Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರು ಮಾರುಕಟ್ಟೆ, ಗೂಳಿ, ಕರಡಿ, ಮೂರ್ಖ, ಜಾಣ… ಫೈನಾನ್ಷಿಯಲ್ ಫ್ರೀಡಂ ಸಮಿಟ್​​ನಲ್ಲಿ ಸತ್ಯ ಬಿಚ್ಚಿಟ್ಟ ವಿಜಯ್ ಕೆದಿಯಾ

Vijay Kedia speaks at Money9 Financial Summit 2025: ಮಾರುಕಟ್ಟೆ ಹೀಗೇ ಹೋಗುತ್ತೆ ಎಂದು ನಿಖರವಾಗಿ ಊಹಿಸಲು ಯಾರಿಂದಲೂ ಸಾಧ್ಯವಿಲ್ಲ. ಮಾರ್ಕೆಟ್ ಟೈಮಿಂಗ್ ಮಾಡಿ ಹೂಡಿಕೆ ಮಾಡುತ್ತೀನಿ ಎನ್ನುವುದು ಜಾಣತನವನ್ನ ಎಂದು ಖ್ಯಾತ ಹೂಡಿಕೆದಾರ ವಿಜಯ್ ಕೆದಿಯಾ ಹೇಳಿದ್ದಾರೆ. ಷೇರು ಮಾರುಕಟ್ಟೆಯ ಗೂಳಿ ಓಟದಲ್ಲಿ ಮೂರ್ಖರು ಸೃಷ್ಟಿಯಾಗುತ್ತಾರೆ. ಈ ಮೂರ್ಖರಿಂದ ಕರಡಿ ನೃತ್ಯ ಶುರುವಾಗುತ್ತೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ ವಿಜಯ್ ಕೆದಿಯಾ.

ಷೇರು ಮಾರುಕಟ್ಟೆ, ಗೂಳಿ, ಕರಡಿ, ಮೂರ್ಖ, ಜಾಣ... ಫೈನಾನ್ಷಿಯಲ್ ಫ್ರೀಡಂ ಸಮಿಟ್​​ನಲ್ಲಿ ಸತ್ಯ ಬಿಚ್ಚಿಟ್ಟ ವಿಜಯ್ ಕೆದಿಯಾ
ವಿಜಯ್ ಕೇದಿಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 06, 2025 | 12:00 PM

ಮುಂಬೈ, ಮಾರ್ಚ್ 6: ನಿನ್ನೆ ನಡೆದ ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್​​ನಲ್ಲಿ (Money9 Financial Summit 2025) ದೇಶದ ಅತಿದೊಡ್ಡ ಹೂಡಿಕೆದಾರರಲ್ಲೊಬ್ಬರಾದ ವಿಜಯ್ ಕೇದಿಯಾ (Vijay Kedia) ಜೊತೆಗಿನ ಸಂವಾದ ಬಹಳ ಕುತೂಹಲ ಹುಟ್ಟಿಸಿತ್ತು. ಮಾರುಕಟ್ಟೆಯಲ್ಲಿ ಹೂಡಿಕೆಯ ಬಗ್ಗೆ ಇರುವ ಹಲವು ಅತಿಶಯೋಕ್ತಿ, ನಂಬಿಕೆಗಳ ಕಟ್ಟೆಗಳನ್ನು (myth busted) ಕೆದಿಯಾ ಒಡೆದುಹಾಕಿದರು. ತಮ್ಮ ಮೊನಚು ಮಾತುಗಳಿಂದ ಹಲವು ವಿಚಾರಗಳನ್ನು ಒರೆಗೆ ಹಚ್ಚಿ ವಾಸ್ತವ ಸಂಗತಿಯನ್ನು ತೋರಿಸಲು ಯತ್ನಿಸಿದರು. ಷೇರು ಮಾರುಕಟ್ಟೆ ಸತತ ಐದು ತಿಂಗಳು ಕುಸಿತ ಕಂಡ ಹಿನ್ನೆಲೆಯಲ್ಲಿ ವಿಜಯ್ ಕೆದಿಯಾ ಅವರ ವಿಚಾರಗಳು ಬಹಳಷ್ಟು ಹೂಡಿಕೆದಾರರಿಗೆ ಸಮಾಧಾನ ತರುವಂತಿದ್ದವು.

ಗೂಳಿ, ಕರಡಿ, ಮೂರ್ಖರು, ಜಾಣರು…

‘ಬುಲ್ ಮಾರ್ಕೆಟ್​ಗಳಿಂದ ಮೂರ್ಖ ಹೂಡಿಕೆದಾರರು ಹುಟ್ಟುತ್ತಾರೆ. ಈ ಮೂರ್ಖ ಹೂಡಿಕೆದಾರರು ಬೇರ್ ಮಾರ್ಕೆಟ್​​ಗಳನ್ನು ಸೃಷ್ಟಿಸುತ್ತಾರೆ. ಈ ಬೇರ್ ಮಾರ್ಕೆಟ್​​ಗಳು ಜಾಣ ಹೂಡಿಕೆದಾರರನ್ನು ಸೃಷ್ಟಿಸುತ್ತವೆ. ಈ ಜಾಣ ಹೂಡಿಕೆದಾರರು ಬುಲ್ ಮಾರ್ಕೆಟ್ ನಿರ್ಮಿಸುತ್ತಾರೆ. ಇದು ಒಂದು ಲೈಫ್ ಸೈಕಲ್’ ಎಂದು ಹೇಳುತ್ತಾರೆ ವಿಜಯ್ ಕೆದಿಯಾ.

ಇದನ್ನೂ ಓದಿ: ಭಾರತದ ಮೇಲೆ ಅಮೆರಿಕದ ಟ್ಯಾರಿಫ್ ಪರಿಣಾಮ ಯಾಕೆ ನಗಣ್ಯ? ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್​ನಲ್ಲಿ ಕೇಕಿ ಮಿಸ್ತ್ರಿ ಉತ್ತರ

ಇದನ್ನೂ ಓದಿ
Image
ಅಮೆರಿಕದ ಟ್ಯಾರಿಫ್: ಭಾರತಕ್ಕಿರಲ್ಲ ಗಂಭೀರ ಪರಿಣಾಮ: ಕೇಕಿ ಮಿಸ್ತ್ರಿ
Image
ಭಾರತದಲ್ಲಿ ಎಸ್​ಐಪಿ ಮಂತ್ರ: ಎಎಂಎಫ್​​ಐ ಛೇರ್ಮನ್ ವಿಎನ್ ಚಲಸಾನಿ
Image
ಹೂಡಿಕೆ ದೀರ್ಘಾವಧಿ ಇರಲಿ: ಎನ್​ಎಸ್​ಇ ಮುಖ್ಯಸ್ಥ ಆಶೀಶ್ ಚೌಹಾಣ್
Image
2030ದೊಳಗೆ ಮಹಾರಾಷ್ಟ್ರ ಟ್ರಿಲಿಯನ್ ಡಾಲರ್ ಆರ್ಥಿಕತೆ: ಫಡ್ನವಿಸ್

ಬುಲ್ ಮಾರ್ಕೆಟ್​ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಷೇರುಗಳ ಬೆಲೆ ಮೇಲೇರುತ್ತವೆ. ಸೂಚ್ಯಂಕಗಳು ನಾಗಾಲೋಟ ನಡೆಸುತ್ತವೆ. ಇದು ಗೂಳಿ ಓಟ. ಬೇರ್ ಮಾರ್ಕೆಟ್ ಎಂದರೆ ಕರಡಿ ನರ್ತನ. ಇಲ್ಲಿ ಮಾರುಕಟ್ಟೆ ಪತನದ ಹಾದಿಯಲ್ಲಿರುತ್ತದೆ. ಷೇರುಗಳ ಸತತ ಕುಸಿತ ಕಾಣಬಹುದು.

ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್​​ನಲ್ಲಿ ವಿಜಯ್ ಕೆದಿಯಾ ಜೊತೆ ಮನಿ9 ಕನ್ಸಲ್ಟಿಂಗ್ ಎಡಿಟರ್ ಸುಮಿತ್ ಮೆಹ್ರೋತ್ರಾ ಸಂವಾದದಲ್ಲಿ ಪಾಲ್ಗೊಂಡಿದ್ದರು. ಇವರ ಸಂವಾದದಲ್ಲಿ ಕೆಲ ಖ್ಯಾತ ಇಂಗ್ಲೀಷ್ ಹಾಡುಗಳ ಝಲಕ ಕೇಳಿಬಂದಿತು. ಈ ಮಧ್ಯೆ ವಿಜಯ್ ಕೆದಿಯಾ ಅವರು ಕೆಲ ಮಿತ್​​​ಗಳನ್ನು ಒಡೆಯಲು ಯತ್ನಿಸಿದರು. ಅವರ ಪ್ರಕಾರ ಮಾರ್ಕೆಟ್ ಟೈಮ್ ಮಾಡುತ್ತೇನೆ ಎನ್ನುವವರು ಮೂರ್ಖರು, ಸುಳ್ಳರು.

ರೈಲು ಮಿಸ್ ಆದೀತು…

‘ನಿಖರವಾಗಿ ಮಾರುಕಟ್ಟೆಯ ಟೈಮಿಂಗ್ ಮಾಡುತ್ತೀನಿ ಎನ್ನುವುದೆಲ್ಲಾ ಸುಳ್ಳು. ಮಾರುಕಟ್ಟೆಯ ಒಳ ಹೊರಗು ನನಗೆ ತಿಳಿಯಲು ನಾನೇನು ದೇವರಲ್ಲ, ಅಥವಾ ಸುಳ್ಳನಲ್ಲ. ಅದು ಯಾರಿಗೂ ಗೊತ್ತಿರುವುದಿಲ್ಲ. ನೀವು ಹೂಡಿಕೆ ಮಾಡಿದ ಷೇರು ಕೆಳಗೆ ಬೀಳುವ ರಿಸ್ಕ್ ಇದ್ದೇ ಇರುತ್ತದೆ. ಈ ರಿಸ್ಕ್ ತೆಗೆದುಕೊಳ್ಳಲು ನೀವು ಸಿದ್ಧರಿದ್ದೀರಿ ಎಂದಾದರೆ ಹೂಡಿಕೆ ಮಾಡಬುದು. ಷೇರು ಕುಸಿತ ಕೊನೆಯಾಗುವವರೆಗೂ ಕಾದು ಹೂಡಿಕೆ ಮಾಡುತ್ತೀನಿ ಎಂದುಕೊಂಡರೆ, ಕಾಲ ಮಿಂಚಿಹೋಗಿರುತ್ತದೆ’ ಎಂದು ವಿಜಯ್ ಕೆದಿಯಾ ಹೇಳಿದರು.

ಇದನ್ನೂ ಓದಿ: ಬೆಳಗ್ಗೆ ಖರೀದಿಸಿ, ಮಧ್ಯಾಹ್ನ ಮಾರೋದು ಹೂಡಿಕೆ ಅಲ್ಲ: ಮನಿ9 ಸಮಿಟ್​ನಲ್ಲಿ ಎನ್​ಎಸ್​ಇ ಸಿಇಒ ಆಶೀಶ್ ಚೌಹಾಣ್ ಕಿವಿಮಾತು

9 ತಿಂಗಳ ವೃತ್ತ… ಜೂನ್​ನಲ್ಲಿ ಮಾರುಕಟ್ಟೆ ಪುಟಿದೇಳಬಹುದು…

ಮಾರ್ಕೆಟ್ ಟೈಮಿಂಗ್ ಮಾಡಲು ಆಗೊಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದ ವಿಜಯ್ ಕೆದಿಯಾ, ಅದೇ ವೇಳೆ ಮಾರುಕಟ್ಟೆ ಪುಟಿದೇಳುವ ಸಾಧ್ಯತೆ ಬಗ್ಗೆ ಸುಳಿವು ಕೂಡ ಬಿಚ್ಚಿಟ್ಟರು. ಅವರ ಅಂದಾಜು ಪ್ರಕಾರ, ಮಾರುಕಟ್ಟೆ 9 ತಿಂಗಳ ಆವರ್ತನ ಹಾದಿ ಹೊಂದಿರುತ್ತದೆ. ಅಂದರೆ, 9 ತಿಂಗಳು ಕುಸಿದ ಬಳಿಕ ಮೇಲೇರಬಹುದು. ಸೆಪ್ಟೆಂಬರ್​​ನಿಂದ ಮಾರುಕಟ್ಟೆ ಕುಸಿತ ಆಗುತ್ತಿದೆ ಎಂದರೆ ಜೂನ್​ನಿಂದ ಅದು ಪುಟಿದೇಳಬಹುದು ಎಂಬುದು ಅವರ ಅನಿಸಿಕೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!