AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಷಾಂತರ ಗ್ರಾಹಕರನ್ನು ಕಳೆದುಕೊಂಡ ಜಿಯೋ, ವೊಡಾಫೋನ್, ಏರ್ಟೆಲ್; ಏಕೈಕ ವಿನ್ನರ್ ಬಿಎಸ್ಸೆನ್ನೆಲ್

Trai report on july month mobile subscribers: ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಜುಲೈ ತಿಂಗಳಲ್ಲಿ ಒಟ್ಟು 31 ಲಕ್ಷ ಗ್ರಾಹಕರನ್ನು ಕಳೆದುಕೊಂಡಿವೆ. ರಿಲಾಯನ್ಸ್ ಜಿಯೋದಿಂದ 7.58 ಲಕ್ಷ ಬಳಕೆದಾರರು ದೂರವಾಗಿದ್ದಾರೆ. ಜುಲೈನಲ್ಲಿ ಬಿಎಸ್ಸೆನ್ನೆಲ್ 29 ಲಕ್ಷಕ್ಕೂ ಹೆಚ್ಚು ಹೊಸ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. 120 ಕೋಟಿ ಇರುವ ಒಟ್ಟಾರೆ ಗ್ರಾಹಕರ ಮಾರುಕಟ್ಟೆಯಲ್ಲಿ ಇದು ತೀರಾ ಸಣ್ಣ ಸಂಚಲನ ಎಂಬುದು ಹೌದು.

ಲಕ್ಷಾಂತರ ಗ್ರಾಹಕರನ್ನು ಕಳೆದುಕೊಂಡ ಜಿಯೋ, ವೊಡಾಫೋನ್, ಏರ್ಟೆಲ್; ಏಕೈಕ ವಿನ್ನರ್ ಬಿಎಸ್ಸೆನ್ನೆಲ್
ಭಾರ್ತಿ ಏರ್ಟೆಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 20, 2024 | 2:46 PM

Share

ನವದೆಹಲಿ, ಸೆಪ್ಟೆಂಬರ್ 20: ಇತ್ತೀಚೆಗೆ ರೀಚಾರ್ಜ್ ದರಗಳನ್ನು ಗಣನೀಯವಾಗಿ ಹೆಚ್ಚಿಸಿದ್ದ ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಸಂಸ್ಥೆಗಳು ಜುಲೈ ತಿಂಗಳಲ್ಲಿ ಬಹಳಷ್ಟು ಗ್ರಾಹಕರನ್ನು ಕಳೆದುಕೊಂಡಿವೆ. ಕಡಿಮೆ ದರಕ್ಕೆ 4ಜಿ ಸರ್ವಿಸ್ ಆಪರೇಟ್ ಮಾಡುತ್ತಿರುವ ಬಿಎಸ್ಸೆನ್ನೆಲ್ ಕಡೆಗೆ ಇವರೆಲ್ಲರೂ ವಲಸೆ ಹೋಗಿರುವಂತೆ ತೋರುತ್ತಿದೆ. ಜುಲೈನಲ್ಲಿ ಬಿಎಸ್ಸೆನ್ನೆಲ್ ಮಾತ್ರವೇ ಗ್ರಾಹಕರ ಬಳಗ ಹೆಚ್ಚಿಸಿಕೊಂಡಿರುವುದು. ಟೆಲಿಕಾಂ ನಿಯಂತ್ರಕ ಸಂಸ್ಥೆಯಾದ ಟ್ರಾಯ್, ಜುಲೈ ತಿಂಗಳ ದತ್ತಾಂಶ ಬಿಡುಗಡೆ ಮಾಡಿದೆ.

2024ರ ಜುಲೈ ತಿಂಗಳಲ್ಲಿ ಭಾರ್ತಿ ಏರ್ಟೆಲ್ ಅತಿಹೆಚ್ಚು ಗ್ರಾಹಕರನ್ನು ಕಳೆದುಕೊಂಡಿದೆ. ವೊಡಾಫೋನ್ ಐಡಿಯಾ ಸಂಸ್ಥೆಯೂ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಬ್​ಸ್ಕ್ರೈಬರ್ಸ್​ಗಳನ್ನು ದೂರ ಮಾಡಿಕೊಂಡಿದೆ. ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ರಿಲಾಯನ್ಸ್ ಜಿಯೋ ಕೂಡ ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡಿದೆಯಾದರೂ ತೀರಾ ಹೆಚ್ಚಿನ ಮೊತ್ತವಲ್ಲ.

ಟ್ರಾಯ್ ವರದಿ ಪ್ರಕಾರ, ಭಾರ್ತಿ ಏರ್ಟೆಲ್ 16.9 ಲಕ್ಷ, ವೊಡಾಫೋನ್ ಐಡಿಯಾ 14.1 ಲಕ್ಷ ಹಾಗು ರಿಲಾಯನ್ಸ್ ಜಿಯೋ 7.58 ಲಕ್ಷ ಬಳಕೆದಾರರನ್ನು ಕಳೆದುಕೊಂಡಿವೆ. ಈ ಮೂರೂ ಟೆಲಿಕಾಂ ಕಂಪನಿಗಳಿಂದ ಜುಲೈನಲ್ಲಿ ದೂರವಾದ ಗ್ರಾಹಕರ ಸಂಖ್ಯೆ 38 ಲಕ್ಷಕ್ಕೂ ಹೆಚ್ಚು. ಅದೇ ವೇಳೆ, ಬಿಎಸ್ಸೆನ್ನೆಲ್ ಪಡೆದುಕೊಂಡ ಗ್ರಾಹಕರ ಸಂಖ್ಯೆ 29.3 ಲಕ್ಷ.

ಇದನ್ನೂ ಓದಿ: ಅಪ್ಪ ಇಷ್ಟು ಶ್ರೀಮಂತ ಅಂತ ದೊಡ್ಡವಳಾಗೋವರೆಗೂ ಗೊತ್ತೇ ಇರ್ಲಿಲ್ಲ: ಅಚ್ಚರಿ ಹುಟ್ಟಿಸುತ್ತವೆ ವಾರನ್ ಬಫೆಟ್ ಮಗಳ ಮಾತುಗಳು

ಒಟ್ಟಾರೆ ದೂರವಾಣಿ ಸಬ್​ಸ್ಕ್ರಿಪ್ಷನ್ ಸಂಖ್ಯೆ ಇಳಿಮುಖ

ಕುತೂಹಲದ ಸಂಗತಿ ಎಂದರೆ ಜುಲೈ ತಿಂಗಳಲ್ಲಿ ಒಟ್ಟಾರೆ ಟೆಲಿಕಾಂ ಸಬ್​ಸ್ಕ್ರಿಪ್ಷನ್ಸ್ ಸಂಖ್ಯೆ ಇಳಿಮುಖವಾಗಿದೆ. ಜೂನ್ ಅಂತ್ಯದಲ್ಲಿ 120.564 ಕೋಟಿ ಸಿಮ್ ಸಬ್​ಸ್ಕ್ರಿಪ್ಷನ್ಸ್ ಇತ್ತು. ಜುಲೈನಲ್ಲಿ ಆ ಸಂಖ್ಯೆ 120.517 ಕೋಟಿ ಆಗಿದೆ. ಅಂದರೆ ಸುಮಾರು 4 ಲಕ್ಷಕ್ಕೂ ಅಧಿಕ ಜನರು ಬಳಕೆ ನಿಲ್ಲಿಸಿದ್ದಾರೆ. ಸಬ್​​ಸ್ಕ್ರಿಪ್ಷನ್ಸ್ ನಿಂತಿರುವುದು ಗ್ರಾಮೀಣ ಭಾಗದಲ್ಲೇ ಹೆಚ್ಚು.

ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್​ಗಳನ್ನು ಹೊಂದಿರುವವರು, ಹೆಚ್ಚಿನ ಟೆಲಿಕಾಂ ದರಗಳಿಂದಾಗಿ ಹೆಚ್ಚುವರಿ ಸಿಮ್ ಬಳಕೆಯನ್ನು ನಿಲ್ಲಿಸಿರುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಾಲ್ಡೀವ್ಸ್ ಸಂಕಷ್ಟಕ್ಕೆ ಭಾರತದಿಂದ ನೆರವು; ಎರಡನೇ ಬಾರಿ ಟ್ರೆಷರಿ ಬಿಲ್ ಪಾವತಿಗೆ ಗಡುವು ವಿಸ್ತರಣೆ

ಕರ್ನಾಟಕದಲ್ಲಿ ಸಾಕಷ್ಟು ಜನರಿಂದ ಪೋರ್ಟಿಂಗ್

ಮೊಬೈಲ್ ಸಂಖ್ಯೆ ಬದಲಾವಣೆ ಮಾಡದೆಯೇ ಒಂದು ಟೆಲಿಕಾಂ ಕಂಪನಿಯಿಂದ ಇನ್ನೊಂದು ಟೆಲಿಕಾಂ ಕಂಪನಿಗೆ ಸೇವೆ ಬದಲಿಸಿಕೊಳ್ಳುವುದಕ್ಕೆ ಪೋರ್ಟಿಂಗ್ ಎನ್ನುತ್ತಾರೆ. ಈ ರೀತಿ ಜೂನ್ ಮತ್ತು ಜುಲೈನಲ್ಲಿ ಅತಿಹೆಚ್ಚು ಪೋರ್ಟಿಂಗ್ ಆಗಿರುವುದು ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಕರ್ನಾಟಕ, ಮಧ್ಯಪ್ರದೇಶ ರಾಜ್ಯಗಳಲ್ಲಿನ ಗ್ರಾಹಕರಿಂದ ಎಂಬುದು ಟ್ರಾಯ್ ರಿಪೋರ್ಟ್​ನಿಂದ ತಿಳಿದುಬರುತ್ತದೆ. ಜುಲೈ ತಿಂಗಳಲ್ಲಿ ಸುಮಾರು 1.37 ಕೋಟಿ ಗ್ರಾಹಕರು ಮೊಬೈಲ್ ನಂಬರ್ ಪೋರ್ಟಿಂಗ್​ಗೆ ಮನವಿ ಸಲ್ಲಿಸಿದ್ದರೆನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ