AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ ಟ್ರಾನ್ಸಾಕ್ಷನ್​ಗೆ ಬಯೋಮೆಟ್ರಿಕ್ ಅಥೆಂಟಿಕೇಶನ್; ನವಿ ಆ್ಯಪ್​ನಲ್ಲಿ ಹೊಸ ಫೀಚರ್

Navi UPI introduces biometric authentication at Global Fintech Festival: ನವಿ ಆ್ಯಪ್​ನಲ್ಲಿ ಯುಪಿಐ ವಹಿವಾಟು ನಡೆಸುವಾಗ ಬಯೋಮೆಟ್ರಿಕ್ ದೃಢೀಕರಣ ನೀಡುವ ಹೊಸ ಫೀಚರ್ ಪರಿಚಯಿಸಲಾಗಿದೆ. ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್​ಟೆಕ್ ಫೆಸ್ಟಿವಲ್​ನಲ್ಲಿ ನವಿ ಸಂಸ್ಥೆ ಇದನ್ನು ಘೋಷಿಸಿದೆ. ಬಯೋಮೆಟ್ರಿಕ್ ಅಥೆಂಟಿಕೇಶನ್ ಮಾತ್ರವಲ್ಲ, ಹೊಸ ಬಳಕೆದಾರರಿಗೆ ಅದರ ಆ್ಯಪ್ ಸ್ಥಾಪನೆ ಹಾಗೂ ಬಳಕೆಯ ಕ್ರಮವನ್ನೂ ಸರಳಗೊಳಿಸಿದೆ.

ಯುಪಿಐ ಟ್ರಾನ್ಸಾಕ್ಷನ್​ಗೆ ಬಯೋಮೆಟ್ರಿಕ್ ಅಥೆಂಟಿಕೇಶನ್; ನವಿ ಆ್ಯಪ್​ನಲ್ಲಿ ಹೊಸ ಫೀಚರ್
ನವಿ ಆ್ಯಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 09, 2025 | 1:12 PM

Share

ಮುಂಬೈ, ಅಕ್ಟೋಬರ್ 9: ಬೆಂಗಳೂರು ಮೂಲದ ನವಿ ಯುಪಿಐ ಸಂಸ್ಥೆ ಬಯೋಮೆಟ್ರಿಕ್ ಅಥೆಂಟಿಕೇಶನ್ (Biometric authentication) ಫೀಚರ್ ಅನ್ನು ಅನಾವರಣಗೊಳಿಸಿದೆ. ಹಾಗೆಯೇ, ಹೊಸ ಬಳಕೆದಾರರ ಸೇರ್ಪಡೆ ಕ್ರಮಗಳನ್ನೂ ಸರಳಗೊಳಿಸಿದೆ. ದೊಡ್ಡ ಮಟ್ಟದಲ್ಲಿ ಬಯೋಮೆಟ್ರಿಕ್ ಅನ್ನು ಪರಿಚಯಿಸಿದ ಮೊದಲ ಯುಪಿಐ ಆ್ಯಪ್ ಎನ್ನುವ ಹೆಗ್ಗಳಿಕೆ ನವಿಯದ್ದಾಗಿದೆ. ಈ ಹೊಸ ಫೀಚರ್​ನಿಂದ ಯುಪಿಐ ವಹಿವಾಟು ಹೆಚ್ಚು ಸುಲಭ ಮತ್ತು ಸುರಕ್ಷಿತವೆನಿಸುತ್ತದೆ. ಬಳಕೆದಾರರು ಟ್ರಾನ್ಸಾಕ್ಷನ್ ಮಾಡುವಾಗ ಪಿನ್ ನಮೂದಿಸುವ ಅವಶ್ಯಕತೆ ಇರುವುದಿಲ್ಲ. ಫೋನ್​ನಲ್ಲಿರುವ ಫಿಂಗರ್ ಪ್ರಿಂಟ್ ಅಥವಾ ಫೇಸ್ ರೆಕಗ್ನಿಶನ್ ಫೀಚರ್ ಬಳಸಿ ಟ್ರಾನ್ಸಾಕ್ಷನ್ ಅನ್ನು ದೃಢೀಕರಿಸುವ ಅವಕಾಶ ಸಿಗುತ್ತದೆ.

ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್ಟೆಕ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ನವಿ ಆ್ಯಪ್ ತನ್ನ ಹೊಸ ಫೀಚರ್​​ಗಳನ್ನು ಪ್ರಕಟಿಸಿದೆ. ನವಿ ಮಾತ್ರವಲ್ಲ, ಫೋನ್ ಪೇ, ಪೇಟಿಎಂ ಇತ್ಯಾದಿ ವಿವಿಧ ಯುಪಿಐ ಆ್ಯಪ್​ಗಳೂ ಕೂಡ ಬಯೋಮೆಟ್ರಿಕ್ ದೃಢೀಕರಣದ ಫೀಚರ್ ಅಳವಡಿಸುತ್ತಿವೆ.

ಇದನ್ನೂ ಓದಿ: PM SVANidhi Scheme: ಸ್ವಂತ ಉದ್ಯೋಗಿಗಳಿಗೆ ನೆರವಾಗುವ ಪಿಎಂ ಸ್ವನಿಧಿ ಸ್ಕೀಮ್ ಬಗ್ಗೆ ಮಾಹಿತಿ

ಬಯೋಮೆಟ್ರಿಕ್ ಅಥೆಂಟಿಕೇಶನ್, ಸುಲಭ, ಕ್ಷಿಪ್ರ ಮತ್ತು ಸುರಕ್ಷಿತ ಪೇಮೆಂಟ್

ನವಿ ಆ್ಯಪ್ ತನ್ನಲ್ಲಿರುವ ಬಯೋಮೆಟ್ರಿಕ್ ದೃಢೀಕರಣದ ಫೀಚರ್ ಅನ್ನು ಸುರಕ್ಷಿತ ಹಾಗೂ ಸ್ವಂತ ಆಪರೇಟಿಂಗ್ ಸಿಸ್ಟಂ ಟೆಕ್ನಾಲಜಿಯಲ್ಲಿ ನಿರ್ಮಿಸಿದೆ. ಇದರಿಂದ ಯುಪಿಐ ಪೇಮೆಂಟ್ ಬಹಳ ವೇಗವಾಗಿ ಆಗುತ್ತದೆ. ಈ ದೃಢೀಕರಣವು ಫೋನ್​ನ ಸುರಕ್ಷಿತ ಪರಿಸರದೊಳಗೆಯೇ ನಡೆಯುವುದರಿಂದ ಖಾಸಗಿ ದತ್ತಾಂಶವು ಹೊರಗೆ ಹೋಗುವುದೇ ಇಲ್ಲ. ಹೀಗಾಗಿ, ನಿಮ್ಮ ವಹಿವಾಟು ಬಹಳ ಸುರಕ್ಷಿತವಾಗಿರುತ್ತದೆ ಎಂದು ಹೇಳಲಾಗುತ್ತದೆ.

ನವಿ ಆ್ಯಪ್​ನಲ್ಲಿ ಈ ಫೀಚರ್ ಬಳಕೆ ಐಚ್ಛಿಕವಾಗಿರುತ್ತದೆ. ಬಯೋಮೆಟ್ರಿಕ್ ಅಥೆಂಟಿಕೇಶನ್ ಫೀಚರ್ ಅನ್ನು ಯಾವಾಗ ಬೇಕಾದರೂ ಎನೇಬಲ್ ಅಥವಾ ಡಿಸೇಬಲ್ ಮಾಡಲು ಅವಕಾಶ ಇರುತ್ತದೆ. ಈ ಫೀಚರ್ ಜೊತೆಗೆ ಪಿನ್ ನಮೂದಿಸುವ ಫೀಚರ್ ಕೂಡ ಇರುತ್ತದೆ. ಬಳಕೆದಾರರು ಎರಡರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಟ್ರಾನ್ಸಾಕ್ಷನ್ ಮಾಡಬಹುದು.

ಇದನ್ನೂ ಓದಿ: ಯುಪಿಐ ಅಪ್​ಡೇಟ್; ಪೇಮೆಂಟ್​ಗೆ ಪಿನ್ ನೀಡಬೇಕಿಲ್ಲ; ಬಳಕೆದಾರರಿಗೆ ಹೆಚ್ಚಿನ ಆಯ್ಕೆ

ನವಿ ಆ್ಯಪ್ ಸ್ಥಾಪಿಸುವ ಕ್ರಮ ಬಹಳ ಸರಳ

ನವಿ ಆ್ಯಪ್ ಹೊಸ ಬಳಕೆದಾರರಿಗೆ ಸುಗಮ ದಾರಿ ಮಾಡಿಕೊಟ್ಟಿದೆ. ಆ್ಯಪ್ ಡೌನ್​ಲೋಡ್ ಮಾಡಿ ನೊಂದಣಿ ಮಾಡಿಕೊಂಡು ಟ್ರಾನ್ಸಾಕ್ಷನ್ ಮಾಡುವ ಕಾರ್ಯವನ್ನು ಬಹಳ ಕ್ಷಿಪ್ರವಾಗಿ ಆಗುವಂತೆ ಕ್ರಮಗಳನ್ನು ಸರಳಗೊಳಿಸಲಾಗಿದೆ.

‘ಸುರಕ್ಷತೆ ಮತ್ತು ಸರಳತೆ ನಮ್ಮ ಉತ್ಪನ್ನ ತತ್ವದ ಪ್ರಮುಖ ಅಂಶಗಳಾಗಿವೆ. ಈ ಹೊಸ ಫೀಚರ್ಗಳಿಂದ ಡಿಜಿಟಲ್ ಪೇಮೆಂಟ್ಸ್​ನಲ್ಲಿ ನಾವು ವಿಶ್ವಾಸಾರ್ಹತೆಗೆ ಹೊಸ ಮಾನದಂಡ ನೀಡುತ್ತಿದ್ದೇವೆ’ ಎಂದು ನವಿ ಲಿಮಿಟೆಡ್ ಕಂಪನಿಯ ಎಂಡಿ ಮತ್ತು ಸಿಇಒ ರಾಜೀವ್ ನರೇಶ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!