ಜಿಯೋಭಾರತ್ ಸರಣಿಯ ಎರಡು ಫೋನ್ ಬಿಡುಗಡೆ; ಬೆಲೆ 1,099 ರೂ; ರೀಚಾರ್ಜ್ ಪ್ಲಾನ್ 123 ರೂ ಮಾತ್ರ

Reliance Jio launches Jiobharat v3 and v4 series feature phones: 4ಜಿ ಶಕ್ತವಾಗಿರುವ ಜಿಯೋಭಾರತ್ ವಿ3 ಮತ್ತು ವಿ4 ಫೀಚರ್ ಫೋನ್​ಗಳನ್ನು ರಿಲಾಯನ್ಸ್ ಜಿಯೋ ಇಂದು (ಅ. 15) ಅನಾವರಣಗೊಳಿಸಿದೆ. ಸ್ಮಾರ್ಟ್​ಫೋನ್​ನ ಕೆಲ ಫೀಚರ್​ಗಳು ಈ ಜಿಯೋಭಾರತ್ ಫೋನ್​ನಲ್ಲಿ ಕಾಣಬಹುದು. ಲೈವ್ ಟಿವಿ, ವಿಡಿಯೋ ಸ್ಟ್ರೀಮಿಂಗ್, ಯುಪಿಐ ಪೇಮೆಂಟ್ ಮೊದಲಾದವನ್ನು ಬಳಸಬಹುದು.

ಜಿಯೋಭಾರತ್ ಸರಣಿಯ ಎರಡು ಫೋನ್ ಬಿಡುಗಡೆ; ಬೆಲೆ 1,099 ರೂ; ರೀಚಾರ್ಜ್ ಪ್ಲಾನ್ 123 ರೂ ಮಾತ್ರ
ಜಿಯೋಭಾರತ್
Follow us
|

Updated on: Oct 15, 2024 | 5:32 PM

ನವದೆಹಲಿ, ಅಕ್ಟೋಬರ್ 15: ಬಿಎಸ್ಸೆನ್ಎಲ್​ನಿಂದ ನಿರ್ದಿಷ್ಟ ಮಟ್ಟದಲ್ಲಿ ಪೈಪೋಟಿ ಎದುರಿಸುತ್ತಿರುವ ರಿಲಾಯನ್ಸ್ ಜಿಯೋ ಎರಡು ಹೊಸ ಫೀಚರ್ ಫೋನ್​ಗಳನ್ನು ಬಿಡುಗಡೆ ಮಾಡಿದೆ. ಇಂಡಿಯನ್ ಮೊಬೈಲ್ ಕಾಂಗ್ರೆಸ್ 2024 ಸಮಾವೇಶದಲ್ಲಿ ಜಿಯೋ ಸಂಸ್ಥೆ ಜಿಯೋಭಾರತ್ ಸರಣಿಯ ವಿ3 ಮತ್ತು ವಿ4 ಫೋನ್​ಗಳನ್ನು ಅನಾವರಣಗೊಳಿಸಿದೆ. 4ಜಿ ಟೆಕ್ನಾಲಜಿ ಸಕ್ರಿಯವಾಗಿರುವ ಈ ಫೋನ್​ನ ಬೆಲೆ ಕೇವಲ 1,099 ರೂ ಇದೆ. ಇದರ ಮಾಸಿಕ ರೀಚಾರ್ಜ್ ದರ ಕೇವಲ 123 ರೂ ಇದೆ. ಕಳೆದ ವರ್ಷ ಜಿಯೋಭಾರತ್ ವಿ2 ಫೋನ್ ಅನ್ನು ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದರಿಂದ ಈಗ ಇನ್ನೆರಡು ಹೊಸ ಫೋನ್​ಗಳನ್ನು ಜಿಯೋ ಹೊರತಂದಿದೆ.

ವಿ3 ಮತ್ತು ವಿ4 ಜಿಯೋಭಾರತ್ ಫೀಚರ್ ಫೋನ್​ಗಳಾದರೂ ಸ್ಮಾರ್ಟ್​ಫೋನ್​ನ ಕೆಲ ಪ್ರಮುಖ ಫೀಚರ್​ಗಳು ಇವುಗಳಲ್ಲಿವೆ. ಯುಪಿಐ ಪಾವತಿ ಮಾಡಬಹುದು. ಲೈವ್ ಟಿವಿ ನೋಡಬಹುದು. ಜಿಯೋ ಟಿವಿ, ಜಿಯೋಪೇ, ಜಿಯೋ ಸಿನಿಮಾ ಇತ್ಯಾದಿ ಆ್ಯಪ್​ಗಳ ಮೂಲಕ ವಿಡಿಯೋ ಸ್ಟ್ರೀಮಿಂಗ್ ಪಡೆಯಬಹುದು.

ಇದನ್ನೂ ಓದಿ: ಕಸ ಗುಡಿಸುವ ಕಾಯಕ; ಸಾಯುವಾಗ ಹೊಂದಿದ್ದ ಆಸ್ತಿ 60 ಕೋಟಿ ರೂ; ಮಾದರಿಯಾಗುವ ರೊನಾಲ್ಡ್ ರೀಡ್ ಕಥೆ

ಜಿಯೋ ಭಾರತ್ ವಿ3 ಮತ್ತು ವಿ4 ಫೋನ್​ಗಳ ವಿನ್ಯಾಸ ಆಕರ್ಷಕವಾಗಿರುವಂತೆ ರೂಪಿಸಲಾಗಿದೆ. ಈ ಎರಡೂ ಫೋನ್​ಗಳ ಬ್ಯಾಟರಿ 1,000 ಎಂಎಎಚ್​ನಷ್ಟಿದೆ. ಮೆಮೋರಿ ಸ್ಟೋರೇಜ್ 128 ಜಿಬಿಯವರೆಗೂ ವಿಸ್ತರಿಸಬಹುದು. ಕನ್ನಡವೂ ಸೇರಿದಂತೆ 23 ಭಾರತೀಯ ಭಾಷೆಗಳಲ್ಲಿ ಯೂಸರ್ ಇಂಟರ್​ಫೇಸ್ ಅನ್ನು ಸಿದ್ಧಪಡಿಸಲಾಗಿದೆ.

ಮಾಸಿಕ ರೀಚಾರ್ಜ್ ಕೇವಲ 123 ರೂ

ಜಿಯೋಭಾರತ್ ವಿ3 ಮತ್ತು ವಿ4 ಫೋನ್​ಗಳು 4ಜಿ ಶಕ್ತವಿವೆ. ಬೆಲೆ 1,099 ರೂ ನಿಗದಿಯಾಗಿದೆ. ವಿಶೇಷವೆಂದರೆ ಮಾಸಿಕ ರೀಚಾರ್ಜ್ ಪ್ಲಾನ್ ಕೇವಲ 123 ರೂ ಇದೆ. ಈ ಪ್ಲಾನ್​ಗೆ ಅನ್​ಲಿಮಿಟೆಡ್ ಕರೆ, ಮತ್ತು 14ಜಿಬಿ ಡಾಟಾ ಕೂಡ ಸಿಗುತ್ತದೆ. ಬೇರೆ ಟೆಲಿಕಾಂ ಕಂಪನಿಗಳ ರೀಚಾರ್ಜ್ ಪ್ಲಾನ್​ಗಿಂತ ಜಿಯೋದ ಈ 123 ರೂ ಪ್ಲಾನ್ ಹೆಚ್ಚು ಅಗ್ಗವಾಗಿದೆ.

ಇದನ್ನೂ ಓದಿ: ಸಾಮಾನ್ಯ ಬಳಕೆಯ 11 ಔಷಧಗಳ ಗರಿಷ್ಠ ಬೆಲೆ ಹೆಚ್ಚಿಸಿದ ಸರ್ಕಾರ; ಯಾವುವು ಈ ಔಷಧಗಳು?

ಜಿಯೋಭಾರತ್ ವಿ3 ಮತ್ತು ವಿ4 ಫೋನ್​ಗಳು ಜಿಯೋಮಾರ್ಟ್ ಮತ್ತು ಅಮೇಜಾನ್​ನಲ್ಲಿ ಲಭ್ಯ ಇವೆ. ಹಾಗೆಯೇ, ಮೊಬೈಲ್ ಶಾಪ್​ಗಳಲ್ಲೂ ಅದನ್ನು ಖರೀದಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ
ಕಾವೇರಿ ನೀರಾವರಿ ನಿಗಮವನ್ನೂ ಸಿಎಂ ತನಿಖೆಗೊಪ್ಪಿಸುವರೇ? ದೇವರಾಜೇಗೌಡ
ರಾಜ ಗೆಲ್ಲುತ್ತಾನೆ, ಆದ್ರೆ ಈಗ ದೈವಬಲ ಇಲ್ಲ: ಕೋಡಿಶ್ರೀ ಸ್ಫೋಟಕ ಭವಿಷ್ಯ
ರಾಜ ಗೆಲ್ಲುತ್ತಾನೆ, ಆದ್ರೆ ಈಗ ದೈವಬಲ ಇಲ್ಲ: ಕೋಡಿಶ್ರೀ ಸ್ಫೋಟಕ ಭವಿಷ್ಯ
ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ: ಸಿಎಂ
ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ: ಸಿಎಂ
ಬೆಂಗಳೂರಿನಲ್ಲಿ ಮಳೆ ಆರ್ಭಟ; ಹೆಬ್ಬಾಳದಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್​
ಬೆಂಗಳೂರಿನಲ್ಲಿ ಮಳೆ ಆರ್ಭಟ; ಹೆಬ್ಬಾಳದಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್​
ಬ್ರ್ಯಾಂಡ್ ಬೆಂಗಳೂರು ಎನ್ನುವ ಶಿವಕುಮಾರ್​ಗೆ ನಗರದ ರಸ್ತೆಗಳು ಕಾಣುತ್ತಿಲ್ಲ!
ಬ್ರ್ಯಾಂಡ್ ಬೆಂಗಳೂರು ಎನ್ನುವ ಶಿವಕುಮಾರ್​ಗೆ ನಗರದ ರಸ್ತೆಗಳು ಕಾಣುತ್ತಿಲ್ಲ!
ಮೈಸೂರು ದಸರಾ: ವಿಜಯಪುರ ಸತ್ತಿಗೆ ಕುಣಿತ ಕಲಾ ತಂಡಕ್ಕೆ ಮೊದಲ ಬಹುಮಾನ
ಮೈಸೂರು ದಸರಾ: ವಿಜಯಪುರ ಸತ್ತಿಗೆ ಕುಣಿತ ಕಲಾ ತಂಡಕ್ಕೆ ಮೊದಲ ಬಹುಮಾನ
ಸಿದ್ದರಾಮಯ್ಯ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗೆ ಮನವಿ: ಬಿವೈ ವಿಜಯೇಂದ್ರ
ಸಿದ್ದರಾಮಯ್ಯ ಸರ್ಕಾರ ವಜಾ ಮಾಡಲು ರಾಷ್ಟ್ರಪತಿಗೆ ಮನವಿ: ಬಿವೈ ವಿಜಯೇಂದ್ರ
ಹುಲಿ ಸೆರೆಗೆ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ
ಹುಲಿ ಸೆರೆಗೆ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಾದ್ಯಂತ ಭಾರೀ ಮಳೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಾದ್ಯಂತ ಭಾರೀ ಮಳೆ
ವಕ್ಫ್ ಜಮೀನು: ಸಚಿವ ಜಮೀರ್ ಅಹ್ಮದ್​ರನ್ನು ತರಾಟೆಗೆ ತೆಗೆದುಕೊಂಡ ಸಿಟಿ ರವಿ
ವಕ್ಫ್ ಜಮೀನು: ಸಚಿವ ಜಮೀರ್ ಅಹ್ಮದ್​ರನ್ನು ತರಾಟೆಗೆ ತೆಗೆದುಕೊಂಡ ಸಿಟಿ ರವಿ