AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯೂಚುವಲ್ ಫಂಡ್ ಎಸ್​ಐಪಿ ಆರಂಭಿಸಿ, ಮಧ್ಯದಲ್ಲಿ ನಿಲ್ಲಿಸಬಹುದಾ? ಕ್ರಮ, ದಂಡ ಇತ್ಯಾದಿ ವಿವರ

How To Cancel, Pause, Stop SIP Mid-way: ಮ್ಯುಚುವಲ್ ಫಂಡ್ ಎಸ್​ಐಪಿಯಲ್ಲಿ ನಾವು ಪ್ರತೀ ತಿಂಗಳು ಹೂಡಿಕೆ ಮಾಡುತ್ತಿರುತ್ತೇವೆ. ಕೆಲವೊಮ್ಮೆ ನಾವು ಮಧ್ಯದಲ್ಲಿ ಸ್ಕೀಮ್ ಅನ್ನು ನಿಲ್ಲಿಸಬೇಕಾಗಬಹುದು. ಅದಕ್ಕೆ ಮ್ಯೂಚುವಲ್ ಫಂಡ್ ಸಂಸ್ಥೆಗಳು ಅವಕಾಶ ಕೊಡುತ್ತವೆ.

ಮ್ಯೂಚುವಲ್ ಫಂಡ್ ಎಸ್​ಐಪಿ ಆರಂಭಿಸಿ, ಮಧ್ಯದಲ್ಲಿ ನಿಲ್ಲಿಸಬಹುದಾ? ಕ್ರಮ, ದಂಡ ಇತ್ಯಾದಿ ವಿವರ
ಮ್ಯೂಚುವಲ್ ಫಂಡ್ ಎಸ್​ಐಪಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:Jul 31, 2023 | 10:48 AM

ಮ್ಯೂಚುವಲ್ ಫಂಡ್ ಎಸ್​ಐಪಿಗಳು (Mutual Fund SIP) ಈಗ ಜನಪ್ರಿಯ ಹೂಡಿಕೆ ಆಯ್ಕೆಗಳಾಗಿವೆ. ಎಸ್​ಐಪಿ ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್. ಷೇರುಗಳಂತಹ ಈಕ್ವಿಟಿ ಮಾರುಕಟ್ಟೆ ಅಥವಾ ಗವರ್ನ್ಮೆಂಟ್ ಬಾಂಡ್ ಇತ್ಯಾದಿ ಡೆಟ್ ಮಾರುಕಟ್ಟೆಗಳ ಮೇಲೆ ಹಣ ಹೂಡಿಕೆ ಮಾಡುವ ಮ್ಯುಚುವಲ್ ಫಂಡ್​ಗಳು ಎಸ್​ಐಪಿ ಸ್ಕೀಮ್​ಗಳನ್ನು ಆಫರ್ ಮಾಡುತ್ತವೆ. ನೀವು ಯಾವುದಾದರೂ ನಿರ್ದಿಷ್ಟ ಮೊತ್ತದ ಮತ್ತು ನಿರ್ದಿಷ್ಟ ಅವಧಿಗೆ ಎಸ್​ಐಪಿ ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ, ತಿಂಗಳಿಗೆ 10,000 ರೂನಂತೆ 20 ವರ್ಷದವರೆಗಿನ ಎಸ್​ಐಪಿ ಪಡೆಯಬಹುದು.

ನೀವು ಮೇಲಿನ ಉದಾಹರಣೆಯಂತೆ ಎಸ್​ಐಪಿ ಪಡೆದರೆ ಅಷ್ಟೂ ವರ್ಷ ನೀವು ಹೂಡಿಕೆ ಮಾಡುತ್ತಿರಬೇಕು. ಆರ್​ಡಿಯಲ್ಲಿರುವಂತೆ ಇಲ್ಲಿಯೂ ಕೂಡ ನಿಮ್ಮ ಎಸ್​ಐಪಿ ಹಣವು ಪ್ರತೀ ತಿಂಗಳು ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತ ಆಗುತ್ತಿರುತ್ತದೆ.

ಎಸ್​ಐಪಿಯನ್ನು ರದ್ದಪಡಿಸುವುದು ಹೇಗೆ?

ಮ್ಯೂಚವಲ್ ಫಂಡ್ ಎಸ್​ಐಪಿ ಸ್ಕೀಮ್ ಅನ್ನು ನೀವು ರದ್ದುಪಡಿಸಲು ಸಾಧ್ಯ. ಸ್ಕೀಮ್​ನಲ್ಲಿ ನಿರ್ದಿಷ್ಟ ಲಾಕ್ ಇನ್ ಅವಧಿ ಇರುತ್ತದೆ. ಆ ಅವಧಿ ಕಳೆದ ಬಳಿಕ ನೀವು ಯಾವಾಗ ಬೇಕಾದರೂ ಸ್ಕೀಮ್ ರದ್ದು ಮಾಡಬಹುದು.

ಇದನ್ನೂ ಓದಿ: SIP: ಕ್ವಾಂಟ್ ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್​ನಲ್ಲಿ 10,000 ರೂ ಎಸ್​ಐಪಿ; 25 ವರ್ಷದಲ್ಲಿ 3 ಕೋಟಿ ಸಂಪತ್ತು

ನಿಮ್ಮ ಮ್ಯುಚುವಲ್ ಫಂಡ್​ನ ವೆಬ್​ಸೈಟ್​ಗೆ ಲಾಗಿನ್ ಆಗಿ, ನಿಮ್ಮ ಎಸ್​ಐಪಿಯನ್ನು ಆಯ್ದುಕೊಂಡು ‘ಕ್ಯಾನ್ಸಲ್ ಎಸ್​ಐಪಿ’ ಅನ್ನು ಕ್ಲಿಕ್ ಮಾಡಿದರೆ ಎಸ್​ಐಪಿ ರದ್ದಾಗುತ್ತದೆ.

ನೀವು ಎಸ್​ಐಪಿ ರದ್ದು ಮಾಡಿದರೂ ಆವರೆಗಿನ ಹೂಡಿಕೆ ಹಾಗೆಯೇ ಮುಂದುವರಿಯುತ್ತದೆ. ಮುಂದಿನ ಕಂತು ಹಣ ನಿಮ್ಮ ಖಾತೆಯಿಂದ ಡೆಬಿಟ್ ಆಗುವುದು ಮಾತ್ರ ನಿಲ್ಲುತ್ತದೆ.

ಎಸ್​ಐಪಿಯನ್ನೇ ಪೂರ್ತಿ ನಿಲ್ಲಿಸಲು ಸಾಧ್ಯವಿಲ್ಲವಾ?

ಎಸ್​ಐಪಿ ಸ್ಕೀಮ್ ಅನ್ನು ಕ್ಯಾನ್ಸಲ್ ಮಾಡಿದರೆ ಭವಿಷ್ಯದ ಕಂತುಗಳನ್ನು ಕಟ್ಟುವುದು ನಿಂತುಹೋಗುತ್ತದೆ ಅಷ್ಟೇ. ಆದರೆ, ಎಸ್​ಐಪಿಯನ್ನೇ ಪೂರ್ತಿಯಾಗಿ ನಿಲ್ಲಿಸಿ ನಾವು ಆವರೆಗೂ ಕಟ್ಟಿರುವ ಹಣವನ್ನೂ ಹಿಂಪಡೆಯಲು ಸಾಧ್ಯ. ನಿಮ್ಮ ಮ್ಯುಚುವಲ್ ಪಂಡ್ ಏಜೆಂಟ್ ಮುಖಾಂತರ ಕ್ಯಾನ್ಸಲೇಶನ್ ರಿಕ್ವೆಸ್ಟ್ ಅರ್ಜಿ ಸಲ್ಲಿಸಬೇಕಾಗುತ್ತದೆ.

ಪರ್ಯಾಯವಾಗಿ, ನೀವು ಎಸ್​ಐಪಿಗೆ ಇಸಿಎಸ್ ಮುಖಾಂತರ ಹಣ ಪಾವತಿ ಮಾಡುವ ಸೌಲಭ್ಯವನ್ನು ಸಕ್ರಿಯಗೊಳಿಸಿದ್ದರೆ ಆಗ ಬ್ಯಾಂಕ್​ಗೆ ಮನವಿ ಮಾಡಿ, ಇಸಿಎಸ್ ಸೌಲಭ್ಯವನ್ನು ಡೀಆ್ಯಕ್ಟಿವೇಟ್ ಮಾಡಿಸಬೇಕು. ನಂತರ ಮ್ಯೂಚುವಲ್ ಫಂಡ್ ಸಂಸ್ಥೆಗೂ ಅದರ ಮಾಹಿತಿ ನೀಡಬೇಕು. ಅದಕ್ಕಾಗಿ ಮ್ಯೂಚುವಲ್ ಫಂಡ್ ಸಂಸ್ಥೆಯ ಬಳಿ ಇರುವ ಸೂಕ್ತ ಅರ್ಜಿಯೊಂದನ್ನು ಬರ್ತಿ ಮಾಡಿ ತುಂಬಿಸಿ ಸಲ್ಲಿಸಬೇಕು. ಮೂರು ತಿಂಗಳ ಕಾಲ ಎಸ್​ಐಪಿಗೆ ಇಸಿಎಸ್ ಮುಖಾಂತರ ಹಣ ಬರದೇ ಹೋದಾಗ ಅದು ತನ್ನಂತಾನೆ ಟರ್ಮಿನೇಟ್ ಆಗುತ್ತದೆ.

ಇದನ್ನೂ ಓದಿ: ELSS: ತಿಂಗಳಿಗೆ 5,000 ರೂ ಕಟ್ಟಿ, 10 ವರ್ಷದಲ್ಲಿ 22 ಲಕ್ಷದವರೆಗೆ ರಿಟರ್ನ್; ತೆರಿಗೆ ಮತ್ತು ಲಾಭ ಎರಡೂ ಕೊಡುವ ಇಎಲ್​ಎಸ್​ಎಸ್ ಫಂಡ್​ಗಳು

ಎಸ್​ಐಪಿ ರದ್ದುಗೊಳಿಸುವ ಬದಲು ತಾತ್ಕಾಲಿಕವಾಗಿ ವಿರಾಮ ಕೊಡಿ

ಮ್ಯುಚುವಲ್ ಫಂಡ್ ಎಸ್​ಐಪಿಯನ್ನು ರದ್ದುಗೊಳಿಸಲು ಹಣಕಾಸು ಸಂಕಷ್ಟ, ತುರ್ತು ಅಗತ್ಯ ಇತ್ಯಾದಿ ಕಾರಣಗಳಿರಬಹುದು. ನಿರ್ದಿಷ್ಟ ಅವಧಿಯವರೆಗೆ ನಮಗೆ ಎಸ್​ಐಪಿ ಕಟ್ಟಲು ಸಾಕಷ್ಟು ಹಣ ಇಲ್ಲ ಎಂದಿದ್ದರೆ ತಾತ್ಕಾಲಿಕವಾಗಿ ಎಸ್​ಐಪಿ ನಿಲ್ಲಿಸಲು ಸಾಧ್ಯ.

ಅದಕ್ಕಾಗಿ ಮ್ಯೂಚುವಲ್ ಫಂಡ್ ವೆಬ್​ಸೈಟ್​ನಲ್ಲಿ ನೀವು ‘ಪೌಸ್ ಎಸ್​ಐಪಿ’ ಅನ್ನು ಕಾಣಬಹುದು. ಆ ಮೂಲಕ ನೀವು 6 ತಿಂಗಳವರೆಗೆ ಸ್ಕೀಮ್ ಅನ್ನು ನಿಲ್ಲಿಸಬಹುದು. ನೀವು ನಮೂದಿಸಿದ ಅವಧಿಯ ಬಳಿಕ ಎಸ್​ಐಪಿ ಮತ್ತೆ ಚಾಲನೆಗೊಳ್ಳುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:50 am, Mon, 31 July 23

30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
30 ವರ್ಷಗಳ ಬಳಿಕ ಭಾರತದ ಪ್ರಧಾನಿಯಿಂದ ಘಾನಾ ಭೇಟಿ;  ಮೋದಿಗೆ ಆತ್ಮೀಯ ಸ್ವಾಗತ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಗ್ರಾಮೀಣ ಪ್ರದೇಶಗಳ ಸರ್ಕಾರೀ ಶಾಲೆಗಳಿಗೆ ಬೇಕಿದೆ ಕಾಯಕಲ್ಪ
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ಸರ್ಕಾರದ ಕೆಲಸಗಳನ್ನು ಮಾಧ್ಯಮಗಳಿಗೆ ತೋರಿಸುತ್ತೇನೆ ಎಂದ ಶಿವಕುಮಾರ್
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
ನಾಳೆಯ ಅಮರನಾಥ ಯಾತ್ರೆಗೆ ತೆರಳಲು ಬಂದ ಭಕ್ತರಿಗೆ ಹೂವಿನ ಹಾರ ಹಾಕಿ ಸ್ವಾಗತ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
‘ನಾವು ಗೌಡ್ರು, ಮಾತು ಸ್ಮೂತ್ ಇಲ್ಲ’; ಯಶ್ ತಾಯಿ ಪುಷ್ಪಾ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಸಂಪುಟ ಸಭೆ ನಂತರ ಹೆಚ್​ಕೆ ಪಾಟೀಲ್ ಬದಲು ಸಿದ್ದರಾಮಯ್ಯರಿಂದ ಸುದ್ದಿಗೋಷ್ಠಿ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಕಂಡಕ್ಟರ್ ಟಿಕೆಟ್ ಹಿಂದೆ ಚಿಲ್ಲರೆ ಹಣದ ಬಗ್ಗೆ ಬರೆಯದಿರುವುದು ಜಗಳದ ಮೂಲ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಅಧಿಕಾರಾವಧಿಗೆ ಗ್ರಹಣ ಹಿಡಿಯುತ್ತಿರುವುದು ಸಿಎಂಗೆ ಗೊತ್ತಾಗಿದೆ: ಅಶೋಕ
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್
ಗೋಲ್ಡನ್ ಅವರ್ ಯಾವ ಕಾರಣಕ್ಕೂ ಮಿಸ್ ಆಗಬಾರದು: ಡಾ ಮಂಜುನಾಥ್
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ
ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ