AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nepal: ದುಬಾರಿ ವ್ಯಾಟ್ ತೆರಿಗೆ: ಭಾರತದಿಂದ ತರಕಾರಿ, ಈರುಳ್ಳಿ ಖರೀದಿ ನಿಲ್ಲಿಸಿದ ನೇಪಾಳಿ ವರ್ತಕರು

13% VAT For Imported Vegetables In Nepal: ನೇಪಾಳ ಸರ್ಕಾರ ಆಮದಿತ ತರಕಾರಿ, ಹಣ್ಣು ಮತ್ತಿತರ ವಸ್ತುಗಳಿಗೆ ಶೇ. 13ರಷ್ಟು ವ್ಯಾಟ್ ವಿಧಿಸಿದೆ. ಇದರ ಪರಿಣಾಮವಾಗಿ ಅಲ್ಲಿನ ವರ್ತಕರು ಭಾರತದಿಂದ ತರಕಾರಿ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದಾರೆ.

Nepal: ದುಬಾರಿ ವ್ಯಾಟ್ ತೆರಿಗೆ: ಭಾರತದಿಂದ ತರಕಾರಿ, ಈರುಳ್ಳಿ ಖರೀದಿ ನಿಲ್ಲಿಸಿದ ನೇಪಾಳಿ ವರ್ತಕರು
ನೇಪಾಳದ ಈರುಳ್ಳಿ ಮಂಡಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 14, 2023 | 3:14 PM

ಕಠ್ಮಂಡು: ನೇಪಾಳದಲ್ಲಿ ಈಗಾಗಲೇ ಬೆಲೆ ಏರಿಕೆಯ ಬಿಸಿಯಲ್ಲಿರುವ ಜನಸಾಮಾನ್ಯರ ಹಣಕಾಸು ದುಸ್ಥಿತಿಗೆ ಗಾಯದ ಮೇಲೆ ಬರೆ ಎಳೆದಂತೆ ಅಲ್ಲಿನ ಸರ್ಕಾರ ಕೆಲ ಪ್ರಮುಖ ಆಹಾರವಸ್ತುಗಳ ಆಮದಿಗೆ ವ್ಯಾಟ್ ತೆರಿಗೆ (VAT) ವಿಪರೀತ ಏರಿಸಿದೆ. ತರಕಾರಿ ಮತ್ತು ಈರುಳ್ಳಿ ವಸ್ತುಗಳ ಆಮದು (Import of Vegetables) ಮೇಲೆ ಕಳೆದ ತಿಂಗಳು ನೇಪಾಳ ಸರ್ಕಾರ ಶೇ. 13ರಷ್ಟು ಮೌಲ್ಯವರ್ಧಿತ ತೆರಿಗೆಯನ್ನು (ವಿಎಟಿ) ವಿಧಿಸಿದೆ. ಇದರ ಪರಿಣಾಮವಾಗಿ ಭಾರತದಿಂದ ನೇಪಾಳಕ್ಕೆ ರಫ್ತಾಗುತ್ತಿದ್ದ ತರಕಾರಿ ಮತ್ತು ಈರುಳ್ಳಿಯನ್ನು ನೇಪಾಳಿ ವರ್ತಕರು ಖರೀದಿಸುವುದನ್ನು ನಿಲ್ಲಿಸಿದ್ದಾರೆ. ಈ ವಿಚಾರವನ್ನು ನೇಪಾಳಿ ವ್ಯಾಪಾರಿಗಳು ಪಿಟಿಐ ಸುದ್ದಿ ಸಂಸ್ಥೆಗೆ ಹಂಚಿಕೊಂಡಿದ್ದಾರೆ.

ಆಮದಾದ ಈರುಳ್ಳಿ, ಆಲೂಗಡ್ಡೆ ಮತ್ತಿತರ ವಿವಿಧ ತರಕಾರಿಗಳು ಹಾಗೂ ಹಣ್ಣುಗಳ ಮೇಲೆ ಶೇ. 13ರಷ್ಟು ವ್ಯಾಟ್ ವಿಧಿಸಲು ಅವಕಾಶ ಇರುವ ಹಣಕಾಸು ಮಸೂದೆಯು ಮೇ 29ರಂದು ನೇಪಾಳ ಸಂಸತ್ತಿನಲ್ಲಿ ಮಂಡನೆಯಾಗಿತ್ತು. ಸರ್ಕಾರದ ಈ ಕ್ರಮಕ್ಕೆ ಅಲ್ಲಿನ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಇದನ್ನೂ ಓದಿWPI Inflation: ಸಗಟು ಬೆಲೆ ಹಣದುಬ್ಬರ ಮೈನಸ್ 3.48 ಪ್ರತಿಶತಕ್ಕೆ ಕುಸಿತ; ಆರ್ಥಿಕತೆಗೆ ಅನುಕೂಲವೋ, ಅಪಾಯವೋ?

ನೇಪಾಳದಲ್ಲಿ ವಿಪರೀತವಾಗಿರುವ ಹಣದುಬ್ಬರದ ಪರಿಸ್ಥಿತಿ ಈಗ ಇನ್ನಷ್ಟು ಹದಗೆಡುತ್ತದೆ. ಬೆಲೆ ಏರಿಕೆಯ ಬಿಸಿಯಲ್ಲಿರುವ ಜನಸಾಮಾನ್ಯರ ಬವಣೆ ಇನ್ನೂ ತಾರಕಕ್ಕೇರುತ್ತದೆ. ಅದರಲ್ಲೂ ಕಡಿಮೆ ಆದಾಯದ ಕುಟುಂಬಗಳಿಗೆ ಆಹಾರ ಅಭದ್ರತೆ ಹೆಚ್ಚುತ್ತದೆ ಎಂದು ಅಲ್ಲಿನ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ನೇಪಾಳದಲ್ಲಿ 2023ರ ಮೇ ತಿಂಗಳಲ್ಲಿ ಹಣದುಬ್ಬರ ಶೇ. 7.41ರಷ್ಟಿದೆ. ಭಾರತದಿಂದ ಬಹಳಷ್ಟು ಆಹಾರವಸ್ತುಗಳನ್ನು ನೇಪಾಳ ಆಮದು ಮಾಡಿಕೊಳ್ಳುತ್ತದೆ. ಈಗ ವ್ಯಾಟ್ ತೆರಿಗೆ ಏರಿಕೆಯಿಂದ ಹಣ್ಣು ಮತ್ತು ತರಕಾರಿಗಳ ಬೆಲೆ ತುಸು ಹೆಚ್ಚಬಹುದು. ಏಪ್ರಿಲ್​ಗಿಂತ ಮೇ ತಿಂಗಳಲ್ಲಿ ಕಡಿಮೆ ಆಗಿದ್ದ ಹಣದುಬ್ಬರ ಮತ್ತೆ ಏರಿಕೆಯ ಹಾದಿಗಿಳಿದರೆ ಅಚ್ಚರಿ ಇಲ್ಲ ಎನ್ನುತ್ತಾರೆ ಅಲ್ಲಿನ ಹಣಕಾಸು ತಜ್ಞರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Wed, 14 June 23

ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್