Sign In

By signing in or creating an account, you agree with Associated Broadcasting Company's Terms & Conditions and Privacy Policy.

UPI Payment: ರೀಟೇಲ್ ಹೂಡಿಕೆದಾರರು ಐಪಿಒಗಳಿಗೆ ರೂ 5 ಲಕ್ಷದವರೆಗಿನ ಪಾವತಿಗೆ ಯುಪಿಐ ಬಳಕೆ

ಐಪಿಒಗೆ ಅರ್ಜಿ ಹಾಕುವ ರೀಟೇಲ್ ಹೂಡಿಕೆದಾರರು ಯುಪಿಐ ಬಳಸಬಹುದು ಎಂದು ಸೆಕ್ಯೂರಿಟೀಸ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ ಹೇಳಿದೆ.

UPI Payment: ರೀಟೇಲ್ ಹೂಡಿಕೆದಾರರು ಐಪಿಒಗಳಿಗೆ ರೂ 5 ಲಕ್ಷದವರೆಗಿನ ಪಾವತಿಗೆ ಯುಪಿಐ ಬಳಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Apr 06, 2022 | 8:36 AM

ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಮಂಗಳವಾರದಂದು ಹೇಳಿರುವ ಪ್ರಕಾರ, ಈಕ್ವಿಟಿ ಷೇರುಗಳು ಮತ್ತು ಕನ್ವರ್ಟಿಬಲ್‌ಗಳ ಸಾರ್ವಜನಿಕ ಐಪಿಒಗಳಲ್ಲಿ ಅರ್ಜಿ ಸಲ್ಲಿಸುವ ವೈಯಕ್ತಿಕ ಹೂಡಿಕೆದಾರರು 5 ಲಕ್ಷ ರೂಪಾಯಿವರೆಗಿನ ಅರ್ಜಿ ಮೊತ್ತಕ್ಕಾಗಿ ಏಕೀಕೃತ ಪಾವತಿ ಇಂಟರ್​ಫೇಸ್ (ಯುಪಿಐ) ಬಳಸಬಹುದು. ಅಲ್ಲದೆ, ಸಿಂಡಿಕೇಟ್ ಸದಸ್ಯ, ಸ್ಟಾಕ್ ಬ್ರೋಕರ್, ಡೆಪಾಸಿಟರಿ ಪಾರ್ಟಿಸಿಪೆಂಟ್ಸ್ ಮತ್ತು ರಿಜಿಸ್ಟ್ರಾರ್ ಹಾಗೂ ಷೇರು ವರ್ಗಾವಣೆ ಏಜೆಂಟ್‌ಗೆ ಈ ಯಾವುದೇ ಘಟಕಗಳೊಂದಿಗೆ ಸಲ್ಲಿಸಿದ ಬಿಡ್-ಕಮ್-ಅರ್ಜಿ ನಮೂನೆಯಲ್ಲಿ ತಮ್ಮ ಯುಪಿಐ ಐಡಿಯನ್ನು ಒದಗಿಸಲು ಕೇಳಲಾಗಿದೆ.

ಮೇ 1, 2022ರಂದು ಅಥವಾ ನಂತರ ತೆರೆಯುವ ಸಾರ್ವಜನಿಕ ವಿತರಣೆಗಳಿಗೆ ಹೊಸ ಮಾರ್ಗಸೂಚಿಗಳು ಜಾರಿಗೆ ಬರುತ್ತವೆ ಎಂದು ಸೆಬಿ ಸುತ್ತೋಲೆಯಲ್ಲಿ ತಿಳಿಸಿದೆ. ಹೆಚ್ಚಿದ ಯುಪಿಐ ಮಿತಿಯೊಂದಿಗೆ ಅರ್ಜಿಗಳ ಪ್ರಕ್ರಿಯೆಗೆ ಅನುಕೂಲವಾಗುವಂತೆ ವಿವಿಧ ಮಧ್ಯವರ್ತಿಗಳಲ್ಲಿ ಅಗತ್ಯವಿರುವ ವ್ಯವಸ್ಥಿತ ಸಿದ್ಧತೆಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪರಿಶೀಲಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಮಾರ್ಚ್ 30, 2022ರಂತೆ, ಶೇಕಡಾ 80ಕ್ಕಿಂತ ಹೆಚ್ಚು ಸ್ವಯಂ ಪ್ರಮಾಣೀಕೃತ ಸಿಂಡಿಕೇಟ್ ಬ್ಯಾಂಕ್‌ಗಳು (SCSBಗಳು)/ಪ್ರಾಯೋಜಕ ಬ್ಯಾಂಕ್‌ಗಳು/ಯುಪಿಐ ಅಪ್ಲಿಕೇಷನ್‌ಗಳು ಸಿಸ್ಟಮ್ ಬದಲಾವಣೆಗಳನ್ನು ನಡೆಸಿವೆ ಮತ್ತು ಎನ್​ಪಿಸಿಐ ನಿಯಮಾವಳಿಗಳನ್ನು ಅನುಸರಿಸಿವೆ. ಯುಪಿಐ-ಆಧಾರಿತ ಅಪ್ಲಿಕೇಷನ್‌ನಿಂದ ಬೆಂಬಲಿತವಾದ (ASBA) ಆರಂಭಿಕ ಸಾರ್ವಜನಿಕ ಕೊಡುಗೆಗಳಲ್ಲಿ (ಐಪಿಒಗಳು) ಎನ್​ಪಿಸಿಐನಿಂದ 2021ರ ಡಿಸೆಂಬರ್​ನಲ್ಲಿ ಯುಪಿಐನ ಪ್ರತಿ ವಹಿವಾಟು ಮಿತಿಯನ್ನು ರೂ. 2 ಲಕ್ಷದಿಂದ ರೂ. 5 ಲಕ್ಷಕ್ಕೆ ಹೆಚ್ಚಿಸಿದೆ.

ಇದನ್ನೂ ಓದಿ: UPI For Feature Phones: ಫೀಚರ್​ ಫೋನ್​ ಯುಪಿಐಗೆ ಚಾಲನೆ ನೀಡಿದ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್

VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್