AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್ ಗೇಮಿಂಗ್ ಕಂಪನಿಗಳಿಗೆ ಸುಪ್ರೀಂ ಶಾಕ್; ಶೇ 28 ಜಿಎಸ್​ಟಿ ಪೂರ್ವಾನ್ವಯ ತೆರಿಗೆ ಸಿಂಧು ಎಂದು ಕೋರ್ಟ್ ತೀರ್ಪು

Supreme Court Upholds 28pc GST on Online Gaming: ಸುಪ್ರೀಂ ಕೋರ್ಟ್ ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ ದೊಡ್ಡ ಆಘಾತ ನೀಡಿದೆ. ಆನ್‌ಲೈನ್ ಗೇಮಿಂಗ್‌ಗೆ 28% GST ವಿಧಿಸುವ ಮತ್ತು ಪೂರ್ವಾನ್ವಯ ತೆರಿಗೆ ವಸೂಲಾತಿಯನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಕೌಶಲ್ಯದ ಆಟವೋ ಅಥವಾ ಅದೃಷ್ಟದ ಆಟವೋ ಎನ್ನುವುದು GST ವ್ಯಾಪ್ತಿಯಲ್ಲಿ ಅಪ್ರಸ್ತುತ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಇದರಿಂದ ಸುಮಾರು 1.5 ಲಕ್ಷ ಕೋಟಿ ರೂ.ಗಳ ಬೃಹತ್ ತೆರಿಗೆ ಹೊರೆ ಗೇಮಿಂಗ್ ಉದ್ಯಮದ ಮೇಲೆ ಬಿದ್ದಿದ್ದು, ಕಂಪನಿಗಳಿಗೆ ಭಾರಿ ಆರ್ಥಿಕ ಸಂಕಷ್ಟ ತಂದಿದೆ.

ಆನ್​ಲೈನ್ ಗೇಮಿಂಗ್ ಕಂಪನಿಗಳಿಗೆ ಸುಪ್ರೀಂ ಶಾಕ್; ಶೇ 28 ಜಿಎಸ್​ಟಿ ಪೂರ್ವಾನ್ವಯ ತೆರಿಗೆ ಸಿಂಧು ಎಂದು ಕೋರ್ಟ್ ತೀರ್ಪು
ಆನ್‌ಲೈನ್ ಗೇಮಿಂಗ್Image Credit source: Firstpost
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 27, 2026 | 6:23 PM

Share

ನವದೆಹಲಿ, ಮೇ 27: ಭಾರತದ ಆನ್‌ಲೈನ್ ಗೇಮಿಂಗ್ (Online Gaming) ಕಂಪನಿಗಳಿಗೆ ಸುಪ್ರೀಂ ಕೋರ್ಟ್ ಬುಧವಾರದಂದು (ಮೇ 27, 2026) ಬಿಗ್ ಶಾಕ್ ನೀಡಿದೆ. ಆನ್‌ಲೈನ್ ಗೇಮಿಂಗ್ ಮೇಲಿನ ಶೇ. 28 ರಷ್ಟು ಜಿಎಸ್‌ಟಿ (GST) ವಿಧಿಸುವ ಸರ್ಕಾರದ ತೀರ್ಮಾನದ ಸಾಂವಿಧಾನಿಕ ಸಿಂಧುತ್ವವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಒಂದೂವರೆ ಲಕ್ಷ ಕೋಟಿ ರೂ ಮೊತ್ತವಾಗುವ ಪೂರ್ವಾನ್ವಯ ತೆರಿಗೆ (Retrospective Tax) ಪಾವತಿಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ಈ ಮೂಲಕ ಗೇಮಿಂಗ್ ಕಂಪನಿಗಳ ತೀವ್ರ ವಿರೋಧದ ನಡುವೆಯೂ, ಹಿಂದಿನ ಬಾಕಿ ವಹಿವಾಟಿಗೂ ಇದು ಅನ್ವಯವಾಗುತ್ತದೆ ಎಂದು ಪೂರ್ವಾನ್ವಯ ತೆರಿಗೆ ಬೇಡಿಕೆಯನ್ನು ಕೋರ್ಟ್ ಮಾನ್ಯ ಮಾಡಿದೆ. ಇದರಿಂದಾಗಿ ಗೇಮಿಂಗ್ ಉದ್ಯಮದ ಮೇಲೆ ಸುಮಾರು 1.5 ಲಕ್ಷ ಕೋಟಿ ರೂಗೂ ಅಧಿಕ ಮೊತ್ತದ ಬೃಹತ್ ತೆರಿಗೆ ಬಾಕಿಯ ತೂಗುಗತ್ತಿ ಮುಂದುವರಿದಂತಾಗಿದೆ.

ಸುಪ್ರೀಂ ಕೋರ್ಟ್ ಪೀಠ ಗಮನಿಸಿದ ಕೆಲ ಅಂಶಗಳು

  • ಕೌಶಲ್ಯ vs ಅದೃಷ್ಟದ ಆಟ (Skill vs Chance): “ಒಮ್ಮೆ ಹಣವನ್ನು ಪಣವಾಗಿ ಇಟ್ಟಾಗ (Staking Money), ಆ ಆಟವು ‘ಕೌಶಲ್ಯದ ಆಟವೋ’ ಅಥವಾ ‘ಅದೃಷ್ಟದ ಆಟವೋ’ ಎಂಬ ವ್ಯತ್ಯಾಸ ಜಿಎಸ್‌ಟಿ ವ್ಯಾಪ್ತಿಯಲ್ಲಿ ಇರುವುದಿಲ್ಲ. ಅನಿಶ್ಚಿತ ಫಲಿತಾಂಶಗಳ ಮೇಲೆ ಹಣವನ್ನು ಒಟ್ಟಿಗೆ ಪಣಕ್ಕಿಡುವುದು ಜಿಎಸ್‌ಟಿ ಕಾಯ್ದೆಯಡಿ ಬೆಟ್ಟಿಂಗ್ ಮತ್ತು ಜೂಜಿಗೆ (Betting & Gambling) ಸಮಾನವಾಗಿರುತ್ತದೆ” ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು ಸ್ಪಷ್ಟಪಡಿಸಿದೆ.
  • ಕೇವಲ ಮಧ್ಯವರ್ತಿಗಳಲ್ಲ: ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಕೇವಲ ಇಬ್ಬರು ಗ್ರಾಹಕರ ನಡುವಿನ ವಹಿವಾಟಿಗೆ ವೇದಿಕೆ ಒದಗಿಸುವ ಮಧ್ಯವರ್ತಿಗಳಲ್ಲ (Intermediaries). ಅವುಗಳೇ ಸ್ವತಃ ತೆರಿಗೆ ವ್ಯಾಪ್ತಿಗೆ ಬರುವ ‘ಆಕ್ಷನೇಬಲ್ ಕ್ಲೈಮ್ಸ್’ (Actionable Claims) ಅನ್ನು ಪೂರೈಸುವ ಸಂಸ್ಥೆಗಳಾಗಿವೆ ಎಂದು ಕೋರ್ಟ್ ಹೇಳಿದೆ.
  • ಸ್ಪಷ್ಟೀಕರಣ ಕಾಯ್ದೆ: 2023 ರ ಜಿಎಸ್‌ಟಿ ತಿದ್ದುಪಡಿಗಳು ಕೇವಲ ಅಸ್ತಿತ್ವದಲ್ಲಿದ್ದ ಕಾನೂನಿನ ಸ್ಪಷ್ಟೀಕರಣವಾಗಿದ್ದರಿಂದ, ಇವುಗಳನ್ನು ಹಿಂದಿನ ಅವಧಿಗೂ ಅನ್ವಯಿಸಿ (Retrospectively) ತೆರಿಗೆ ವಸೂಲಿ ಮಾಡುವುದು ಕಾನೂನುಬದ್ಧವಾಗಿದೆ ಎಂದು ಸರ್ಕಾರಿ ವಾದವನ್ನು ಕೋರ್ಟ್ ಪುರಸ್ಕರಿಸಿದೆ.

ಇದನ್ನೂ ಓದಿ: ಪ.ಬಂಗಾಳದಲ್ಲಿ ತೈಲ ನಿಕ್ಷೇಪ; ಉತ್ಪಾದನೆ ದಿಕ್ಕು ಕಾಣಲು ಬೇಕಾಯ್ತು 7 ವರ್ಷ

ಏನಿದು ವಿವಾದ?

Dream11, Gameskraft ಮತ್ತು Games24x7 ನಂತಹ ಪ್ರಮುಖ ಆನ್‌ಲೈನ್ ಗೇಮಿಂಗ್ ಮತ್ತು ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿಗಳು ಸರ್ಕಾರದ ಈ ನಿಯಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದವು.

ಹೊಸ ವ್ಯವಸ್ಥೆ vs ಹಳೆಯ ವ್ಯವಸ್ಥೆ

ಹಳೆಯ ವ್ಯವಸ್ಥೆಯಲ್ಲಿ (Old Regime) ಕೇವಲ ಪ್ಲಾಟ್‌ಫಾರ್ಮ್ ಶುಲ್ಕದ ಮೇಲೆ (Gross Gaming Revenue – GGR) 18% GST ವಿಧಿಸಲಾಗುತ್ತಿತ್ತು. ಹೊಸ ವ್ಯವಸ್ಥೆಯಲ್ಲಿ (New Regime) ಒಟ್ಟು ಠೇವಣಿ ಇಡುವ ಪೂರ್ಣ ಮೊತ್ತದ ಮೇಲೆ (Full Face Value) 28% GST ವಿಧಿಸಲಾಗುತ್ತದೆ.

ಉದಾಹರಣೆಗೆ, ಒಬ್ಬ ಆಟಗಾರ ₹1,000 ಹಣವನ್ನು ಆಟಕ್ಕಾಗಿ ಠೇವಣಿ ಇಟ್ಟರೆ, ಹಳೆಯ ನಿಯಮದಂತೆ ಕಂಪನಿಯ ಕಮಿಷನ್ ₹100 ಆಗಿದ್ದರೆ ಅದರ ಮೇಲೆ ಮಾತ್ರ ತೆರಿಗೆ ಇರುತ್ತಿತ್ತು. ಆದರೆ ಈಗ ಹೊಸ ನಿಯಮದ ಪ್ರಕಾರ ಆಟಗಾರ ಠೇವಣಿ ಇಡುವ ಸಂಪೂರ್ಣ ₹1,000 ಮೇಲೆ ₹280 ಜಿಎಸ್‌ಟಿ ಕಟ್ಟಬೇಕಾಗುತ್ತದೆ.

ಗೇಮಿಂಗ್ ಕಂಪನಿಗಳು ತಿದ್ದುಪಡಿ ಜಾರಿಗೆ ಬಂದ ಅಕ್ಟೋಬರ್ 1, 2023 ರ ನಂತರದ ವಹಿವಾಟಿಗೆ ತೆರಿಗೆ ಕಟ್ಟಲು ಸಿದ್ಧವಿದ್ದವು. ಆದರೆ ತೆರಿಗೆ ಇಲಾಖೆಯು ಅದಕ್ಕಿಂತ ಹಿಂದಿನ ಅವಧಿಗೂ ಅನ್ವಯವಾಗುವಂತೆ ಭಾರಿ ಮೊತ್ತಕ್ಕೆ ಡಿಮ್ಯಾಂಡ್ ಇಟ್ಟು ಶೋಕಾಸ್ ನೋಟಿಸ್‌ಗಳನ್ನು ಜಾರಿ ಮಾಡಿತ್ತು. ಇದನ್ನು ಕಂಪನಿಗಳು ತೀವ್ರವಾಗಿ ವಿರೋಧಿಸಿದ್ದವು.

ಇದನ್ನೂ ಓದಿ: ‘ನಾನು ಯಾವ ತಪ್ಪು ಮಾಡಿಲ್ಲ’- 6 ತಿಂಗಳು ಜೈಲು ಶಿಕ್ಷೆ ವಿಧಿಸಿದ ಸಿಂಗಾಪುರ್ ಕೋರ್ಟ್ ತೀರ್ಪಿಗೆ ಬೈಜು ಬೇಸರ

ಉದ್ಯಮದ ಮೇಲಾಗುವ ಪರಿಣಾಮಗಳು

ಈ ಹಿಂದೆ ಕರ್ನಾಟಕ ಹೈಕೋರ್ಟ್ ಗೇಮ್ಸ್‌ಕ್ರಾಫ್ಟ್ (Gameskraft) ಕಂಪನಿಗೆ ನೀಡಿದ್ದ ₹21,000 ಕೋಟಿ ತೆರಿಗೆ ನೋಟಿಸ್ ರದ್ದತಿ ರಿಲೀಫ್ ಅನ್ನು ಸುಪ್ರೀಂ ಕೋರ್ಟ್ ಈಗ ರದ್ದುಗೊಳಿಸಿದೆ. ಸರ್ಕಾರದ ಮಾಹಿತಿ ಪ್ರಕಾರ, ಒಟ್ಟು 90 ಕ್ಕೂ ಹೆಚ್ಚು ಗೇಮಿಂಗ್ ಕಂಪನಿಗಳು ಮತ್ತು ಕ್ಯಾಸಿನೋಗಳಿಗೆ ಸುಮಾರು ₹1.44 ಲಕ್ಷ ಕೋಟಿಗಿಂತಲೂ ಅಧಿಕ ಮೊತ್ತದ ನೋಟಿಸ್‌ಗಳನ್ನು ನೀಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ನಾಳೆ CM ರಾಜೀನಾಮೆ ಕೊಡ್ತೀನಿ ಎಂದಿದ್ದಾರೆ : ಬಹಿರಂಗ ಪಡಿಸಿದ ಕೈ ಶಾಸಕ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ಕೇರಳದಲ್ಲಿ ಪಿಣರಾಯಿ ವಿಜಯನ್ ಬೆಂಬಲಿಗರಿಂದ ಇಡಿ ತಂಡದ ಮೇಲೆ ದಾಳಿ
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು
ನಿಯಂತ್ರಣ ತಪ್ಪಿ ಚರಂಡಿಗೆ ಡಿಕ್ಕಿ ಹೊಡೆದ ಕಾರು
ಪದತ್ಯಾಗಕ್ಕೂ ಮುನ್ನವೇ ತಮ್ಮ ಕನಸು ನನಸು ಮಾಡಲು ಮುಂದಾದ ಸಿದ್ದರಾಮಯ್ಯ
ಪದತ್ಯಾಗಕ್ಕೂ ಮುನ್ನವೇ ತಮ್ಮ ಕನಸು ನನಸು ಮಾಡಲು ಮುಂದಾದ ಸಿದ್ದರಾಮಯ್ಯ
ರಾಜೀನಾಮೆ ಸುದ್ದಿ ನಡುವೆ ಆಪ್ತರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ
ರಾಜೀನಾಮೆ ಸುದ್ದಿ ನಡುವೆ ಆಪ್ತರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ
ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿದ್ದರಾಮಯ್ಯ ನಿವಾಸಕ್ಕೆ ಬಂದ ಫ್ಯಾನ್ಸ್
ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿದ್ದರಾಮಯ್ಯ ನಿವಾಸಕ್ಕೆ ಬಂದ ಫ್ಯಾನ್ಸ್
ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಸಿಡಿದೆದ್ದ ಅಹಿಂದ
ಸಿಎಂ ಬದಲಾವಣೆಯಾದ್ರೆ ಜನರಿಗೆ ಕಾರಣ ತಿಳಿಸಬೇಕು, ಸಿಡಿದೆದ್ದ ಅಹಿಂದ
ಪೋರ್ಷೆ ಕಾರು ಅಪಘಾತದ ಆರೋಪಿ ಅಗರ್ವಾಲ್ ಉದ್ಧಟತನ!
ಪೋರ್ಷೆ ಕಾರು ಅಪಘಾತದ ಆರೋಪಿ ಅಗರ್ವಾಲ್ ಉದ್ಧಟತನ!
ಡಿಕೆಶಿ​ಗೆ ಸಿಎಂ ಪಟ್ಟ ಬಹುತೇಕ ಖಚಿತ: ರಾಮನಗರದಲ್ಲಿ ಭರ್ಜರಿ ಸಂಭ್ರಮಾಚರಣೆ
ಡಿಕೆಶಿ​ಗೆ ಸಿಎಂ ಪಟ್ಟ ಬಹುತೇಕ ಖಚಿತ: ರಾಮನಗರದಲ್ಲಿ ಭರ್ಜರಿ ಸಂಭ್ರಮಾಚರಣೆ
ಸಿದ್ದರಾಮಯ್ಯ ಹಳೆ ಹುಲಿ, ಅವರ ಆಟ ಊಹಿಸಲೂ ಸಾಧ್ಯವಿಲ್ಲ ಎಂದ ಕೇಂದ್ರ ಸಚಿವೆ
ಸಿದ್ದರಾಮಯ್ಯ ಹಳೆ ಹುಲಿ, ಅವರ ಆಟ ಊಹಿಸಲೂ ಸಾಧ್ಯವಿಲ್ಲ ಎಂದ ಕೇಂದ್ರ ಸಚಿವೆ