Patanjali Dant Kanti: ನದಿ ತಟದಲ್ಲಿ ಉಚಿತವಾಗಿ ಹಂಚಲಾಗುತ್ತಿದ್ದ ಹಲ್ಲಿನ ಪೌಡರ್ ಇವತ್ತು ಭಾರೀ ಮೌಲ್ಯದ ಟೂತ್​​ಪೇಸ್ಟ್ ಬ್ರ್ಯಾಂಡ್ ಆದ ಕಥೆ

The Untold Story of Patanjali Dant Kanti: ಪತಂಜಲಿ ದಂತ ಕಾಂತಿಯ ಯಶೋಗಾಥೆ ಆರಂಭದಲ್ಲಿ ಹರಿದ್ವಾರದ ಗಂಗಾ ನದಿ ತೀರದಲ್ಲಿ ಉಚಿತವಾಗಿ ವಿತರಿಸಲ್ಪಟ್ಟ ಆಯುರ್ವೇದ ಹಲ್ಲಿನ ಪುಡಿಯಿಂದ ಆರಂಭವಾಗುತ್ತದೆ. ಪತಂಜಲಿ ಖ್ಯಾತಿಯೊಂದಿಗೆ ಬೆರೆತು, ಇಂದು ಅದು ನೂರಾರು ಕೋಟಿ ರೂ ಆದಾಯ ಗಳಿಸುವ ಪ್ರಮುಖ ಬ್ರ್ಯಾಂಡ್ ಆಗಿದೆ. ಈ ಯಶಸ್ಸಿನ ಹಿಂದಿನ ಕಥೆ ಮತ್ತು ಅದರ ಬೆಳವಣಿಗೆಯನ್ನು ವಿವರಿಸುವ ಲೇಖನ ಇದು...

Patanjali Dant Kanti: ನದಿ ತಟದಲ್ಲಿ ಉಚಿತವಾಗಿ ಹಂಚಲಾಗುತ್ತಿದ್ದ ಹಲ್ಲಿನ ಪೌಡರ್ ಇವತ್ತು ಭಾರೀ ಮೌಲ್ಯದ ಟೂತ್​​ಪೇಸ್ಟ್ ಬ್ರ್ಯಾಂಡ್ ಆದ ಕಥೆ
ಪತಂಜಲಿ ದಂತ ಕಾಂತಿ

Updated on: May 20, 2025 | 12:51 PM

ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಸಂಸ್ಥಾಪಿಸಿದ ಪತಂಜಲಿ ಆಯುರ್ವೇದ ಸಂಸ್ಥೆಯ ಟೂತ್‌ಪೇಸ್ಟ್ ಉತ್ಪನ್ನವಾದ ಪತಂಜಲಿ ದಂತ ಕಾಂತಿ (Patanjali Dant Kanti) ಇಂದು ಪ್ರತಿಯೊಂದು ಮನೆಯಲ್ಲೂ ಚಿರಪರಿಚಿತವಾಗಿದೆ. ಇದರ ಬ್ರಾಂಡ್ ಮೌಲ್ಯ ಹಲವಾರು ಕೋಟಿಗಳನ್ನು ತಲುಪಿದೆ. ಆದರೆ ಈ ಟೂತ್‌ಪೇಸ್ಟ್‌ನ ಮೂಲದ ಕಥೆ ಸಾಕಷ್ಟು ಕುತೂಹಲಕಾರಿಯಾಗಿದೆ. ಇಂದು ಕೋಟ್ಯಂತರ ರೂ ಆದಾಯ ತರುವ ದೊಡ್ಡ ಬ್ರ್ಯಾಂಡ್ ಆದ ಪತಂಜಲಿಯ ಟೂತ್​​ಪೇಸ್ಟ್, ಆರಂಭಿಕ ದಿನಗಳಲ್ಲಿ ಹರಿದ್ವಾರದ ಗಂಗಾ ನದಿ ತಟದಲ್ಲಿ ಉಚಿತವಾಗಿ ಹಂಚಲ್ಪಡುತ್ತಿತ್ತು.

‘ಪತಂಜಲಿ ದಂತ ಕಾಂತಿ’ ಟೂತ್‌ಪೇಸ್ಟ್ ಆಗುವ ಮೊದಲು ಅದು ಆಯುರ್ವೇದ ಹಲ್ಲಿನ ಪುಡಿಯಾಗಿತ್ತು. ಭಾರತಕ್ಕೆ ಟೂತ್‌ಪೇಸ್ಟ್ ಬರುವ ಮೊದಲು ಸಾವಿರಾರು ವರ್ಷಗಳಿಂದ ಸಾಮಾನ್ಯ ಮನೆಗಳಲ್ಲಿ ಬಳಸಲಾಗುತ್ತಿದ್ದ ಅದೇ ಆಯುರ್ವೇದ ಮತ್ತು ಭಾರತದ ಸಾಂಪ್ರದಾಯಿಕ ಜ್ಞಾನವನ್ನು ಆಧರಿಸಿದ ಸೂತ್ರದಲ್ಲಿ ತಯಾರಿಸಿದ ಹಲ್ಲಿನ ಪುಡಿ ಎನಿಸಿತ್ತು.

ಇದನ್ನೂ ಓದಿ: ದೇಹದಲ್ಲಿ ಪಿತ್ತದೋಷ ಹೆಚ್ಚಲು ಏನು ಕಾರಣ? ಕಡಿಮೆ ಮಾಡಲು ಪತಂಜಲಿ ವಿಧಾನ

ಇದನ್ನೂ ಓದಿ
ಪಿತ್ತದೋಷ ನಿವಾರಣೆಗೆ ಆಯುರ್ವೇದ ಪರಿಹಾರ: ಪತಂಜಲಿ
ಫ್ಯಾಟಿ ಲಿವರ್ ಸಮಸ್ಯೆ ತಡೆಯಲು ಪತಂಜಲಿಯ ಈ ಔಷಧಿ ತೆಗೆದುಕೊಳ್ಳಿ
ರಕ್ತದೊತ್ತಡಕ್ಕೆ ಪತಂಜಲಿ BPGrit Vati ಔಷಧಿ
ಪತಂಜಲಿಯ ಈ ಔಷಧಿಯ ಸೇವನೆಯಿಂದ ಕೊಲೆಸ್ಟ್ರಾಲ್‌ನಿಂದ ಮುಕ್ತಿಪಡೆಯಬಹುದಂತೆ

ಬಾಬಾ ರಾಮದೇವ್ ಅವರ ಯೋಗ ಶಿಬಿರಗಳಿಂದ ಹಿಡಿದು, ಸ್ಥಳೀಯ ಜಾತ್ರೆಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳು ಮತ್ತು ಹರಿದ್ವಾರದ ಗಂಗಾ ನದಿಯ ದಡದಲ್ಲಿ ಈ ಟೂತ್​​​ಪೇಸ್ಟ್ ಅನ್ನು ಉಚಿತವಾಗಿ ವಿತರಿಸಲಾಗುತ್ತಿತ್ತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತ ನಂತರ ಪತಂಜಲಿ ಆಯುರ್ವೇದದ ತಜ್ಞರು ಅದನ್ನು ‘ದಂತ ಕಾಂತಿ’ಯನ್ನಾಗಿ ರೂಪಿಸಿದರು.

ಟೂತ್‌ಪೇಸ್ಟ್‌ನಿಂದ ‘ದಂತ ಕಾಂತಿ’ವರೆಗಿನ ಪ್ರಯಾಣ

ಟೂತ್‌ಪೇಸ್ಟ್ ಮತ್ತು ದಂತ ಮಂಜನ್ ಎರಡೂ ತಮ್ಮದೇ ಆದ ಗುಣಗಳನ್ನು ಹೊಂದಿವೆ. ಟೂತ್‌ಪೇಸ್ಟ್ ಹಲ್ಲುಗಳನ್ನು ಮಾತ್ರ ಸ್ವಚ್ಛಗೊಳಿಸುತ್ತದೆ. ಆದರೆ, ಭಾರತೀಯ ಜ್ಞಾನವನ್ನು ಆಧರಿಸಿದ ದಂತ ಮಂಜನ್ ಹಲ್ಲಿನ ಸಮಸ್ಯೆಗಳನ್ನೂ ಪರಿಹರಿಸುತ್ತದೆ. ಪತಂಜಲಿಯ ತಜ್ಞರು ಇವೆರಡರ ಗುಣಲಕ್ಷಣಗಳನ್ನು ಬೆರೆಸಿ ‘ದಂತ ಕಾಂತಿ’ಯನ್ನು ತಯಾರಿಸಿದರು.

2002 ರಲ್ಲಿ ಪತಂಜಲಿಯ ತಂಡವು ಹರ್ಬಲ್ ಟೂತ್‌ಪೇಸ್ಟ್ ತಯಾರಿಸುವ ಕೆಲಸದಲ್ಲಿ ತೊಡಗಿತು. ಮೊದಲಿಗೆ, ಗಂಗಾ ನದಿ ತಟದಲ್ಲಿ ಉಚಿತವಾಗಿ ವಿತರಿಸಲಾಗುತ್ತಿದ್ದ ದಂತ ಮಂಜನ್ ಅನ್ನೇ ಟೂತ್​​ಪೇಸ್ಟ್ ಬೇಸ್ ಆಗಿ ಬಳಸಿಕೊಂಡು ಪತಂಜಲಿ ಸಂಸ್ಥೆಯು ‘ದಂತ ಕಾಂತಿ’ಯಾಗಿ ಪರಿವರ್ತಿಸಿತು. ಅದಕ್ಕೆ ಹರ್ಬಲ್ ಎಕ್ಸ್​ಟ್ರಾಕ್ಟ್ ಮತ್ತು ಎಸೆನ್ಷಿಯಲ್ ಆಯಿಲ್ ಅನ್ನೂ ಮಿಶ್ರಣ ಮಾಡಿತು. ಇದು ಜನರು ಬಹಳ ವರ್ಷಗಳಿಂದ ನಿರೀಕ್ಷಿಸುತ್ತಾ ಬಂದಿದ್ದ ಟೂತ್​ಪೇಸ್ಟ್ ಸಿದ್ಧವಾಯಿತು.

ಇದನ್ನೂ ಓದಿ: ಫ್ಯಾಟಿ ಲಿವರ್ ಸಮಸ್ಯೆ ಬರದಂತೆ ತಡೆಯಲು ಪತಂಜಲಿಯ ಈ ಔಷಧಿಗಳನ್ನು ತೆಗೆದುಕೊಳ್ಳಿ

ಕೋಟಿ ಮೌಲ್ಯದ ಬ್ರ್ಯಾಂಡ್ ಆದ ‘ದಂತ ಕಾಂತಿ’

ತನ್ನ ಆಯುರ್ವೇದ ವಸ್ತುಗಳು ಮತ್ತು ಗುಣಲಕ್ಷಣಗಳಿಂದಾಗಿ ‘ಪತಂಜಲಿ ದಂತ ಕಾಂತಿ’ ಶೀಘ್ರದಲ್ಲೇ ಜನಸಾಮಾನ್ಯರಲ್ಲಿ ಜನಪ್ರಿಯವಾಯಿತು. 2020-21ರ ಆರ್ಥಿಕ ವರ್ಷದಲ್ಲಿ, ‘ದಂತ ಕಾಂತಿ’ಯೊಂದೇ ಪತಂಜಲಿಗೆ 485 ಕೋಟಿ ರೂ. ಲಾಭ ತಂದುಕೊಟ್ಟಿತು. ಇಂದು ಪತಂಜಲಿ ದಂತ ಕಾಂತಿ ಕೋಟ್ಯಂತರ ಜನರ ಮನೆಗಳ ಗುರುತಾಗಿದೆ. ಅಷ್ಟೇ ಅಲ್ಲ, ಅದರ ಬ್ರಾಂಡ್ ಮೌಲ್ಯವು ಹಲವಾರು ಕೋಟಿ ರೂಗಳಿಗೆ ಏರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ