AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಮೊಬೈಲ್ ರಫ್ತು ಕಡಿಮೆ ಆಗಿಲ್ಲ; ಆಗಸ್ಟ್​ನಲ್ಲಿ ಗಣನೀಯ ಏರಿಕೆ: ಐಸಿಇಎ ದತ್ತಾಂಶ ಬಿಡುಗಡೆ

Smartphone exports from India in 2025 August: ಭಾರತದಿಂದ ಸ್ಮಾರ್ಟ್​ಫೋನ್ ರಫ್ತು ಗಣನೀಯವಾಗಿ ಇಳಿಕೆ ಆಗುತ್ತಿದೆ ಎಂಬಂತಹ ಸುದ್ದಿಗಳು ಇತ್ತೀಚೆಗೆ ಪ್ರಕಟವಾಗಿದ್ದವು. ಆದರೆ, ವಾಸ್ತವವಾಗಿ ಆಗಸ್ಟ್ ತಿಂಗಳಲ್ಲಿ ಸ್ಮಾರ್ಟ್​ಫೋನ್ ರಫ್ತು ಶೇ. 39ರಷ್ಟು ಹೆಚ್ಚಾಗಿದೆ. 2024ರ ಆಗಸ್ಟ್​ನನಲ್ಲಿ 1.09 ಬಿಲಿಯನ್ ಡಾಲರ್​ನಷ್ಟು ಫೋನ್ ರಫ್ತಾಗಿದ್ದರೆ, 2025ರ ಆಗಸ್ಟ್​ನಲ್ಲಿ ಈ ಸಂಖ್ಯೆ 1.53 ಬಿಲಿಯನ್ ಡಾಲರ್​ಗೆ ಏರಿದೆ.

ಭಾರತದ ಮೊಬೈಲ್ ರಫ್ತು ಕಡಿಮೆ ಆಗಿಲ್ಲ; ಆಗಸ್ಟ್​ನಲ್ಲಿ ಗಣನೀಯ ಏರಿಕೆ: ಐಸಿಇಎ ದತ್ತಾಂಶ ಬಿಡುಗಡೆ
ಸ್ಮಾರ್ಟ್​ಫೋನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 25, 2025 | 12:56 PM

Share

ನವದೆಹಲಿ, ಸೆಪ್ಟೆಂಬರ್ 25: ಆಗಸ್ಟ್ ತಿಂಗಳಲ್ಲಿ ಭಾರತದಿಂದ 1.53 ಬಿಲಿಯನ್ ಡಾಲರ್ ಮೊತ್ತದಷ್ಟು ಸ್ಮಾರ್ಟ್​ಫೋನ್ ರಫ್ತು ಆಗಿದೆ ಎಂದು ಇಂಡಿಯಾ ಸೆಲೂಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ICEA) ಹೇಳಿದೆ. ಕಳೆದ ವರ್ಷದ ಆಗಸ್ಟ್​ನಲ್ಲಿ (2024) ಆದ ರಫ್ತು 1.09 ಬಿಲಿಯನ್ ಡಾಲರ್​ನಷ್ಟು ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ. 39ರಷ್ಟು ಹೆಚ್ಚಾಗಿದೆ.

ಭಾರತದ ಸ್ಮಾರ್ಟ್​ಫೋನ್ ರಫ್ತು ಗಣನೀಯವಾಗಿ ಇಳಿಕೆ ಆಗಿದೆ ಎಂಬಂತಹ ಸುದ್ದಿಗಳು ಇತ್ತೀಚೆಗೆ ಕೇಳಿಬಂದಿದ್ದವು. ಈಗ ಐಸಿಇಎ ಬಿಡುಗಡೆ ಮಾಡಿರುವ ದತ್ತಾಂಶವು ಈ ವರದಿಯ ಅಂಶಗಳನ್ನು ಅಲ್ಲಗಳೆದಿದೆ. ಆಗಸ್ಟ್ ತಿಂಗಳ ರಫ್ತು ದತ್ತಾಂಶವನ್ನು ಹಿಂದಿನ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಬೇಕು. ಹಿಂದಿನ ತಿಂಗಳುಗಳ ದತ್ತಾಂಶಕ್ಕೆ ಹೋಲಿಸಿದರೆ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ರಫ್ತು ಕಡಿಮೆ ಆಗಿದೆ ಎನ್ನುವ ವರದಿಗಳಲ್ಲೂ ಈ ತಪ್ಪು ಆಗಿದ್ದಿರಬಹುದು.

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಸ್ಮಾರ್ಟ್​ಫೋನ್ ಕಂಪನಿಗಳ ಹೊಸ ಉತ್ಪನ್ನಗಳ ಬಿಡುಗಡೆ ಇರುತ್ತವೆ. ಹಬ್ಬದ ಸೇಲ್ ಸೀಸನ್ ಕಾರಣ ಈ ಎರಡು ಮೂರು ತಿಂಗಳು ಸ್ಥಳೀಯವಾಗಿ ಸ್ಮಾರ್​ಟ್​ಫೋನ್​ಗಳಿಗೆ ಬೇಡಿಕೆ ಇರುತ್ತದೆ. ಹೀಗಾಗಿ, ಯಾವುದೇ ವರ್ಷದಲ್ಲೂ ಈ ಕೆಲ ತಿಂಗಳು ಸ್ಮಾರ್ಟ್​ಫೋನ್ ರಫ್ತು ಕಡಿಮೆಯೇ ಇರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಉದ್ಯೋಗಸೃಷ್ಟಿಯಲ್ಲಿ ಹಿನ್ನಡೆ ಇಲ್ಲ; ಜುಲೈನಲ್ಲಿ 21 ಲಕ್ಷ ಹೊಸ ಇಪಿಎಫ್ ಸದಸ್ಯರ ಸೇರ್ಪಡೆ

ಅಮೆರಿಕಕ್ಕೆ ಸ್ಮಾರ್ಟ್​ಫೋನ್ ರಫ್ತು ಎರಡು ಪಟ್ಟು ಹೆಚ್ಚಳ

ಇನ್ನು, ಅಮೆರಿಕಕ್ಕೆ ಭಾರತದಿಂದ ಆದ ಸ್ಮಾರ್ಟ್​ಫೋನ್ ರಫ್ತಿನಲ್ಲೂ ಯಾವುದೇ ಇಳಿಕೆ ಆಗಿಲ್ಲ. ತದ್ವಿರುದ್ಧವಾಗಿ, ಅಮೆರಿಕಕ್ಕೆ ರಫ್ತು ಎರಡು ಪಟ್ಟು ಹೆಚ್ಚಾಗಿದೆ. 2024ರ ಆಗಸ್ಟ್​ನಲ್ಲಿ 388 ಮಿಲಿಯನ್ ಡಾಲರ್​ನಷ್ಟು ಸ್ಮಾರ್ಟ್​ಫೋನ್ ರಫ್ತಾಗಿತ್ತು. 2025ರ ಆಗಸ್ಟ್​ನಲ್ಲಿ ಇದು 965 ಮಿಲಿಯನ್ ಡಾಲರ್​ಗೆ ಏರಿದೆ. ಅಂದರೆ, ಅಮೆರಿಕಕ್ಕೆ ಮಾಡಲಾದ ರಫ್ತು ಶೇ. 148ರಷ್ಟು ಹೆಚ್ಚಳ ಆಗಿದೆ.

ಈ ಹಣಕಾಸು ವರ್ಷದಲ್ಲಿ (2025ರ ಏಪ್ರಿಲ್ ನಂತರ) ಮೊದಲ ಐದು ತಿಂಗಳು ಭಾರತದ ಒಟ್ಟಾರೆ ಸ್ಮಾರ್ಟ್​ಫೋನ್ ರಫ್ತು ಒಂದು ಲಕ್ಷ ರುಪಾಯಿ (11.7 ಬಿಲಿಯನ್ ಡಾಲರ್) ಮುಟ್ಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 7.6 ಬಿಲಿಯನ್ ಡಾಲರ್​​ನಷ್ಟು ಸ್ಮಾರ್ಟ್​ಫೋನ್ ರಫ್ತಾಗಿತ್ತು. ಅಂದರೆ, ಈ ಬಾರಿ ಶೇ. 55ರಷ್ಟು ರಫ್ತು ಹೆಚ್ಚಿದೆ.

ಇದನ್ನೂ ಓದಿ: ಹೊಸ ತಲೆಮಾರಿನ ಯುದ್ಧವಿಮಾನ ನಿರ್ಮಾಣಕ್ಕೆ ಜೊತೆಯಾದ ಬಿಇಎಲ್ ಮತ್ತು ಎಲ್ ಅಂಡ್ ಟಿ

ಸ್ಮಾರ್ಟ್​ಫೋನ್ ರಫ್ತು ಬಿದ್ದಿದ್ದು ಸರ್ಕಾರದ ಪಿಎಲ್​ಐ ಸ್ಕೀಮ್ ವಿಫಲವಾಗಿದೆ ಎಂದೂ ಇತ್ತೀಚಿನ ವರದಿಗಳಲ್ಲಿ ಹೇಳಲಾಗಿತ್ತು. ಆದರೆ, ಐಸಿಇಎ ದತ್ತಾಂಶದ ಪ್ರಕಾರ ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಕಳೆದ ಐದು ವರ್ಷಗಳಿಂದ ಭಾರತಕ್ಕೆ ಅತಿಹೆಚ್ಚು ರಫ್ತು ತಂದುಕೊಟ್ಟಿರುವುದು ಸ್ಮಾರ್ಟ್​ಫೋನ್​ಗಳೇ.

ಒಂದು ಕಾಲದಲ್ಲಿ ಅಮೆರಿಕಕ್ಕೆ ಅತಿಹೆಚ್ಚು ಸ್ಮಾರ್ಟ್​ಫೋನ್​ಗಳು ಸರಬರಾಜಾಗುತ್ತಿದ್ದುದು ಚೀನಾದಿಂದಲೇ. ಇದೀಗ ಭಾರತವು ಚೀನಾವನ್ನು ಈ ವಿಚಾರದಲ್ಲಿ ಹಿಂದಿಕ್ಕಿದೆ. ಅಮೆರಿಕಕ್ಕೆ ಅತಿಹೆಚ್ಚು ಸ್ಮಾರ್ಟ್​ಫೋನ್ ರಫ್ತು ಮಾಡುತ್ತಿರುವುದು ಭಾರತವೇ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ನಮ್ಮ ಮೆಟ್ರೋದಲ್ಲಿ ಇಂದಿನಿಂದ ಹೊಸ ಬದಲಾವಣೆ: ಇಲ್ಲಿದೆ ಮಾಹಿತಿ
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ಅಶ್ಲೀಲವಾಗಿ ನಿಂದಿಸಿದ ಕಾಂಗ್ರೆಸ್ ಮುಖಂಡನ ಬಗ್ಗೆ ಖರ್ಗೆ ಖಡಕ್ ಮಾತು
ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ ಎಂದ ಪ್ರತಾಪ್​
ವಿಧಾನಸಭೆ ಚುನಾವಣೆಗೆ ತಾನು ಈ ಕ್ಷೇತ್ರದ ಟಿಕೆಟ್​​ ಆಕಾಂಕ್ಷಿ ಎಂದ ಪ್ರತಾಪ್​