AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬಾರಿಯಾಗಲಿದೆ ಮೊಬೈಲ್ ಬಿಲ್; ಮುಂಬರುವ ತಿಂಗಳಲ್ಲಿ ಬೆಲೆ ಏರಿಸಲಿವೆ ಟೆಲಿಕಾಂ ಕಂಪನಿಗಳು

Telecom companies may hike mobile tariffs in early 2026: ಮುಂದಿನ ಆರು ತಿಂಗಳೊಳಗೆ ಮೊಬೈಲ್ ಟ್ಯಾರಿಫ್​ಗಳು ಏರಿಕೆ ಆಗಬಹುದು ಎಂದು ಕೆಲ ವರದಿಗಳಲ್ಲಿ ಹೇಳಲಾಗಿದೆ. ಟೆಲಿಕಾಂ ಕಂಪನಿಗಳು 2026ರ ಆರಂಭದಲ್ಲಿ ಶೇ. 10ರಿಂದ 20ರಷ್ಟು ಟ್ಯಾರಿಫ್ ಏರಿಸಬಹುದು. 5ಜಿ ನೆಟ್ವರ್ಕ್​ಗೆ ಇನ್​ಫ್ರಾಸ್ಟ್ರಕ್ಚರ್ ಅಳವಡಿಸಲು ಸಾಕಷ್ಟು ವೆಚ್ಚವಾಗುತ್ತದೆ. ಅದನ್ನು ಭರಿಸಲು ಟ್ಯಾರಿಫ್ ಏರಿಕೆ ಅನಿವಾರ್ಯ ಎನ್ನಲಾಗಿದೆ.

ದುಬಾರಿಯಾಗಲಿದೆ ಮೊಬೈಲ್ ಬಿಲ್; ಮುಂಬರುವ ತಿಂಗಳಲ್ಲಿ ಬೆಲೆ ಏರಿಸಲಿವೆ ಟೆಲಿಕಾಂ ಕಂಪನಿಗಳು
ಮೊಬೈಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 12, 2025 | 2:25 PM

Share

ನವದೆಹಲಿ, ಆಗಸ್ಟ್ 12: ಮೊಬೈಲ್ ಬಳಕೆದಾರರ ಜೇಬಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕತ್ತರಿ ಬೀಳಲಿದೆ. ಪ್ರೀಪೇಡ್ ಮತ್ತು ಪೋಸ್ಟ್ ಪೇಡ್ ಪ್ಲಾನ್​ಗಳ ದರ ಏರಿಕೆ ಆಗಬಹುದು ಎನ್ನುವ ಸುದ್ದಿ ಇದೆ. ಮುಂದಿನ ಆರು ತಿಂಗಳೊಳಗೆ ಟೆಲಿಕಾಂ ಕಂಪನಿಗಳು (telecom companies) ದರ ಏರಿಕೆ ಮಾಡಲು ಅಣಿಗೊಂಡಿವೆ. ಕಳೆದ ವರ್ಷ (2024) ಎಲ್ಲಾ ಟೆಲಿಕಾಂ ಕಂಪನಿಗಳು ಶೇ. 15ರಿಂದ 20ರಷ್ಟು ಏರಿಕೆ ಮಾಡಿದ್ದವು. ಈ ಬಾರಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಆಗುವುದಿಲ್ಲ. ಶೇ. 10-15ರಷ್ಟು ಏರಿಕೆ ಅಗಬಹುದು ಎಂದು ಹೇಳಲಾಗುತ್ತಿದೆ.

‘ಮೊಬೈಲ್ ಟ್ಯಾರಿಫ್ ಏರಿಕೆ ಆಗುವುದು ನಿಶ್ಚಿತವಾಗಿದೆ. ಕಳೆದ ವರ್ಷಕ್ಕಿಂತ ಕಡಿಮೆ ಏರಿಕೆ ಆಗುವ ನಿರೀಕ್ಷೆ ಇದೆ. ಶೇ. 15-20ಕ್ಕಿಂತ ಕಡಿಮೆ ಏರಿಕೆ ಆಗಬಹುದು’ ಎಂದು ಐಸಿಆರ್​ಎ ಸಂಸ್ಥೆಯ ವಿಶ್ಲೇಷಕರೊಬ್ಬರು ಹೇಳಿದ್ದಾಗಿ ಎನ್​ಡಿಟಿವಿ ಪ್ರಾಫಿಟ್​ನಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ.

ಈ ಹಿಂದೆ ಎರಡು ವರ್ಷಕ್ಕೊಮ್ಮೆ ಮೊಬೈಲ್ ಟ್ಯಾರಿಫ್​ಗಳನ್ನು ಪರಿಷ್ಕರಿಸಲಾಗುತ್ತಿತ್ತು. ಈಗ ಹೆಚ್ಚೆಚ್ಚು ಬಾರಿ ದರ ಪರಿಷ್ಕರಣೆ ಆಗಬಹುದು. ಹಾಗೆಯೇ, ಟೆಲಿಕಾಂ ಕಂಪನಿಗಳಿಗೆ ಪ್ರತೀ ಬಳಕೆದಾರರಿಂದ ಸಿಗುವ ಆದಾಯ ಮತ್ತಷ್ಟು ಹೆಚ್ಚಬಹುದು ಎನ್ನುವ ನಿರೀಕ್ಷೆಯೂ ಇದೆ. 2024-25ರಲ್ಲಿ ಪ್ರತೀ ಬಳಕೆದಾರರಿಗೆ ಸರಾಸರಿ ಆದಾಯ 200 ರೂ ಇತ್ತು. 2025-26ರಲ್ಲಿ ಇದು 220 ರೂಗೆ ಏರಿಕೆ ಆಗಬಹುದು ಎನ್ನುವುದು ವಿಶ್ಲೇಷಕರ ಅಂದಾಜು. ಆದರೆ, ವಿಶ್ವದ ಹೆಚ್ಚಿನ ದೇಶಗಳಲ್ಲಿ ಟೆಲಿಕಾಂ ಕಂಪನಿಗಳಿಗೆ ಇದಕ್ಕಿಂತ ಹೆಚ್ಚಿನ ಆದಾಯ ಇದೆ.

ಇದನ್ನೂ ಓದಿ: ಮನೆ ಆಸ್ತಿ ಆದಾಯಕ್ಕೆ ತೆರಿಗೆ: ಹೊಸ ಇನ್ಕಮ್ ಟ್ಯಾಕ್ಸ್ ಮಸೂದೆಯಲ್ಲಿ ಕಾನೂನು ಸ್ಪಷ್ಟತೆ

ಈ ಹಣಕಾಸು ವರ್ಷಾಂತ್ಯದೊಳಗೆ ಮೊಬೈಲ್ ಟ್ಯಾರಿಫ್​ಗಳನ್ನು ಪರಿಷ್ಕರಿಸಲಾಗಬಹುದು. 5ಜಿ ಇನ್​ಫ್ರಾಸ್ಟ್ರಕ್ಚರ್ ಅಳವಡಿಕೆಗೆ ಸಾಕಷ್ಟು ಬಂಡವಾಳ ವೆಚ್ಚ ಆಗುವ ಅಗತ್ಯತೆ ಇರುವುದರಿಂದ ಅದನ್ನು ಭರಿಸಲು ಟ್ಯಾರಿಫ್ ಏರಿಕೆಯು ಟೆಲಿಕಾಂ ಕಂಪನಿಗಳಿಗೆ ಅನಿವಾರ್ಯವಾಗಿದೆ.

ಟೆಲಿಕಾಂ ಕಂಪನಿಗಳು 2026ರಲ್ಲಿ ಎಷ್ಟು ಹೆಚ್ಚಳ ಮಾಡಬಹುದು?

  • ರಿಲಾಯನ್ಸ್ ಜಿಯೋ ಆರಂಭಿಕ ಪ್ಲಾನ್: 155 ರೂನಿಂದ 189 ರೂಗೆ ಏರಿಸಬಹುದು (ಶೇ. 22)
  • ರಿಲಾಯನ್ಸ್ ಜಿಯೋ ಹೈಯರ್ ಎಂಡ್ ಪ್ಲಾನ್: 2,999 ರೂನಿಂದ 3,599 ರೂಗೆ ಏರಿಕೆ ಸಾಧ್ಯತೆ (ಶೇ 20)
  • ಏರ್ಟೆಲ್ ಆರಂಭಿಕ ಪ್ಲಾನ್: 179ರೂನಿಂದ 199 ರೂಗೆ ಏರಿಕೆ ಸಾಧ್ಯತೆ (ಶೇ. 11)
  • ಏರ್ಟೆಲ್ ಹೈಯರ್ ಎಂಡ್ ಪ್ಲಾನ್: 2,999 ರೂನಿಂದ 3,599 ರೂಗೆ ಏರಿಕೆ ಸಾಧ್ಯತೆ (ಶೇ. 20)
  • ವೊಡಾಫೋನ್ ಐಡಿಯಾ ಆರಂಭಿಕ ಪ್ಲಾನ್: 179 ರೂನಿಂದ 199 ರೂಗೆ ಏರಿಕೆ ಸಾಧ್ಯತೆ (ಶೇ. 11)
  • ವೊಡಾಫೋನ್ ಐಡಿಯಾ ಹೈಯರ್ ಎಂಡ್ ಪ್ಲಾನ್: ಶೇ. 2,899 ರೂನಿಂದ 3,599 ರೂಗೆ ಏರಿಕೆ ಸಾಧ್ಯತೆ (ಶೇ. 24)

ಇಲ್ಲಿ ಟೆಲಿಕಾಂ ತ್ರಯರಾದ ಜಿಯೋ, ಏರ್​ಟೆಲ್ ಮತ್ತು ವಿಐಗಳ ಹೈಯರ್ ಎಂಡ್ ಟ್ಯಾರಿಫ್​ಗಳು ಸಮವಾಗಿರಲಿವೆ. ರಿಲಾಯನ್ಸ್ ಜಿಯೋ ಕೂಡ ತನ್ನ ದರಗಳನ್ನು ಪ್ರತಿಸ್ಪರ್ಧಿಗಳಿಗೆ ಸಮನಾಗಿ ಏರಿಸುವ ಸಾಧ್ಯತೆ ಇದೆ. ಆದರೆ, ಹೆಚ್ಚು ಬಳಕೆಯಲ್ಲಿರುವ ಎಂಟ್ರಿ ಲೆವೆಲ್ ಪ್ಲಾನ್​ಗಳಲ್ಲಿ ಜಿಯೋ ದರ ಕಡಿಮೆ ಇದೆ.

ಇದನ್ನೂ ಓದಿ: ಗ್ರಾಹಕರ ಕ್ಲೇಮ್ ಸೆಟಲ್ಮೆಂಟ್: ಬ್ಯಾಂಕುಗಳಿಗೆ ಆರ್​ಬಿಐ ಕರಡು ನಿಯಮಗಳಿವು…

ಇನ್ನೊಂದೆಡೆ, ಬಿಎಸ್ಸೆನ್ನೆಲ್ ಯಾವ ತಂತ್ರ ಅನುಸರಿಸುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಜಿಯೋ, ಏರ್ಟೆಲ್, ವಿಐಗಳಿಗಿಂತ ಬಿಎಸ್ಸೆನ್ನೆಲ್​ನ ಎಲ್ಲಾ ಟ್ಯಾರಿಫ್​ಗಳು ಕಡಿಮೆ ಇದೆ. ಆದರೆ, ಅದು ಅದರ 5ಜಿ ಇನ್​ಫ್ರಾಸ್ಟ್ರಕ್ಚರ್ ಇನ್ನೂ ಅಳವಡಿಕೆ ಆಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:34 pm, Tue, 12 August 25

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್