AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಯಾಕ್​ಪಾಟ್ ತರುವ ಮಲ್ಟಿಬ್ಯಾಗರ್ ಷೇರು ಪತ್ತೆ ಮಾಡುವುದು ಹೇಗೆ? ಕ್ರಿಸ್ ಮೇಯರ್ ಫಾರ್ಮುಲಾ ಇದು

Finding multibagger stocks: ಬಿಎಸ್​​ಇ ಮತ್ತು ಎನ್​​ಎಸ್​​ಇನಲ್ಲಿ ಐದು ಸಾವಿರಕ್ಕೂ ಹೆಚ್ಚು ಷೇರುಗಳು ಲಿಸ್ಟ್ ಆಗಿವೆ. ಇದರಲ್ಲಿ ಉತ್ತಮ ಷೇರುಗಳನ್ನು ಪತ್ತೆ ಮಾಡಲು ಟೆಕ್ನಿಕಲ್ ಮೆಟ್ರಿಕ್ಸ್ ಹಲವುಂಟು. ಅದಕ್ಕಿಂತ ಬಹಳ ಮೂಲಭೂತವಾದ ಮತ್ತು ಬಹಳ ಮುಖ್ಯವಾದ ಮೂರ್ನಾಲ್ಕು ಅಂಶಗಳನ್ನು ಗಮನಿಸಬೇಕೆಂದು ಕ್ರಿಸ್ ಮೇಯರ್ ಹೇಳುತ್ತಾರೆ. ‘100 ಬ್ಯಾಗರ್ಸ್’ ಪುಸ್ತಕದ ಕರ್ತೃವಾದ ಅವರು ಹೇಳಿದ ಅಂಶಗಳು ಇಲ್ಲಿವೆ...

ಜ್ಯಾಕ್​ಪಾಟ್ ತರುವ ಮಲ್ಟಿಬ್ಯಾಗರ್ ಷೇರು ಪತ್ತೆ ಮಾಡುವುದು ಹೇಗೆ? ಕ್ರಿಸ್ ಮೇಯರ್ ಫಾರ್ಮುಲಾ ಇದು
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 10, 2025 | 7:15 PM

Share

ನವದೆಹಲಿ, ಮಾರ್ಚ್ 10: ಷೇರು ಮಾರುಕಟ್ಟೆಯಲ್ಲಿ ಸಾವಿರಾರು ಷೇರುಗಳಿದ್ದು, ಆ ರಾಶಿಯೊಳಗೆ ಮಲ್ಟಿಬ್ಯಾಗರ್​​ಗಳನ್ನು (multibagger stocks) ಗುರುತಿಸುವುದು ಬಹಳ ಕಷ್ಟ. ಈಗಾಗಲೇ ಉಚ್ಚ ಮಟ್ಟಕ್ಕೆ ಏರಿ ಮಲ್ಟಿಬ್ಯಾಗರ್ ಪಾತ್ರ ಮುಗಿಸಿರುವ ಷೇರುಗಳು ಸುಲಭವಾಗಿ ಕಣ್ಣಿಗೆ ಬೀಳುತ್ತವೆ. ಆದರೆ, ಗಣನೀಯ ಏರಿಕೆ ಸಾಧ್ಯತೆ ಇರುವ ಮತ್ತು ಭವಿಷ್ಯದಲ್ಲಿ ಮಲ್ಟಿಬ್ಯಾಗರ್ ಎನಿಸಬಹುದಾದ, ಮತ್ತು ಈಗಾಗಲೇ ಮಲ್ಟಿಬ್ಯಾಗರ್ ಹಾದಿಯಲ್ಲಿ ಇದ್ದಿರಬಹುದಾದ ಷೇರುಗಳನ್ನು ಕಂಡು ಹಿಡಿಯುವುದು ಎಂಥ ನಿಪುಣನೇ ಆಗಲಿ ಕಷ್ಟದ ಕೆಲಸ. ಒಂದು ಉತ್ತಮ ಷೇರುಗಳನ್ನು ಗುರುತಿಸಲು ಹಲವು ಮಾನದಂಡಗಳಿವೆ. ಟೆಕ್ನಿಕಲ್ ಅಂಶಗಳಿವೆ. ‘100 ಬ್ಯಾಗರ್ಸ್’ ಎನ್ನುವ ಪುಸ್ತಕದ ಬರೆದಿರುವ ಕ್ರಿಸ್ ಮೇಯರ್ (Chris Mayer) ಕೆಲ ಪ್ರಮುಖ ಮೆಟ್ರಿಕ್​​ಗಳನ್ನು ಗಮನಿಸಬೇಕೆಂದು ಸಲಹೆ ನೀಡಿದ್ದಾರೆ.

ಉತ್ತಮ ಷೇರುಗಳ ಆಯ್ಕೆಗೆ ಇಪಿಎಸ್, ಪಿಇ ರೇಶಿಯೋ, ಪಿಬಿ ರೇಶಿಯೋ, ಕಂಪನಿಯ ಹಣಕಾಸು ಸ್ಥಿತಿ ಇತ್ಯಾದಿ ಹಲವು ಸಂಗತಿಗಳನ್ನು ಗಮನಿಸಲಾಗುತ್ತದೆ. ಇಷ್ಟಾದರೂ ಸಂಭಾವ್ಯ ಮಲ್ಟಿಬ್ಯಾಗರ್ ಅನ್ನು ಗುರುತಿಸುವುದು ಕಷ್ಟದ ಸಂಗತಿ. ಕ್ರಿಸ್ ಮೇಯರ್ ಅವರು ಒಂದು ಒಳ್ಳೆಯ ಕಂಪನಿಯ ಷೇರುಗಳನ್ನು ಆಯ್ದುಕೊಳ್ಳಲು ಪ್ರಮುಖ ನಾಲ್ಕು ಅಂಶಗಳನ್ನು ಗಮನಿಸುವುದು ಮುಖ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: 65,000 ಕೋಟಿ ರೂ ಮೌಲ್ಯದ ಕಂಪನಿಯ ಸಿಇಒಗೆ ಇನ್ಸ್​​ಟಾಗ್ರಾಮ್ ಬಳಸಲು ಕನ್​ಫ್ಯೂಷನ್

ಇದನ್ನೂ ಓದಿ
Image
ನಂಬರ್ ಒನ್ ಸ್ಟಾಕ್ ಬ್ರೋಕರ್ ಮಾಲೀಕನಿಗೆ ಇನ್ಸ್​ಟಾ ಗೊಂದಲ
Image
W ಆಕಾರದಲ್ಲಿ ಚಲಿಸುತ್ತಿದೆಯಾ ನಿಫ್ಟಿ? ಹಾಗಂದರೇನು?
Image
ಶಿಸ್ತುಬದ್ಧ ಹೂಡಿಕೆದಾರರಿಗೆ ಇದು ಅಮೃತಕಾಲ: ತಜ್ಞರು
Image
ಬೇರ್ ಮಾರ್ಕೆಟ್​​ನಿಂದ ಜಾಣರ ಸೃಷ್ಟಿ: ವಿಜಯ್ ಕೆದಿಯಾ

ಕಂಪನಿಯ ಲಾಭ ಹೇಗಿದೆ ಎಂದು ನೋಡಿ

ಕಂಪನಿಯು ತಾನು ಹಾಕಿದ ಬಂಡವಾಳದಿಂದ ಎಷ್ಟು ಲಾಭ ಸೃಷ್ಟಿಸುತ್ತಿದೆ ಎಂಬುದನ್ನು ಗಮನಿಸಬೇಕು. ಸಂಪನ್ಮೂಲದ ಸಮರ್ಪಕ ಬಳಕೆ ಮಾಡುವ ಕಂಪನಿಯಿಂದ ಉತ್ತಮ ಲಾಭದ ನಿರೀಕ್ಷೆ ಸಾಧ್ಯ. ಇಂಥ ಕಂಪನಿಯ ಭವಿಷ್ಯ ಉತ್ತಮವಾಗಿರುತ್ತದೆ.

ಆದಾಯ ವೃದ್ಧಿಯಲ್ಲಿ ಸ್ಥಿರತೆ ಇದೆಯಾ ನೋಡಿ…

ಒಂದು ಕಂಪನಿಯ ಆದಾಯದಲ್ಲಿ ನಿರಂತರ ಹೆಚ್ಚಳ ಆಗುತ್ತಿದ್ದರೆ ಅದು ಅದರ ಆರೋಗ್ಯದ ಕುರುಹಾಗಿರುತ್ತದೆ. ಕಂಪನಿಗೆ ಮಾರುಕಟ್ಟೆ ವಿಸ್ತರಣೆ, ವ್ಯವಹಾರ ಹೆಚ್ಚಳ ಆಗುತ್ತಿರುವುದರ ಫಲ ಅದು.

ಕಂಪನಿಯ ವ್ಯವಹಾರ ವಿಸ್ತರಣೆ ಎಷ್ಟು ಸಾಧ್ಯ ಎಂದು ಗಮನಿಸಿ

ಒಂದು ಕಂಪನಿಯ ವ್ಯವಹಾರಕ್ಕೆ ಸೀಮಿತ ಮಾರುಕಟ್ಟೆ ಇದ್ದರೆ ಅದಕ್ಕೆ ಬೆಳವಣಿಗೆ ಹೆಚ್ಚಳದ ವ್ಯಾಪ್ತಿ ಕಡಿಮೆ ಇರುತ್ತದೆ. ಮಾರುಕಟ್ಟೆ ವಿಸ್ತಾರ ಸಾಧ್ಯತೆ, ಆ ವಿಸ್ತಾರ ಮಾಡಲು ಕಂಪನಿಗೆ ಇರುವ ತಾಕತ್ತು ಇವೆಲ್ಲವನ್ನೂ ಗಮನಿಸಬೇಕು ಎಂದು ಕ್ರಿಸ್ ಮೇಯರ್ ಹೇಳುತ್ತಾರೆ.

ಇದನ್ನೂ ಓದಿ: ಭಾರತದ ಷೇರುಪೇಟೆ W ಆಕಾರದಲ್ಲಿ ಚೇತರಿಕೆ ಕಾಣಲಿದೆಯಂತೆ; ಏನಿದು ಡಬ್ಲ್ಯು ಶೇಪ್ ರಿಕವರಿ?

ಕಂಪನಿಯ ಆಡಳಿತ ತಂಡ ಉತ್ತಮವಾಗಿರಬೇಕು

ಕಂಪನಿಗೆ ಎಷ್ಟೇ ದೊಡ್ಡ ಬಂಡವಾಳ ಇರಲಿ, ಎಷ್ಟೇ ಮಾರುಕಟ್ಟೆ ವಿಸ್ತಾರ ಇರಲಿ, ಆದರೆ, ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಮ್ಯಾನೇಜ್ಮೆಂಟ್ ಇಲ್ಲದಿದ್ದರೆ ಫೇಲ್ ಆಗುತ್ತದೆ. ಆದ್ದರಿಂದ ದೂರದೃಷ್ಟಿಕೋನ ಇರುವ ಮತ್ತು ಆಡಳಿತ ಚಾಕಚಕ್ಯತೆ ಇರುವ ಮ್ಯಾನೇಜ್ಮೆಂಟ್​ ಇದೆಯಾ ಎನ್ನುವುದು ಮುಖ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಖರ್ಗೆಯವರನ್ನು ಭೇಟಿಯಾಗುವುದು 3-ದಿನ ಹಿಂದೆ ನಿಗದಿಯಾಗಿತ್ತು: ಜಾರಕಿಹೊಳಿ
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸಿಎಂ ಬದಲಾವಣೆ ವಿಷಯದಲ್ಲಿ ಸುರ್ಜೇವಾಲಾ ಚರ್ಚಿಸಿಲ್ಲ: ರಂಗನಾಥ್
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ಸುರ್ಜೆವಾಲಾ ಜೊತೆ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಚರ್ಚೆಯಾಗಿಲ್ಲ: ಸಿಎಂ
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ವರಿಷ್ಠರ ಮಟ್ಟದಲ್ಲಿ ನಡೆಯುವ ಚರ್ಚೆ ಬಿಎಸ್​ವೈ ಗೊತ್ತಿಲ್ಲದಿರುತ್ತದೆಯೇ?
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ಕೋರ್ಟ್​ ಎದುರು ನೆರೆದ ದರ್ಶನ್ ಫ್ಯಾನ್ಸ್; ನಟನಿಗೆ ಜೈಕಾರ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ಸುದ್ದಿಗೋಷ್ಠಿ: ಇಲ್ಲಿದೆ ಲೈವ್​
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ರೈಲ್ವೆ ಹಳಿ ಪಕ್ಕ ಮರಿಗೆ ಜನ್ಮ ನೀಡಿದ ಆನೆ, ಎರಡು ಗಂಟೆಗಳ ಕಾಲ ನಿಂತ ರೈಲು
ಹೃದಯಾಘಾತಗಳ ಹೆಚ್ಚಳಕ್ಕೆ ನಿಖರವಾದ ಕಾರಣ ವೈದ್ಯರಿಗೆ ಗೊತ್ತಾಗುತ್ತಿಲ್ಲ
ಹೃದಯಾಘಾತಗಳ ಹೆಚ್ಚಳಕ್ಕೆ ನಿಖರವಾದ ಕಾರಣ ವೈದ್ಯರಿಗೆ ಗೊತ್ತಾಗುತ್ತಿಲ್ಲ