Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಯಶಸ್ಸು; ಒಂದು ದಶಕದ ಸಾಧನೆ ಒಂದೇ ವರ್ಷದಲ್ಲಿ…

PM Suryaghar free electricity scheme: 2024ರ ಫೆಬ್ರುವರಿಯಲ್ಲಿ ಆರಂಭವಾದ ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಅಪಾರ ಯಶಸ್ಸು ಕಂಡಿದೆ. ಹತ್ತು ತಿಂಗಳಲ್ಲಿ 7 ಲಕ್ಷ ಸಮೀಪದಷ್ಟು ಸಂಖ್ಯೆಯ ಮನೆಗಳಲ್ಲಿ ಸೋಲಾರ್ ಸಿಸ್ಟಂ ಅಳವಡಿಸಲಾಗಿದೆ. ಈ ಸ್ಕೀಮ್​ನಲ್ಲಿ ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಸೌರವಿದ್ಯುತ್ ಅಳವಡಿಸುವ ಗುರಿ ಇದೆ.

ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಯಶಸ್ಸು; ಒಂದು ದಶಕದ ಸಾಧನೆ ಒಂದೇ ವರ್ಷದಲ್ಲಿ...
ಸೌರ ವಿದ್ಯುತ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 16, 2024 | 4:54 PM

ನವದೆಹಲಿ, ಡಿಸೆಂಬರ್ 16: ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜಿಲಿ ಯೋಜನೆ ಅಡಿಯಲ್ಲಿ 6,85,763 ಮನೆಗಳ ಸೂರುಗಳ ಮೇಲೆ ಸೌರ ವ್ಯವಸ್ಥೆ ಅಳವಡಿಕೆ ಮಾಡಲಾಗಿದೆ. 2024ರ ಫೆಬ್ರುವರಿ ತಿಂಗಳಲ್ಲಿ ಆರಂಭವಾದ ಈ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಬಹಳ ವೇಗದಲ್ಲಿ ಗುರಿ ಮುಟ್ಟುತ್ತಿದೆ. ಒಂದು ದಶಕದಲ್ಲಿ ಆದಷ್ಟು ಸೋಲಾರ್ ಇನ್ಸ್​ಟಲೇಶನ್ ಒಂದು ವರ್ಷದಲ್ಲೇ ಆಗಿದೆಯಂತೆ. ಗುಜರಾತ್ ರಾಜ್ಯದಲ್ಲಿ ಅತಿಹೆಚ್ಚು ಸೋಲಾರ್ ಅಳವಡಿಕೆ ಆಗಿದೆ. ಮಹಾರಾಷ್ಟ್ರ, ಉತ್ತರಪ್ರದೇಶ ರಾಜ್ಯಗಳದ್ದು ನಂತರದ ಸ್ಥಾನ. ದಕ್ಷಿಣ ರಾಜ್ಯಗಳ ಪೈಕಿ ಕೇರಳದಲ್ಲಿ ಅತಿಹೆಚ್ಚು ಸೌರವಿದ್ಯುತ್ ಸಿಸ್ಟಂ ಅಳವಡಿಕೆ ಆಗಿದೆ.

ಪಿಎಂ ಸೂರ್ಯಘರ್ ಯೋಜನೆ ಅಡಿ ಹೆಚ್ಚು ಸ್ಥಾಪನೆ ಆಗಿರುವುದು 3-5 ಕಿವ್ಯಾ ಲೋಡ್ ವಿಭಾಗದಲ್ಲಿ. ಶೇ. 77ರಷ್ಟು ಸೋಲಾರ್​ಗಳು ಇದೇ ಸೆಗ್ಮೆಂಟ್​ನಲ್ಲಿ ಆಗಿದೆ. ಈ ಸೆಗ್ಮೆಂಟ್​ಗೆ ಅತಿಹೆಚ್ಚು ಬೇಡಿಕೆ ಇದೆ. ಇದು 300ಕ್ಕೂ ಹೆಚ್ಚು ಯೂನಿಟ್​ಗಳಷ್ಟು ವಿದ್ಯುತ್ ಅನ್ನು ಒದಗಿಸಬಲ್ಲುದು. ಇನ್ನು 5 ಕಿವ್ಯಾಗಿಂತ ಹೆಚ್ಚಿನ ಸಾಮರ್ಥ್ಯದ ಸೋಲಾರ್​ಗಳು ಶೇ. 14ರಷ್ಟು ಸ್ಥಾಪನೆ ಆಗಿವೆ.

ಇದನ್ನೂ ಓದಿ: ದಪ್ಪದ 5 ರೂ ನಾಣ್ಯದ ಚಲಾವಣೆ ನಿಲ್ಲಿಸುತ್ತಿರುವ ಆರ್​ಬಿಐ; ಕಾರಣಗಳಿವು…

ಏನಿದು ಸೂರ್ಯಘರ್ ವಿದ್ಯುತ್ ಯೋಜನೆ?

ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯು ಮನೆಗಳಲ್ಲಿ ಸೋಲಾರ್ ಸಿಸ್ಟಂ ಅಳವಡಿಸಲು ಉತ್ತೇಜಿಸುತ್ತದೆ. ಮನೆ ಮಾಳಿಗೆಗಳ ಮೇಲೆ ಸೌರಫಲಕಗಳನ್ನು ಸ್ಥಾಪಿಸಿ ಅದರಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಇದು. ಸರ್ಕಾರವು ಸೋಲಾರ್ ಸ್ಥಾಪನೆಯ ಸುಮಾರು ಅರ್ಧದಷ್ಟು ವೆಚ್ಚವನ್ನು ಭರಿಸುತ್ತದೆ. 30,000 ರೂನಿಂದ 78,000 ರೂವರೆಗೆ ಸಬ್ಸಿಡಿ ಸಿಗುತ್ತದೆ.

ಪಿಎಂ ಸೂರ್ಯಘರ್ ಸ್ಕೀಮ್​ಗೆ ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂ ಸೂರ್ಯಘರ್ ಯೋಜನೆಯ ಪೋರ್ಟಲ್​ಗೆ ಹೋಗಿ ಅಲ್ಲಿಂದ ಸೋಲಾರ್ ಅಳವಡಿಕೆಗೆ ಅರ್ಜಿ ಸಲ್ಲಿಸಬಹುದು. ಸಂಬಂಧಿತ ಡಿಸ್ಕಾಂನಿಂದ ಅನುಮೋದನೆ ಬಳಿಕ ನಿಗದಿತ ವೆಂಡರ್​ಗಳು ಸೋಲಾರ್ ಸ್ಥಾಪನೆ ಮಾಡುತ್ತಾರೆ. ಅದಾದ ಬಳಿಕ ಸಬ್ಸಿಡಿ ಕ್ಲೇಮ್ ಮಾಡಬಹುದು. ಯೋಜನೆಯ ಪೋರ್ಟಲ್ ವಿಳಾಸ ಇಲ್ಲಿದೆ: www.pmsuryaghar.gov.in/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್