Cryptocurrency: ಕ್ರಿಪ್ಟೋಕರೆನ್ಸಿಯ “ತೀರ ಆಳವಾದ” ಸಮಸ್ಯೆಗಳ ಬಗ್ಗೆ ಎಚ್ಚರಿಕೆ ನೀಡಿದ ಆರ್​ಬಿಐ ಗವರ್ನರ್ ದಾಸ್

| Updated By: Srinivas Mata

Updated on: Nov 16, 2021 | 9:34 PM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಕ್ರಿಪ್ಟೋಕರೆನ್ಸಿಯಲ್ಲಿ ಬಹಳ ಆಳವಾದ ಸಮಸ್ಯೆಗಳಿವೆ ಎಂದು ಮಂಗಳವಾರ ಅಭಿಪ್ರಾಯ ಪಟ್ಟಿದ್ದಾರೆ.

Cryptocurrency: ಕ್ರಿಪ್ಟೋಕರೆನ್ಸಿಯ ತೀರ ಆಳವಾದ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ನೀಡಿದ ಆರ್​ಬಿಐ ಗವರ್ನರ್ ದಾಸ್
ಶಕ್ತಿಕಾಂತ ದಾಸ್ (ಸಂಗ್ರಹ ಚಿತ್ರ)
Follow us on

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಗವರ್ನರ್ ಶಕ್ತಿಕಾಂತ ದಾಸ್ ಅವರು ಮಾತನಾಡಿ, ಕ್ರಿಪ್ಟೋಕರೆನ್ಸಿಯಲ್ಲಿ “ತೀರ ಆಳವಾದ” ಸಮಸ್ಯೆಗಳು ಒಳಗೊಂಡಿರುವುದರಿಂದ ಕೇಂದ್ರೀಯ ಬ್ಯಾಂಕ್ ಗಂಭೀರ ಕಾಳಜಿ ಹೊಂದಿದೆ ಎಂದು ಹೇಳಿದ್ದಾರೆ. ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವು ಕ್ರಿಪ್ಟೋಕರೆನ್ಸಿ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ ಎಂಬ ವರದಿಗಳ ನಡುವೆ ಈ ಅಭಿಪ್ರಾಯಗಳು ಬಂದಿದ್ದು, ಇದು ತಿಂಗಳ ಅಂತ್ಯದಲ್ಲಿ ನಡೆಯಲಿದೆ. ನವೆಂಬರ್ 16ರಂದು ನಡೆದ ಎಸ್‌ಬಿಐ ಬ್ಯಾಂಕಿಂಗ್ ಮತ್ತು ಎಕನಾಮಿಕ್ಸ್ ಕಾನ್‌ಕ್ಲೇವ್‌ನಲ್ಲಿ ದಾಸ್ ಅವರು, “ಆಂತರಿಕ ಚರ್ಚೆಗಳ ನಂತರ ನಮಗೆ ಗಂಭೀರ ಕಾಳಜಿ ಇದೆ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆಯೆಂದರೆ ಆಳವಾದ ಸಮಸ್ಯೆಗಳು ಒಳಗೊಂಡಿವೆ,” ಎಂದು ಹೇಳಿದರು.

ಕ್ರಿಪ್ಟೋಕರೆನ್ಸಿ ಕುರಿತು ಯಾವುದೇ ಗಂಭೀರ ಚರ್ಚೆಗಳನ್ನು ತಾನು ಇನ್ನೂ ನೋಡಿಲ್ಲ ಎಂದು ಹೇಳಿದ ದಾಸ್, ಬ್ಲಾಕ್‌ಚೈನ್ ತಂತ್ರಜ್ಞಾನವು 10 ವರ್ಷಗಳಷ್ಟು ಹಳೆಯದಾಗಿದೆ. ಮತ್ತು ಕ್ರಿಪ್ಟೋಕರೆನ್ಸಿಗಳು ಇಲ್ಲದಿದ್ದರೂ ತಂತ್ರಜ್ಞಾನವು ಬೆಳೆಯಬಹುದು ಎಂದಿದ್ದಾರೆ. ಅಂದಹಾಗೆ ಕ್ರಿಪ್ಟೋಕರೆನ್ಸಿ ಮಸೂದೆಯನ್ನು ಶೀಘ್ರದಲ್ಲಿಯೇ ಪರಿಚಯಿಸುವುದು ತುರ್ತು ಅಗತ್ಯವಾಗಿದ್ದು, ಸರ್ಕಾರದಲ್ಲಿ ಅನೇಕರು ಇದನ್ನು ಅನಿಯಂತ್ರಿತ ವಲಯದ ಎಗ್ಗಿಲ್ಲದ ಬೆಳವಣಿಗೆಯಾಗಿ ನೋಡುತ್ತಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯನ್ನು ಒಳಗೊಂಡಂತೆ ನಡೆಯುತ್ತಿರುವ ವಿವಿಧ ಸಭೆಗಳಿಂದ ಇದನ್ನು ಅಳೆಯಬಹುದು.

ಚಳಿಗಾಲದ ಅಧಿವೇಶನವು ನವೆಂಬರ್ 29ರಿಂದ ಡಿಸೆಂಬರ್ 13ರ ವರೆಗೆ ನಡೆಯುವ ಸಾಧ್ಯತೆಯಿದೆ. ಮತ್ತು ಈ ವಲಯದ ತೆರಿಗೆ ಪರಿಗಣನೆಯು ಒಂದು ಪ್ರಮುಖ ಅಂಶವಾಗಿದೆ ಎಂದು ಸುದ್ದಿ ಮಾಧ್ಯಮವೊಂದು ನವೆಂಬರ್ 15ರಂದು ವರದಿ ಮಾಡಿದೆ. ಈ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸುವ ನಿರೀಕ್ಷೆಯಿದೆ ಮತ್ತು ಸಂಪುಟ ಅನುಮೋದನೆಯನ್ನು ಈ ತಿಂಗಳಲ್ಲೇ ನಿರೀಕ್ಷಿಸಲಾಗಿದೆ. ನವೆಂಬರ್ 13ರಂದು ಪ್ರಧಾನಿ ಮೋದಿ ಅವರು ಕ್ರಿಪ್ಟೋಕರೆನ್ಸಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅದರ ನಂತರ ಡಿಜಿಟಲ್ ಕರೆನ್ಸಿ ಎಕೋ ಸಿಸ್ಟಮ್​ನ ವಿವಿಧ ಪಾಲುದಾರರೊಂದಿಗೆ ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಸಭೆ ನಡೆಯಿತು.

ಇದನ್ನೂ ಓದಿ: ಕ್ರಿಪ್ಟೋಗಳು ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ, ನಿಯಂತ್ರಣ ಅಗತ್ಯವಿದೆ: ಸಂಸದರ ಸಂಸದೀಯ ಸಮಿತಿ ಸಭೆಯ ಅಭಿಮತ