AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITR: ಈವರೆಗೂ ಐಟಿ ರಿಟರ್ನ್ ಸಲ್ಲಿಸಿದವರ ಸಂಖ್ಯೆ 5.83 ಕೋಟಿ; ಡೆಡ್​ಲೈನ್​ಗೆ ಇನ್ನೊಂದೇ ದಿನ ಬಾಕಿ

Income Tax Return: ಜುಲೈ 30, ಮಧ್ಯಾಹ್ನ 1 ಗಂಟೆಯವರೆಗೂ 5.83 ಕೋಟಿ ಐನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಯಾಗಿವೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ. ಜುಲೈ 31ಕ್ಕೆ ಐಟಿಆರ್ ಸಲ್ಲಿಸಲು ಕೊನೆಯ ದಿನವಾಗಿದೆ.

ITR: ಈವರೆಗೂ ಐಟಿ ರಿಟರ್ನ್ ಸಲ್ಲಿಸಿದವರ ಸಂಖ್ಯೆ 5.83 ಕೋಟಿ; ಡೆಡ್​ಲೈನ್​ಗೆ ಇನ್ನೊಂದೇ ದಿನ ಬಾಕಿ
ಆದಾಯ ತೆರಿಗೆ ಇಲಾಖೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 30, 2023 | 7:03 PM

ನವದೆಹಲಿ, ಜುಲೈ 30: ಹಿಂದಿನ ಹಣಕಾಸು ವರ್ಷವಾದ 2022-23ರ ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ (ITR Filing) ಜುಲೈ 31 ಕೊನೆಯ ದಿನವಾಗಿದೆ. ಇನ್ನೊಂದು ಬಾಕಿ ಇರುವಂತೆ ಒಟ್ಟು 5.83 ಕೋಟಿ ಐಟಿಆರ್​ಗಳು ಸಲ್ಲಿಕೆಯಾಗಿರುವ ಮಾಹಿತಿ ತಿಳಿದುಬಂದಿದೆ. ಐಟಿ ಇಲಾಖೆ ಈ ಸಂಬಂಧ ಇಂದು (ಜುಲೈ 30) ಟ್ವೀಟ್ ಮಾಡಿ ಮಾಹಿತಿ ತಿಳಿಸಿದೆ. ಇನ್ಕಮ್ ಟ್ಯಾಕ್ಸ್ ಪೋರ್ಟಲ್​ನಲ್ಲಿರುವ ಲೈವ್ ಮಾಹಿತಿ ಪ್ರಕಾರ ಈವರೆಗೂ 5.73 ಕೋಟಿ ಮಂದಿ ಐಟಿಆರ್ ಸಲ್ಲಿಸಿರುವುದು ತಿಳಿದುಬಂದಿದೆ.

‘ಇವತ್ತು (ಜುಲೈ 30) ಮಧ್ಯಾಹ್ನ 1 ಗಂಟೆಯವರೆಗೂ 5.83 ಕೋಟಿ ಐಟಿಆರ್​ಗಳು ಫೈಲ್ ಆಗಿವೆ. ಕಳೆದ ವರ್ಷ ಜುಲೈ 31ರವರೆಗೂ ಸಲ್ಲಿಕೆಯಾಗಿದ್ದ ಐಟಿಆರ್​ಗಳ ಪ್ರಮಾಣಕ್ಕಿಂತ ಇದು ಹೆಚ್ಚು’ ಎಂದು ಐಟಿ ಇಲಾಖೆ ತನ್ನ ಟ್ವೀಟ್​ನಲ್ಲಿ ತಿಳಿಸಿದೆ.

ಟ್ಯಾಕ್ಸ್ ರಿಟರ್ನ್ ಫೈಲಿಂಗ್ ಬಗ್ಗೆ ಅಂಕಿ ಅಂಶ ಬಹಿರಂಗಪಡಿಸಿದ ಐಟಿ ಇಲಾಖೆ, ನಿನ್ನೆ (ಜುಲೈ 29) 1.78 ಕೋಟಿ ಮಂದಿ ಇ-ಫೈಲಿಂಗ್ ಪೋರ್ಟಲ್​ಗೆ ಲಾಗಿನ್ ಆಗಿರುವುದನ್ನು ಬಹಿರಂಗಪಡಿಸಿದೆ. ಹಾಗೆಯೇ, ಇಂದು ಮಧ್ಯಾಹ್ನ 1 ಗಂಟೆಯವರೆಗೆ 46 ಲಕ್ಷ ಮಂದಿಯಿಂದ ಲಾಗಿನ್ ಆಗಿದೆ ಎಂದೂ ಅದು ಹೇಳಿದೆ.

ಇದನ್ನೂ ಓದಿ: ITR: ಹೊಸ ಪೋರ್ಟಲ್​ನಲ್ಲಿ ಐಟಿ ರಿಟರ್ನ್ ಫೈಲ್ ಮಾಡುವುದು ಬಹಳ ಸುಲಭ; ಯಾರೂ ಬೇಕಾದರೂ ಐಟಿಆರ್ ಸಲ್ಲಿಕೆ ಮಾಡುವಷ್ಟು ಸರಳ ಕ್ರಮಗಳು

‘ಇಂದು ಮಧ್ಯಾಹ್ನ 1 ಗಂಟೆವರೆಗೆ 10.39 ಲಕ್ಷ ಐಟಿಆರ್​ಗಳು ಸಲ್ಲಿಕೆಯಾಗಿವೆ. ಕಳೆದ 1 ಗಂಟೆಯಲ್ಲಿ 3.04 ಲಕ್ಷ ಐಟಿಆರ್​ಗಳು ಫೈಲಿಂಗ್ ಆಗಿವೆ’ ಎಂದು ಐಟಿ ಇಲಾಖೆ ಮಧ್ಯಾಹ್ನ 2 ಗಂಟೆಯ ಟ್ವೀಟ್​ನಲ್ಲಿ ತಿಳಿಸಿದೆ.

ಇನ್ನು ಇನ್ಕಮ್ ಟ್ಯಾಕ್ಸ್ ಪೋರ್ಟಲ್​ನಲ್ಲಿರುವ ಮಾಹಿತಿ ಪ್ರಕಾರ, ಇದೂವರೆಗೂ ನೊಂದಾಯಿಸಿಕೊಂಡಿರುವ ವೈಯಕ್ತಿಕ ತೆರಿಗೆಪಾವತಿದಾರರ ಸಂಖ್ಯೆ 11.51 ಕೋಟಿ ಎನ್ನಲಾಗಿದೆ. ಸಲ್ಲಿಕೆಯಾಗಿರುವ 5.73 ಕೋಟಿ ಐಟಿಆರ್​ಗಳ ಪೈಕಿ ಸುಮಾರು 5 ಕೋಟಿಯಷ್ಟು ಐಟಿಆರ್​ಗಳು ವೆರಿಫೈ ಆಗಿವೆ. ಇದರಲ್ಲಿ 3.18 ಕೋಟಿ ಐಟಿಆರ್​ಗಳನ್ನು ಪ್ರೋಸಸ್ ಮಾಡಲಾಗಿದೆ.

ಸಂಬಳದಾರರು ಹಾಗೂ ಅಕೌಂಟ್ ಆಡಿಟಿಂಗ್ ಅಗತ್ಯ ಇಲ್ಲದವರು ಐಟಿಆರ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಇನ್ಕಮ್ ಟ್ಯಾಕ್ಸ್ ಪಾವತಿಸುವ ಬಹುತೇಕ ಮಂದಿಗೆ ಇದೇ ಡೆಡ್​ಲೈನ್ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ