Sign In

By signing in or creating an account, you agree with Associated Broadcasting Company's Terms & Conditions and Privacy Policy.

Kisan Vikas Patra Interest Rate 2023: ಹೊಸ ವರ್ಷದಲ್ಲಿ ಎಷ್ಟಿರಲಿದೆ ಕಿಸಾನ್ ವಿಕಾಸ್ ಪತ್ರ ಬಡ್ಡಿ?

KVP Details; ಹೆಚ್ಚುತ್ತಿರುವ ಹಣದುಬ್ಬರ ತಡೆಗಾಗಿ ಆರ್​ಬಿಐ ರೆಪೊ ದರವನ್ನು ಸತತವಾಗಿ ಹೆಚ್ಚು ಮಾಡಿರುವುದು ಮತ್ತು ಮುಂದಿನ ಹಣಕಾಸು ನೀತಿಯಲ್ಲಿ ಮತ್ತೆ ಏರಿಕೆ ಮಾಡುವ ಸುಳಿವು ನೀಡಿರುವುದು ಕಿಸಾನ್ ವಿಕಾಸ್ ಪತ್ರ ಠೇವಣಿಯ ಬಡ್ಡಿ ದರ ಹೆಚ್ಚಳದ ನಿರೀಕ್ಷೆ ಮೂಡಿಸಿದೆ.

Kisan Vikas Patra Interest Rate 2023: ಹೊಸ ವರ್ಷದಲ್ಲಿ ಎಷ್ಟಿರಲಿದೆ ಕಿಸಾನ್ ವಿಕಾಸ್ ಪತ್ರ ಬಡ್ಡಿ?
ಕಿಸಾನ್ ವಿಕಾಸ್ ಪತ್ರ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Ganapathi Sharma

Updated on: Dec 29, 2022 | 4:37 PM

ಕಿಸಾನ್ ವಿಕಾಸ್ ಪತ್ರದ (Kisan Vikas Patra) ಅಥವಾ ಕೆವಿಪಿ ಠೇವಣಿಯ ಹಾಲಿ ಬಡ್ಡಿ ದರ ವಾರ್ಷಿಕವಾಗಿ ಶೇಕಡಾ 7ರಷ್ಟಿದೆ. ಡಿಸೆಂಬರ್ 31ರ ವರೆಗೆ ಈ ಬಡ್ಡಿ ದರದಲ್ಲಿ (Interest Rate) ಯಾವುದೇ ಬದಲಾವಣೆ ಆಗುವ ಸಾಧ್ಯತೆ ಇಲ್ಲವಾದ್ದರಿಂದ 2023ರ ಮೊದಲ ತ್ರೈಮಾಸಿಕದಲ್ಲಿ ಇದೇ ಬಡ್ಡಿ ದರ ಮುಂದುವರಿಯಲಿದೆ. ಆದರೆ ಹೆಚ್ಚುತ್ತಿರುವ ಹಣದುಬ್ಬರ ತಡೆಗಾಗಿ ಆರ್​ಬಿಐ ರೆಪೊ ದರವನ್ನು ಸತತವಾಗಿ ಹೆಚ್ಚು ಮಾಡಿರುವುದು ಮತ್ತು ಮುಂದಿನ ಹಣಕಾಸು ನೀತಿಯಲ್ಲಿ ಮತ್ತೆ ಏರಿಕೆ ಮಾಡುವ ಸುಳಿವು ನೀಡಿರುವುದು ಕಿಸಾನ್ ವಿಕಾಸ್ ಪತ್ರ ಠೇವಣಿಯ ಬಡ್ಡಿ ದರ ಹೆಚ್ಚಳದ ನಿರೀಕ್ಷೆ ಮೂಡಿಸಿದೆ. ಕೆಲವು ಬ್ಯಾಂಕ್​ಗಳು ಈಗ ಕಿಸಾನ್ ವಿಕಾಸ್ ಪತ್ರ ಠೇವಣಿಗೆ ನೀಡುವುದಕ್ಕಿಂತಲೂ ಹೆಚ್ಚು ಬಡ್ಡಿಯನ್ನು ಸ್ಥಿರ ಠೇವಣಿಗೆ (ಎಫ್​​ಡಿ) ನೀಡುತ್ತಿವೆ.

2023ರಲ್ಲಿ ಕಿಸಾನ್ ವಿಕಾಸ್ ಪತ್ರ ಬಡ್ಡಿ ದರ

ಕಿಸಾನ್ ವಿಕಾಸ್ ಪತ್ರದ ಬಡ್ಡಿ ದರವನ್ನು ಕೇಂದ್ರ ಸರ್ಕಾರ ತ್ರೈಮಾಸಿಕ ಅವಧಿಗೊಮ್ಮೆ ಪರಿಷ್ಕರಣೆ ಮಾಡಬಹುದಾಗಿದೆ. ಮುಂದಿನ ಪರಿಷ್ಕರಣೆ (2023ರ ಜನವರಿ – ಮಾರ್ಚ್​ ಅವಧಿಗೆ) 2022ರ ಡಿಸೆಂಬರ್ 31ರ ಒಳಗೆ ನಡೆಯಬೇಕಾಗಿದೆ. ಇನ್ನು 2 ದಿನಗಳ ಒಳಗೆ ಬಡ್ಡಿ ದರ ಹೆಚ್ಚಳವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರ ದೊರೆಯಲಿದೆ.

ಇದನ್ನೂ ಓದಿ: SIP Vs Lumpsum: ಲಂಸಮ್ ಅಥವಾ ಎಸ್​ಐಪಿ; 2023ರಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗೆ ಯಾವುದು ಉತ್ತಮ? ತಜ್ಞರ ಸಲಹೆ ಇಲ್ಲಿದೆ

ಕಿಸಾನ್ ವಿಕಾಸ್ ಪತ್ರದ ಕೆಲವು ವಿಶೇಷತೆಗಳು

ಗ್ಯಾರಂಟೀಡ್ ರಿಟರ್ನ್ಸ್: ಕಿಸಾನ್ ವಿಕಾಸ್ ಪತ್ರ ಠೇವಣಿಯನ್ನು ಅಂಚೆ ಕಚೇರಿಗಳಲ್ಲಿ ತೆರೆಯಲಾಗುತ್ತದೆ. ಇದು ಸಾವರಿನ್ ಗ್ಯಾರಂಟೀ ಒಳಗೊಂಡ ಠೇವಣಿಯಾಗಿದೆ. ಅಂಚೆ ಕಚೇರಿಯಲ್ಲೇನಾದರೂ ಸಮಸ್ಯೆಯಾದರೂ ಸರ್ಕಾರ ಈ ಠೇವಣಿಗೆ ಖಾತರಿ ನೀಡುತ್ತದೆ.

123 ತಿಂಗಳಲ್ಲಿ ದ್ವಿಗುಣವಾಗುವ ಆದಾಯ: ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿದ ಮೊತ್ತವು 10 ವರ್ಷ 3 ತಿಂಗಳ ನಂತರ ದ್ವಿಗುಣಗೊಳ್ಳುತ್ತದೆ.

ಠೇವಣಿ ಮಿತಿ: ಕನಿಷ್ಠ 1,000 ರೂ. ಠೇವಣಿ ಇಡಬೇಕಾಗುತ್ತದೆ. ಗರಿಷ್ಠ ಮಿತಿ ಇಲ್ಲ.

ಅಪ್ರಾಪ್ತರ ಖಾತೆ: 10 ವರ್ಷ ಮೇಲ್ಪಟ್ಟ ಮಕ್ಕಳೂ ಸಹ ತಮ್ಮದೇ ಹೆಸರಿನಲ್ಲಿ ಕಿಸಾನ್ ವಿಕಾಸ್ ಪತ್ರ ಖಾತೆ ತೆರೆಯಬಹುದು.

ಖಾತೆಗೆ ಮಿತಿಯಿಲ್ಲ: ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಕಿಸಾನ್ ವಿಕಾಸ್ ಪತ್ರ ಖಾತೆಯನ್ನು ತೆರೆಯಬಹುದಾಗಿದೆ.

ಅವಧಿಪೂರ್ವ ಹಿಂಪಡೆಯುವಿಕೆ: ಕಿಸಾನ್ ವಿಕಾಸ್ ಪತ್ರದ ಠೇವಣಿಯನ್ನು 2 ವರ್ಷ ಮತ್ತು 6 ತಿಂಗಳು ಕಳೆದ ನಂತರ ಯಾವಾಗ ಬೇಕಾದರೂ ಅವಧಿಪೂರ್ವ ವಾಪಸ್ ಪಡೆಯಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !