AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm Charges: ಪೇಟಿಎಂ ಮೂಲಕ ಮೊಬೈಲ್ ರೀಚಾರ್ಜ್ ಮಾಡಿದಲ್ಲಿ ಶುಲ್ಕ

ಇದೀಗ ಮೊಬೈಲ್ ಫೋನ್ ರೀಚಾರ್ಜ್ ಮೇಲೆ ಪೇಟಿಎಂನಿಂದ ಪ್ಲಾಟ್​ಫಾರ್ಮ್ ಶುಲ್ಕ ವಿಧಿಸಲು ಆರಂಭಿಸಲಾಗಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

Paytm Charges: ಪೇಟಿಎಂ ಮೂಲಕ ಮೊಬೈಲ್ ರೀಚಾರ್ಜ್ ಮಾಡಿದಲ್ಲಿ ಶುಲ್ಕ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 11, 2022 | 7:23 AM

Share

ಯಾವುದೇ ರೀಚಾರ್ಜ್ ಮಾಡುವಾಗ ಪೇಟಿಎಂನಲ್ಲಿ (Paytm) ಆದ ಬದಲಾವಣೆಯನ್ನು ನೀವು ಗಮನಿಸಿದ್ದೀರಾ? ಅದರ ಮೂಲಕ ಮಾಡುವ ರೀಚಾರ್ಜ್‌ಗಳಿಗೆ ‘ಪ್ಲಾಟ್‌ಫಾರ್ಮ್ ಶುಲ್ಕ’ ವಿಧಿಸಲು ಆರಂಭಿಸಲಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿದ ರೀಚಾರ್ಜ್‌ಗಳಿಗೆ ಕನ್ವೆಯನ್ಸ್ ಶುಲ್ಕ, ಪ್ಲಾಟ್‌ಫಾರ್ಮ್ ಶುಲ್ಕ, ಸರ್‌ಚಾರ್ಜ್, ನೀವು ಏನೇ ಕರೆದರೂ ಪೇಟಿಎಂ 1 ರಿಂದ 6 ರೂಪಾಯಿವರೆಗೆ ಶುಲ್ಕ ವಿಧಿಸುತ್ತಿದೆ. ಇದು ಕೇವಲ ಪೇಟಿಎಂ ವ್ಯಾಲೆಟ್‌ಗೆ ಸೀಮಿತವಾಗಿಲ್ಲ. ಆದರೆ ಯುಪಿಐ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ರೀಚಾರ್ಜ್‌ಗಳಿಗೂ ಅನ್ವಯಿಸುತ್ತದೆ. ಇದು ಅಪ್ಲಿಕೇಷನ್ ಅಥವಾ ವೆಬ್‌ಸೈಟ್ ಮೂಲಕ ಎರಡಕ್ಕೂ ಅನ್ವಯಿಸುತ್ತದೆ. ಈ ಹೊಸ ಪೇಟಿಎಂ ಫೀಚರ್ ಹೊರತರಲಾಗುತ್ತಿದೆ ಮತ್ತು ಇದೀಗ ಅದರ ಎಲ್ಲ ಬಳಕೆದಾರರಿಗೆ ಲಭ್ಯ ಇಲ್ಲದಿರಬಹುದು. ಆದರೆ ಶೀಘ್ರದಲ್ಲೇ ಅಥವಾ ನಂತರ ಇದನ್ನು ಎಲ್ಲರಿಗೂ ಅಳವಡಿಸಲಾಗುವುದು.

ರೂ. 100ಕ್ಕಿಂತ ಹೆಚ್ಚಿನ ರೀಚಾರ್ಜ್‌ಗಳಿಗೆ ಪೇಟಿಎಂ ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸುತ್ತಿದೆ. ಈ ಟ್ರೆಂಡ್​ನ ಪ್ರಾರಂಭಿಸಿದ ಫೋನ್​ಪೇ ಹೆಜ್ಜೆಗಳನ್ನು ಪೇಟಿಎಂ ಅನುಸರಿಸಿದೆ. ಇಂದು ಪ್ರಿಪೇಯ್ಡ್ ಮೊಬೈಲ್ ಅನ್ನು ರೀಚಾರ್ಜ್ ಮಾಡುವಾಗ ಇದನ್ನು ಬಳಕೆದಾರರೊಬ್ಬರಿಗೆ ವೈಯಕ್ತಿಕವಾಗಿ ಖಚಿತಪಡಿಸಿದೆ. ನಿಜವಾದ ರೀಚಾರ್ಜ್ ಮೊತ್ತವು 239 ಆಗಿತ್ತು. ಆದರೆ ಈ ‘ಪ್ಲಾಟ್‌ಫಾರ್ಮ್ ಶುಲ್ಕ’ದಿಂದಾಗಿ ರೂ. 241, ಹೆಚ್ಚುವರಿ ರೂ. 2 ಅನ್ನು ಕನ್ವೆಯನ್ಸ್ ಶುಲ್ಕವಾಗಿ ಪಾವತಿಸಲಾಗಿದೆ. ಟ್ವಿಟ್ಟರ್​ನಲ್ಲಿ ಗಮನಸೆಳೆದಾಗ, ಪೇಟಿಎಂ ಪ್ರತಿಕ್ರಿಯಿಸಿದ್ದು, “ಪೇಟಿಎಂ ಅಪ್ಲಿಕೇಷನ್ ಅಥವಾ ವೆಬ್‌ಸೈಟ್‌ನಲ್ಲಿ ಮಾಡಿದ ಕೆಲವು ಮೊಬೈಲ್ ರೀಚಾರ್ಜ್‌ಗಳಿಗೆ ಅತ್ಯಲ್ಪ ಶುಲ್ಕವನ್ನು ವಿಧಿಸಬಹುದು. ಈ ಶುಲ್ಕವು ಎಲ್ಲ ಪಾವತಿ ವಿಧಾನಗಳಿಗೆ ಅನ್ವಯಿಸುತ್ತದೆ ಮತ್ತು ನೀವು ರೀಚಾರ್ಜ್‌ನೊಂದಿಗೆ ಮುಂದುವರಿಯುವ ಮೊದಲು ಪಾವತಿ ಪುಟದಲ್ಲಿ ಪ್ರದರ್ಶಿಸಲಾಗುತ್ತದೆ.”

ಇದಕ್ಕೆ ವಿರುದ್ಧವಾಗಿ, ಅಮೆಜಾನ್ ಪೇ ಮತ್ತು ಗೂಗಲ್ ಪೇ ಯಾವುದೇ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುತ್ತಿಲ್ಲ. ಪ್ಲಾಟ್‌ಫಾರ್ಮ್ ಶುಲ್ಕ/ಕನ್ವೆಯನ್ಸ್ ಶುಲ್ಕ/ಪ್ರೊಸೆಸಿಂಗ್ ಶುಲ್ಕವನ್ನು ಉಳಿಸಲು ಜನರು ಈ ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು. ಈ ಕ್ರಮವು ಬಹುಶಃ ಹೆಚ್ಚಿನ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ