Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇದಾಂತವನ್ನು 6 ಕಂಪನಿಗಳಾಗಿ ವಿಭಜನೆ ಮಾಡಲು ನಿರ್ಧಾರ; ಇದರ ಕ್ರಮ ಹೇಗೆ?

Vedanta Demerger: ವೇದಾಂತ ರಿಸೋರ್ಸಸ್ ಲಿ ಸಂಸ್ಥೆ ತನ್ನ ವೇದಾಂತ ಲಿಯ ಡೀಮರ್ಜ್ ಮಾಡಲಿದ್ದು, ಆರು ಕಂಪನಿಗಳು ಹೊರಹೊಮ್ಮಲಿವೆ. ವೇದಾಂತ ಅಲೂಮಿನಿಯಮ್, ವೇದಾಂತ ಆಯಿಲ್ ಅಂಡ್ ಗ್ಯಾಸ್, ವೇದಾಂತ ಪವರ್, ವೇದಾಂತ ಸ್ಟೀಲ್ ಅಂಡ್ ಫೆರಸ್ ಮೆಟೀರಿಯಲ್ಸ್, ವೇದಾಂತ ಬೇಸ್ ಮೆಟಲ್ಸ್ ಮತ್ತು ವೇದಾಂತ ಲಿಮಿಟೆಡ್ ಎಂಬ ಕಂಪನಿಗಳು ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರಲಿವೆ. ಷೇರುಪೆಟೆಯಲ್ಲಿ ಇವು ಪ್ರತ್ಯೇಕವಾಗಿ ಲಿಸ್ಟ್ ಆಗಲಿವೆ.

ವೇದಾಂತವನ್ನು 6 ಕಂಪನಿಗಳಾಗಿ ವಿಭಜನೆ ಮಾಡಲು ನಿರ್ಧಾರ; ಇದರ ಕ್ರಮ ಹೇಗೆ?
ವೇದಾಂತ ಲಿಮಿಟೆಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 01, 2023 | 12:59 PM

ನವದೆಹಲಿ, ಅಕ್ಟೋಬರ್ 1: ಭಾರತದ ಅತಿದೊಡ್ಡ ಉದ್ಯಮಸಮೂಹಗಳಲ್ಲಿ ಒಂದಾದ ವೇದಾಂತ ಲಿ ಸಂಸ್ಥೆ (Vedanta Ltd) ಆರು ಪ್ರತ್ಯೇಕ ಕಂಪನಿಗಳಾಗಿ ವಿಭಜನೆ (demerger) ಹೊಂದಲು ನಿರ್ಧರಿಸಿದೆ. ವೇದಾಂತ ಲಿ ಸಂಸ್ಥೆಯಿಂದ ಐದು ಹೊಸ ಕಂಪನಿಗಳು ಪ್ರತ್ಯೇಕಗೊಳ್ಳಲಿವೆ. ತನ್ನ ಬೇರೆ ಬೇರೆ ವಿಭಾಗಗಳನ್ನು ಪ್ರತ್ಯೇಕ ಕಂಪನಿಯಾಗಿ ಮಾಡಿ ವ್ಯವಹಾರ ವೃದ್ಧಿಸುವುದು ವೇದಾಂತ ರಿಸೋರ್ಸಸ್ ಲಿಮಿಟೆಡ್​ನ ಆಲೋಚನೆ. ವೇದಾಂತ ಲಿ ಸಂಸ್ಥೆ ಈಗಾಗಲೇ ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿ. ಇದರಿಂದ ಡೀಮರ್ಜ್ ಆಗುವ ಇತರ ಐದು ಕಂಪನಿಗಳನ್ನೂ ಷೇರುಪೇಟೆಯಲ್ಲಿ ಲಿಸ್ಟ್ ಮಾಡಲು ಚಿಂತಿಸಲಾಗಿದೆ.

ವೇದಾಂತದ ಪ್ರಸ್ತಾವಿತ 6 ಕಂಪನಿಗಳು ಮತ್ತು ಸಿಇಒಗಳು

  1. ವೇದಾಂತ ಲಿಮಿಟೆಡ್
  2. ವೇದಾಂತ ಅಲೂಮಿನಿಯಮ್, ಸಿಇಒ ಜಾನ್ ಸ್ಲಾವನ್
  3. ವೇದಾಂತ ಆಯಿಲ್ ಅಂಡ್ ಗ್ಯಾಸ್, ಸಿಇಒ ಸ್ಟೀವ್ ಮೂರ್
  4. ವೇದಾಂತ ಪವರ್, ಸಿಇಒ ವಿಭವ್ ಅಗರ್ವಾಲ್
  5. ವೇದಾಂತ ಸ್ಟೀಲ್ ಅಂಡ್ ಫೆರಸ್ ಮೆಟೀರಿಯಲ್ಸ್, ಸಿಇಒ ನವೀನ್ ಜಾಜು
  6. ವೇದಾಂತ ಬೇಸ್ ಮೆಟಲ್ಸ್, ಸಿಇಒ ಕ್ರಿಸ್ ಗ್ರಿಫಿತ್

ಇದನ್ನೂ ಓದಿ: ಬೆಂಗಳೂರಲ್ಲಿ ಕಾರ್​ಪೂಲಿಂಗ್ ನಿಷೇಧಕ್ಕೆ ಸಾರಿಗೆ ಇಲಾಖೆ ಮುಂದು; 10,000 ರೂ ವರೆಗೆ ದಂಡ ವಿಧಿಸುವ ಸಾಧ್ಯತೆ

ತನ್ನ ವ್ಯವಹಾರಗಳನ್ನು ಸ್ವತಂತ್ರವಾಗಿ ಬೆಳೆಸುವ ಉದ್ದೇಶದಿಂದ ವೇದಾಂತ ರಿಸೋರ್ಸಸ್ ಲಿ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ. ವಿವಿಧ ರೇಟಿಂಗ್ ಸಂಸ್ಥೆಗಳು ವೇದಾಂತ ಬಗ್ಗೆ ಋಣಾತ್ಮಕವಾಗಿ ರೇಟಿಂಗ್ ಕೊಟ್ಟಿರುವ ಸಂದರ್ಭದಲ್ಲೇ ಡೀಮರ್ಜಿಂಗ್ ಮಾಡುವ ನಿರ್ಧಾರ ಹೊರಬಂದಿರುವುದು ಗಮನಾರ್ಹ.

ವೇದಾಂತ ಷೇರುದಾರರಿಗೆ ಸುಗ್ಗಿಯಾ?

ಡೀಮರ್ಜಿಂಗ್ ಪ್ರಸ್ತಾಪದ ಪ್ರಕಾರ, ವೇದಾಂತ ಲಿ ಸಂಸ್ಥೆಯ ಷೇರುಗಳನ್ನು ಆರು ಷೇರುಗಳಾಗಿ ವಿಭಜಿಸಲಾಗುತ್ತದೆ. ಈಗ ಅದರ ಷೇರುಬೆಲೆ 222 ರೂ ಇದೆ. ಆರು ಷೇರುಗಳಾಗಿ ವಿಭಜಿಸಿದರೆ ಪ್ರತೀ ಷೇರಿನ ಬೆಲೆ 37 ರೂ ಆಗುತ್ತದೆ. ಈಗಾಗಲೇ ಇರುವ ವೇದಾಂತದ ಷೇರುದಾರರಿಗೆ ಇತರ ಐದು ಸಂಸ್ಥೆಯ ಷೇರುಗಳು ಉಚಿತವಾಗಿ ಸಿಗುತ್ತದೆ. ಅಂತಿಮವಾಗಿ ಅವರ ಷೇರುಮೌಲ್ಯದಲ್ಲಿ ಏರುಪೇರಾಗುವುದಿಲ್ಲ. ಆದರೆ, ಆರು ಕಂಪನಿಗಳು ಉತ್ತಮ ಲಾಭ ಕಂಡರೆ ಷೇರುಬೆಲೆ ಏರುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಷೇರುದಾರರಿಗೆ ಲಾಭವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ನಿಮ್ಮ ಮ್ಯುಚುವಲ್ ಫಂಡ್ ಅಕೌಂಟ್​ಗೆ ನಾಮಿನಿ ಅಪ್​ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಅನಿಲ್ ಅಗರ್ವಾಲ್ ಮಾಲಕತ್ವದ ವೇದಾಂತ ಲಿ ಸಂಸ್ಥೆಯ ವ್ಯವಹಾರಗಳು ಬಹುತೇಕ ಗಣಿಗಾರಿಕೆಗೆ ಸಂಬಂಧಿಸಿದವು. ಭೂಮಿಯಿಂದ ಜಿಂಕ್, ಅಲೂಮಿನಿಯಮ್ ಇತ್ಯಾದಿ ಖನಿಜಗಳನ್ನು ಹೆಕ್ಕಿ ತಯಾರಿಸುತ್ತದೆ. ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಇತರ ಕೆಲ ದೇಶಗಳಲ್ಲೂ ಇದರ ಕಾರ್ಯಾಚರಣೆ ಇದೆ.

ಇದರ ಅಂಗಸಂಸ್ಥೆಯಾದ ಹಿಂದೂಸ್ತಾನ್ ಜಿಂಕ್ ವಿಶ್ವದಲ್ಲೇ ಅತಿದೊಡ್ಡ ಜಿಂಕ್ ಗಣಿಯನ್ನು ನಿರ್ವಹಿಸುತ್ತಿದೆ. ತಾಮ್ರದ ಉತ್ಪಾದನೆಯಲ್ಲಿ ವೇದಾಂತ ವಿಶ್ವದ ಪ್ರಮುಖ ಕಂಪನಿಗಳಲ್ಲಿ ಒಂದು. ಇದೀಗ ಸೆಮಿಕಂಡಕ್ಟರ್ ತಯಾರಿಕೆಗೆ ವೇದಾಂತ ಲಗ್ಗೆಹಾಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್