ನಿಮ್ಮ ಮ್ಯುಚುವಲ್ ಫಂಡ್ ಅಕೌಂಟ್​ಗೆ ನಾಮಿನಿ ಅಪ್​ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್

Know How To Nominate For Mutual Funds: ಮ್ಯುಚುವಲ್ ಫಂಡ್ ಇರುವ ಡೀಮ್ಯಾಟ್ ಖಾತೆಗೆ ನಾಮಿನೇಶನ್ ಡಿಕ್ಲೇರ್ ಮಾಡಲು ಜನವರಿ 1ರವರೆಗೆ ಸೆಬಿ ಕಾಲಾವಕಾಶ ವಿಸ್ತರಿಸಿದೆ. ಗಡುವಿನೊಳಗೆ ಆ ಕಾರ್ಯ ಮಾಡದೇ ಹೋದರೆ ನಿಮ್ಮ ಮ್ಯುಚುವಲ್ ಫಂಡ್ ಅಥವಾ ಷೇರು ಆಸ್ತಿ ಸ್ಥಗಿತಗೊಳ್ಳಬಹುದು. ನೀವು ನಾಮಿನಿ ಹೆಸರಿಸಲು ಇಚ್ಛಿಸದಿದ್ದರೆ ಅದನ್ನೂ ಕೂಡ ಘೋಷಣೆ ಮಾಡಿ ಖಚಿಪಡಿಸಬೇಕು. ನಾಮಿನೇಶನ್ ಹೇಗೆ ಅಪ್​ಡೇಟ್ ಮಾಡುವುದು ಎಂಬ ವಿವರ ಈ ಲೇಖನದಲ್ಲಿದೆ.

ನಿಮ್ಮ ಮ್ಯುಚುವಲ್ ಫಂಡ್ ಅಕೌಂಟ್​ಗೆ ನಾಮಿನಿ ಅಪ್​ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಮ್ಯುಚುವಲ್ ಫಂಡ್
Follow us
|

Updated on: Oct 01, 2023 | 10:56 AM

ಡೀಮ್ಯಾಟ್ ಅಕೌಂಟ್ ಹೊಂದಿರುವವರು ನಾಮಿನಿ ಘೋಷಣೆ ಘೋಷಿಸಲು (nomination) ಸೆಪ್ಟೆಂಬರ್ 30ಕ್ಕೆ ಇದ್ದ ಗಡುವನ್ನು (deadline) ಜನವರಿ 1ಕ್ಕೆ ವಿಸ್ತರಿಸಲಾಗಿದೆ. ಈ ಡೆಡ್​ಲೈನ್​ನೊಳಗೆ ನಾಮಿನಿಯನ್ನು ಘೋಷಿಸುವುದು ಕಡ್ಡಾಯ. ಅಥವಾ ನಾಮಿನಿ ಬೇಡ ಎಂದಾದರೆ ಘೋಷಣಾ ಪತ್ರದ ಮೂಲಕ ಅದನ್ನು ಸ್ಪಷ್ಟಪಡಿಸಬೇಕು ಎಂದು ಸೆಬಿ ಹೇಳಿದೆ. ನಾಮಿನಿ ಘೋಷಣೆಯನ್ನು ಸೆಬಿ ಕಳೆದ ವರ್ಷ, 2022ರ ಜೂನ್ 15ರಂದೇ ಹೊರಡಿಸಿದ ಸುತ್ತೋಲೆಯಲ್ಲಿ (circular) ತಿಳಿಸಿದೆ. ಒಂದು ವೇಳೆ ನಾಮಿನಿ ಸೇರಿಸಿಲ್ಲವಾದರೆ ನಿಮ್ಮ ಫೋಲಿಯೋಗಳನ್ನು (ಷೇರು ಮತ್ತಿತರ ಹಣಕಾಸು ಆಸ್ತಿ) ಫ್ರೀಜ್ ಮಾಡಲಾಗುತ್ತದೆ.

ಡೀಮ್ಯಾಟ್ ಖಾತೆಗೆ ನಾಮಿನೇಟ್ ಮಾಡುವುದು ಹೇಗೆ? ಇಲ್ಲಿದೆ ಕ್ರಮಗಳು

ಆಫ್​ಲೈನ್ ಮತ್ತು ಆನ್​ಲೈನ್ ಎರಡೂ ಮಾರ್ಗಗಳಲ್ಲಿ ಡೀಮ್ಯಾಟ್ ಖಾತೆಗೆ ನಾಮಿನಿ ಅಪ್​ಡೇಟ್ ಮಾಡಬಹುದು.

ಆಫ್​ಲೈನ್​ನಲ್ಲಿ ಮಾಡುವುದು: ನಿಮ್ಮ ಡೀಮ್ಯಾಟ್ ಅಕೌಂಟ್ ಇರುವ ಡೆಪಾಸಿಟರಿ ಪಾರ್ಟಿಸಿಪೆಂಟ್ ಏಜೆನ್ಸಿಗಳ ಕಚೇರಿಗೆ (ಡಿಪಿ ಆಫೀಸ್) ಹೋಗಿ ಅಲ್ಲಿ ನಾಮಿನೇಶನ್ ಅರ್ಜಿ ಸಲ್ಲಿಸುವ ಮೂಲಕ ನಾಮಿನಿ ಅಪ್​ಡೇಟ್ ಮಾಡಬಹುದು.

ಇದನ್ನೂ ಓದಿ: ಒಂದು ನೋಟು ಮುದ್ರಿಸಲು 4 ರೂ; 2,000 ರೂಗಳ 370 ಕೋಟಿ ನೋಟುಗಳನ್ನು ಪಡೆಯಲು ಸರಕಾರದಿಂದ 1,300 ಕೋಟಿ ರೂ ವೆಚ್ಚ

ಆನ್​ಲೈನ್​ನಲ್ಲಿ ನಾಮಿನೇಶನ್ ಸಲ್ಲಿಸುವ ಕ್ರಮಗಳು:

  • ಎನ್​ಎಸ್​ಡಿಎಲ್ ಪೋರ್ಟಲ್​ಗೆ ಹೋಗಿ: nsdl.co.in
  • ಹೋಮ್ ಪೇಜ್​ನಲ್ಲಿ ‘ನಾಮಿನೇಟ್ ಆನ್ಲೈನ್’ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಡಿಪಿ ಐಡಿ, ಕ್ಲೈಂಟ್ ಐಡಿ, ಪ್ಯಾನ್ ನಂಬರ್ ನಮೂದಿಸಿ. ಬಳಿಕ ಒಟಿಪಿ ಪಡೆದು ಅದನ್ನೂ ಸಲ್ಲಿಸಿ.
  • ನಾಮಿನೇಟ್ ಮಾಡುತ್ತೇವೆ ಮತ್ತು ನಾಮಿನೇಟ್ ಮಾಡುವುದಿಲ್ಲ ಎಂಬ ಎರಡು ಆಯ್ಕೆಗಳಿರುತ್ತವೆ.
  • ನಾಮಿನೇಟ್ ಮಾಡುವುದಾದರೆ ಆ ಆಯ್ಕೆ ಆರಿಸಿಕೊಂಡರೆ ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನಾಮಿನಿ ವಿವರ ಭರ್ತಿ ಮಾಡಿ.
  • ಇಸೈನ್ ಸರ್ವಿಸ್ ಪ್ರೊವೈಡರ್​ನ ಪೇಜ್ ಮೇಲೆ ಚೆಕ್ ಬಾಕ್ಸ್ ಅನ್ನು ಎನೇಬಲ್ ಮಾಡಿ. ಬಳಿಕ ಪ್ರೊಸೀಡ್ ಕ್ಲಿಕ್ ಮಾಡಿ.

ಇದಾದ ಬಳಿಕ ಒಟಿಪಿ ಬರುತ್ತದೆ. ಆ ನಂಬರ್ ಹಾಕಿದ ಬಳಿಕ ಡೆಪಾಸಿಟರಿ ಪಾರ್ಟಿಸಿಪೆಂಟ್ ಏಜೆನ್ಸಿಯಿಂದ ದೃಢೀಕರಣ ಬರಬಹುದು. ಅದಾದರೆ ನಿಮ್ಮ ಡೀಮ್ಯಾಟ್ ಅಕೌಂಟ್​ಗೆ ನಾಮಿನೇಶನ್ ಅಪ್​ಡೇಟ್ ಮಾಡಿದಂತಾಗುತ್ತದೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಹೂಡಿಕೆದಾರರು ನಾಮಿನಿ ಹೆಸರಿಸಲು ಡೆಡ್​ಲೈನ್ ಜನವರಿ 1ಕ್ಕೆ ವಿಸ್ತರಣೆ

ನಾಮಿನೇಶನ್ ವಿಚಾರವಾಗಿ ಇತರ ಕೆಲ ಮಾಹಿತಿ

  • ಖಾತೆದಾರ ಒಂದು ವೇಳೆ ಮೃತಪಟ್ಟಲ್ಲಿ ಅವರ ಆಸ್ತಿಗಳಿಗೆ ವಾರಸುದಾರರು ಇರಬೇಕು. ಯಾರು ಆ ವಾರಸುದಾರರು ಎಂದು ತಿಳಿಸುವುದೇ ನಾಮಿನೇಶನ್.
  • ಡೀಮ್ಯಾಟ್ ಅಕೌಂಟ್​ಗೆ ನಾವು ಗರಿಷ್ಠ 3 ಮಂದಿಯನ್ನು ನಾಮಿನಿಗಳಾಗಿ ಹೆಸರಿಸಬಹುದು.
  • ನೀವು ಒಮ್ಮೆ ನಾಮಿನಿ ಹೆಸರಿಸಿದಾಕ್ಷಣ ಅದೇ ಅಂತಿಮ ಎಂದೇನಿಲ್ಲ. ಯಾವುದೇ ಸಮಯದಲ್ಲೂ ಖಾತೆದಾರ ತನ್ನ ನಾಮಿನಿ ಬದಲಿಸಬಹುದು.
  • ಪ್ರಾಪ್ತ ವಯಸ್ಸಿನ ಡೀಮ್ಯಾಟ್ ಖಾತೆದಾರರು ಮಾತ್ರವೇ ನಾಮಿನಿಯನ್ನು ಘೋಷಿಸಬಹುದು. ಅಪ್ರಾಪ್ತರಿಗೆ ಈ ಅವಕಾಶ ಇರುವುದಿಲ್ಲ. ಆದರೆ, ಅಪ್ರಾಪ್ತರು ನಾಮಿನಿಗಳಾಗಬಹುದು.
  • ಟ್ರಸ್ಟ್, ಕಾರ್ಪೊರೇಟ್ ಕಂಪನಿ, ಪಾರ್ಟ್ನರ್​ಶಿಪ್ ಕಂಪನಿ ಇತ್ಯಾದಿಗಳು ನಾಮಿನಿಗಳನ್ನು ಘೋಷಿಸುವಂತಿಲ್ಲ. ಅಥವಾ ಇವರನ್ನೂ ನಾಮಿನಿಗಳಾಗಿ ಮಾಡುವಂತಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್
ರೈತರ ಮಕ್ಕಳಿಗೆ ಕನ್ಯೆ ಹುಡುಕಿ ಕೊಡಿ; ಜಿಲ್ಲಾಧಿಕಾರಿಗೆ ಮನವಿ ಮಾಡಿದ ಯುವಕ
ರೈತರ ಮಕ್ಕಳಿಗೆ ಕನ್ಯೆ ಹುಡುಕಿ ಕೊಡಿ; ಜಿಲ್ಲಾಧಿಕಾರಿಗೆ ಮನವಿ ಮಾಡಿದ ಯುವಕ
ಹಾಲಿನ ದರ ಹೆಚ್ಚಳ ಮಾಡಿದ್ದು ಸರ್ಕಾರವಲ್ಲ, ಕೆಎಂಎಫ್ ಎಂದಿದ್ದ ಸಿಎಂ ಉಲ್ಟಾ!
ಹಾಲಿನ ದರ ಹೆಚ್ಚಳ ಮಾಡಿದ್ದು ಸರ್ಕಾರವಲ್ಲ, ಕೆಎಂಎಫ್ ಎಂದಿದ್ದ ಸಿಎಂ ಉಲ್ಟಾ!
ಚುನಾಯಿತ ಜನಪ್ರತಿನಿಧಿ ಎಲ್ಲ ಸಮುದಾಯಳಿಗಾಗಿ ದುಡಿಯಬೇಕು: ಪ್ರಿಯಾಂಕ್ ಖರ್ಗೆ
ಚುನಾಯಿತ ಜನಪ್ರತಿನಿಧಿ ಎಲ್ಲ ಸಮುದಾಯಳಿಗಾಗಿ ದುಡಿಯಬೇಕು: ಪ್ರಿಯಾಂಕ್ ಖರ್ಗೆ
ಮೂರು ಡಿಸಿಎಂ ಬೇಡಿಕೆ ಈಗಿನ ಡಿಸಿಎಂಗೆ ಮೂಗುದಾರ ಹಾಕುವ ಹುನ್ನಾರ: ಸಿಟಿ ರವಿ
ಮೂರು ಡಿಸಿಎಂ ಬೇಡಿಕೆ ಈಗಿನ ಡಿಸಿಎಂಗೆ ಮೂಗುದಾರ ಹಾಕುವ ಹುನ್ನಾರ: ಸಿಟಿ ರವಿ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ