Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm Charges: ಪೇಟಿಎಂ ಮೂಲಕ ಮೊಬೈಲ್ ರೀಚಾರ್ಜ್ ಮಾಡಿದಲ್ಲಿ ಶುಲ್ಕ

ಇದೀಗ ಮೊಬೈಲ್ ಫೋನ್ ರೀಚಾರ್ಜ್ ಮೇಲೆ ಪೇಟಿಎಂನಿಂದ ಪ್ಲಾಟ್​ಫಾರ್ಮ್ ಶುಲ್ಕ ವಿಧಿಸಲು ಆರಂಭಿಸಲಾಗಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

Paytm Charges: ಪೇಟಿಎಂ ಮೂಲಕ ಮೊಬೈಲ್ ರೀಚಾರ್ಜ್ ಮಾಡಿದಲ್ಲಿ ಶುಲ್ಕ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 11, 2022 | 7:23 AM

ಯಾವುದೇ ರೀಚಾರ್ಜ್ ಮಾಡುವಾಗ ಪೇಟಿಎಂನಲ್ಲಿ (Paytm) ಆದ ಬದಲಾವಣೆಯನ್ನು ನೀವು ಗಮನಿಸಿದ್ದೀರಾ? ಅದರ ಮೂಲಕ ಮಾಡುವ ರೀಚಾರ್ಜ್‌ಗಳಿಗೆ ‘ಪ್ಲಾಟ್‌ಫಾರ್ಮ್ ಶುಲ್ಕ’ ವಿಧಿಸಲು ಆರಂಭಿಸಲಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿದ ರೀಚಾರ್ಜ್‌ಗಳಿಗೆ ಕನ್ವೆಯನ್ಸ್ ಶುಲ್ಕ, ಪ್ಲಾಟ್‌ಫಾರ್ಮ್ ಶುಲ್ಕ, ಸರ್‌ಚಾರ್ಜ್, ನೀವು ಏನೇ ಕರೆದರೂ ಪೇಟಿಎಂ 1 ರಿಂದ 6 ರೂಪಾಯಿವರೆಗೆ ಶುಲ್ಕ ವಿಧಿಸುತ್ತಿದೆ. ಇದು ಕೇವಲ ಪೇಟಿಎಂ ವ್ಯಾಲೆಟ್‌ಗೆ ಸೀಮಿತವಾಗಿಲ್ಲ. ಆದರೆ ಯುಪಿಐ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ರೀಚಾರ್ಜ್‌ಗಳಿಗೂ ಅನ್ವಯಿಸುತ್ತದೆ. ಇದು ಅಪ್ಲಿಕೇಷನ್ ಅಥವಾ ವೆಬ್‌ಸೈಟ್ ಮೂಲಕ ಎರಡಕ್ಕೂ ಅನ್ವಯಿಸುತ್ತದೆ. ಈ ಹೊಸ ಪೇಟಿಎಂ ಫೀಚರ್ ಹೊರತರಲಾಗುತ್ತಿದೆ ಮತ್ತು ಇದೀಗ ಅದರ ಎಲ್ಲ ಬಳಕೆದಾರರಿಗೆ ಲಭ್ಯ ಇಲ್ಲದಿರಬಹುದು. ಆದರೆ ಶೀಘ್ರದಲ್ಲೇ ಅಥವಾ ನಂತರ ಇದನ್ನು ಎಲ್ಲರಿಗೂ ಅಳವಡಿಸಲಾಗುವುದು.

ರೂ. 100ಕ್ಕಿಂತ ಹೆಚ್ಚಿನ ರೀಚಾರ್ಜ್‌ಗಳಿಗೆ ಪೇಟಿಎಂ ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸುತ್ತಿದೆ. ಈ ಟ್ರೆಂಡ್​ನ ಪ್ರಾರಂಭಿಸಿದ ಫೋನ್​ಪೇ ಹೆಜ್ಜೆಗಳನ್ನು ಪೇಟಿಎಂ ಅನುಸರಿಸಿದೆ. ಇಂದು ಪ್ರಿಪೇಯ್ಡ್ ಮೊಬೈಲ್ ಅನ್ನು ರೀಚಾರ್ಜ್ ಮಾಡುವಾಗ ಇದನ್ನು ಬಳಕೆದಾರರೊಬ್ಬರಿಗೆ ವೈಯಕ್ತಿಕವಾಗಿ ಖಚಿತಪಡಿಸಿದೆ. ನಿಜವಾದ ರೀಚಾರ್ಜ್ ಮೊತ್ತವು 239 ಆಗಿತ್ತು. ಆದರೆ ಈ ‘ಪ್ಲಾಟ್‌ಫಾರ್ಮ್ ಶುಲ್ಕ’ದಿಂದಾಗಿ ರೂ. 241, ಹೆಚ್ಚುವರಿ ರೂ. 2 ಅನ್ನು ಕನ್ವೆಯನ್ಸ್ ಶುಲ್ಕವಾಗಿ ಪಾವತಿಸಲಾಗಿದೆ. ಟ್ವಿಟ್ಟರ್​ನಲ್ಲಿ ಗಮನಸೆಳೆದಾಗ, ಪೇಟಿಎಂ ಪ್ರತಿಕ್ರಿಯಿಸಿದ್ದು, “ಪೇಟಿಎಂ ಅಪ್ಲಿಕೇಷನ್ ಅಥವಾ ವೆಬ್‌ಸೈಟ್‌ನಲ್ಲಿ ಮಾಡಿದ ಕೆಲವು ಮೊಬೈಲ್ ರೀಚಾರ್ಜ್‌ಗಳಿಗೆ ಅತ್ಯಲ್ಪ ಶುಲ್ಕವನ್ನು ವಿಧಿಸಬಹುದು. ಈ ಶುಲ್ಕವು ಎಲ್ಲ ಪಾವತಿ ವಿಧಾನಗಳಿಗೆ ಅನ್ವಯಿಸುತ್ತದೆ ಮತ್ತು ನೀವು ರೀಚಾರ್ಜ್‌ನೊಂದಿಗೆ ಮುಂದುವರಿಯುವ ಮೊದಲು ಪಾವತಿ ಪುಟದಲ್ಲಿ ಪ್ರದರ್ಶಿಸಲಾಗುತ್ತದೆ.”

ಇದಕ್ಕೆ ವಿರುದ್ಧವಾಗಿ, ಅಮೆಜಾನ್ ಪೇ ಮತ್ತು ಗೂಗಲ್ ಪೇ ಯಾವುದೇ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುತ್ತಿಲ್ಲ. ಪ್ಲಾಟ್‌ಫಾರ್ಮ್ ಶುಲ್ಕ/ಕನ್ವೆಯನ್ಸ್ ಶುಲ್ಕ/ಪ್ರೊಸೆಸಿಂಗ್ ಶುಲ್ಕವನ್ನು ಉಳಿಸಲು ಜನರು ಈ ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು. ಈ ಕ್ರಮವು ಬಹುಶಃ ಹೆಚ್ಚಿನ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ