Sign In

By signing in or creating an account, you agree with Associated Broadcasting Company's Terms & Conditions and Privacy Policy.

ITR: ಈವರೆಗೂ ಐಟಿ ರಿಟರ್ನ್ ಸಲ್ಲಿಸಿದವರ ಸಂಖ್ಯೆ 5.83 ಕೋಟಿ; ಡೆಡ್​ಲೈನ್​ಗೆ ಇನ್ನೊಂದೇ ದಿನ ಬಾಕಿ

Income Tax Return: ಜುಲೈ 30, ಮಧ್ಯಾಹ್ನ 1 ಗಂಟೆಯವರೆಗೂ 5.83 ಕೋಟಿ ಐನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಯಾಗಿವೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ. ಜುಲೈ 31ಕ್ಕೆ ಐಟಿಆರ್ ಸಲ್ಲಿಸಲು ಕೊನೆಯ ದಿನವಾಗಿದೆ.

ITR: ಈವರೆಗೂ ಐಟಿ ರಿಟರ್ನ್ ಸಲ್ಲಿಸಿದವರ ಸಂಖ್ಯೆ 5.83 ಕೋಟಿ; ಡೆಡ್​ಲೈನ್​ಗೆ ಇನ್ನೊಂದೇ ದಿನ ಬಾಕಿ
ಆದಾಯ ತೆರಿಗೆ ಇಲಾಖೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 30, 2023 | 7:03 PM

ನವದೆಹಲಿ, ಜುಲೈ 30: ಹಿಂದಿನ ಹಣಕಾಸು ವರ್ಷವಾದ 2022-23ರ ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ (ITR Filing) ಜುಲೈ 31 ಕೊನೆಯ ದಿನವಾಗಿದೆ. ಇನ್ನೊಂದು ಬಾಕಿ ಇರುವಂತೆ ಒಟ್ಟು 5.83 ಕೋಟಿ ಐಟಿಆರ್​ಗಳು ಸಲ್ಲಿಕೆಯಾಗಿರುವ ಮಾಹಿತಿ ತಿಳಿದುಬಂದಿದೆ. ಐಟಿ ಇಲಾಖೆ ಈ ಸಂಬಂಧ ಇಂದು (ಜುಲೈ 30) ಟ್ವೀಟ್ ಮಾಡಿ ಮಾಹಿತಿ ತಿಳಿಸಿದೆ. ಇನ್ಕಮ್ ಟ್ಯಾಕ್ಸ್ ಪೋರ್ಟಲ್​ನಲ್ಲಿರುವ ಲೈವ್ ಮಾಹಿತಿ ಪ್ರಕಾರ ಈವರೆಗೂ 5.73 ಕೋಟಿ ಮಂದಿ ಐಟಿಆರ್ ಸಲ್ಲಿಸಿರುವುದು ತಿಳಿದುಬಂದಿದೆ.

‘ಇವತ್ತು (ಜುಲೈ 30) ಮಧ್ಯಾಹ್ನ 1 ಗಂಟೆಯವರೆಗೂ 5.83 ಕೋಟಿ ಐಟಿಆರ್​ಗಳು ಫೈಲ್ ಆಗಿವೆ. ಕಳೆದ ವರ್ಷ ಜುಲೈ 31ರವರೆಗೂ ಸಲ್ಲಿಕೆಯಾಗಿದ್ದ ಐಟಿಆರ್​ಗಳ ಪ್ರಮಾಣಕ್ಕಿಂತ ಇದು ಹೆಚ್ಚು’ ಎಂದು ಐಟಿ ಇಲಾಖೆ ತನ್ನ ಟ್ವೀಟ್​ನಲ್ಲಿ ತಿಳಿಸಿದೆ.

ಟ್ಯಾಕ್ಸ್ ರಿಟರ್ನ್ ಫೈಲಿಂಗ್ ಬಗ್ಗೆ ಅಂಕಿ ಅಂಶ ಬಹಿರಂಗಪಡಿಸಿದ ಐಟಿ ಇಲಾಖೆ, ನಿನ್ನೆ (ಜುಲೈ 29) 1.78 ಕೋಟಿ ಮಂದಿ ಇ-ಫೈಲಿಂಗ್ ಪೋರ್ಟಲ್​ಗೆ ಲಾಗಿನ್ ಆಗಿರುವುದನ್ನು ಬಹಿರಂಗಪಡಿಸಿದೆ. ಹಾಗೆಯೇ, ಇಂದು ಮಧ್ಯಾಹ್ನ 1 ಗಂಟೆಯವರೆಗೆ 46 ಲಕ್ಷ ಮಂದಿಯಿಂದ ಲಾಗಿನ್ ಆಗಿದೆ ಎಂದೂ ಅದು ಹೇಳಿದೆ.

ಇದನ್ನೂ ಓದಿ: ITR: ಹೊಸ ಪೋರ್ಟಲ್​ನಲ್ಲಿ ಐಟಿ ರಿಟರ್ನ್ ಫೈಲ್ ಮಾಡುವುದು ಬಹಳ ಸುಲಭ; ಯಾರೂ ಬೇಕಾದರೂ ಐಟಿಆರ್ ಸಲ್ಲಿಕೆ ಮಾಡುವಷ್ಟು ಸರಳ ಕ್ರಮಗಳು

‘ಇಂದು ಮಧ್ಯಾಹ್ನ 1 ಗಂಟೆವರೆಗೆ 10.39 ಲಕ್ಷ ಐಟಿಆರ್​ಗಳು ಸಲ್ಲಿಕೆಯಾಗಿವೆ. ಕಳೆದ 1 ಗಂಟೆಯಲ್ಲಿ 3.04 ಲಕ್ಷ ಐಟಿಆರ್​ಗಳು ಫೈಲಿಂಗ್ ಆಗಿವೆ’ ಎಂದು ಐಟಿ ಇಲಾಖೆ ಮಧ್ಯಾಹ್ನ 2 ಗಂಟೆಯ ಟ್ವೀಟ್​ನಲ್ಲಿ ತಿಳಿಸಿದೆ.

ಇನ್ನು ಇನ್ಕಮ್ ಟ್ಯಾಕ್ಸ್ ಪೋರ್ಟಲ್​ನಲ್ಲಿರುವ ಮಾಹಿತಿ ಪ್ರಕಾರ, ಇದೂವರೆಗೂ ನೊಂದಾಯಿಸಿಕೊಂಡಿರುವ ವೈಯಕ್ತಿಕ ತೆರಿಗೆಪಾವತಿದಾರರ ಸಂಖ್ಯೆ 11.51 ಕೋಟಿ ಎನ್ನಲಾಗಿದೆ. ಸಲ್ಲಿಕೆಯಾಗಿರುವ 5.73 ಕೋಟಿ ಐಟಿಆರ್​ಗಳ ಪೈಕಿ ಸುಮಾರು 5 ಕೋಟಿಯಷ್ಟು ಐಟಿಆರ್​ಗಳು ವೆರಿಫೈ ಆಗಿವೆ. ಇದರಲ್ಲಿ 3.18 ಕೋಟಿ ಐಟಿಆರ್​ಗಳನ್ನು ಪ್ರೋಸಸ್ ಮಾಡಲಾಗಿದೆ.

ಸಂಬಳದಾರರು ಹಾಗೂ ಅಕೌಂಟ್ ಆಡಿಟಿಂಗ್ ಅಗತ್ಯ ಇಲ್ಲದವರು ಐಟಿಆರ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಇನ್ಕಮ್ ಟ್ಯಾಕ್ಸ್ ಪಾವತಿಸುವ ಬಹುತೇಕ ಮಂದಿಗೆ ಇದೇ ಡೆಡ್​ಲೈನ್ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ