Insurance Policy Premium: ವಿಮಾ ಪಾಲಿಸಿ ಪ್ರೀಮಿಯಂ ಸಹ ಹೆಚ್ಚಳವಾಗಲಿದೆ, ಕಾರಣ ಇಲ್ಲಿದೆ

personal finance: ಇತ್ತೀಚಿನ ದಿನಗಳಲ್ಲಿ ಜೀವ ಭದ್ರತೆ ಬಯಸಿ ಎಲ್ಲರೂ ವಿಮೆ ತೆಗೆದುಕೊಳ್ಳುತ್ತಿದ್ದಾರೆ. ಜೀವಕ್ಕೆ ಬೆದರಿಕೆ ಹೆಚ್ಚುತ್ತಿರುವುದೂ ಇದಕ್ಕೆ ಕಾರಣವಾಗಿದೆ. ಅದರಲ್ಲೂ ಕೊರೋನಾ ನಂತರ ವಿಮೆ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ!

Insurance Policy Premium: ವಿಮಾ ಪಾಲಿಸಿ ಪ್ರೀಮಿಯಂ ಸಹ ಹೆಚ್ಚಳವಾಗಲಿದೆ, ಕಾರಣ ಇಲ್ಲಿದೆ
ಹೆಚ್ಚಳವಾಗಲಿದೆ ವಿಮಾ ಪಾಲಿಸಿ ಪ್ರೀಮಿಯಂ
Follow us
|

Updated on: May 10, 2023 | 12:40 PM

ಇತ್ತೀಚಿನ ದಿನಗಳಲ್ಲಿ ಜೀವ ಭದ್ರತೆ ಬಯಸಿ ಎಲ್ಲರೂ ವಿಮೆ ತೆಗೆದುಕೊಳ್ಳುತ್ತಿದ್ದಾರೆ (personal finance). ಜೀವಕ್ಕೆ ಬೆದರಿಕೆ ಹೆಚ್ಚುತ್ತಿರುವುದೂ ಇದಕ್ಕೆ ಕಾರಣವಾಗಿದೆ. ಅದರಲ್ಲೂ ಕೊರೋನಾ ನಂತರ ವಿಮಾ ಪಾಲಿಸಿಗಳನ್ನು (Insurance policy) ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ! ಆರೋಗ್ಯ ವಿಮೆಯ ಜೊತೆಗೆ ವಿವಿಧ ರೀತಿಯ ವಿಮಾ ಪಾಲಿಸಿಗಳೂ ಲಭ್ಯವಿವೆ. ಆದರೆ ಮುಂಬರುವ ದಿನಗಳಲ್ಲಿ ಪ್ರೀಮಿಯಂ ಹಣ (premium) ಈಗಿನದ್ದಕ್ಕಿಂತ ಹೆಚ್ಚಾಗುವ ಸಾಧ್ಯತೆಗಳಿವೆ.

ವಿಮಾ ಪಾಲಿಸಿ ಪ್ರೀಮಿಯಂಗಳು 10 % ವರೆಗೆ ಹೆಚ್ಚಾಗುವ ಆತಂಕವಿದೆ. ಆರೋಗ್ಯ, ಮೋಟಾರು, ಆಸ್ತಿ ಮತ್ತು ಇತರ ವಿಧದ ವಿಮಾ ಪಾಲಿಸಿಗಳ ಪ್ರೀಮಿಯಂಗಳು ಸಹ ಹೆಚ್ಚಾಗಬಹುದು. ಮುಂದಿನ ಅವಧಿಯಲ್ಲಿ ಶ್ರೀಸಾಮಾನ್ಯನ ಮೇಲೆ ಹಣದುಬ್ಬರದ ಹೊರೆ ಪರಿಣಾಮ ಮತ್ತಷ್ಟು ಹೆಚ್ಚಾಗಬಹುದು ಎನ್ನುತ್ತಾರೆ ತಜ್ಞರು. ಅಂತಹ ಪಾಲಿಸಿಗಳಿಗೆ ವಿಮಾ ಕಂತುಗಳು 10 % ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಜಾಗತಿಕ ಮರುವಿಮೆ ಕಂಪನಿಗಳು ಗಮನಾರ್ಹ ನಷ್ಟವನ್ನು ಅನುಭವಿಸಿವೆ. ಇದರೊಂದಿಗೆ, ಈ ಕಂಪನಿಗಳು ಅದಾಗಲೇ ತಮ್ಮ ದರವನ್ನು 40 ರಿಂದ 60% ಹೆಚ್ಚಿಸಿವೆ.

Also Read: LIC Premium Income: ಪ್ರೀಮಿಯಮ್​ಗಳಿಂದ ಎಲ್​ಐಸಿ ಈ ವರ್ಷ ಗಳಿಸಿದ ಆದಾಯ ಎಷ್ಟು? ಖಾಸಗಿ ವಿಮಾ ಕಂಪನಿಗಳದ್ದೆಷ್ಟು?

ಮರುವಿಮೆ ದರಗಳ ಹೆಚ್ಚಳದಿಂದಾಗಿ, ಭಾರತದಲ್ಲಿ ಆರೋಗ್ಯ, ಆಟೋ ಮತ್ತು ಆಸ್ತಿ ಪಾಲಿಸಿಗಳ ಪ್ರೀಮಿಯಂಗಳು 10 % ರಷ್ಟು ಹೆಚ್ಚಾಗುವ ಆತಂಕಗಳಿವೆ. ಇದರರ್ಥ ನೀವು ಮೊದಲು ರೂ 10,000 ಪ್ರೀಮಿಯಂ ಪಾವತಿಸಿದ್ದರೆ, ನಂತರ ನೀವು ರೂ 11,000 ಪಾವತಿಸಬೇಕಾಗಬಹುದು. ವಿಮಾ ಕಂಪನಿಗಳು ಮರು-ವಿಮಾ ಕಂಪನಿಗಳೊಂದಿಗೆ ವಿಮೆಯನ್ನು ಖರೀದಿಸುವ ಮೂಲಕ ತಮ್ಮ ನಷ್ಟವನ್ನು ಭರಿಸುತ್ತವೆ.

ಮರು-ವಿಮಾ ಕಂಪನಿಗಳು ಪ್ರೀಮಿಯಂಗಳನ್ನು ಹೆಚ್ಚಿಸಿದಂತೆ, ಸಾಮಾನ್ಯ ವಿಮಾ ಕಂಪನಿಗಳು ಸಾರ್ವಜನಿಕರಿಗೆ ನೀಡುವ ಪಾಲಿಸಿಗಳಿಗೆ ಪ್ರೀಮಿಯಂಗಳನ್ನು ಹೆಚ್ಚಿಸಬಹುದು. ಇದರೊಂದಿಗೆ, ವಿಮಾ ಕಂಪನಿಗಳು ಪ್ರೀಮಿಯಂಗಳನ್ನು ಶೇಕಡಾ 10 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಈ ಕಾರಣದಿಂದಾಗಿ, ಸಾಮಾನ್ಯ ವಿಮಾ ಪಾಲಿಸಿಗಳು ಹೆಚ್ಚು ದುಬಾರಿಯಾಗುತ್ತವೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾರ್ಥಿಗಳು
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
ಎದೆ ಝಲ್​ ಎನಿಸುವ ದೃಶ್ಯ: ಬಾಲಕನ ಮೇಲೆ ಹರಿದ ಸರ್ಕಾರಿ ಬಸ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
Duleep Trophy 2024: 9 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ
'ಕಲ್ಕಿ' ಅವತಾರದಲ್ಲಿ ಗಣಪತಿ, ತಮಿಳುನಾಡಿನಲ್ಲಿ ಯಾಸ್ಕಿನ್ ಲೋಕ ಸೃಷ್ಟಿ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಭಾವೈಕ್ಯತೆ ಸಂದೇಶ ಸಾರಿದ ಮುಸ್ಲಿಂ ಕುಟುಂಬ, 24 ವರ್ಷಗಳಿಂದ ಗಣೇಶ ಹಬ್ಬಆಚರಣೆ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ