ಮನೆಗಳ ಸೇಲ್​ನಲ್ಲಿ ಹೆಚ್ಚಳ; ಬೆಂಗಳೂರೇ ನಂಬರ್ 1; ಮುಂಬೈ, ಪುಣೆಯಲ್ಲಿ ಅತಿಹೆಚ್ಚು ವಸತಿಗೃಹಗಳ ಮಾರಾಟ

Bengaluru tops in Rise of Residential Market: ದೆಹಲಿ ಎನ್​ಸಿಆರ್, ಮುಂಬೈ ಮೆಟ್ರೋಪೊಲಿಟನ್, ಬೆಂಗಳೂರು, ಪುಣೆ, ಚೆನ್ನೈ, ಕೋಲ್ಕತಾ, ಹೈದರಾಬಾದ್, ಅಹ್ಮದಾಬಾದ್ ನಗರಗಳ ವಸತಿ ಮಾರುಕಟ್ಟೆಯನ್ನು ಅವಲೋಕಿಸಿ ಪ್ರಾಪ್ ಟೈಗರ್ ಡಾಟ್ ಕಾಮ್ ಸಂಸ್ಥೆ ವರದಿ ಬಿಡುಗಡೆ ಮಾಡಿದೆ. 2023ರ ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಈ 2 ನಗರಗಳಲ್ಲಿ 1 ಲಕ್ಷಕ್ಕೂ ಹೆಚ್ಚು ವಸತಿ ಗೃಹಗಳು ಮಾರಾಟವಾಗಿವೆ. ಕಳೆದ ವರ್ಷದಕ್ಕಿಂತ ಶೇ. 22ರಷ್ಟು ಹೆಚ್ಚಳವಾಗಿದೆ. ಮಾರಾಟ ಹೆಚ್ಚಳದಲ್ಲಿ ಬೆಂಗಳೂರು ನಂಬರ್ ಒನ್ ಎನಿಸಿದೆ. ಕಳೆದ ವರ್ಷಕ್ಕಿಂತ ಇಲ್ಲಿ ಶೇ. 60ರಷ್ಟು ಮಾರಾಟಹೆಚ್ಚಳವಾಗಿದೆ.

ಮನೆಗಳ ಸೇಲ್​ನಲ್ಲಿ ಹೆಚ್ಚಳ; ಬೆಂಗಳೂರೇ ನಂಬರ್ 1; ಮುಂಬೈ, ಪುಣೆಯಲ್ಲಿ ಅತಿಹೆಚ್ಚು ವಸತಿಗೃಹಗಳ ಮಾರಾಟ
ವಸತಿ ಮಾರುಕಟ್ಟೆ
Follow us
|

Updated on:Dec 04, 2023 | 12:35 PM

ನವದೆಹಲಿ, ಡಿಸೆಂಬರ್ 4: ಭಾರತದಲ್ಲಿ ವಸತಿ ಮಾರುಕಟ್ಟೆ (housing market) ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ (2023 July-September Quarter) ಗಣನೀಯವಾಗಿ ಬೆಳೆದಿದೆ. ಬೆಂಗಳೂರು ಸೇರಿದಂತೆ ಭಾರತದ ಎಂಟು ಪ್ರಮುಖ ನಗರಗಳಲ್ಲಿ ಈ ಅವಧಿಯಲ್ಲಿ ಸೇಲ್ ಆಗಿರುವ ವಸತಿಗೃಹಗಳ (residence sales) ಸಂಖ್ಯೆ 1 ಲಕ್ಷ ದಾಟಿದೆ. 2022ರ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ 83,220 ಯೂನಿಟ್​ಗಳು ಮಾರಾಟವಾಗಿದ್ದರೆ ಈ ವರ್ಷದ ಈ ಮೂರು ತಿಂಗಳಲ್ಲಿ 1,01,220 ಮನೆಗಳ ಸೇಲ್ ಆಗಿದೆ. ಶೇ. 22, ಅಥವಾ 18,000ದಷ್ಟು ಹೆಚ್ಚು ಯೂನಿಟ್​ಗಳು ಈ ಬಾರಿಯ ಕ್ವಾರ್ಟರ್​ನಲ್ಲಿ ಮಾರಾಟವಾಗಿದೆ. ಪ್ರಾಪ್ ಟೈಗರ್ ಡಾಟ್ ಕಾಮ್ ಸಂಸ್ಥೆ (Prop Tiger) ತನ್ನ ವರದಿಯಲ್ಲಿ ಈ ಅಂಕಿ ಅಂಶಗಳನ್ನು ತೋರಿಸಿದೆ.

ಎಂಟು ನಗರಗಳಿವು: ದೆಹಲಿ ಎನ್​ಸಿಆರ್, ಮುಂಬೈ ಮೆಟ್ರೋಪಾಲಿಟನ್, ಪುಣೆ, ಬೆಂಗಳೂರು, ಚೆನ್ನೈ, ಕೋಲ್ಕತಾ, ಹೈದರಾಬಾದ್ ಮತ್ತು ಅಹ್ಮದಾಬಾದ್ ನಗರಗಳಲ್ಲಿನ ವಸತಿ ಮಾರುಕಟ್ಟೆಗಳಲ್ಲಿನ ಮಾರಾಟವನ್ನು ಈ ವರದಿಯಲ್ಲಿ ಅವಲೋಕಿಸಲಾಗಿದೆ.

ಇದನ್ನೂ ಓದಿ: ಭಾರತದ ಜಿಡಿಪಿ ಎಲ್ಲರ ಲೆಕ್ಕಾಚಾರ ಮೀರಿಸಿದ್ದು ಹೇಗೆ? ಇಲ್ಲಿದೆ ಕೆಲ ಪ್ರಮುಖ ಕಾರಣಗಳು

ಅಪಾರ್ಟ್ಮೆಂಟ್, ವಿಲ್ಲಾ ಮೊದಲಾದವುಗಳ ಮಾರಾಟದ ಅಂಕಿ ಅಂಶಗಳು ಇವು. ದೆಹಲಿ ಎನ್​ಸಿಆರ್ ಪ್ರದೇಶದಲ್ಲಿ ದೆಹಲಿ ಮಾತ್ರವಲ್ಲ, ಗುರುಗ್ರಾಮ್, ನೋಯ್ಡಾ, ಗ್ರೇಟರ್ ನೋಯ್ಡಾ, ಫರೀದಾಬಾದ್ ಮತ್ತು ಘಾಜಿಯಾಬಾದ್ ಪ್ರದೇಶಗಳು ಒಳಗೊಂಡಿವೆ. ಇನ್ನು, ಎಂಎಂಆರ್ ಅಥವಾ ಮುಂಬೈ ಮೆಟ್ರೊಪೊಲಿಟನ್ ರೀಜನ್​ನಲ್ಲಿ ಮುಂಬೈ, ಥಾಣೆ ಮತ್ತು ನವಿ ಮುಂಬೈ ಪ್ರದೇಶಗಳು ಸೇರಿವೆ.

ಬೆಂಗಳೂರಿನಲ್ಲಿ ಅತಿಹೆಚ್ಚು ಶೇಕಡಾವಾರು ಮಾರಾಟ ಹೆಚ್ಚಳ

ಪ್ರಾಪ್ ಟೈಗರ್ ಡಾಟ್ ಕಾಮ್​ನ ದತ್ತಾಂಶದ ಪ್ರಕಾರ, ಬೆಂಗಳೂರಿನಲ್ಲಿ ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ವಸತಿಗಳ ಮಾರಾಟ ಪ್ರಮಾಣ ಶೇ. 60ರಷ್ಟು ಹೆಚ್ಚಾಗಿದೆ. ದೆಹಲಿ ಎನ್​ಸಿಆರ್ ಮತ್ತು ಕೋಲ್ಕತಾದಲ್ಲಿ ವಸತಿ ಮಾರಾಟ ಪ್ರಮಾಣ ಶೇ. 40ಕ್ಕಿಂತಲೂ ಹೆಚ್ಚಾಗಿದೆ. ಚೆನ್ನೈನಲ್ಲಿ ಮಾರಾಟ ಶೇ. 12ರಷ್ಟು ಕಡಿಮೆ ಆಗಿದೆ. ಎಂಟು ಮಹಾನಗರಗಳ ಪೈಕಿ ಮಾರಾಟದಲ್ಲಿ ಇಳಿಕೆ ಆಗಿರುವುದು ಚೆನ್ನೈನಲ್ಲಿ ಮಾತ್ರ.

ಇದನ್ನೂ ಓದಿ: 8th Pay Commission: ಎಲೆಕ್ಷನ್ ಬಂತು, 8ನೇ ವೇತನ ಆಯೋಗ ರಚನೆಯಾಗುತ್ತಾ? ಸರ್ಕಾರದಿಂದ ಅಪ್​ಡೇಟ್ ಇದು

ಮುಂಬೈ ಮತ್ತು ಪುಣೆಯಲ್ಲಿ ಅತಿಹೆಚ್ಚು ವಸತಿ ಮಾರಾಟ ಆಗುವುದು ಮುಂದುವುರಿದಿದೆ. ಎಂಟು ನಗರಗಳಿಂದ ಆದ ಒಟ್ಟೂ ವಸತಿ ಮಾರಾಟದಲ್ಲಿ ಪುಣೆ ಮತ್ತು ಮುಂಬೈ ಪಾಲು ಅರ್ಧದಷ್ಟಿರುವುದು ಗಮನಾರ್ಹ.

2023ರ ಜುಲೈ-ಸೆಪ್ಟೆಂಬರ್ ಕ್ವಾರ್ಟರ್​ನಲ್ಲಿ ಆದ ವಸತಿ ಮಾರಾಟ ಪ್ರಮಾಣ

  1. ಮುಂಬೈ (ಎಂಎಂಆರ್): 30,300 ಯೂನಿಟ್
  2. ಪುಣೆ: 18,560 ಯೂನಿಟ್
  3. ಹೈದರಾಬಾದ್: 14,190 ಯೂನಿಟ್
  4. ಬೆಂಗಳೂರು: 12,590 ಯೂನಿಟ್
  5. ಅಹ್ಮದಾಬಾದ್: 10,300 ಯೂನಿಟ್
  6. ದೆಹಲಿ ಎನ್​ಸಿಆರ್: 7,800 ಯೂನಿಟ್
  7. ಚೆನ್ನೈ: 3,870 ಯೂನಿಟ್
  8. ಕೋಲ್ಕತಾ: 3,610 ಯೂನಿಟ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:32 pm, Mon, 4 December 23

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ