AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಬಿಐ ಹೊಸ ಆರ್​ಡಿ ಸ್ಕೀಮ್ ಹರ್ ಘರ್ ಲಖಪತಿ; ಎಫ್​ಡಿಯಷ್ಟೇ ಸಿಗುತ್ತೆ ರಿಟರ್ನ್ಸ್

SBI special RD scheme: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷ ರೆಕರಿಂಗ್ ಡೆಪಾಸಿಟ್ ಸ್ಕೀಮ್ ಆರಂಭಿಸಿದೆ. ಹರ್ ಘರ್ ತಿರಂಗಾ ಎನ್ನುವ ರೀತಿಯಲ್ಲಿ ಹರ್ ಘರ್ ಲಖಪತಿ ಎಂಬ ಹೆಸರಿನಲ್ಲಿ ಆರ್​ಡಿ ಪ್ಲಾನ್ ಇದು. 60 ವರ್ಷದೊಳಗಿನ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕವಾಗಿ ಶೇ. 6.75ರಷ್ಟು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಗೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.

ಎಸ್​ಬಿಐ ಹೊಸ ಆರ್​ಡಿ ಸ್ಕೀಮ್ ಹರ್ ಘರ್ ಲಖಪತಿ; ಎಫ್​ಡಿಯಷ್ಟೇ ಸಿಗುತ್ತೆ ರಿಟರ್ನ್ಸ್
ಹಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 23, 2025 | 4:43 PM

Share

ಬಹಳ ಸರ್ವೇ ಸಾಮಾನ್ಯವಾಗಿ ಜನರು ಬಳಸುವ ಸೇವಿಂಗ್ಸ್ ಸ್ಕೀಮ್​ಗಳಲ್ಲಿ ಫಿಕ್ಸೆಡ್ ಡೆಪಾಸಿಟ್, ರೆಕರಿಂಗ್ ಡೆಪಾಸಿಟ್ ಇತ್ಯಾದಿ ಇವೆ. ಎಫ್​ಡಿ ಅಥವಾ ಫಿಕ್ಸೆಡ್ ಡೆಪಾಸಿಟ್​ನಲ್ಲಿ ಒಮ್ಮೆಗೇ ಡೆಪಾಸಿಟ್ ಇಡುತ್ತೀರಿ. ಆರ್​ಡಿ ಸ್ಕೀಮ್​ನಲ್ಲಿ ನೀವು ಮಾಸಿಕವಾಗಿ ನಿರ್ದಿಷ್ಟ ಮೊತ್ತದ ಹಣವನ್ನು ಕಟ್ಟುತ್ತಾ ಹೋಗಬಹುದು. ಎಫ್​ಡಿಯಲ್ಲಿ ಸಿಗುವ ರಿಟರ್ನ್​ಗಿಂತ ಆರ್​ಡಿಯಲ್ಲಿ ಸಿಗುವುದು ತುಸು ಕಡಿಮೆ. ಆದರೆ, ಪ್ರತೀ ತಿಂಗಳು ಕಡಿಮೆ ಕಡಿಮೆ ಮೊತ್ತದ ಹಣವನ್ನು ಕಟ್ಟುತ್ತಾ ಹೋಗುವ ದೊಡ್ಡ ಅನುಕೂಲ ಆರ್​ಡಿಗೆ ಇದೆ. ಇದೇ ವೇಳೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಆರ್​ಡಿ ಸ್ಕೀಮ್​ವೊಂದನ್ನು ಆರಂಭಿಸಿದೆ. ಈ ಪ್ಲಾನ್ ಹೆಸರು ಹರ್ ಘರ್ ಲಖಪತಿ. ಅಂದರೆ ಪ್ರತೀ ಮನೆಯಲ್ಲೂ ಲಕ್ಷಾಧಿಪತಿ ಸೃಷ್ಟಿಯಾಗಬೇಕು ಎನ್ನುವ ಉದ್ದೇಶದಿಂದ ಆರಂಭಿಸಲಾದ ರಿಕರಿಂಗ್ ಡೆಪಾಸಿಟ್ ಪ್ಲಾನ್ ಇದು.

ಎಸ್​ಬಿಐ ಆರ್​ಡಿ ಸ್ಕೀಮ್​ನಲ್ಲಿ ಎಷ್ಟು ಬಡ್ಡಿ?

ಎಸ್​​ಬಿಐನ ಹರ್ ಘರ್ ಲಖಪತಿ ಆರ್​ಡಿ ಸ್ಕೀಮ್​ನಲ್ಲಿ ಉತ್ತಮ ಬಡ್ಡಿ ಸಿಗುತ್ತದೆ. ಆರ್​ಡಿ ಅವಧಿ ಮೂರರಿಂದ ನಾಲ್ಕು ವರ್ಷದ್ದಿರುತ್ತದೆ. ಸಾಮಾನ್ಯ ಗ್ರಾಹರಿಗೆ ವಾರ್ಷಿಕವಾಗಿ ಶೇ. 6.77ರಷ್ಟು ಬಡ್ಡಿ ಸಿಗುತ್ತದೆ. ಇದು ಪೋಸ್ಟ್ ಆಫೀಸ್​ನ ಆರ್​​ಡಿ ಪ್ಲಾನ್​ಗೆ ಸಿಗುವಷ್ಟೇ ಬಡ್ಡಿಯಾಗಿದೆ.

ಇದನ್ನೂ ಓದಿ: ನವೆಂಬರ್​ನಲ್ಲಿ 14 ಲಕ್ಷದಷ್ಟು ಹೆಚ್ಚಿದ ಇಪಿಎಫ್ ಸದಸ್ಯರ ಸಂಖ್ಯೆ; ಉದ್ಯೋಗಾವಕಾಶವೂ ಹೆಚ್ಚಳ

ಹಾಗೆಯೇ, ಹಿರಿಯ ನಾಗರಿಕರಿಗೆ ವಾರ್ಷಿಕ ಶೇ. 7.25 ಬಡ್ಡಿ ಸಿಗುತ್ತದೆ. ಇದು ಎಸ್​ಬಿಐನ ಗರಿಷ್ಠ ಎಫ್​ಡಿ ದರಕ್ಕೆ ಸಮವಾಗಿದೆ. ಎಸ್​ಬಿಐನ ಇತರ ರೆಗ್ಯುಲರ್ ಆರ್​ಡಿ ಸ್ಕೀಮ್​ಗಳಲ್ಲಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಶೇ. 6.50; ಹಾಗೂ ಹಿರಿಯ ನಾಗರಿಕರಿಗೆ ಶೇ. 7 ಬಡ್ಡಿ ಇದೆ. ಹರ್ ಘರ್ ಲಖಪತಿ ಸ್ಕೀಮ್​ನಲ್ಲಿ 25 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ.

ರೆಗ್ಯುಲರ್ ಆರ್​ಡಿ ಸ್ಕೀಮ್​ಗಳಲ್ಲಿ ಆರು ತಿಂಗಳಿಂದ ಠೇವಣಿ ಅವಧಿ ಆರಂಭವಾಗುತ್ತದೆ. ಎಸ್​ಬಿಐ ಹರ್ ಘರ್ ಲಖಪತಿ ಸ್ಕೀಮ್​ನಲ್ಲಿ ಕನಿಷ್ಠ ಅವಧಿ 12 ತಿಂಗಳಿಂದ ಆರಂಭವಾಗುತ್ತದೆ. 10 ವರ್ಷದವರೆಗೂ ಆರ್​ಡಿ ಅವಕಾಶ ಇದೆ. ಪ್ರತೀ ವರ್ಷ ಮಕ್ಕಳ ಶಾಲೆಗೆ ಶುಲ್ಕ ಹೊಂದಿಸಲು ಇತ್ಯಾದಿ ನಿಯಮವಾದ ಫಿಕ್ಸೆಡ್ ಎಕ್ಸ್​ಪೆನ್ಸ್​ಗೆ ಈ ರೀತಿಯ ಆರ್​ಡಿಯನ್ನು ಪ್ಲಾನ್ ಮಾಡುವುದು ಸಮಂಜಸ ಎನಿಸುತ್ತದೆ.

ಇದನ್ನೂ ಓದಿ: ಪರ್ಸನಲ್ ಲೋನ್: ನಿಶ್ಚಿತ ಬಡ್ಡಿದರ ಆಯ್ಕೆಗೆ ಅವಕಾಶ ಇರಬೇಕು: ಆರ್​ಬಿಐ ನಿಯಮ

ಆರ್​ಡಿ ಸ್ಕೀಮ್​ಗಳಲ್ಲೂ ಲಾಕಿನ್ ಪೀರಿಯಡ್ ಇರುತ್ತದೆ. ಈ ಲಾಕ್ ಇನ್ ಪೀರಿಯಡ್​ನೊಳಗೆ ನೀವು ಹಣ ಹಿಂಪಡೆಯಲು ಆಗುವುದಿಲ್ಲ. ಹಾಗೊಂದು ವೇಳೆ ಹಿಂಪಡೆಯುವುದಾದರೆ ಶೇ. 0.5ರಿಂದ 1ರವರೆಗೆ ಪೆನಾಲ್ಟಿ ಕಟ್ಟಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ