AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಡಿಕಲ್ ಡಿವೈಸ್ ಕ್ಷೇತ್ರದ ಬೆಳವಣಿಗೆಗೆ ಪುಷ್ಟಿ ಕೊಡಲು ಸರ್ಕಾರದಿಂದ ಯೋಜನೆ; ಮೂರು ವರ್ಷಗಳಿಗೆ 500 ಕೋಟಿ ರೂ ವಿನಿಯೋಗ

Medical devices sector: ವೈದ್ಯಕೀಯ ಸಾಧನಗಳ ತಯಾರಿಕಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗುವಂತೆ ಸರ್ಕಾರ ಯೋಜನೆ ಹಾಕಿದೆ. ಈ ಉದ್ಯಮದ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಕ್ರಮಗಳನ್ನು ಈ ಯೋಜನೆಯಲ್ಲಿ ಹಾಕಲಾಗಿದೆ. ಮೂರು ವರ್ಷಗಳಿಗೆ ಸರ್ಕಾರ 500 ಕೋಟಿ ರೂ ಹಣವನ್ನು ಇದಕ್ಕಾಗಿ ವಿನಿಯೋಗಿಸಲಿದೆ.

ಮೆಡಿಕಲ್ ಡಿವೈಸ್ ಕ್ಷೇತ್ರದ ಬೆಳವಣಿಗೆಗೆ ಪುಷ್ಟಿ ಕೊಡಲು ಸರ್ಕಾರದಿಂದ ಯೋಜನೆ; ಮೂರು ವರ್ಷಗಳಿಗೆ 500 ಕೋಟಿ ರೂ ವಿನಿಯೋಗ
ಮೆಡಿಕಲ್ ಡಿವೈಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 10, 2024 | 5:05 PM

ನವದೆಹಲಿ, ನವೆಂಬರ್ 10: ಭಾರತದಲ್ಲಿ ಮೆಡಿಕಲ್ ಡಿವೈಸ್ ತಯಾರಿಕೆಯ ಉದ್ಯಮವನ್ನು ಬಲಪಡಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು ಅದಕ್ಕಾಗಿ 500 ಕೋಟಿ ರೂ ಆರಂಭಿಕ ಫಂಡಿಂಗ್ ಪ್ರಕಟಿಸಿದೆ. ವೈದ್ಯಕೀಯ ಸಾಧನಗಳ ಪ್ರಮುಖ ಬಿಡಿಭಾಗಗಳ ತಯಾರಿಕೆ, ಕೌಶಲ್ಯಾಭಿವೃದ್ಧಿ, ಕ್ಲಿನಿಕಲ್ ಸ್ಟಡಿಗಳಿಗೆ ನೆರವು, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಔದ್ಯಮಿಕ ಪ್ರಚಾರ ಇತ್ಯಾದಿ ಪ್ರಮುಖ ಕಾರ್ಯಗಳತ್ತ ಈ ಯೋಜನೆ ಗಮನ ಹರಿಸುತ್ತದೆ. ಮೂರು ವರ್ಷಗಳಿಗೆಂದು ಸರ್ಕಾರ ಈ ಯೋಜನೆಗೆ 500 ಕೋಟಿ ರೂ ಎತ್ತಿ ಇಟ್ಟಿದೆ.

ಮೆಡಕಲ್ ಡಿವೈಸ್ ಕ್ಲಸ್ಟರ್​ಗಳಿಗೆ ಸಾಮಾನ್ಯ ಸೌಲಭ್ಯಗಳು, ಕೆಪಾಸಿಟಿ ನಿರ್ಮಾಣ, ಕೌಶಲ್ಯಾಭಿವೃದ್ಧಿ ಇತ್ಯಾದಿ ಐದು ಪ್ರಮುಖ ಅಂಶಗಳು ಈ ಸ್ಕೀಮ್​ನ ವ್ಯಾಪ್ತಿಯಲ್ಲಿವೆ. ಆಮದು ಅವಲಂಬನೆ ಕಡಿಮೆ ಮಾಡಲು ಹೂಡಿಕೆ, ಕ್ಲಿನಿಕಲ್ ಸ್ಟಡಿ ನೆರವು ಕೂಡ ಇದರಡಿ ಬರುತ್ತದೆ.

ಇದನ್ನೂ ಓದಿ: ಗುಜರಿ ಅಂತ ಜರೀಬೇಡಿ… ಗುಜರಿ ಮಾರಿ ಸರ್ಕಾರ ಗಳಿಸಿದ್ದೆಷ್ಟು ನೋಡಿ

ಇನ್ನು, ಮೂಲಸೌಕರ್ಯ ಅಭಿವೃದ್ಧಿಗೆಂದೇ 110 ಕೋಟಿ ರೂ ಎತ್ತಿ ಇಡಲಾಗಿದೆ. ಆರ್ ಅಂಡ್ ಡಿ ಲ್ಯಾಬ್, ಡಿಸೈನ್, ಟೆಸ್ಟಿಂಗ್ ಸೆಂಟರ್, ಪ್ರಾಣಿ ಪ್ರಯೋಗಾಲಯ ಇತ್ಯಾದಿ 20 ಮೆಡಿಕಲ್ ಡಿವೈಸ್ ಕ್ಲಸ್ಟರ್​ಗಳ ನಿರ್ಮಾಣವಾಗಲಿದೆ.

ಭಾರತದ ವೈದ್ಯಕೀ ಸಾಧನಗಳ ಉದ್ಯಮವು ಏಷ್ಯಾದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 14 ಬಿಲಿಯನ್ ಡಾಲರ್ ಮಾರುಕಟ್ಟೆ ಗಾತ್ರ ಇರುವ ಈ ಉದ್ಯಮವು 2030ರೊಳಗೆ 30 ಬಿಲಿಯನ್ ಡಾಲರ್ ಗಾತ್ರಕ್ಕೆ ಬೆಳೆಯುವ ನಿರೀಕ್ಷೆ ಇದೆ.

ಇದನ್ನೂ ಓದಿ: ಭಾರತದಲ್ಲಿ ಚೊಚ್ಚಲ ಆ್ಯಪಲ್ ಆರ್ ಅಂಡ್ ಡಿ; ಅಮೆರಿಕ, ಚೀನಾ, ಜರ್ಮನಿ, ಇಸ್ರೇಲ್ ಸಾಲಿಗೆ ಭಾರತ

ಈ ಯೋಜನೆಯು ಮೆಡಿಕಲ್ ಡಿವೈಸ್ ಕ್ಷೇತ್ರಕ್ಕೆ ಗೇಮ್ ಚೇಂಜರ್ ಆಗಲಿದೆ ಎಂದು ಇದೇ ವೇಳೆ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ. ಇನ್ನು, ಇದೇ ಉದ್ಯಮದಲ್ಲಿರುವ ಪಾಲಿ ಮೆಡಕ್ಯೂರ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಹಿಮಾಂಶು ಬೇದ್ ಅವರು, ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ವಲಯದ ಬೆಳವಣಿಗೆಯ ವೇಗವನ್ನು ಇದು ಹೆಚ್ಚಿಸಲಿದೆ. ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಮೆಡಿಕಲ್ ಡಿವೈಸ್ ಕ್ಷೇತ್ರದಲ್ಲಿ ಪ್ರಮುಖ ರಫ್ತುದಾರ ದೇಶವೆನ್ನುವ ಭಾರತದ ಸ್ಥಾನವನ್ನು ಇದು ಇನ್ನಷ್ಟು ಬಲಪಡಿಸಲಿದೆ ಎಂದು ಹಿಮಾಂಶು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ