Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips for Money: ಹೆಚ್ಚು ಹಣ ಗಳಿಸಲು, ಕನಸಿನ ಉದ್ಯೋಗ ನಿಮ್ಮದಾಗಿಸಿಕೊಳ್ಳಲು ಈ ವಾಸ್ತು ಟಿಪ್ಸ್ ಅನುಸರಿಸಿ

ಉತ್ತಮ ಹಣ ಗಳಿಕೆಗೆ ಮತ್ತು ಕನಸಿನ ಉದ್ಯೋಗವನ್ನು ನನಸಾಗಿಸಿಕೊಳ್ಳಲು ವಾಸ್ತು ತಜ್ಞರು ನೀಡಿರುವ ಕೆಲವು ವಾಸ್ತು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

Vastu Tips for Money: ಹೆಚ್ಚು ಹಣ ಗಳಿಸಲು, ಕನಸಿನ ಉದ್ಯೋಗ ನಿಮ್ಮದಾಗಿಸಿಕೊಳ್ಳಲು ಈ ವಾಸ್ತು ಟಿಪ್ಸ್ ಅನುಸರಿಸಿ
ಪ್ರಾತಿನಿಧಿಕ ಚಿತ್ರImage Credit source: rastriyakhabars.com
Follow us
TV9 Web
| Updated By: Ganapathi Sharma

Updated on: Jan 18, 2023 | 12:35 PM

ಕೋವಿಡ್ ಸಾಂಕ್ರಾಮಿಕವು (Covid-19) ಕಳೆದ 2-3 ವರ್ಷಗಳಲ್ಲಿ ಜನರ ಆರೋಗ್ಯ, ಹಣಕಾಸಿನ (Finance) ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ಅನೇಕರು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದರೆ ಇನ್ನು ಅನೇಕ ಮಂದಿ ಸಂಪತ್ತನ್ನು (Wealth) ಕಳೆದುಕೊಂಡಿದ್ದಾರೆ. ಹಲವಾರು ಜನರಿಗೆ ಸಾಂಕ್ರಾಮಿಕದಿಂದಾಗಿ ಅನಾರೋಗ್ಯ, ಸಂಪತ್ತು ನಾಶ ಆಗಿದೆ. ಉತ್ತಮ ಆರೋಗ್ಯ ಮತ್ತು ಹಣ ವೃದ್ಧಿಗೆ ಮನೆಯ ವಾಸ್ತು (Vatu Tips) ಕೂಡ ಕಾರಣ ಎಂದಿದ್ದಾರೆ ವಾಸ್ತು ತಜ್ಞೆ ದೀಪಾ ಜೋಶಿ. ಗುರುದೇವ್ ಕಾಶ್ಯಪ್ ಅವರು ಸ್ಥಾಪಿಸಿರುವ ‘ಅಖಿಲ ಭಾರತ ಅತೀಂದ್ರಿಯ ವಿಜ್ಞಾನಗಳ ಸಂಸ್ಥೆ’ಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೀಪಾ ಜೋಶಿ, ಹಣಕಾಸಿಗೆ ಸಂಬಂಧಿಸಿದ ವಾಸ್ತು ವಿಚಾರಗಳ ಬಗ್ಗೆ ಮಾಧ್ಯಮವೊಂದರ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ಮನೆಯೊಳಗಿನ ಪ್ರತಿಯೊಂದು ಪ್ರದೇಶಕ್ಕೂ ಅದರದ್ದೇ ಆದ ಮಹತ್ವ ಇದೆ. ಅಡುಗೆ ಮಾಡುವ, ತಿನ್ನುವ, ಕುಳಿತುಕೊಳ್ಳುವ, ಕೆಲಸ ಮಾಡುವ ಮತ್ತು ಮಲಗುವ ಜಾಗಗಳಿಗೆ ಅವುಗಳದ್ದೇ ಆದ ಮಹತ್ವ ಇದೆ. ಇವುಗಳು ನಮ್ಮ ಮೇಲೆ ಪರಿಣಾಮ ಬೀರುತ್ತವೆ. ಮನುಷ್ಯನ ದೇಹದಲ್ಲಿ ವಿವಿಧ ಅಂಗಗಳಿಗೆ ಹೇಗೆ ಅದರದ್ದೇ ಆದ ಮಹತ್ವ ಇದೆಯೋ ಮನೆಯೊಳಗಿನ ಜಾಗಗಳೂ ಹಾಗೆಯೇ. ಮನೆಯ ವಿವಿಧ ಭಾಗಗಳ ವಾಸ್ತು ಕೂಡ ಮುಖ್ಯ ಎಂದು ಅವರು ಹೇಳಿದ್ದಾರೆ.

ಉದ್ಯೋಗ ಗಳಿಸಿಕೊಳ್ಳಲು ನಿಮ್ಮ ಅರ್ಹತೆ, ಕೌಶಲ ಹೇಗೆ ಮುಖ್ಯವೋ ಅದೇ ರೀತಿ ವಾಸ್ತು ಕೂಡ ಮುಖ್ಯ. ನಿಮ್ಮ ಹಣೆಬರಹಕ್ಕೆ ಸ್ಪಷ್ಟ ರೂಪ ನೀಡುವಲ್ಲಿ ವಾಸ್ತು ಮುಖ್ಯ ಪಾವತ್ರವಹಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಉತ್ತಮ ಉದ್ಯೋಗ ಸಿಗಬೇಕಾದರೆ ಮನೆಯ ವಾಸ್ತು ಸರಿಯಾಗಿರಬೇಕು. ದಿನದ 24 ಗಂಟೆಯ ಅವಧಿಯಲ್ಲಿ ಸರಾಸರಿ 14ರಿಂದ 15 ತಾಸು ಮನೆಯಲ್ಲೇ ಇರುತ್ತೇವೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇದ್ದರೆ ಅದು ನಿಮ್ಮ ದೈನಂದಿನ ಚಟುವಟಿಕೆಗಳ ಮೇಲೆ, ಜೀವನಶೈಲಿಯ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ ದೀಪಾ ಜೋಶಿ.

ಇದನ್ನೂ ಓದಿ: Cash Transaction: ಎಚ್ಚರ, ಮನೆಯಲ್ಲಿ ಹೆಚ್ಚೆಚ್ಚು ನಗದು ಇಟ್ಟುಕೊಳ್ಳುವವರು ನೀವಾದರೆ ಈ ವಿಚಾರಗಳನ್ನು ತಿಳಿದಿರಿ

ಉತ್ತಮ ಹಣ ಗಳಿಕೆಗೆ ಮತ್ತು ಕನಸಿನ ಉದ್ಯೋಗವನ್ನು ನನಸಾಗಿಸಿಕೊಳ್ಳಲು ಅವರು ನೀಡಿರುವ ಕೆಲವು ವಾಸ್ತು ಸಲಹೆಗಳು ಇಲ್ಲಿವೆ;

  • ಮನೆಯ ಉತ್ತರ ದಿಕ್ಕಿಗೆ ಕುಳಿತುಕೊಳ್ಳುವ ಜಾಗ ಇರಲಿ. ಇದು ಹಣ, ಸಂಪತ್ತಿನ ಒಡೆಯ ಕುಬೇರನಿಗೆ ಸಂಬಂಧಿಸಿದ ದಿಕ್ಕಾಗಿದೆ.
  • ನೀವು ಲ್ಯಾಪ್​ಟಾಪ್, ಮೊಬೈಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಸಾಧನದಲ್ಲಿ ಕೆಲಸ ಮಾಡುವುದಾದರೆ ಚಾರ್ಜಿಂಗ್ ಪಾಯಿಂಟ್ ಆಗ್ನೇಯ ಮೂಲೆಯಲ್ಲಿರಲಿ.
  • ವಸ್ತುಗಳ ಮಾರಾಟದಿಂದ ಯಶಸ್ವಿ ಉದ್ಯಮಿಯಾಗಬೇಕೆಂದು ಬಯಸಿದರೆ ವಸ್ತುಗಳನ್ನು ವಾಯವ್ಯ ಮೂಲೆಯಲ್ಲಿಡಿ. ಮನೆಯ ವಾಯವ್ಯ ಮೂಲೆ ವಾಯುವಿಗೆ ಸಂಬಂಧಿಸಿದ ಜಾಗವಾಗಿದೆ.
  • ಮನೆಯ ದಕ್ಷಿಣ ಭಾಗದಲ್ಲಿ ಯಾವುದೇ ಕಿಟಕಿ ಇಡಬೇಡಿ.
  • ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವುದಕ್ಕಾಗಿ ಪೂರ್ವ-ದಕ್ಷಿಣ-ಪೂರ್ವ ಮೂಲೆಯಲ್ಲಿ ಕುಳಿತುಕೊಳ್ಳಿ.

ಈ ಮೇಲಿನ ಸಲಹೆಗಳನ್ನು ಅನುಸರಿಸುವುದರ ಜತೆಗೆ ದೇವರ ಜತೆ ನಂಬಿಕೆ ಇಡಬೇಕು. ಮನೆಯ ಹಿರಿಯರ ಆಶೀರ್ವಾದ ಪಡೆಯಬೇಕು. ಬಳಿಕ ನಿಮ್ಮ ಕರ್ತವ್ಯ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು ಎಂದು ದೀಪಾ ಜೋಶಿ ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಹೋಟೆಲ್​ನ ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್​ಎಸ್​ಎಸ್​ ಪ್ರಧಾನ ಕಚೇರಿಗೆ ಮೋದಿ ಭೇಟಿ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಧ್ರುವ ಸರ್ಜಾ ಜೊತೆ ಡ್ಯಾನ್ಸ್ ಮಾಡೋದು ಕಷ್ಟ, ಹೀಗೆಂದರ್ಯಾಕೆ ರೀಶ್ಮಾ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
ಆಟವಾಡುತ್ತಿದ್ದಾಗ ಹೈವೋಲ್ಟೇಜ್ ತಂತಿ ತಗುಲಿ ಸುಟ್ಟು ಕರಕಲಾದ ಬಾಲಕ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ