AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI update: ರೈತರಿಗೆ ಖುಷಿ ಸುದ್ದಿ; ಅಡಮಾನರಹಿತ ಕೃಷಿಸಾಲದ ಮಿತಿ 2 ಲಕ್ಷ ರೂಗೆ ಏರಿಕೆ

Collateral-free agriculture loan: ಅಡಮಾನರಹಿತ ಕೃಷಿ ಸಾಲ ಮಿತಿಯನ್ನು 1.6 ಲಕ್ಷ ರೂನಿಂದ 2 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಆರ್​ಬಿಐ ಎಂಪಿಸಿಯಲ್ಲಿ ತೆಗೆದುಕೊಳ್ಳಲಾದ ಈ ನಿರ್ಧಾರದಿಂದ ಸಣ್ಣ ರೈತರಿಗೆ ಅನುಕೂಲವಾಗಲಿದೆ. ಇದೇ ವೇಳೆ, ಫಾರೀನ್ ಕರೆನ್ಸಿ ನಾನ್ ರೆಸಿಡೆಂಟ್ (ಎಫ್​ಸಿಎನ್​ಆರ್) ಠೇವಣಿಗಳಿಗೆ ಬಡ್ಡಿದರದ ಮಿತಿಯನ್ನು 200 ಮೂಲಾಂಕಗಳಷ್ಟು ಹೆಚ್ಚಿಸಲಾಗಿದೆ.

RBI update: ರೈತರಿಗೆ ಖುಷಿ ಸುದ್ದಿ; ಅಡಮಾನರಹಿತ ಕೃಷಿಸಾಲದ ಮಿತಿ 2 ಲಕ್ಷ ರೂಗೆ ಏರಿಕೆ
ಕೃಷಿ ಸಾಲ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 06, 2024 | 11:46 AM

Share

ನವದೆಹಲಿ, ಡಿಸೆಂಬರ್ 6: ಭಾರತೀಯ ರಿಸರ್ವ್ ಬ್ಯಾಂಕ್ ಅಡಮಾನರಹಿತ ಕೃಷಿ ಸಾಲದ ಮಿತಿಯನ್ನು (collateral-free loan) 2 ಲಕ್ಷ ರೂಗೆ ಏರಿಸಿದೆ. ಆರ್​ಬಿಐನ ಮಾನಿಟರಿ ಪಾಲಿಸಿ ಸಮಿತಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದು ಶುಕ್ರವಾರ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ನಿರ್ಧಾರವನ್ನು ಪ್ರಕಟಿಸಿದರು. ಸದ್ಯ ಅಡಮಾನರಹಿತ ಕೃಷಿ ಸಾಲದ ಮಿತಿ 1.6 ಲಕ್ಷ ರೂ ಇದೆ. ಇದನ್ನು ಎರಡು ಲಕ್ಷ ರೂಗೆ ಏರಿಸಲಾಗಿದೆ. ಅಂದರೆ, ಒಬ್ಬ ವ್ಯಕ್ತಿ ಯಾವುದೇ ಅಡಮಾನ ಇಡುವ ಅಗತ್ಯ ಇಲ್ಲದೇ 2 ಲಕ್ಷ ರೂವರೆಗೆ ಕೃಷಿ ಸಾಲ ಪಡೆಯಲು ಅವಕಾಶ ಇರುತ್ತದೆ.

ಆರ್​ಬಿಐನ ಈ ನಿರ್ಧಾರವು ಸಣ್ಣ ರೈತರಿಗೆ ಅನುಕೂಲವಾಗಲಿದೆ. ಹೆಚ್ಚು ಸಾಲ ಪಡೆದು ಕೃಷಿ ಚಟುವಟಿಕೆಗೆ ಉಪಯೋಗಿಸಿಕೊಳ್ಳಬಹುದು.

‘ಅಡಮಾನರಹಿತ ಕೃಷಿ ಸಾಲದ ಮಿತಿಯನ್ನು ಕೊನೆಯದಾಗಿ ಪರಿಷ್ಕರಿಸಿದ್ದು 2019ರಲ್ಲಿ. ಅಲ್ಲಿಂದೀಚೆಗೆ ಮಿತಿ ಪರಿಷ್ಕರಿಸಲಾಗಿರಲಿಲ್ಲ. ಕೃಷಿ ವೆಚ್ಚದಲ್ಲಿ ಏರಿಕೆ ಆಗಿರುವುದು ಹಾಗು ಒಟ್ಟಾರೆ ಹಣದುಬ್ಬರ ಹೆಚ್ಚಳ ಆಗಿರುವುದನ್ನು ಪರಿಗಣಿಸಿ, ಅಡಮಾನರಹಿತ ಕೃಷಿ ಸಾಲಗಳ ಮಿತಿಯನ್ನು 1.6 ಲಕ್ಷ ರೂನಿಂದ 2 ಲಕ್ಷ ರೂಗೆ ಏರಿಸಲು ನಿರ್ಧರಿಸಲಾಗಿದೆ. ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಹೆಚ್ಚು ಸಾಲದ ಅವಕಾಶ ಸಿಗುತ್ತದೆ’ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ: RBI MPC Updates: ರಿಪೋ ದರ ಇಳಿಸದ ಆರ್​ಬಿಐ; ಶೇ. 6.50ರಲ್ಲೇ ಬಡ್ಡಿದರ ಮುಂದುವರಿಕೆ

ಎಫ್​ಸಿಎನ್​ಆರ್ ಬಡ್ಡಿಮಿತಿ ಹೆಚ್ಚಳ

ಬ್ಯಾಂಕುಗಳಿಗೆ ವಿದೇಶೀ ಹೂಡಿಕೆಗಳು ಹರಿದು ಬರುವಂತೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್​​ಬಿಐ ಕ್ರಮ ತೆಗೆದುಕೊಂಡಿದೆ. ಎಫ್​ಸಿಎನ್​ಆರ್ ಠೇವಣಿಗಳಿಗೆ ನಿಗದಿ ಮಾಡಲಾಗಿದ್ದ ಬಡ್ಡಿದರ ಮಿತಿಯನ್ನು ಹೆಚ್ಚಿಸಲು ಆರ್​ಬಿಐನ ಎಂಪಿಸಿ ನಿರ್ಧರಿಸಿದೆ.

ಎಫ್​ಸಿಎನ್​ಆರ್ ಎಂದರೆ ಫಾರೀನ್ ಕರೆನ್ಸಿ ನಾನ್ ರೆಸಿಡೆಂಟ್ ಡೆಪಾಸಿಟ್​ಗಳು. ಅನಿವಾಸಿಗಳ ಫಾರೀನ್ ಕರೆನ್ಸಿ ಠೇವಣಿಗಳಿವು. ಒಂದರಿಂದ ಮೂರು ವರ್ಷದಲ್ಲಿ ಮೆಚ್ಯೂರಿಟಿ ಆಗುವ ಇಂಥ ಠೇವಣಿಗಳಿಗೆ ಬಡ್ಡಿದರ ಮಿತಿಯನ್ನು 200 ಅಂಕಗಳಷ್ಟು ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಸಿಆರ್​ಆರ್ 50 ಮೂಲಾಂಕಗಳಷ್ಟು ಇಳಿಕೆ; ಶೇ. 4ಕ್ಕೆ ಇಳಿದ ಕ್ಯಾಷ್ ರಿಸರ್ವ್ ರೇಶಿಯೋ; ಆರ್ಥಿಕತೆಗೆ ಪುಷ್ಟಿ ಸಿಗುವ ನಿರೀಕ್ಷೆ

ಈಗ ಈ ದರವು ಎಆರ್​ಆರ್+200 ಬೇಸಿಸ್ ಪಾಯಿಂಟ್ ಇದೆ. ಇದನ್ನು ಎಆರ್​ಆರ್+400 ಬೇಸಿಸ್ ಪಾಯಿಂಟ್​ಗಳಿಗೆ ಏರಿಸಲಾಗಿದೆ. ಈ ಕ್ರಮದಿಂದ ವಿದೇಶೀ ಡೆಪಾಸಿಟ್​ಗಳನ್ನು ಬ್ಯಾಂಕುಗಳು ಆಕರ್ಷಿಸಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಲ್ಯಾಂಬೋರ್ಗಿನಿ ಕಾರಿನ ಕಳ್ಳಾಟದ ರಹಸ್ಯ ಬಿಚ್ಚಿಟ್ಟ RTO
ಬೆಂಗಳೂರು ಲ್ಯಾಂಬೋರ್ಗಿನಿ ಕಾರಿನ ಕಳ್ಳಾಟದ ರಹಸ್ಯ ಬಿಚ್ಚಿಟ್ಟ RTO
ಈಗ ನನಗೆ ಜ್ಞಾನೋದಯವಾಗಿದೆ, ಇನ್ಮೇಲೆ ನಾನು ಕೊಡೋದೆ ಬೇರೆ: ಆರ್ ಚಂದ್ರು
ಈಗ ನನಗೆ ಜ್ಞಾನೋದಯವಾಗಿದೆ, ಇನ್ಮೇಲೆ ನಾನು ಕೊಡೋದೆ ಬೇರೆ: ಆರ್ ಚಂದ್ರು
ಭಾರತಕ್ಕೆ ಬಂದ ಯುವ ಚಾಂಪಿಯನ್ಸ್​ಗೆ ಅದ್ಧೂರಿ ಸ್ವಾಗತ
ಭಾರತಕ್ಕೆ ಬಂದ ಯುವ ಚಾಂಪಿಯನ್ಸ್​ಗೆ ಅದ್ಧೂರಿ ಸ್ವಾಗತ
ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ
ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ
ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್​​ನಲ್ಲಿ ಗೊಂದಲ: ಆಗಿದ್ದೇನು?
ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್​​ನಲ್ಲಿ ಗೊಂದಲ: ಆಗಿದ್ದೇನು?
ಕಾಂಗ್ರೆಸ್ ಭವನಕ್ಕೆ ಕೋಟಿ ಕೋಟಿ ಮೌಲ್ಯದ ಸಿಎ ಸೈಟ್ ಮೂರ್ಕಾಸಿಗೆ
ಕಾಂಗ್ರೆಸ್ ಭವನಕ್ಕೆ ಕೋಟಿ ಕೋಟಿ ಮೌಲ್ಯದ ಸಿಎ ಸೈಟ್ ಮೂರ್ಕಾಸಿಗೆ
ಮಲ್ಲನ ಮ್ಯಾಜಿಕ್​ಗೆ ಕರಗಿದ ಸಾಲ್ಟ್
ಮಲ್ಲನ ಮ್ಯಾಜಿಕ್​ಗೆ ಕರಗಿದ ಸಾಲ್ಟ್
ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ವಿಡಿಯೋ ನೋಡಿ
ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದ ಪತಿಗೆ ಮೊದಲ ಪತ್ನಿ ಶಾಕ್: ವಿಡಿಯೋ ನೋಡಿ
ಹಾಸನ: ಮಹಿಳೆ ರೂಮ್​ಗೆ ನುಗ್ಗಿ ಪತಿ ಸಂಬಂಧಿಕರ ಗಲಾಟೆ!
ಹಾಸನ: ಮಹಿಳೆ ರೂಮ್​ಗೆ ನುಗ್ಗಿ ಪತಿ ಸಂಬಂಧಿಕರ ಗಲಾಟೆ!
ಜಿಟಿಡಿ ವಿರುದ್ಧ ಹೆಚ್​​ಡಿಕೆ ಗರಂ: ಅವರು ನಮ್ಮೊಂದಿಗಿಲ್ಲ ಎಂದ ಕೇಂದ್ರ ಸಚಿವ
ಜಿಟಿಡಿ ವಿರುದ್ಧ ಹೆಚ್​​ಡಿಕೆ ಗರಂ: ಅವರು ನಮ್ಮೊಂದಿಗಿಲ್ಲ ಎಂದ ಕೇಂದ್ರ ಸಚಿವ