AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Multibagger: 1 ಲಕ್ಷ ಹೂಡಿಕೆಗೆ 3 ವರ್ಷದಲ್ಲಿ 1.42 ಕೋಟಿ ರೂ ಲಾಭ; ಮಲ್ಟಿಬ್ಯಾಗರ್ ಆದ ಕ್ರೆಸ್ಸಾಂಡಾ ಷೇರಿನ ಬೆಲೆ 140 ಪಟ್ಟು ಹೆಚ್ಚು

Cressanda Solutions Turn Multibagger in 3 Years: ಮುಂಬೈ ಮೂಲದ ಮಾಹಿತಿ ಸೇವಾ ಸಂಸ್ಥೆ ಕ್ರೆಸ್ಸಾಂಡಾ ಸಲ್ಯೂಷನ್ಸ್ ಕಂಪನಿಯ ಷೇರು ಮೌಲ್ಯ ಕಳೆದ 3 ವರ್ಷದಲ್ಲಿ ಅದ್ಘುತವಾಗಿ ಹೆಚ್ಚಾಗಿದೆ. 19 ಪೈಸೆ ಇದ್ದ ಬೆಲೆ ಬರೋಬ್ಬರಿ 27 ರೂ ಮುಟ್ಟಿದೆ.

Multibagger: 1 ಲಕ್ಷ ಹೂಡಿಕೆಗೆ 3 ವರ್ಷದಲ್ಲಿ 1.42 ಕೋಟಿ ರೂ ಲಾಭ; ಮಲ್ಟಿಬ್ಯಾಗರ್ ಆದ ಕ್ರೆಸ್ಸಾಂಡಾ ಷೇರಿನ ಬೆಲೆ 140 ಪಟ್ಟು ಹೆಚ್ಚು
ಷೇರುಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 25, 2023 | 3:59 PM

ಷೇರುಮಾರುಕಟ್ಟೆಯಲ್ಲಿ ಬಹಳ ಷೇರುಗಳು ಎಲೆಮರೆಕಾಯಿಯಂತಿರುತ್ತವೆ. ಎಲ್ಲರೂ ದೊಡ್ಡ ಕಂಪನಿಗಳಲ್ಲಿ ಹೂಡಿಕೆ ಮಾಡಲು ಹುಡುಕಾಟ ನಡೆಸುತ್ತಿದ್ದರೆ, ಕೆಲ ಸಾಮಾನ್ಯ ಎನಿಸುವ ಕಂಪನಿಗಳ ಷೇರು ಅದ್ವಿತೀಯ ರೀತಿಯಲ್ಲಿ ಜಿಗಿಜಿಗಿದು ಓಡುತ್ತಿರುತ್ತವೆ. ಕಳೆದ ಐದಾರು ವರ್ಷದಲ್ಲಿ ಕಂಡ ಹಲವು ಮಲ್ಟಿಬ್ಯಾಗರ್ ಸ್ಟಾಕುಗಳಲ್ಲಿ ಸಣ್ಣ ಕಂಪನಿಗಳದ್ದೂ ಹಲವುವಿವೆ. ಇಂಥ ಕಂಪನಿಗಳಲ್ಲಿ ಕ್ರೆಸ್ಸಾಂಡಾ ಸಲ್ಯೂಷನ್ಸ್ (Cressanda Solutions) ಕೂಡ ಒಂದು. ಕಳೆದ ಮೂರು ವರ್ಷಗಳಲ್ಲಿ ಇದರ ಷೇರು ಅದ್ವಿತೀಯ ರೀತಿಯಲ್ಲಿ ಬೇಡಿಕೆ ಕುದುರಿಸಿಕೊಂಡು ಮಲ್ಟಿಬ್ಯಾಗರ್ ಸ್ಟಾಕ್ ಎನಿಸಿದೆ. ಈ ಮೂರು ವರ್ಷದಲ್ಲಿ ಇದರ ಷೇರು ಬೆಲೆ 140 ಪಟ್ಟು ಹೆಚ್ಚಾಗಿದೆ.

ಬಿಎಸ್​ಇ ಷೇರುಪೇಟೆಯಲ್ಲಿ 3 ವರ್ಷದ ಹಿಂದೆ ಪ್ರತೀ ಷೇರಿಗೆ ಕೇವಲ 19 ಪೈಸೆ ಬೆಲೆ ಹೊಂದಿದ್ದ ಕ್ರೆಸ್ಸಾಂಡಾ ಸಲ್ಯೂಷನ್ಸ್ ಸಂಸ್ಥೆ ಕಳೆದ ವಾರ 27.35 ರುಪಾಯಿಗೆ ಉಬ್ಬಿತ್ತು. ಅಂದರೆ ಅದರ ಬೆಲೆ ಶೇ. 1400ರಷ್ಟು ಹೆಚ್ಚಳವಾಗಿತ್ತು.

ಈಗ ಅದರ ಷೇರು ಬೆಲೆ 25 ರೂ ಆಸುಪಾಸಿಗೆ ಇಳಿದಿದೆ. ಸಾಕಷ್ಟು ಏರಿಳಿತಗಳ ನಡುವೆಯೂ ಕ್ರೆಸ್ಸಾಂಡಾ ಮುನ್ನುಗ್ಗಿ ಹೋಗುತ್ತಿರುವುದು ಗಮನಾರ್ಹ. ಕಳೆದ ಒಂದು ವರ್ಷದಲ್ಲಿ ಇದು 42.25 ರೂ ಗರಿಷ್ಠ ಮಟ್ಟ ಮುಟ್ಟಿದ್ದು ವಿಶೇಷ. ಹಾಗೆಯೇ, ಈ ವರ್ಷ 17 ರುಪಾಯಿಗೆ ಕುಸಿದಿದ್ದೂ ಹೌದು.

ಇದನ್ನೂ ಓದಿWipro: ಬೆಂಗಳೂರಿನ ವಿಪ್ರೋ ಎಕ್ಸಿಕ್ಯೂಟಿವ್ ಛೇರ್ಮನ್ ರಿಷದ್ ಪ್ರೇಮ್​ಜಿ ವೇತನ ಅರ್ಧದಷ್ಟು ಕಡಿತ; ಸಿಇಒಗಿಂತಲೂ ಪ್ರೇಮ್​ಜಿ ಸಂಬಳ ತೀರಾ ಕಡಿಮೆ

ಒಳ್ಳೆಯ ಲಾಭದಲ್ಲಿ ಕ್ರೆಸ್ಸಾಂಡಾ

ಮುಂಬೈನಲ್ಲಿ ಮುಖ್ಯಕಚೇರಿ ಹೊಂದಿರುವ ಕ್ರೆಸ್ಸಾಂಡಾ ಸಲ್ಯೂಷನ್ಸ್ ಐಟಿ ಹಾಗು ಮಾಹಿತಿ ಸೇವೆ ಕಂಪನಿಯಾಗಿದೆ. ಡಿಜಿಟಲ್ ಮೀಡಿಯಾ, ಐಟಿ ಮತ್ತು ಐಟಿ ಎನೇಬಲ್ಡ್ ಸರ್ವಿಸ್​ಗಳನ್ನು ನೀಡುತ್ತದೆ. ಕಳೆದ ಮೂರು ವರ್ಷಗಳಲ್ಲಿ ಈ ಸಂಸ್ಥೆ ಒಳ್ಳೆಯ ಲಾಭ ಗಳಿಸುತ್ತಾ ಬಂದಿದೆ. ಹೀಗಾಗಿ, ಅದರ ಷೇರುಗಳಿಗೆ ಒಳ್ಳೆಯ ಬೇಡಿಕೆ ಬಂದಿದೆ. ವರ್ಷದಿಂದ ವರ್ಷಕ್ಕೆ, ಕ್ವಾರ್ಟರ್​ನಿಂದ ಕ್ವಾರ್ಟರ್​ಗೆ ಅದರ ಲಾಭ ವೃದ್ಧಿಸುತ್ತಲೇ ಬಂದಿರುವುದು ಹೂಡಿಕೆದಾರರನ್ನು ಆಕರ್ಷಿಸಿರಬಹುದು.

3 ವರ್ಷದ ಹಿಂದೆ ಕ್ರೆಸ್ಸಾಂಡಾ ಷೇರಿನ ಮೇಲೆ 1ಲಕ್ಷ ಹೂಡಿದ್ದರೆ ಎಷ್ಟು ಲಾಭ ಇರುತ್ತಿತ್ತು?

ಆಗಲೇ ಹೇಳಿದಂತೆ ಕ್ರೆಸ್ಸಾಂಡಾ ಸಲ್ಯೂಷನ್ಸ್ 3 ವರ್ಷದ ಹಿಂದೆ, 2020 ಮೇ 1ರಂದು ಹೊಂದಿದ್ದ ಷೇರು ಬೆಲೆ ಕೇವಲ 19 ಪೈಸೆ ಮಾತ್ರ. ಮೇ 17ರಂದು ಅದರ ಬೆಲೆ ಬರೋಬ್ಬರಿ 27 ರುಪಾಯಿ ಆಗಿತ್ತು. ಈಗ ಮೇ 25ರಂದು ಬೆಲೆ 25.30 ರುಪಾಯಿಗೆ ಇಳಿದಿದೆ.

ಇದನ್ನೂ ಓದಿMahindra CIE: ಸಿಐಇ ಆಟೊಮೋಟಿವ್​ನಲ್ಲಿನ ಎಲ್ಲ ಪಾಲು ಮಾರಿದ ಮಹೀಂದ್ರ; ಎರಡೂ ಕಂಪನಿಗಳ ಷೇರಿಗೆ ಒಳ್ಳೆಯ ಡಿಮ್ಯಾಂಡ್

2020ರಲ್ಲಿ ಇದರ ಬೆಲೆ 19 ಪೈಸೆಯಷ್ಟಿದ್ದಾಗ 1 ಲಕ್ಷ ರೂ ಮೊತ್ತದಷ್ಟು ಹೂಡಿಕೆ ಮಾಡಿದವರು 2023 ಮೇ 17ರಂದು ಮಾರಿದ್ದರೆ 1.42 ಕೋಟಿ ರೂ ಸಂಪಾದನೆ ಮಾಡಬಹುದಿತ್ತು. ಕೆಲ ಜನರು ಷೇರುಪೇಟೆಯಿಂದ ದಿಢೀರ್ ಸಾಹುಕಾರರಾದರು ಎಂದು ನಾವು ಕೇಳುವ ಕಥೆ ಬಹುಶಃ ಇಂಥವೇ. ಇಂಥ ಮಲ್ಟಿಬ್ಯಾಗರ್ ಸ್ಟಾಕ್​ಗಳು ಸಿಕ್ಕವರೇ ಅದೃಷ್ಟಶಾಲಿಗಳು. ಹಾಗಂತ, ಮೂರು ವರ್ಷಗಳಲ್ಲಿ ಇದು ಸಖತ್ತಾಗಿ ಏರಿದೆ ಎಂದು ನಂಬಿ ಇದರ ಮೇಲೆ ಈಗ ಹೂಡಿಕೆ ಮಾಡಿದರೆ ಇನ್ನೂ 3 ವರ್ಷದಲ್ಲಿ ಇದು ಹೀಗೇ ಹೆಚ್ಚುತ್ತಾ ಹೋಗುತ್ತದೆ ಎನ್ನುವುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಅದೇ ಷೇರುಪೇಟೆಯ ಅದೃಷ್ಟದಾಟದ ಮಹಿಮೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ