ತಮ್ಮ ಈ ಮೇಲಿನ ಪೋಸ್ಟ್​​​ನಲ್ಲಿ ಪ್ರಸ್ತಾಪಿಸಿದ FAANG ಎಂದರೆ ಫೇಸ್​​ಬುಕ್, ಆ್ಯಪಲ್, ಅಮೆಜಾನ್, ಗೂಗಲ್ ಇತ್ಯಾದಿ ತಂತ್ರಜ್ಞಾನ ಕಂಪನಿಗಳು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!