AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BharatPe: ಉದ್ಯೋಗಿಗಳು, ಮಾರಾಟಗಾರರನ್ನು ಕಿತ್ತೊಗೆದ ಭಾರತ್​ಪೇ; ಗ್ರೋವರ್​ನಿಂದ ಷೇರುಗಳ ಹಿಂಪಡೆಯಲು ನಿರ್ಧಾರ

ಪಾವತಿ ಸ್ಟಾರ್ಟ್​ಅಪ್ ಆದ ಭಾರತ್​ಪೇ ಉದ್ಯೋಗಿಗಳು, ಮಾರಾಟಗಾರರನ್ನು ಕಿತ್ತೊಗೆದಿದೆ. ಮಾಜಿ ಸಂಸ್ಥಾಪಕ ಅಶ್ನೀರ್ ಗ್ರೋವರ್​ರಿಂದ ಷೇರು ಹಿಂಪಡೆಯಲು ನಿರ್ಧರಿಸಿದೆ.

BharatPe: ಉದ್ಯೋಗಿಗಳು, ಮಾರಾಟಗಾರರನ್ನು ಕಿತ್ತೊಗೆದ ಭಾರತ್​ಪೇ; ಗ್ರೋವರ್​ನಿಂದ ಷೇರುಗಳ ಹಿಂಪಡೆಯಲು ನಿರ್ಧಾರ
ಅಶ್ನೀರ್ ಗ್ರೋವರ್ (ಸಂಗ್ರಹ ಚಿತ್ರ)
TV9 Web
| Edited By: |

Updated on: May 11, 2022 | 12:51 PM

Share

ಪ್ರವರ್ತಕರು ಮತ್ತು ಹೂಡಿಕೆದಾರರ ನಡುವಿನ ತಿಕ್ಕಾಟಕ್ಕೆ ಸಾಕ್ಷಿ ಆಗಿರುವ ಪೇಮೆಂಟ್ ಸ್ಟಾರ್ಟ್ಅಪ್ ಭಾರತ್‌ಪೇ, ಕಂಪೆನಿಯ ಮಾಜಿ ಸಂಸ್ಥಾಪಕ ಅಶ್ನೀರ್ ಗ್ರೋವರ್ (Ashneer Grover) ಅವರ ನಿರ್ಬಂಧಿತ ಷೇರುಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಮಂಗಳವಾರ ಹೇಳಿದೆ. ಇದು ಹಲವಾರು ಉದ್ಯೋಗಿಗಳು ಮತ್ತು ಮಾರಾಟಗಾರರನ್ನು ವಜಾಗೊಳಿಸಿದೆ ಹಾಗೂ ಅವರ ವಿರುದ್ಧ ದುರ್ವರ್ತನೆಗಾಗಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದೆ. “ಅಗತ್ಯ ಇದ್ದಲ್ಲಿ ಕೆಲವು ಉದ್ಯೋಗಿಗಳ ವಿರುದ್ಧ ಕಂಪೆನಿಯ ವಿರುದ್ಧ ಮಾಡಿದ ದುರುಪಯೋಗ ಮತ್ತು ವಂಚನೆಗಾಗಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸುತ್ತದೆ,” ಎಂದು ಭಾರತ್‌ಪೇ ಹೇಳಿಕೆಯಲ್ಲಿ ತಿಳಿಸಿದೆ.

“ತಪ್ಪಾದ ಅಥವಾ ಹೆಚ್ಚಿಸಿದ ಇನ್‌ವಾಯ್ಸ್‌ಗಳಂತಹ ದುಷ್ಕೃತ್ಯಗಳಲ್ಲಿ ತೊಡಗಿರುವ ಅನೇಕ ಮಾರಾಟಗಾರರನ್ನು ಕಂಪೆನಿಯೊಂದಿಗಿನ ಹೆಚ್ಚಿನ ವ್ಯವಹಾರದಿಂದ ನಿರ್ಬಂಧಿಸಲಾಗಿದೆ. ಕಂಪೆನಿಯು ಈಗಾಗಲೇ ಈ ಮಾರಾಟಗಾರರಿಗೆ ಮೊತ್ತವನ್ನು ಹಿಂತಿರುಗಿಸಲು ಕಾನೂನು ಸೂಚನೆಗಳನ್ನು ನೀಡಿದೆ. ಅವರ ವಿರುದ್ಧ ಮುಂಬರುವ ದಿನಗಳಲ್ಲಿ ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಿದೆ,” ಎಂದು ಅದು ಹೇಳಿದೆ. ಅಲ್ಲದೆ, ಅನುಮಾನಾಸ್ಪದ ವಹಿವಾಟುಗಳಲ್ಲಿ ತೊಡಗಿ, ಉದ್ಯೋಗಿಗಳು ವೈಯಕ್ತಿಕವಾಗಿ ಯಾವುದೇ ಲಾಭ ಪಡೆಯದಂತೆ ಅಪಾಯವನ್ನು ತಗ್ಗಿಸಲು ಹೊಸ ಮಾರಾಟಗಾರರ ಸಂಗ್ರಹ ನೀತಿಯನ್ನು ಪರಿಚಯಿಸುತ್ತಿದೆ ಎಂದು ಭಾರತ್​ಪೇ ಹೇಳಿದೆ.

ಅಲ್ವಾರೆಜ್ ಅಂಡ್ ಮಾರ್ಸಲ್, ಶಾರ್ದೂಲ್ ಅಮರಚಂದ್ ಮಂಗಲದಾಸ್ ಅಂಡ್ ಕೋ ಮತ್ತು ಪಿಡಬ್ಲ್ಯೂಸಿ ನಡೆಸಿದ ಎರಡು ತಿಂಗಳ ಕಾರ್ಪೊರೇಟ್ ಆಡಳಿತದ ಪರಿಶೀಲನೆಯ ಮುಕ್ತಾಯದ ನಂತರ ಈ ಬೆಳವಣಿಗೆಗಳು ಬಂದಿವೆ. ಗ್ರೋವರ್ ಅನ್ನು ಹೆಸರಿಸದೆ, ಕಂಪೆನಿಯು “ಮಾಜಿ ಸಂಸ್ಥಾಪಕರ ವಿರುದ್ಧ ಷೇರುದಾರರ ಒಪ್ಪಂದದ ಪ್ರಕಾರ ಅವರ ನಿರ್ಬಂಧಿತ ಷೇರುಗಳನ್ನು ಹಿಂತೆಗೆದುಕೊಳ್ಳಲು ಅಗತ್ಯ ಕ್ರಮವನ್ನು ಪ್ರಾರಂಭಿಸಲಾಗಿದೆ” ಎಂದು ಕಂಪೆನಿ ಹೇಳಿದೆ. ಕಾನೂನಿನ ಅಡಿಯಲ್ಲಿ ತನ್ನ ಹಕ್ಕನ್ನು ಜಾರಿಗೊಳಿಸಲು ಅದು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ಗ್ರೋವರ್ ಸದ್ಯಕ್ಕೆ ಭಾರತ್‌ಪೇಯಲ್ಲಿ ಸುಮಾರು ಶೇ 8.5ರಷ್ಟು ಷೇರನ್ನು ಹೊಂದಿದ್ದಾರೆ, ಅದರಲ್ಲಿ 1.4ರಷ್ಟನ್ನು ಸ್ವಾಧೀನಪಡಿಸಿಕೊಂಡಿಲ್ಲ. ಸಿಕೊಯಾ ಕ್ಯಾಪಿಟಲ್-ಬೆಂಬಲಿತ ಸ್ಟಾರ್ಟ್‌ಅಪ್‌ ಭಾರತ್‌ಪೇನಲ್ಲಿ ಗ್ರೋವರ್ ಮತ್ತು ನಿಯಂತ್ರಣಗಳ ಮುಖ್ಯಸ್ಥರಾಗಿದ್ದ ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಈ ವರ್ಷದ ಆರಂಭದಲ್ಲಿ ಆರೋಪಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಭಾರತ್​ಪೇ ಹಣದಿಂದ ಗ್ರೋವರ್ ಕುಟುಂಬದ ವಿಲಾಸಿ ಜೀವನ; ಇದೇ ಮೊದಲ ಬಾರಿಗೆ ಮಂಡಳಿ ಆರೋಪ

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!