AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯೂಚುವಲ್ ಫಂಡ್ ಎಸ್​ಐಪಿ ಆರಂಭಿಸಿ, ಮಧ್ಯದಲ್ಲಿ ನಿಲ್ಲಿಸಬಹುದಾ? ಕ್ರಮ, ದಂಡ ಇತ್ಯಾದಿ ವಿವರ

How To Cancel, Pause, Stop SIP Mid-way: ಮ್ಯುಚುವಲ್ ಫಂಡ್ ಎಸ್​ಐಪಿಯಲ್ಲಿ ನಾವು ಪ್ರತೀ ತಿಂಗಳು ಹೂಡಿಕೆ ಮಾಡುತ್ತಿರುತ್ತೇವೆ. ಕೆಲವೊಮ್ಮೆ ನಾವು ಮಧ್ಯದಲ್ಲಿ ಸ್ಕೀಮ್ ಅನ್ನು ನಿಲ್ಲಿಸಬೇಕಾಗಬಹುದು. ಅದಕ್ಕೆ ಮ್ಯೂಚುವಲ್ ಫಂಡ್ ಸಂಸ್ಥೆಗಳು ಅವಕಾಶ ಕೊಡುತ್ತವೆ.

ಮ್ಯೂಚುವಲ್ ಫಂಡ್ ಎಸ್​ಐಪಿ ಆರಂಭಿಸಿ, ಮಧ್ಯದಲ್ಲಿ ನಿಲ್ಲಿಸಬಹುದಾ? ಕ್ರಮ, ದಂಡ ಇತ್ಯಾದಿ ವಿವರ
ಮ್ಯೂಚುವಲ್ ಫಂಡ್ ಎಸ್​ಐಪಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:Jul 31, 2023 | 10:48 AM

ಮ್ಯೂಚುವಲ್ ಫಂಡ್ ಎಸ್​ಐಪಿಗಳು (Mutual Fund SIP) ಈಗ ಜನಪ್ರಿಯ ಹೂಡಿಕೆ ಆಯ್ಕೆಗಳಾಗಿವೆ. ಎಸ್​ಐಪಿ ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್. ಷೇರುಗಳಂತಹ ಈಕ್ವಿಟಿ ಮಾರುಕಟ್ಟೆ ಅಥವಾ ಗವರ್ನ್ಮೆಂಟ್ ಬಾಂಡ್ ಇತ್ಯಾದಿ ಡೆಟ್ ಮಾರುಕಟ್ಟೆಗಳ ಮೇಲೆ ಹಣ ಹೂಡಿಕೆ ಮಾಡುವ ಮ್ಯುಚುವಲ್ ಫಂಡ್​ಗಳು ಎಸ್​ಐಪಿ ಸ್ಕೀಮ್​ಗಳನ್ನು ಆಫರ್ ಮಾಡುತ್ತವೆ. ನೀವು ಯಾವುದಾದರೂ ನಿರ್ದಿಷ್ಟ ಮೊತ್ತದ ಮತ್ತು ನಿರ್ದಿಷ್ಟ ಅವಧಿಗೆ ಎಸ್​ಐಪಿ ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ, ತಿಂಗಳಿಗೆ 10,000 ರೂನಂತೆ 20 ವರ್ಷದವರೆಗಿನ ಎಸ್​ಐಪಿ ಪಡೆಯಬಹುದು.

ನೀವು ಮೇಲಿನ ಉದಾಹರಣೆಯಂತೆ ಎಸ್​ಐಪಿ ಪಡೆದರೆ ಅಷ್ಟೂ ವರ್ಷ ನೀವು ಹೂಡಿಕೆ ಮಾಡುತ್ತಿರಬೇಕು. ಆರ್​ಡಿಯಲ್ಲಿರುವಂತೆ ಇಲ್ಲಿಯೂ ಕೂಡ ನಿಮ್ಮ ಎಸ್​ಐಪಿ ಹಣವು ಪ್ರತೀ ತಿಂಗಳು ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತ ಆಗುತ್ತಿರುತ್ತದೆ.

ಎಸ್​ಐಪಿಯನ್ನು ರದ್ದಪಡಿಸುವುದು ಹೇಗೆ?

ಮ್ಯೂಚವಲ್ ಫಂಡ್ ಎಸ್​ಐಪಿ ಸ್ಕೀಮ್ ಅನ್ನು ನೀವು ರದ್ದುಪಡಿಸಲು ಸಾಧ್ಯ. ಸ್ಕೀಮ್​ನಲ್ಲಿ ನಿರ್ದಿಷ್ಟ ಲಾಕ್ ಇನ್ ಅವಧಿ ಇರುತ್ತದೆ. ಆ ಅವಧಿ ಕಳೆದ ಬಳಿಕ ನೀವು ಯಾವಾಗ ಬೇಕಾದರೂ ಸ್ಕೀಮ್ ರದ್ದು ಮಾಡಬಹುದು.

ಇದನ್ನೂ ಓದಿ: SIP: ಕ್ವಾಂಟ್ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್​ನಲ್ಲಿ 10,000 ರೂ ಎಸ್​ಐಪಿ; 25 ವರ್ಷದಲ್ಲಿ 3 ಕೋಟಿ ಸಂಪತ್ತು

ನಿಮ್ಮ ಮ್ಯುಚುವಲ್ ಫಂಡ್​ನ ವೆಬ್​ಸೈಟ್​ಗೆ ಲಾಗಿನ್ ಆಗಿ, ನಿಮ್ಮ ಎಸ್​ಐಪಿಯನ್ನು ಆಯ್ದುಕೊಂಡು ‘ಕ್ಯಾನ್ಸಲ್ ಎಸ್​ಐಪಿ’ ಅನ್ನು ಕ್ಲಿಕ್ ಮಾಡಿದರೆ ಎಸ್​ಐಪಿ ರದ್ದಾಗುತ್ತದೆ.

ನೀವು ಎಸ್​ಐಪಿ ರದ್ದು ಮಾಡಿದರೂ ಆವರೆಗಿನ ಹೂಡಿಕೆ ಹಾಗೆಯೇ ಮುಂದುವರಿಯುತ್ತದೆ. ಮುಂದಿನ ಕಂತು ಹಣ ನಿಮ್ಮ ಖಾತೆಯಿಂದ ಡೆಬಿಟ್ ಆಗುವುದು ಮಾತ್ರ ನಿಲ್ಲುತ್ತದೆ.

ಎಸ್​ಐಪಿಯನ್ನೇ ಪೂರ್ತಿ ನಿಲ್ಲಿಸಲು ಸಾಧ್ಯವಿಲ್ಲವಾ?

ಎಸ್​ಐಪಿ ಸ್ಕೀಮ್ ಅನ್ನು ಕ್ಯಾನ್ಸಲ್ ಮಾಡಿದರೆ ಭವಿಷ್ಯದ ಕಂತುಗಳನ್ನು ಕಟ್ಟುವುದು ನಿಂತುಹೋಗುತ್ತದೆ ಅಷ್ಟೇ. ಆದರೆ, ಎಸ್​ಐಪಿಯನ್ನೇ ಪೂರ್ತಿಯಾಗಿ ನಿಲ್ಲಿಸಿ ನಾವು ಆವರೆಗೂ ಕಟ್ಟಿರುವ ಹಣವನ್ನೂ ಹಿಂಪಡೆಯಲು ಸಾಧ್ಯ. ನಿಮ್ಮ ಮ್ಯುಚುವಲ್ ಪಂಡ್ ಏಜೆಂಟ್ ಮುಖಾಂತರ ಕ್ಯಾನ್ಸಲೇಶನ್ ರಿಕ್ವೆಸ್ಟ್ ಅರ್ಜಿ ಸಲ್ಲಿಸಬೇಕಾಗುತ್ತದೆ.

ಪರ್ಯಾಯವಾಗಿ, ನೀವು ಎಸ್​ಐಪಿಗೆ ಇಸಿಎಸ್ ಮುಖಾಂತರ ಹಣ ಪಾವತಿ ಮಾಡುವ ಸೌಲಭ್ಯವನ್ನು ಸಕ್ರಿಯಗೊಳಿಸಿದ್ದರೆ ಆಗ ಬ್ಯಾಂಕ್​ಗೆ ಮನವಿ ಮಾಡಿ, ಇಸಿಎಸ್ ಸೌಲಭ್ಯವನ್ನು ಡೀಆ್ಯಕ್ಟಿವೇಟ್ ಮಾಡಿಸಬೇಕು. ನಂತರ ಮ್ಯೂಚುವಲ್ ಫಂಡ್ ಸಂಸ್ಥೆಗೂ ಅದರ ಮಾಹಿತಿ ನೀಡಬೇಕು. ಅದಕ್ಕಾಗಿ ಮ್ಯೂಚುವಲ್ ಫಂಡ್ ಸಂಸ್ಥೆಯ ಬಳಿ ಇರುವ ಸೂಕ್ತ ಅರ್ಜಿಯೊಂದನ್ನು ಬರ್ತಿ ಮಾಡಿ ತುಂಬಿಸಿ ಸಲ್ಲಿಸಬೇಕು. ಮೂರು ತಿಂಗಳ ಕಾಲ ಎಸ್​ಐಪಿಗೆ ಇಸಿಎಸ್ ಮುಖಾಂತರ ಹಣ ಬರದೇ ಹೋದಾಗ ಅದು ತನ್ನಂತಾನೆ ಟರ್ಮಿನೇಟ್ ಆಗುತ್ತದೆ.

ಇದನ್ನೂ ಓದಿ: ELSS: ತಿಂಗಳಿಗೆ 5,000 ರೂ ಕಟ್ಟಿ, 10 ವರ್ಷದಲ್ಲಿ 22 ಲಕ್ಷದವರೆಗೆ ರಿಟರ್ನ್; ತೆರಿಗೆ ಮತ್ತು ಲಾಭ ಎರಡೂ ಕೊಡುವ ಇಎಲ್​ಎಸ್​ಎಸ್ ಫಂಡ್​ಗಳು

ಎಸ್​ಐಪಿ ರದ್ದುಗೊಳಿಸುವ ಬದಲು ತಾತ್ಕಾಲಿಕವಾಗಿ ವಿರಾಮ ಕೊಡಿ

ಮ್ಯುಚುವಲ್ ಫಂಡ್ ಎಸ್​ಐಪಿಯನ್ನು ರದ್ದುಗೊಳಿಸಲು ಹಣಕಾಸು ಸಂಕಷ್ಟ, ತುರ್ತು ಅಗತ್ಯ ಇತ್ಯಾದಿ ಕಾರಣಗಳಿರಬಹುದು. ನಿರ್ದಿಷ್ಟ ಅವಧಿಯವರೆಗೆ ನಮಗೆ ಎಸ್​ಐಪಿ ಕಟ್ಟಲು ಸಾಕಷ್ಟು ಹಣ ಇಲ್ಲ ಎಂದಿದ್ದರೆ ತಾತ್ಕಾಲಿಕವಾಗಿ ಎಸ್​ಐಪಿ ನಿಲ್ಲಿಸಲು ಸಾಧ್ಯ.

ಅದಕ್ಕಾಗಿ ಮ್ಯೂಚುವಲ್ ಫಂಡ್ ವೆಬ್​ಸೈಟ್​ನಲ್ಲಿ ನೀವು ‘ಪೌಸ್ ಎಸ್​ಐಪಿ’ ಅನ್ನು ಕಾಣಬಹುದು. ಆ ಮೂಲಕ ನೀವು 6 ತಿಂಗಳವರೆಗೆ ಸ್ಕೀಮ್ ಅನ್ನು ನಿಲ್ಲಿಸಬಹುದು. ನೀವು ನಮೂದಿಸಿದ ಅವಧಿಯ ಬಳಿಕ ಎಸ್​ಐಪಿ ಮತ್ತೆ ಚಾಲನೆಗೊಳ್ಳುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:50 am, Mon, 31 July 23

ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ